NEWSನಮ್ಮರಾಜ್ಯ

ನಾಲ್ಕೂ ಸಾರಿಗೆ ಸಂಸ್ಥೆ ನೌಕರರ ಅರಿವಿಗೆ: ತನಿಖಾಧಿಖಾರಿಗಳು ಎಲ್ಲೆಂದರಲ್ಲಿ ತನಿಖೆ ಮಾಡುವ ಹಾಗಿಲ್ಲ- ಅವರಿಗೂ ನಿಯಮ ಪಾಲನೆ ಕಡ್ಡಾಯ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸಾರಿಗೆಯ ನಾಲ್ಕೂ ನಿಗಮಗಳ ನೌಕರರು ತನಿಖಾಧಿಕಾರಿಗಳು ವಾಹನವನ್ನು ತನಿಖೆ ಮಾಡಬೇಕಾದರೆ ಈ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂಬುದ ಬಗ್ಗೆ ತಿಳಿದುಕೊಂಡು ಅದೇ ರೀತಿ ತನಿಖಾಧಿಕಾರಿಗಳು ನಿಯಮ ಪಾಲಿಸಿದ್ದಾರೆಯೇ ಎಂಬುದನ್ನು ಖಾತರಿ ಪಡಿಸಿಕೊಳ್ಳುವಂತೆ ಹಿರಿಯ ಕಾನೂನು ತಜ್ಞರು ತಿಳಿಸಿದ್ದಾರೆ.

ಹಿರಿಯ ಕಾನೂನು ತಜ್ಞರು ತಿಳಿಸಿರುವಂತೆ ಮೊದಲನೆಯದಾಗ ತನಿಖಾಧಿಕಾರಿಗಳು ಕಡ್ಡಾಯವಾಗಿ ಸಮವಸ್ತ್ರ ಧರಿಸಿರಬೇಕು. ಅಂದರೆ ಸಮವಸ್ತ್ರ ಇಲ್ಲದೇ ಅವರು ತನಿಖೆ ಮಾಡಲು ಸಂಸ್ಥೆಯಲ್ಲಿ ಅವಕಾಶವಿಲ್ಲ.

ಎರಡನೆಯದಾಗಿ ನಿಗದಿತ ಹಂತದಲ್ಲಿ ಮಾತ್ರ ತನಿಖೆ ಮಾಡಬೇಕು. ಎಲ್ಲೆಂದರಲ್ಲಿ ತನಿಖೆ ಮಾಡುವ ಹಾಗಿಲ್ಲ. ಎಲ್ಲೆಂದರಲ್ಲಿ ತನಿಖೆ ಮಾಡುವಂತೆ ಸ್ಥಂಸ್ಥೆಯ ನಿಯಮಾವಳಿಯಲ್ಲಿ ಅವಕಾಶ ನೀಡಿರುವುದಿಲ್ಲ ಎಂಬುದನ್ನು ನೌಕರರು ತಿಳಿದುಕೊಳ್ಳಬೇಕು.

ಇನ್ನು ಮೂರನೆಯದಾಗಿ ತನಿಖಾಧಿಕಾರಿಗಳು ಕಡ್ಡಾಯವಾಗಿ ಬಾಡಿ ಕ್ಯಾಮರಾ ಅಳವಡಿಸಿಕೊಂಡಿರಬೇಕು. ಬಾಡಿ ಕ್ಯಾಮರಾ ಅಳವಡಿಸಿಕೊಂಡಿರದ ಅಧಿಕಾರಿಯನ್ನು ಪ್ರಶ್ನಿಸುವ ಅಧಿಕಾರ ನೌಕರರಿಗಿದೆ.

ಅದರಂತೆ ನಾಲ್ಕನೆಯದಾಗಿ ತನಿಖಾಧಿಕಾರಿಗಳು ಕೈ ಹಾಕಿ ಬಸ್ ಹತ್ತಿದಾಗ ಈ ಬಸ್ ಈ ಹಂತದಲ್ಲಿ ತನಿಖೆ ಮಾಡಬೇಕೆಂದು ಕಡ್ಡಾಯವಾಗಿ ಕಚೇರಿಯಿಂದ ನೀಡಿರುವ ಪ್ರೋಗ್ರಾಮಿಂಗ್ ಲೆಟರ್ ನಿರ್ವಾಹಕರಿಗೆ ತೋರಿಸಿ ಇಟಿಎಂ ಯಂತ್ರ ಪಡೆದು ತನಿಖೆ ಮಾಡಬೇಕು.

ಈ ನಾಲ್ಕರಲ್ಲಿ ಯಾವುದಾದರೂ ಒಂದು ಸರಿ ಇಲ್ಲದಿದ್ದರೂ ತನಿಖೆ ಮಾಡಲು ಸಹಕಾರ ನೀಡಬಾರದೆಂದು ಹಿರಿಯ ಕಾನೂನು ತಜ್ಞರು ತಿಳಿಸಿದ್ದಾರೆ. ಈ ನಿಯಮಗಳನ್ನು ಮೀರಿ ತನಿಖಾಧಿಕಾರಿಗಳು ತನಿಖೆ ಮಾಡಲು ಮುಂದಾದರೆ ನೌಕರರು ಸಹ ಅವರ ವಿರುದ್ಧ ಕೇಂದ್ರ ಕಚೇರಿಗೆ ಅಥವಾ ಸಂಸ್ಥೆಯ ಎಂಡಿಗಳಿಗೇ ದೂರು ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಇದರ ಜತೆಗೆ ನೌಕರರು ಕಡ್ಡಾಯವಾಗಿ ನಿಯಮಗಳನ್ನು ಪಾಲಿಸಬೇಕು. ನೀವು ಕೂಡ ಟಿಕೆಟ್‌ ನೀಡುವುದು ಸೇರಿ ಇತರ ನಿಯಮಗಳನ್ನು ಪಾಲಿಸದಿದ್ದರೇ ತಕ್ಷ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಸಾರಿಗೆ ನೌಕರರಿಗೆ ಇಲ್ಲ ಸ್ವಾತಂತ್ರ್ಯೋತ್ಸವದ ಸಂಭ್ರಮ : ಸಚಿವ ಶ್ರೀರಾಮುಲುಗೊಂದು ನೋವಿನ, ದುಃಖ ಮನಸ್ಸುಗಳ ಮನವಿ

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು