NEWSಆರೋಗ್ಯನಮ್ಮಜಿಲ್ಲೆ

ನಿವೃತ್ತ ಸಿಬ್ಬಂದಿಯ ಗ್ರಾಚ್ಯುಟಿ ಹಣ: ಶೇ.10ರಷ್ಟು ಬಡಿ ಸಹಿತ ಪಾವತಿಸಲು ಹೈಕೋರ್ಟ್ ಆದೇಶ

ವಿಜಯಪಥ ಸಮಗ್ರ ಸುದ್ದಿ

ಧಾರವಾಡ: ನಿವೃತ್ತ ಉದ್ಯೋಗಿ ಯೋರ್ವರಿಗೆ ಶೇ.10ರಷ್ಟು ಬಡ್ಡಿ ಸಮೇತ 4,09,550 ರೂಪಾಯಿ ಗ್ರಾಚ್ಯುಟಿ ಹಣವನ್ನು ಪಾವತಿ ಮಾಡುವಂತೆ ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ನಿರ್ದೇಶನ ನೀಡಿರುವ ಹೈಕೋರ್ಟ್‌ ಇಲಾಖೆಯ ಅಧಿಕಾರಿಗಳ ನಡೆಗೆ ಕೆಂಡಮಂಡಲವಾಯಿತು.

2007, ಮಾ.31 ರಂದು ನಿವೃತ್ತರಾಗಿದ್ದ ಬೆಳಗಾವಿ ಮೂಲದ ಬಾಬು ಎಂಬವರು ಗ್ರಾಚ್ಯುಟಿಗಾಗಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್ ಪೀಠ, ಈ ಆದೇಶ ಮಾಡಿದೆ.

ಈ ಆದೇಶ ಪತ್ರ ರವಾನೆಯಾದ ದಿನದಿಂದ 10 ದಿನಗಳ ಒಳಗೆ ಅರ್ಜಿದಾರರಿಗೆ ಗ್ರಾಚ್ಯುಟಿ ಪಾವತಿ ಯಾಗದೇ ಇದ್ದಲ್ಲಿ, ಶೇ.10ರಷ್ಟು ಬಡ್ಡಿಯ ಜತೆಗೆ, ವಿಳಂಬವಾಗಿ ಹಣ ನೀಡುವ ದಿನದವರೆಗೂ ಪ್ರತಿ ದಿನವೂ ಸಾವಿರ ರೂ. ಸೇರಿಸಿ ಸಂತ್ರಸ್ತರಿಗೆ ಗ್ರಾಚ್ಯುಟಿ ಹಣ ನೀಡಬೇಕಾಗುತ್ತದೆ ಎಂದು ಕೋರ್ಟ್‌ ಎಚ್ಚರಿಕೆ ನೀಡಿದೆ.

ಗ್ರಾಚ್ಯುಟಿಯು ಉದ್ಯೋಗದಾತರ ಮನಸೋ ಇಚ್ಛೆ ಮೇರೆಗೆ ತಡೆಹಿಡಿಯಬಹುದಾದ ವರದಾನವಲ್ಲ, ಸಂತ್ರಸ್ತ ವ್ಯಕ್ತಿಗೆ ಉದ್ಯೋಗ ನೀಡಿರುವುದು ಕರ್ನಾಟಕ ಸರ್ಕಾರದ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಕಾರ್ಯದರ್ಶಿಯಾಗಿದ್ದಾರೆ.

16 ವರ್ಷಗಳ ಕಾಲ ಗ್ರಾಚ್ಯುಟಿ ನೀಡದೇ ಸರ್ಕಾರ ತನ್ನ ನೌಕರನನ್ನು ನಡೆಸಿಕೊಂಡಿರುವುದು ನಾಗರಿಕರೆಡೆಗೆ, ಅದರಲ್ಲೂ ನಿವೃತ್ತರಾದ ನಾಗರಿಕರೆಡೆಗೆ ಸರ್ಕಾರದ ನಿರಾಸಕ್ತಿ ತೋರುತ್ತದೆ. ಹೀಗಾಗಿ, ಗ್ರಾಚ್ಯುಟಿ ನಿರಾಕರಿಸುವ ಮೂಲಕ ನಿಷ್ಟುರತೆಯನ್ನು ಪ್ರದರ್ಶಿಸಲಾಗಿದೆ ಎಂದು ನ್ಯಾಯಪೀಠವು ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

ಅರ್ಜಿದಾರರು 1973ರಲ್ಲಿ ಜವಾಹರ್ ಲಾಲ್ ನೆಹರೂ ವೈದ್ಯಕೀಯ ಕಾಲೇಜಿನಲ್ಲಿ ಪ್ರಸವಾನಂತರದ ಕೇಂದ್ರದಲ್ಲಿ ಮೊದಲ ವಿಭಾಗದ ಗುಮಾಸ್ತ (ಎಫ್‌ಡಿಎ)ರಾಗಿ ನೇಮಕಗೊಂಡಿದ್ದರು. 34 ವರ್ಷಗಳ ಸೇವೆ ನಂತರ ಅವರು ನಿವೃತ್ತರಾಗಿದ್ದು, ಗ್ರಾಚ್ಯುಟಿ ಬಾರದ ಕಾರಣ ಅವರು ಕೋರ್ಟ್ ಮೆಟ್ಟಿಲೇರಿದ್ದರು.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು