NEWSನಮ್ಮಜಿಲ್ಲೆಬೆಂಗಳೂರು

‘ಬೆಂಗಳೂರು’ ಎಂದೇ ಉಲ್ಲೇಖಿಸುವಂತೆ ರಾಜ್ಯಪಾಲರಿಗೆ ಎಎಪಿ ಮನವಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್ಮೆಂಟ್‌(ಐಐಎಂ-ಬಿ) ಸುವರ್ಣ ಮಹೋತ್ಸವ ಉದ್ಘಾಟಿಸಿದ ಸಂಬಂಧ ರಾಜ್ಯಪಾಲರ ಕಚೇರಿಯಿಂದ ಹೊರಡಿಸಲಾದ ಮಾಧ್ಯಮ ಬಿಡುಗಡೆ ಪತ್ರದಲ್ಲಿ ಬೆಂಗಳೂರಿನ ಹೆಸರನ್ನು ತಪ್ಪಾಗಿ ಉಲ್ಲೇಖಿಸಿದ್ದಕ್ಕೆ ಆಮ್‌ ಆದ್ಮಿ ಪಕ್ಷ ಆಕ್ಷೇಪ ವ್ಯಕ್ತಪಡಿಸಿದೆ.

ಬೆಂಗಳೂರಿನ ಹೆಸರನ್ನು ಬೆಂಗಳೂರು ಎಂದೇ ಉಲ್ಲೇಖಿಸಬೇಕು. ಬ್ಯಾಂಗಲೋರ್‌ ಎನ್ನುವುದು ತಪ್ಪು. ಬೆಂಗಳೂರು ಎಂಬುದು ಬೆಂಗಳೂರಿಗರ ಹೆಮ್ಮೆ ಸಂಕೇತವಾಗಿದೆ. ಕನ್ನಡಿಗರ ಪ್ರತಿಷ್ಠೆಯಾಗಿದೆ. ಕರ್ನಾಟಕದ ರಾಜಧಾನಿಯ ಹೆಸರನ್ನು ಅಧಿಕೃತವಾಗಿ ಬೆಂಗಳೂರು ಎಂದು ಘೋಷಿಸಲಾಗಿದೆ. ಹಾಗಾಗಿ ಅಧಿಕೃತ ಹೇಳಿಕೆಗಳಲ್ಲಿ ಬೆಂಗಳೂರು ಎಂದೇ ಬಳಕೆ ಮಾಡಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಪಕ್ಷದ ರಾಜ್ಯ ಉಪಾಧ್ಯಕ್ಷ ರಮೇಶ್‌ ಬೆಲ್ಲಂಕೊಂಡ ಮನವಿ ಮಾಡಿದ್ದಾರೆ.

ಈ ಸಂಬಂಧ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ರಮೇಶ್‌ ಬೆಲ್ಲಂಕೊಂಡ ಅವರು ಪತ್ರ ಬರೆದು ಬೆಂಗಳೂರು ಎಂದು ಬಳಸುವಂತೆ ಕೋರಿದ್ದಾರೆ.

2005ರ ಡಿಸೆಂಬರ್‌ 11ರಂದು ಬ್ಯಾಂಗಲೋರ್‌ ಹೆಸರನ್ನು ಬೆಂಗಳೂರು ಎಂದು ಅಧಿಕೃತವಾಗಿ ದಾಖಲಿಸಬೇಕು ಎಂಬ ಜ್ಞಾನಪೀಠ ಪುರಸ್ಕೃತ ಯು.ಆರ್‌.ಅನಂತಮೂರ್ತಿ ಅವರ ಮನವಿಯನ್ನು ರಾಜ್ಯಪಾಲರು ಸ್ವೀಕರಿಸಿದ್ದರು. 2006 ಸೆಪ್ಟೆಂಬರ್‌ 27ರಂದು ‘ಬೆಂಗಳೂರು’ ಎಂಬ ಹೆಸರನ್ನು ಘೋಷಿಸಿ ಬಿಬಿಎಂಪಿ ಅಧಿಕೃತ ನಿರ್ಣಯವನ್ನು ಅನುಮೋದಿಸಿದೆ ಹಾಗೂ ರಾಜ್ಯಪಾಲರ ಭವನದಿಂದ ಪ್ರಕಟಿಸುವ ಯಾವುದೇ ಅಧಿಕೃತ ಪತ್ರಗಳು ಕನ್ನಡದಲ್ಲಿಯೂ ಸಹ ಪ್ರಕಟಿಸಲು ರಮೇಶ್ ಬೆಳ್ಳಂಕೊಂಡ ಮನವಿ ಮಾಡಿದ್ದಾರೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು ನೀವು ಗಬಗಬನೆ ಊಟ ಮಾಡುವವರಿದ್ದೀರಾ? ಹಾಗಿದ್ದರೆ ನಿಮಗೆ ಈ ಸಮಸ್ಯೆ ಕಾಡದಿರದು! BMTC ನೌಕರರಿಗೆ ಆನ್-ಲೈನ್ ಮೂಲಕ ವೇತನ ಚೀಟಿ ಪಡೆಯುವ ವ್ಯವಸ್ಥೆ- ಜಾರಿ ಸ್ಕೂಟರ್‌ಗೆ ಕಾರು ಡಿಕ್ಕಿ- ಮೊಪೆಡ್‌ನಲ್ಲಿ ತೆರಳುತ್ತಿದ್ದ ಮಾವ-ಸೊಸೆ ದಾರುಣ ಸಾವು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಹಿಟ್‌ ಧಾರಾವಾಹಿಗಳ ನಿರ್ದೇಶಕ, ನಿರ್ಮಾಪಕ ರಾಮ್​ಜೀ