NEWSನಮ್ಮರಾಜ್ಯಸಂಸ್ಕೃತಿ

ಭಗವಂತನ ಸಾಕ್ಷಾತ್ಕಾರಕ್ಕೆ ಭಕ್ತಿ ಮಾರ್ಗ ಒಂದೇ ಸುಲಭ ಮಾರ್ಗ: ಚನ್ನವೀರಶ್ರೀ

ವಿಜಯಪಥ ಸಮಗ್ರ ಸುದ್ದಿ

ಬೀದರ್‌: ಭಗವಂತನ ಸಾಕ್ಷಾತ್ಕಾರಕ್ಕೆ ಭಕ್ತಿ ಮಾರ್ಗ ಒಂದೇ ಸುಲಭ ಎಂದು ವೇದಮೂರ್ತಿ ಚೆನ್ನವೀರ ಮಹಾಸ್ವಾಮಿಗಳು ಹಿರೇಮಠ ಕಡಣಿ ಹೇಳಿದ್ದಾರೆ.

ಬೀದರ್‌ ತಾಲೂಕಿನ ಸುಕ್ಷೇತ್ರ ಶ್ರೀ ಗುರುಭದ್ರೇಶ್ವರ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಭಕ್ತಿ ವಿಜಯ ಆಧ್ಯಾತ್ಮಿಕ ಪ್ರವಚನದಲ್ಲಿ ಮಾತನಾಡಿದರು.

ಭಗವಂತನನ್ನ ಕೂಡಿಕೊಳ್ಳಲು ಭಕ್ತಿ, ಜ್ಞಾನ, ವೈರಾಗ್ಯ ಮೂರು ದಾರಿಗಳು ಇದ್ದರೂ ಕೂಡ ವೈರಾಗ್ಯ ಮತ್ತು ಜ್ಞಾನಮಾರ್ಗದಲ್ಲಿ ಎಲ್ಲರಿಗೂ ಸಾಗಲು ಸಾಧ್ಯವಿಲ್ಲ. ಆದರೆ ಭಕ್ತಿ ಮಾರ್ಗದಲ್ಲಿ ಎಲ್ಲರೂ ಸುಲಭವಾಗಿ ಭಗವಂತನನ್ನು ಸಾಕ್ಷಾತ್ಕಾರ ಮಾಡಿಕೊಳ್ಳಲಿಕ್ಕೆ ಸುಲಭ ಮಾರ್ಗವಿದೆ ಎಂದರು.

ಇನ್ನು ಅಂತಹ ಭಕ್ತಿ ಮಾರ್ಗದಲ್ಲಿ ಗುರುಭದ್ರೇಶ್ವರರು , ಬಸವಾದಿ ಪ್ರಮಥರು ನಡೆದು ತೋರಿಸಿದ್ದಾರೆ ಅವರ ಮಾರ್ಗ ನಮಗೆ ಅನುಕರಣೀಯ. ಕಾರಣ ನಾವು ನೀವೆಲ್ಲ ಸರಳ ಮಾರ್ಗವಾದ ಭಕ್ತಿ ಮಾರ್ಗವನ್ನು ಅನುಸರಿಸಿ ನಮ್ಮ ಜೀವನವನ್ನು ಸಾಫಲ್ಯ ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.

ಏ.2ರಿಂದ 6 ವರೆಗೆ ಜಾತ್ರಾ ನಿಮಿತ್ಯ ಆಧ್ಯಾತ್ಮ ಭಕ್ತಿ ವಿಜಯ ಆಧ್ಯಾತ್ಮ ಪ್ರವಚನ ಹಮ್ಮಿಕೊಳ್ಳಲಾಗಿತ್ತು. ಶ್ರೀಗುರು ಭದೇಶ್ವರ ಸಂಸ್ಥಾನದ ಪರಂಪರೆಯ  ಗುರುಗಳು ಗ್ರಾಮದ ಭಕ್ತರು ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಸಮಾರಂಭದಲ್ಲಿ ಶ್ರೀ ವೇದಮೂರ್ತಿಗಳಾದ ಬಾಲ ಸಂಗಯ್ಯ ಸ್ವಾಮಿ, ಶಿವಕುಮಾರ ಸ್ವಾಮಿ, ಭದ್ರಯ್ಯ ಸ್ವಾಮಿ, ಗುರುಭದ್ರೇಶ್ವರ ಸಂಸ್ಥಾನ ಬಾವುಗಿ ಉಪಸ್ಥಿತರಿದ್ದರು.

ಪ್ರವಚನದಲ್ಲಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಬೀದರ್, ಸಂಗೀತ ಸೇವೆ ಸಲ್ಲಿಸಿದರು ಪವನ್ ಕುಮಾರ್ ಸ್ವಾಮಿ ಕಾಶಂಪುರ್ ತಬಲಾ ಸಾಥ್‌ ನೀಡಿದರು. ಪ್ರಾರಂಭದಲ್ಲಿ ಆರಂಭದಲ್ಲಿ ಶ್ರೀ ಭದ್ರೇಶ್ವರ ಸಂಸ್ಥಾನದ ಶ್ರೀಶಾಂತಕುಮಾರ ಸ್ವಾಮಿ ಸರ್ವರನ್ನು ಸ್ವಾಗತಿಸಿದರು.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು ನೀವು ಗಬಗಬನೆ ಊಟ ಮಾಡುವವರಿದ್ದೀರಾ? ಹಾಗಿದ್ದರೆ ನಿಮಗೆ ಈ ಸಮಸ್ಯೆ ಕಾಡದಿರದು! BMTC ನೌಕರರಿಗೆ ಆನ್-ಲೈನ್ ಮೂಲಕ ವೇತನ ಚೀಟಿ ಪಡೆಯುವ ವ್ಯವಸ್ಥೆ- ಜಾರಿ ಸ್ಕೂಟರ್‌ಗೆ ಕಾರು ಡಿಕ್ಕಿ- ಮೊಪೆಡ್‌ನಲ್ಲಿ ತೆರಳುತ್ತಿದ್ದ ಮಾವ-ಸೊಸೆ ದಾರುಣ ಸಾವು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಹಿಟ್‌ ಧಾರಾವಾಹಿಗಳ ನಿರ್ದೇಶಕ, ನಿರ್ಮಾಪಕ ರಾಮ್​ಜೀ