NEWSನಮ್ಮರಾಜ್ಯಸಿನಿಪಥ

ರಂಗಭೂಮಿ ಸೇರಿ ಕಲೆಗಾಗಿ ಶ್ರಮಿಸುತ್ತಿರುವವರ ಸಂಕಷ್ಟ ನೀಗಿಸಿ

 ಸಿಎಂ ಯಡಿಯೂರಪ್ಪರಿಗೆ  ರಂಗನಟದ ಮಾಜಿ ಸದಸ್ಯ ವೆಂಕಟರಾಜು ಮನವಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಂಗಭೂಮಿ ಸೇರಿದಂತೆ ಕಲೆಗಾಗಿ ದುಡಿಯುವ ಕಲಾವಿದರು ಕೊರೊನಾದಂತದ ವಿಷಮ ಪರಿಸ್ಥಿಯಿಂದ ಕೆಲಸವಿಲ್ಲದೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು ಅವರಿಗೆ ಸರ್ಕಾರ ನೆರವಾಗಬೇಕು ಎಂದು ರಂಗನಟದ ಮಾಜಿ ಸದಸ್ಯ ಆರ್. ವೆಂಕಟರಾಜು ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದಾರೆ.

ಕಲೆಗಾಗಿ ದುಡಿಯುವ ಜನ ಹವ್ಯಾಸಿ, ವೃತ್ತಿ-ಅರೆ ವೃತ್ತಿ, ಪೌರಾಣಿಕ, ಸೇರಿದಂತೆ ಚಲನಚಿತ್ರಗಳಲ್ಲಿನ ಪೋಷಕ ಕಲಾವಿದ, ಬರಹಗಾರ ಇವರೆಲ್ಲರೂ ಒಂದೇ ರಂಗ ಬಳ್ಳಿಯ ಹೂಗಳು. ಈ ಜನರ ಸಾಂಸ್ಕೃತಿಕ ಸಂಪನ್ನತೆ ನಾಡಿಗೆ ದೇಶಕ್ಕೆ ಗುರುತರ ಕೊಡುಗೆ ನೀಡಿದೆ. ಆದರೆ ಈಗ ಕರೋನವೈರಸ್ ಭೀಕರ ಮಾರಿಯ ಕಾರಣಕ್ಕೆ ಕಲಾವಿದರು ತಮ್ಮ ಕುತ್ತಿಗೆ, ಕಾಲುಗಳಿಗೆ, ಸರಪಳಿ ಕಟ್ಟಿಸಿಕೊಂಡು ಗೃಹ ಬಂಧಿಯಾಗಿದ್ದಾರೆ.

ಬೆಂಕಿಯ ಕುಲುಮೆಯಲ್ಲಿ ಬೆಂದು ಹೋಗುವ ಹೇಳಿಕೊಳ್ಳಲಾರದ ಸ್ವಾಭಿಮಾನಿಗಳು ಅವರು . ಇಂತಹ ವಿಷಮ ಪರಿಸ್ಥಿತಿಯಲ್ಲಿ ಅವರ ಕುಟುಂಬಗಳಿಗೆ ಆಹಾರ ಪೂರೈಕೆಯ ಜೊತೆಗೆ, ಒಂದಿಷ್ಟು ಹಣಕಾಸಿನ ನೆರವು ಬೇಕು ಎಂದು ಕೋರಿದ್ದಾರೆ.

ಕಲಾವಿದರ ಅಗತ್ಯ ಮಾಹಿತಿಯನ್ನು ಪಡೆದು, ದಿನವೊಂದಕ್ಕೆ ಕನಿಷ್ಠ 500ರೂಪಾಯಿಯ ಗರಿಷ್ಠ ಸರ್ಕಾರದ ವಿವೇಚನೆಗೆ ಸಂಬಂಧಿಸಿದ ಹಾಗೆ, “ಜೀವನಭತ್ಯೆ” ನೀಡುವ ಕುರಿತು ಸರ್ಕಾರ ಕ್ರಮ ಕೈಗೊಳ್ಳಬೇಕಿದೆ. ಇದು ಅವರ ಕುಟುಂಬಕ್ಕೆ ಸಹಕಾರಿ ಆಗುವುದರ ಜೊತೆಗೆ ಮುಂದಿನ ಕಲಾಸೇವೆಗೆ ಮನೋಬಲ ದೊರಕಿಸಿ ಕೊಟ್ಟಂತಾಗುತ್ತದೆ. ಕೃಷಿಕರ ಜೀವನವನ್ನು ಸುಭದ್ರಗೊಳಿಸಲು ತಾವು ಮಾಡಿದ ನಿರಂತರ ಹೋರಾಟವನ್ನು ಸ್ಮರಿಸುತ್ತಾ, ಕಲೆಗಾಗಿ ದುಡಿಯುವವರ ಕೈಯನ್ನು ಬಲಪಡಿಸಬೇಕೆಂದು ಮನವಿ ಮಾಡಿದ್ದಾರೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು ನೀವು ಗಬಗಬನೆ ಊಟ ಮಾಡುವವರಿದ್ದೀರಾ? ಹಾಗಿದ್ದರೆ ನಿಮಗೆ ಈ ಸಮಸ್ಯೆ ಕಾಡದಿರದು! BMTC ನೌಕರರಿಗೆ ಆನ್-ಲೈನ್ ಮೂಲಕ ವೇತನ ಚೀಟಿ ಪಡೆಯುವ ವ್ಯವಸ್ಥೆ- ಜಾರಿ ಸ್ಕೂಟರ್‌ಗೆ ಕಾರು ಡಿಕ್ಕಿ- ಮೊಪೆಡ್‌ನಲ್ಲಿ ತೆರಳುತ್ತಿದ್ದ ಮಾವ-ಸೊಸೆ ದಾರುಣ ಸಾವು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಹಿಟ್‌ ಧಾರಾವಾಹಿಗಳ ನಿರ್ದೇಶಕ, ನಿರ್ಮಾಪಕ ರಾಮ್​ಜೀ