NEWSನಮ್ಮರಾಜ್ಯಮೈಸೂರುಸಂಸ್ಕೃತಿ

ವಸ್ತುಪ್ರದರ್ಶನ ಆವರಣದ ಪಿ.ಕಾಂಳಿಂಗರಾವ್ ಗಾನ ಮಂಟಪದಲ್ಲಿ ದಸರಾ ಕುಸ್ತಿ: ತೊಡೆ ತಟ್ಟಲಿದ್ದಾರೆ 220 ಜೋಡಿ

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಅ.15 ರಿಂದ 21 ರವರೆಗೆ ನಡೆಯುವ ನಾಡ ಕುಸ್ತಿ ನಡೆಯಲಿದ್ದು, ಈ ಬಾರಿ 220 ಜೋಡಿಗಳು ಗೆಲುವಿಗಾಗಿ ಅಖಾಡಕ್ಕಿಳಿಯಲಿವೆ.

ವಸ್ತುಪ್ರದರ್ಶನ ಆವರಣದ ಪಿ.ಕಾಂಳಿಂಗರಾವ್ ಗಾನ ಮಂಟಪದಲ್ಲಿ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ 500ಕ್ಕೂ ಹೆಚ್ಚು ಕುಸ್ತಿ ಪಟುಗಳಿಗೆ ಜತೆ ಕಟ್ಟುವ ಪ್ರಕ್ರಿಯೆಗೆ ನಡೆದು, ಹಿರಿಯ ಕುಸ್ತಿಪಟುಗಳು ಆಗಮಿಸಿದ ಕುಸ್ತಿಪಟುಗಳ ವಯಸ್ಸು, ತೂಕದ ಆಧಾರದಲ್ಲಿ 220 ಜೊತೆ(ಒಂದು ಜೋಡಿಗೆ ಇಬ್ಬರಂತೆ) ಕಟ್ಟಲಾಯಿತು. ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಈ ಬಾರಿ ಅಂದಾಜು ನೂರಕ್ಕೂ ಹೆಚ್ಚು ಮಂದಿ ಕುಸ್ತಿಪಟುಗಳು ಬಂದಿದ್ದರು.

ರಾಜ್ಯದ ನಾನಾ ಗರಡಿಗಳ 70ಕ್ಕೂ ಹೆಚ್ಚು ಮಂದಿ 17 ವರ್ಷದ ಒಳಪಟ್ಟ ಉದಯೋನ್ಮುಖ ಕುಸ್ತಿಪಟುಗಳು ನಾಡ ಕುಸ್ತಿಯಲ್ಲಿ ಪಾಲ್ಗೊಳ್ಳಲು ಭಾಗವಹಿಸಿದ್ದು, 7 ದಿನಗಳ ದಸರಾ ಕುಸ್ತಿ ಪಂದ್ಯಾವಳಿಯಲ್ಲಿ ಪ್ರತೀ ದಿನ 30 ಜೋಡಿಗಳಿಗೆ ಸ್ಪರ್ಧೆ ನಡೆಸಲಾಗುತ್ತದೆ.

ಅದರ ಆಧಾರದಲ್ಲಿ 220 ಜೋಡಿಗಳನ್ನು ಗುರುತಿಸಲಾಯಿತು. ಕೆಲ ಬಲಶಾಲಿ ಕುಸ್ತಿಪಟುಗಳಿಗೆ ನಾಡಕುಸ್ತಿಯಲ್ಲಿ ಪಾಲ್ಗೊಳ್ಳಲು ಆಸಕ್ತಿ ಇದ್ದರೂ ಅವರ ವಿರುದ್ಧ ಸೆಣೆಸಲು ಮತ್ತೊಬ್ಬ ಅಷ್ಟೇ ಸಾಮರ್ಥ್ಯದ ಕುಸ್ತಿ ಪಟು ಸಿಗದ ಹಿನ್ನಲೆಯಲ್ಲಿ ಅವರಿಗೆ ನಾಡ ಕುಸ್ತಿಯಲ್ಲಿ ಪಾಲ್ಗೊಳ್ಳಲು ಅವಕಾಶ ಸಿಗದೇ ನಿರಾಶರಾದರು.

ನಾಡ ಕುಸ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಿದವರಿಗೆ ಸಾಹುಕಾರ ಚೆನ್ನಯ್ಯ ಕಪ್, ಮೇಯರ್ ಕಪ್, ಮೈಸೂರು ಮಹಾರಾಜ ಒಡೆಯರ್ ಕಪ್ ಹಾಗೂ ನಗದು ಬಹುಮಾನ ನೀಡಲಾಗುತ್ತದೆ. ಇದೇ ರೀತಿ, ಪಂಜ ಕುಸ್ತಿಘ, ಪಾಯಿಂಟ್, ಮಾರ್ಫಿಟ್ ಕುಸ್ತಿ ಪಂದ್ಯಗಳು ನಡೆಯಲಿವೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು