NEWSನಮ್ಮಜಿಲ್ಲೆ

ಸೌಜನ್ಯಕ್ಕೂ ಹಲ್ಲೆಗೊಳಗಾದ ಸರ್ಕಾರಿ ಸಾರಿಗೆ ನೌಕರರ ಭೇಟಿ ಮಾಡದ ಬೀದರ್‌ ಡಿಸಿ

ಬೀದರ್‌ ಸಾರಿಗೆ ಡಿಸಿ ಚಂದ್ರಕಾಂತ ಫುಲೇಕರ್‌
ವಿಜಯಪಥ ಸಮಗ್ರ ಸುದ್ದಿ

ಬೀದರ್‌: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಬೀದರ್‌ ವಿಭಾಗದ ಹುಮನಾಬಾದ್‌ ಘಟಕದ ಬಸ್‌ ನಿರ್ವಾಹಕ ಮತ್ತು ಚಾಲಕರ ಮೇಲೆ ಕಲ್ಲಿನಿಂದ ಹೊಡೆದು ತೀವ್ರ ಹಲ್ಲೆ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ ಮೇ 31ರ ಸಂಜೆ 6.45ರಲ್ಲಿ ಬ್ಯಾಲಹಳ್ಳಿಯ ನಿವಾಸಿ ಪೌಲ ಎಂಬಾತ ನಿರ್ವಾಹಕ ಪ್ರಕಾಶ್‌ ಎಂಬುವರ ಮೇಲೆ ಏಕಾಏಕಿ ಕಲ್ಲಿನಿಂದ ತಲೆಗೆ ಹೊಡೆದು ಹಲ್ಲೆ ಮಾಡಿದ್ದ. ಹಲ್ಲೆಗೊಳಗಾದ ಪ್ರಕಾಶ್‌ ಅವರಿಗೆ ತೀವ್ರ ರಕ್ತಸ್ರಾವವಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಿದ್ದರಿಂದ ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ.

ಇನ್ನು ಚಾಲಕ ಪವಡಪ್ಪ ಚನ್ನಪ್ಪ ಚಲವಾದಿ ಅವರ ಗುಪ್ತಂಗಕ್ಕೆ ಒದ್ದಿದ್ದರಿಂದ ಈಗಲೂ ಅವರ ಗುಪ್ತಂಗದ ಒಂದು ಭಾಗ ಈಗಲೂ ಊದಿಕೊಂಡಿದ್ದು ನಡೆಯಲು ಕಷ್ಟವಾಗುತ್ತಿದೆ. ಈ ನಡುವೆಯೂ ಸದ್ಯ ಪವಡಪ್ಪ ಅವರಿಗೂ ಸೂಕ್ತ ಚಿಕಿತ್ಸೆ ನೀಡಿರುವ ವೈದ್ಯರು ವಿಶ್ರಾಂತಿ ಪಡೆಯುವಂತೆ ಸಲಹೆ ಮಾಡಿದ್ದಾರೆ.

ಈ ನಡುವೆ ಕರ್ತವ್ಯ ನಿರತ ಸಾರಿಗೆ ನೌಕರರ ಮೇಲೆ ಹಲ್ಲೆ ಮಾಡಿದ ಆರೋಪಿಯನ್ನು ಬಂಧಿಸಿರುವ ಧನ್ನೂರ್‌ ಪೊಲೀಸರು, ವಿಚಾರಣೆಗೊಳ್ಳಪಡಿಸಿದ್ದಾರೆ.

ಅಮ್ಮನ ಹೃದಯದ ಡಿಎಂ: ತಮ್ಮ ಘಟಕದ ಚಾಲನಾ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ವಿಷಯ ತಿಳಿಯುತಿದ್ದಂತೆ ಹುಮನಾಬಾದ್‌ ಘಟಕದ ವ್ಯವಸ್ಥಾಪಕರಾದ ಗುರುಬಸಮ್ಮ ಅವರು ಕೂಡಲೇ ಸ್ಥಳಕ್ಕೆ ಹೋಗಿ ನೌಕರರ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೆ ಹಲ್ಲೆಗೊಳಗಾಗಿದ್ದರಿಂದ ನೌಕರರಿಗೆ ಜ್ವರ ಏನಾದರು ಬಂದಿದೆಯೇ ಎಂದು ಸ್ವತಃ ಹಣೆ ಮುಟ್ಟಿ ನೋಡಿ ಸ್ವಂತ ಕುಟುಂಬದವರ ತರ ನೋಡಿಕೊಂಡಿದ್ದಾರೆ.

ಅಲ್ಲದೆ ತಮ್ಮ ಡ್ಯೂಟಿ ಮುಗಿದಿದ್ದರಿಂದ ಮನೆಯಲ್ಲಿರಬೇಕಾದ ಸಮಯದಲ್ಲಿ ಅಂದರೆ ರಾತ್ರಿ 11 ಗಂಟೆಯಿಂದ ಮುಂಜಾನೆ 3 ಗಂಟೆವರೆಗೂ ನೌಕರರ ಜತೆಗಿದ್ದು ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಿದ ಬಳಿಕ ಮನೆಗೆ ತೆರಳಿದ್ದಾರೆ. ಈ ನಡುವೆ ಸಾರಿಗೆ ವಾಹನದಲ್ಲೇ ನೌಕರರನ್ನು ಆಸ್ಪತ್ರೆಗೆ ಸೇರಿಸುವ ವ್ಯವಸ್ಥೆಯನ್ನು ಮಾಡುವ ಮೂಲಕ ನೌಕರರ ನೋವಿಗೆ ಸ್ಪಂದಿಸಿದರು ಎಂದು ಘಟಕದ ಸಿಬ್ಬಂದಿ ತಿಳಿಸಿದ್ದಾರೆ.

ಇನ್ನು ಬೀದರ್‌ ವಿಭಾಗದ ವಿಭಾಗೀಯ ನಿಯಂತ್ರನಾಧಿಕಾರಿ ಚಂದ್ರಕಾಂತ್‌ ಫುಲೇಕರ್‌ ಹೊರತುಪಡಿಸಿ ಬಹುತೇಕ ವಿಭಾಗದ ಎಲ್ಲ ಅಧಿಕಾರಿಗಳು ಹಲ್ಲೆ ನಡೆದಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕಾಗಮಿಸಿ ನೌಕರರ ಆರೋಗ್ಯ ವಿಚಾರಿಸಿದ್ದು, ಅಲ್ಲದೆ ಪೊಲೀಸ್‌ ಠಾಣೆಗೆ ತೆರಳಿ ಪ್ರಕರಣ ದಾಖಲಾಗುವವರೆಗೂ ಇದ್ದರು.

ಅಧಿಕಾರಿಗಳ ಈ ನಡೆ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಈ ರೀತಿ ನಾಲ್ಕೂ ನಿಗಮಗಳ ಪ್ರತಿ ಘಟಕ, ವಿಭಾಗದ ಅಧಿಕಾರಿಗಳು ನೌಕರರಿಗೆ ಸ್ಪಂದಿಸಬೇಕು. ಸಾರ್ವಜನಿಕರಿಂದ ತೊಂದರೆ ಆದ ಕೂಡಲೇ ಅದರ ತೀವ್ರತೆ ನೋಡಿಕೊಂಡು ಸ್ಥಳಕ್ಕಾಗಮಿಸಿದರೆ ನೌಕರರಿಗೂ ಬಲ ಬಂದಂತಾಗುತ್ತದೆ. ಅಲ್ಲದೆ ಇನ್ನು ಉತ್ಸಾಹದಿಂದ ಸೇವೆ ಮಾಡುವುದಕ್ಕೆ ಇತರ ನೌಕರರಿಗೂ ಇನ್ನಷ್ಟು ಬಲ ಬರುತ್ತದೆ.

ಹಲ್ಲೆಗೊಳಗಾದ ನೌಕರರ ಸೌಜನ್ಯಕ್ಕೂ ಭೇಟಿ ಮಾಡದ ಡಿಸಿ: ಇನ್ನು ಇಬ್ಬರು ನೌಕರರು ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ, ಅವರಲ್ಲಿ ನಿರ್ವಾಹಕರ ತಲೆಗೆ 5-6 ಹೊಲಿಗೆ ಬಿದ್ದಿದ್ದರೂ ಕೂಡ ಸೌಜನ್ಯಕ್ಕೂ ಬಂದು ಭೇಟಿ ಮಾಡಿ KKRTC ಬೀದರ್‌ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಕಾಂತ್‌ ಫುಲೇಕರ್‌ ಆರೋಗ್ಯ ವಿಚಾರಿಸಿಲ್ಲ. ಇದು ಒಬ್ಬ ವಿಭಾಗೀಯ ನಿಯಂತ್ರಣಾಧಿಕಾರಿ ಹುದ್ದೆಗೆ ಶೋಭೆ ತರುವುದಿಲ್ಲ ಎಂದು ನೌಕರರು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನು ಹುಮನಾಬಾದ್‌ ಘಟಕದ ಟಿಐ ಅಂಬಿಕಾ ಅವರು ಇತ್ತ ಹಲ್ಲೆಗೊಳಗಾಗಿ ನೌಕರರು ಆಸ್ಪತ್ರೆಗೆ ದಾಖಲಾಗಿ ನರಳುತ್ತಿದ್ದರೆ. ಅತ್ತ ನೀವು ಆಸ್ಪತ್ರೆಯಲ್ಲಿದ್ದರೆ ನಾವು ಬೇರೆಯರವನ್ನು ಕೂಡಲೇ ಹೇಗೆ ರೂಟ್‌ ಮೇಲೆ ಕಳಿಸಿಕೊಡಲಾಗುತ್ತದೆ. ಹೇಗೋ ಕೆಲಸ ಮುಗಿಸಿಕೊಂಡು ಬರಬೇಕು ಎಂದು ನೌಕರರಿಗೆ ತಾಕೀತು ಮಾಡಿದರಂತೆ. ನೋಡಿ ಇವರಿಗೇ ರೀತಿ ಹಲ್ಲೆಯಾದರೆ ಇವರು ಆಸ್ಪತ್ರೆಗೆ ಹೋಗದೆ ಡ್ಯೂಟಿಗೆ ಬರುತ್ತಾರೆಯೇ? ಈ ರೀತಿ ಮಾನವೀಯತೆ ಇಲ್ಲದ ರೀತಿಯಲ್ಲಿ ಟಿಐ ಅಂಬಿಕಾ ನಡೆದುಕೊಳ್ಳಬಾರದು. ಇನ್ನಾದರೂ ನೌಕರರಿಂದ ನಾವು ಎಂಬುದನ್ನು ಅರಿತು ನಡೆದುಕೊಂಡು ಅವರ ನೋವಿಗೆ ಸ್ಪಂದಿಸಬೇಕಿದೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು ನೀವು ಗಬಗಬನೆ ಊಟ ಮಾಡುವವರಿದ್ದೀರಾ? ಹಾಗಿದ್ದರೆ ನಿಮಗೆ ಈ ಸಮಸ್ಯೆ ಕಾಡದಿರದು! BMTC ನೌಕರರಿಗೆ ಆನ್-ಲೈನ್ ಮೂಲಕ ವೇತನ ಚೀಟಿ ಪಡೆಯುವ ವ್ಯವಸ್ಥೆ- ಜಾರಿ ಸ್ಕೂಟರ್‌ಗೆ ಕಾರು ಡಿಕ್ಕಿ- ಮೊಪೆಡ್‌ನಲ್ಲಿ ತೆರಳುತ್ತಿದ್ದ ಮಾವ-ಸೊಸೆ ದಾರುಣ ಸಾವು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಹಿಟ್‌ ಧಾರಾವಾಹಿಗಳ ನಿರ್ದೇಶಕ, ನಿರ್ಮಾಪಕ ರಾಮ್​ಜೀ