NEWSನಮ್ಮಜಿಲ್ಲೆನಮ್ಮರಾಜ್ಯ

ಸಾರಿಗೆ ನೌಕರರ ಕಾರ್ಮಿಕರು ಎಂದು ಸಂಬೋಧಿಸದಿದ್ದರೆ ಜಂಟಿಯವರಿಗೆ ತಿಂದದ್ದು ಜೀರ್ಣವಾಗುವುದಿಲ್ಲವೇ: ಒಕ್ಕೂಟ ಕಿಡಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮದ ನೌಕರರನ್ನು ಪದೇಪದೆ ಕಾರ್ಮಿಕರು ಎಂದು ಕರೆಯುವ ಈ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳಿಗೆ ನಿಜವಾಗಲು ನೌಕರರ ಬಗ್ಗೆ ಕಾಳಜಿಯೇ ಇಲ್ಲ.

ಒಂದು ವೇಳೆ ಕಾಳಜಿ ಎಂಬುವುದು ಇದ್ದಿದ್ದರೆ ಇವರು ಸಾರಿಗೆ ಸಿಬ್ಬಂದಿಗಳು/ನೌಕರರನ್ನು ಕಾರ್ಮಿಕರು ಎಂದು ಪದೇಪದೆ ಕರೆಯುತ್ತಿರಲಿಲ್ಲ. ಏನೋ ಹೇಳುತ್ತಾರಲ್ಲ 60 ವರ್ಷವಾದ ಮೇಲೆ ಅರಳುಮರಳು ಎಂಬಂತೆ ಜಂಟಿ ಕ್ರಿಯಾ ಸಮಿತಿಯಲ್ಲಿರುವ ಬಹುತೇಕರು 60ರ ಪ್ರಾಯ ದಾಟಿದವರಾಗಿದ್ದಾರೆ. ಹೀಗಾಗಿಯೇ ಸಾರಿಗೆ ನೌಕರರನ್ನು ಕಾರ್ಮಿಕರು ಕಾರ್ಮಿಕರು ಎಂದು ದಿನಗೂಲಿ ಕಾರ್ಮಿಕರಾಗಿ ಮಾಡಿಕೊಂಡಂತೆ ಸಂಬೋಧಿಸುತ್ತಿದ್ದಾರೆ.

ನೋಡಿ ಇಡೀ ಸಾರಿಗೆಯ ನಾಲ್ಕೂ ನಿಗಮಗಳಲ್ಲಿ ಚಾಲನಾ ಸಿಬ್ಬಂದಿಯಿಂದ ಪ್ರತಿಯೊಬ್ಬರನ್ನು ನೌಕರರು ಎಂದು ಕರೆಯುತ್ತಾರೆ. ಆದರೆ ಜಂಟಿ ಕ್ರಿಯಾ ಸಮಿತಿಯವರು ಮಾತ್ರ ಕಾರ್ಮಿಕರು ಎಂದು ಕರೆಯುತ್ತಿದ್ದಾರೆ. ಅಂದರೆ ಇವರಿಗೆ ನಿಜವಾಗಲು ನೌಕರರ ಬಗ್ಗೆ ಗೌರವ ಎಂಬುವುದೇ ಇಲ್ಲ. ನಾಚಿಕೆಯಾಗಬೇಕು ಇವರಿಗೆ. ಹೀಗೆ ಕರೆದು ಕರೆದೆ ನೌಕರರನ್ನು ಕಳೆದ 3-4 ದಶಕಗಳಿಂದಲೂ ಅಧಿಕಾರಿಗಳು- ನೌಕರರ ನಡುವೆ ಹೊಂದಾಣಿಕೆ ಇಲ್ಲದಂತ ವಾತಾವರಣ ನಿರ್ಮಿಸಿ ಒಡೆದಾಳುವ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ.

ನೇರವಾಗಿ ಅನಂತ ಸುಬ್ಬರಾವ್‌ ಅವರಿಗೆ ಕೇಳ ಬಯಸುತ್ತೇವೆ. ಸಾರಿಗೆ ನೌಕರರು ಕಾರ್ಮಿಕರ ಎಂಬುದನ್ನು ತಾವು ಸ್ಪಷ್ಟಪಡಿಸಿ. ಇಲ್ಲ ಸಾರಿಗೆ ನೌಕರರನ್ನು ಕಾರ್ಮಿಕರು ಎಂದು ಕರೆಯುವುದೇ ಸರಿ ಎಂದಾದರೆ ನೀವು ಸಾರಿಗೆ ಕಾರ್ಮಿಕರು (ದಿನಗೂಲಿ) ಎಂದು ಎಲ್ಲ ನಿಮ್ಮ ಮನವಿ ಪತ್ರಗಳಲ್ಲಿ ಹಾಕಿ ಸರ್ಕಾರಕ್ಕೆ ಮತ್ತು ಸಾರಿಗೆ ಆಡಳಿತ ಮಂಡಳಿಗೆ ಕೊಡಿ.

ಏನ್ರಿ ಇದು ಕಳೆದ 40-50 ವರ್ಷದಿಂದಲೂ ನಾವು ಸಾರಿಗೆಯ ನೌಕರರ ಪರವಾಗಿ ಇದ್ದೇವೆ ಎಂದು ಹೇಳುವ ನೀವು ಪದೇಪದೆ ಕಾರ್ಮಿಕರು ಕಾರ್ಮಿಕರು ಎಂದು ದಿನಗೂಲಿ ಮಾಡುವವರಂತೆ ಅವರನ್ನು ಕಾಣುವ ಮೂಲಕ ಅವರಿಗೆ ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯಗಳನ್ನು ಪಡೆಯುವುದಕ್ಕೆ ನಮ್ಮನ್ನೇ ಆಶ್ರಯಿಸಬೇಕು ಎಂಬುದನ್ನು ಪಾಲಿಸಿಕೊಂಡು ಬರುತ್ತಿದ್ದೀರಲ್ಲ.

ಏಕೆ ಸಾರಿಗೆ ನಿಗಮಗಳಲ್ಲಿ ಅಧಿಕಾರಿಗಳು/ನೌಕರರ ಕೈಯಲ್ಲಿ ಏನನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ ಅವರಿಗೆ ನಾವೇ ಬೇಕು ಎಂಬ ಭ್ರಮೆಯಲ್ಲಿದ್ದಾರ? ಒಂದು ವೇಳೆ ಆ ಭ್ರಮೆಯಲ್ಲಿದ್ದರೆ ಇಂದೆ ಬಿಟ್ಟುಬಿಡಿ ನಾವೆಲ್ಲ ಸಾರಿಗೆ ನೌಕರರು. ಚಾಲನಾ ಸಿಬ್ಬಂದಿಗಳು ಎಂದರೆ ಸಿ ದರ್ಜೆ ನೌಕರರು ನಾವು. ಡಿ. ಗ್ರೂಪ್‌ ನೌಕರರಲ್ಲ. ಡಿ‌ ಗ್ರೂಪ್‌ ನೌಕರರನ್ನು ಸಹ ಕಾರ್ಮಿಕರು ಎಂದು ಕರೆಯುವುದಿಲ್ಲವೆಂದು ಒಕ್ಕೂಟದ ಪದಾಧಿಕಾರಿಗಳು ಅನಂತ ಸುಬ್ಬರಾವ್‌ ಸೇರಿದಂತೆ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.

ಮುಷ್ಕರಕ್ಕೆ ಬೆಂಬಲ ನೀಡುವುದಿಲ್ಲ ಎಂಬ ಹೇಳಿಕೆಗೆ ನಮಗೆ ತಾವು ಕೊಟ್ಟಿರುವ ಹಿಂಬರಹದ ಸಮಜಾಯಿಷಿ ಪತ್ರದಲ್ಲೂ ತಾವು ನಮ್ಮನ್ನು ಕಾರ್ಮಿಕರು ಎಂದೇ ಹಾಕಿದ್ದೀರಿ. ಏಕೆ ನಿಮಗೆ ವಯಸ್ಸಾಗಿದೆ ಎಂಬುದನ್ನು ಈ ಮೂಲಕ ನಮಗೆ ನೆನಪಿಸಲು ತಾವು ಈ ರೀತಿ ಕಾರ್ಮಿಕ ಪದ ಬಳಸಿದ್ದೀರಾ ಎಂದು ಒಕ್ಕೂಟದ ಪದಾಧಿಕಾರಿಗಳು ಪ್ರಶ್ನಿಸಿದ್ದಾರೆ.

ಒಟ್ಟಾರೆ ಸಾರಿಗೆ ನೌಕರರನ್ನು ಜಂಟಿಯವರಾದ ತಾವು ಕಾರ್ಮಿಕರು ಎಂದು ಕರೆಯದಿದ್ದರೆ ತಿಂದದ್ದು ಜೀರ್ಣವಾಗುವುದಿಲ್ಲವೇ? ಇನ್ನಾದರೂ ನಾವು ಸಿ ಗ್ರೂಪ್‌ ನೌಕರರಿದ್ದೇವೆ ಎಂಬುದನ್ನಾದರೂ ತಿಳಿದು ನಮಗೂ ಗೌರವ ಕೊಡುವುದನ್ನು ಮೊದಲು ಕಲಿಯಿರಿ ಅಮೇಲೆ ನಮ್ಮ ನೌಕರರ ಪರವಾಗಿ ಮುಷ್ಕರ ಮಾಡುವಿರಂತೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು ನೀವು ಗಬಗಬನೆ ಊಟ ಮಾಡುವವರಿದ್ದೀರಾ? ಹಾಗಿದ್ದರೆ ನಿಮಗೆ ಈ ಸಮಸ್ಯೆ ಕಾಡದಿರದು! BMTC ನೌಕರರಿಗೆ ಆನ್-ಲೈನ್ ಮೂಲಕ ವೇತನ ಚೀಟಿ ಪಡೆಯುವ ವ್ಯವಸ್ಥೆ- ಜಾರಿ ಸ್ಕೂಟರ್‌ಗೆ ಕಾರು ಡಿಕ್ಕಿ- ಮೊಪೆಡ್‌ನಲ್ಲಿ ತೆರಳುತ್ತಿದ್ದ ಮಾವ-ಸೊಸೆ ದಾರುಣ ಸಾವು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಹಿಟ್‌ ಧಾರಾವಾಹಿಗಳ ನಿರ್ದೇಶಕ, ನಿರ್ಮಾಪಕ ರಾಮ್​ಜೀ