ಕೃಷ್ಣರಾಜಪೇಟೆ: ತಾಲೂಕಿನ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ ಬೃಗು ಮಹರ್ಷಿಗಳ ತಫೋ ಭೂಮಿ ಹೇಮಗಿರಿ ಬೆಟ್ಟದ ಮೇಲೆ ನೆಲೆಸಿರುವ ಶ್ರೀ ಕಲ್ಯಾಣ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ಇಂದು ಜ.10ರ ಶುಕ್ರವಾರ ಅಭಿಷೇಕ, ವಿಶೇಷ ಪೂಜೆ ಪುರಸ್ಕಾರಗಳು ಹಾಗೂ ವೈಕುಂಠ ದ್ವಾರ ಪ್ರವೇಶ ಕಾರ್ಯಗಳು ಶ್ರದ್ಧಾ ಭಕ್ತಿಯಿಂದ ನಡೆದವು.
ಇಂದು ಮುಂಜಾನೆಯಿಂದಲೇ ದೇವಾಲಯದ ಪ್ರಧಾನ ಅರ್ಚಕರಾದ ರಾಮಭಟ್ಟರ ನೇತೃತ್ವದಲ್ಲಿ ನಡೆದ ಪೂಜಾ ವಿಧಿ ವಿಧಾನಗಳಲ್ಲಿ ಆದಿಚುಂಚನಗಿರಿಯ ಹೇಮಗಿರಿ ಶಾಖಾ ಮಠದ ಕಾರ್ಯದರ್ಶಿ ಡಾ.ಜೆ.ಎನ್. ರಾಮಕೃಷ್ಣೇಗೌಡ ಭಾಗವಹಿಸಿದ್ದರು.
ಮುಂಜಾನೆ 6.30ಕ್ಕೆ ಸರಿಯಾಗಿ ವೈಕುಂಠ ದ್ವಾರವನ್ನು ರಾಮಕೃಷ್ಣೇಗೌಡ ಅವರು ವೈಕುಂಠ ದ್ವಾರ ಪ್ರವೇಶ ಮಾಡಿ ಕಲ್ಯಾಣ ವೆಂಕಟರಮಣ ಸ್ವಾಮಿಯ ಅಭಿಷೇಕ ಹಾಗೂ ಪೂಜಾ ಕಾರ್ಯಕ್ರಮಗಳಲ್ಲಿ ಭಾಗಿಯಾದರು. ಶ್ರೀ ರಂಗನಾಥ ಸ್ವಾಮಿ, ಶ್ರೀ ಪದ್ಮವತಿ ಅಮ್ಮನವರು ಹಾಗೂ ಮುಖ್ಯ ಪ್ರಾಣ ಶ್ರೀ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಮಾಡಿ ಲೋಕ ಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಹೇಮಗಿರಿ ಬಿಜಿಎಸ್ ಪಬ್ಲಿಕ್ ಶಾಲೆಯ ಶಿಕ್ಷಕರು, ಬಂಡಿಹೊಳೆ, ಕುಪ್ಪಳ್ಳಿ, ಬಿ.ಬಿ.ಕಾವಲು, ಲಕ್ಷ್ಮೀಪುರ, ಮಾಕವಳ್ಳಿ, ನಾಟನಹಳ್ಳಿ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಸ್ಥರು, ಸಮಾಜ ಸೇವಕ ಕೊಮ್ಮೆನಹಳ್ಳಿ ಡಾ.ರಾಮೇಗೌಡ, ನವೀನ್ ಕುಮಾರ್, ಸಾಧುಗೋನಹಳ್ಳಿ ರಮೇಶ್, ಲೋಕೇಶ್, ಲಕ್ಷ್ಮೀಪುರ ಕುಮಾರಸ್ವಾಮಿ, ರಾಜ್ಯದ ಮಾಜಿ ಸಚಿವ ಡಾ. ನಾರಾಯಣಗೌಡರ ಧರ್ಮ ಪತ್ನಿ ದೇವಕಿ, ರಾಜೇನಹಳ್ಳಿ ಡಾ. ರೇವಣ್ಣ, ವಿಜಯ್ ರಾಮೇಗೌಡ, ಬಿ.ಎಲ್. ದೇವರಾಜು, ಕಿಕ್ಕೇರಿಸುರೇಶ್ ಸೇರಿದಂತೆ ಭಕ್ತಸಾಗರವೇ ಹರಿದು ಬಂದಿತು.
ವರದಿ.ಡಾ.ಕೆ.ಆರ್.ನೀಲಕಂಠ