ನಾಳೆ ಇಪಿಎಸ್-95, BMTC-KSRTC ನಿವೃತ್ತ ನೌಕರರ ಸಂಘದ 101ನೇ ಮಾಸಿಕ ಸಭೆ
ತಾವೆಲ್ಲರೂ ವಿಶ್ವ ಪಾರಂಪರಿಕ ಲಾಲ್ ಬಾಗ್ ಹೋತೊಟದಲ್ಲಿ ವಾಯು ವಿಹಾರ ನಡೆಸಿ, ತಮ್ಮ ಹಳೆಯ ಸ್ನೇಹಿತರ ಬೇಟಿ, ವಿಚಾರ ವಿನಿಮಯ ಹಾಗೂ ಈ ಮೇಲ್ಕಂಡ ಎಲ್ಲ ಅಂಶಗಳ ಬಗ್ಗೆ ಚರ್ಚಿಸೋಣ. ಎಲ್ಲ ನಿವೃತ್ತ ನೌಕರರು ಜೂನ್ 7ರ ಭಾನುವಾರ ಬೆಳಗ್ಗೆ 8ಗಂಟೆಗೆ ಹಾಜರಾಗಬೇಕೆಂದು ಕಾರ್ಯಕಾರಿ ಸಮಿತಿ ಪರವಾಗಿ ವಿನಂತಿ

ಬೆಂಗಳೂರು: ಲಾಲ್ ಬಾಗ್ ಆವರಣದಲ್ಲಿ ಇಪಿಎಸ್-95, ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ನಿವೃತ್ತ ನೌಕರರ ಸಂಘಟನೆಯ 101ನೇ ಮಾಸಿಕ ಸಭೆ ನಾಳೆ ಅಂದರೆ ಜೂ.7ರ ಭಾನುವಾರ ಬೆಳಗ್ಗೆ 8ಗಂಟೆಗೆ ಜರುಗಲಿದೆ ಎಂದು ಈ ನಿವೃತ್ತ ನೌಕರರ ಸಂಘದ ಅಧ್ಯಕ್ಷ ನಂಜುಂಡೇಗೌಡ ತಿಳಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಶತಮಾನಗಳ ಭವ್ಯ ಪರಂಪರೆಯನ್ನು ಹೊಂದಿರುವ ಲಾಲ್ ಬಾಗ್ ಗಾಜಿನ ಮನೆ ಆವರಣದಲ್ಲಿ ಶತಮಾನೋತ್ಸವ ಮಾಸಿಕ ಸಭೆಗಳನ್ನು ಇಪಿಎಸ್ ನಿವೃತ್ತರು ಆಚರಿಸುವ ಮೂಲಕ, ನಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಿ ಎಂದು ಕೇಂದ್ರ ಸರ್ಕಾರದ ಗಮನ ಸೆಳೆದರೂ ಸಹಾ ಇದುವರೆವಿಗೂ ಯಾವುದೇ ಫಲಿತಾಂಶ ಬರದೇ ಇದ್ದು, ನಿವೃತ್ತರನ್ನು ತೀವ್ರ ನಿರಾಸೆಗೊಳಿಸಿದೆ.
ವಿಶ್ವ ವಿಖ್ಯಾತ ಲಾಲ್ ಬಾಗ್ಗೂ ಇಪಿಎಸ್ ಪಿಂಚಣಿಗಾರರಿಗೂ ಅವಿನವಭಾವ ಸಂಬಂಧವಿದ್ದು, ಈ ಸುಂದರ ಪರಿಸರ ತಾಣದಲ್ಲಿ ಕ್ಷಣ ಕಾಲ ಕಳೆದಲ್ಲಿ ಬದುಕಿನ ಜಂಜಾಟವನ್ನು ಕೆಲವೊತ್ತು ಮರೆತಂತಾಗಿ, ಹಿರಿಯ ಜೀವಗಳಿಗೆ ನವಚೇತನ, ಸ್ಫೂರ್ತಿ ತುಂಬುತ್ತದೆ. ಇದೇ ಆವರಣದಲ್ಲಿ ರೈತರು ಬೆಳೆದ ಸಾವಯವ ಮಾವು ಮೇಳ ನಡೆಯುತ್ತಿದ್ದು, 68 ವಿವಿಧ ತಳಿಯ ಮಾವು ಮಾರಾಟವಾಗುತ್ತಿದ್ದು, ಪರಿಸರವಾದಿಗಳನ್ನು ಕೈಬೀಸಿ ಕರೆಯುತ್ತಿದೆ. ಈ ಮಾವಿನ ಆಹ್ಲಾದಕರ ರುಚಿಯನ್ನು ಸವಿಯಲೇಬೇಕು.
ಮೇ 27, 2026 ರಂದು ನಗರದ ರಿಚ್ಮಂಡ್ ವೃತ್ತದಲ್ಲಿರುವ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ಇಪಿಎಸ್ ನಿವೃತ್ತರು ನಡೆಸಿದ ಪ್ರತಿಭಟನಾ ಸಭೆ ಹಾಗೂ ಮನವಿ ಸಲ್ಲಿಸುವ ಕಾರ್ಯಕ್ರಮ ಅತ್ಯಂತ ಪರಿಣಾಮಕಾರಿಯಾಗಿದ್ದು, ದೇಶಾದ್ಯಂತ ಇರುವ ಇಪಿಎಸ್ ನಿವೃತ್ತರು ಮಾತ್ರವಲ್ಲದೆ ಸಾರ್ವಜನಿಕ ವಲಯದಲ್ಲಿಯೂ ಸಹಾ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ನೌಕರ ತನ್ನ ನಿವೃತ್ತಿಯ ನಂತರ ಸುಂದರ, ನೆಮ್ಮದಿಯ ಬದುಕಿನ ಕನಸು ಕಂಡಿದ್ದ, ನಂತರ ಗೊತ್ತಾಗಿದ್ದು, ಅದು ವಾಸ್ತವವಲ್ಲ ಕೇವಲ ಭ್ರಮೆ. ಸಂಘರ್ಷ ನಮ್ಮ ಜೀವನದ ಭಾಗವಾಗಿದೆ, ವ್ಯವಸ್ಥೆಯ ವಿರುದ್ಧ ಹೋರಾಟ ನಡೆಸಿ, ನಮ್ಮ ಹಕ್ಕನ್ನು ಪ್ರತಿಪಾದಿಸುವುದು ಅನಿವಾರ್ಯವಾಗಿದೆ.
ದಿನಕಳೆದಂತೆ ಇಪಿಎಫ್ಒ ಅಧಿಕಾರಿಗಳ ಕಳ್ಳಾಟ ಬಯಲಾಗುತ್ತಿದೆ. ಅಧಿಕಾರಿಗಳು ಹೊರಡಿಸಿರುವ ಹಲವಾರು ಸುತ್ತೋಲೆಗಳು ಹಾಗೂ ಕಚೇರಿ ಆದೇಶಗಳು ಅನಪೇಕ್ಷಿತ ಹಾಗೂ ಕಾನೂನು ವಿರೋಧಿ ಚಟುವಟಿಕೆ ಎಂದು ನಮ್ಮ ರಾಜ್ಯ ಉಚ್ಚ ನ್ಯಾಯಾಲಯವು ಸೇರಿದಂತೆ ದೇಶದ ಹಲವಾರು ಉಚ್ಚ ನ್ಯಾಯಾಲಯಗಳು ತೀರ್ಪು ನೀಡಿ, ಅರ್ಜಿದಾರರ ಜಂಟಿ ಆಯ್ಕೆ ಪತ್ರಗಳನ್ನು ಪುನರ್ ಪರಿಶೀಲಿಸುವಂತೆ ಆದೇಶಿಸಿದ್ದು, ಇವೆಲ್ಲವೂ ಸಹ 2014 ರ ಅಂತರ ನಿವೃತ್ತರಾದ ಇಪಿಎಸ್ ಪಿಂಚಿಣಿದಾರರ ಅಧಿಕ ಪಿಂಚಣಿಗೆ ಸಂಬಂಧಿಸಿದಂತೆ ಪೂರಕ ಬೆಳವಣಿಗೆ ಆಗಿರುತ್ತದೆ.
ಮಾಸಿಕ ಸಭೆಗೆ ಸಂಘದ ಎಲ್ಲ ಪದಾಧಿಕಾರಿಗಳು, ಚಿಕ್ಕಬಳ್ಳಾಪುರ ಕೆಎಸ್ಆರ್ಟಿಸಿ ಕ್ಷೇಮಾಭಿವೃದ್ಧಿ ಟ್ರಸ್ಟಿನ ಪದಾಧಿಕಾರಿಗಳು, ಸದಸ್ಯರು, 2020 ರ ನಂತರ ಸಂಸ್ಥೆಯ ಸೇವೆಯಿಂದ ನಿವೃತ್ತರಾದ ನೌಕರರ ಬಾಕಿ ವೇತನ ಹಾಗೂ ಸಂಸ್ಥೆಯ ಸೇವೆಯಿಂದ ಇತ್ತೀಚಿಗೆ ನಿವೃತ್ತರಾದ ನೌಕರರಿಗೆ ಕೈಗಾರಿಕಾ ಒಪ್ಪಂದ 01/01/2024 ರ ಪ್ರಕಾರ ಫಿಕ್ಸ್ಯೇಷನ್ ಆಗಬೇಕಾಗಿದ್ದು, ನೌಕರರ ಈ ಎಲ್ಲ ಕುಂದು ಕೊರತೆಗಳ ಬಗ್ಗೆ ಚರ್ಚಿಸಲಾಗುವುದು. ಹಲವಾರು ಕಾರ್ಮಿಕ ಮುಖಂಡರು ಹಾಗೂ ಇತರೆ ಕಾರ್ಖಾನೆ ಹಾಗೂ ಕಂಪನಿಗಳ ನಿವೃತ್ತರು, ಸಭೆಯಲ್ಲಿ ಭಾಗವಹಿಸಲಿದ್ದು, ಮುಖಂಡರು ಇತ್ತೀಚಿನ ಎಲ್ಲ ಬೆಳವಣಿಗೆಗಳು ಹಾಗೂ ನಮ್ಮ ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಮಾತನಾಡಲಿದ್ದಾರೆ.
ಹೀಗಾಗಿ ತಾವೆಲ್ಲರೂ ವಿಶ್ವ ಪಾರಂಪರಿಕ ಲಾಲ್ ಬಾಗ್ ಹೋತೊಟದಲ್ಲಿ ವಾಯು ವಿಹಾರ ನಡೆಸಿ, ತಮ್ಮ ಹಳೆಯ ಸ್ನೇಹಿತರ ಬೇಟಿ, ವಿಚಾರ ವಿನಿಮಯ ಹಾಗೂ ಈ ಮೇಲ್ಕಂಡ ಎಲ್ಲ ಅಂಶಗಳ ಬಗ್ಗೆ ಚರ್ಚಿಸೋಣ. ಎಲ್ಲ ನಿವೃತ್ತ ನೌಕರರು ಜೂನ್ 7ರ ಭಾನುವಾರ ಬೆಳಗ್ಗೆ 8ಗಂಟೆಗೆ ಹಾಜರಾಗಬೇಕೆಂದು ಕಾರ್ಯಕಾರಿ ಸಮಿತಿ ಪರವಾಗಿ ವಿನಂತಿಸಿ ಕೊಂಡಿದ್ದಾರೆ.
Related









