ಮೇ 20ರಿಂದ ಸಾರಿಗೆ ನೌಕರರ ಮುಷ್ಕರ ಮಾಡೇ ತೀರುತ್ತೇವೆ: ವಿಜಯಭಾಸ್ಕರ್
ಹೈ ಕೋರ್ಟ್ ಪಿಎಎಲ್ ಹಾಕಿದಾಗ ಮುಷ್ಕರ ಕೈ ಬಿಡಿ ಎಂದು ನಿರ್ದೇಶನ ನೀಡದರೂ ನಮ್ಮ ಬೇಡಿಕೆ ಈಡೇರುವವರೆಗೂ ನಾವು ಕೈ ಬಿಡುವುದಿಲ್ಲ ನಮ್ಮನ್ನು ಜೈಲಿಗೆ ಹಾಕಿದರೂ ಹೋರಾಟ ಮುಂದುವರಿಯಲಿದೆ ಎಂದು ವಿಜಯ ಭಾಸ್ಕರ್ ತಿಳಿಸಿದ್ದಾರೆ.

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ವೇತನ ಹೆಚ್ಚಳ ವಿಚಾರದಲ್ಲಿ ಸರ್ಕಾರದ ಇತ್ತೀಚಿನ ನಿರ್ಧಾರದ ಭಾರಿ ಅನ್ಯಾಯದಿಂದ ಕೂಡಿದ್ದು ಈ ವಿರುದ್ಧ ಜಂಟಿ ಕ್ರಿಯಾ ಸಮಿತಿ ಮೇ 20ರಿಂದ ಅನಿರ್ಧಿಷ್ಟಾವಧಿ ಮುಷ್ಕರ ಮಾಡಿಯೇ ತೀರುತ್ತದೆ ಎಂದು ಕೆಎಸ್ಆರ್ಟಿಸಿ (KSRTC) ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಶನ್ನ ಪ್ರಧಾನ ಕಾರ್ಯದರ್ಶಿ ವಿಜಯಭಾಸ್ಕರ್ ತಿಳಿಸಿದ್ದಾರೆ.

ಈ ಸಂಬಂಧ ತನ್ನ ಆಕ್ರೋಶ ವ್ಯಕ್ತಪಡಿಸಿರುವ ಅವರು, ಸರ್ಕಾರದ ಏಕಪಕ್ಷೀಯ ನಿರ್ಧಾರದಿಂದ ನೌಕರರಿಗೆ ಭಾರಿ ಲಾಸ್ ಆಗುತ್ತಿದೆ. ಸರ್ಕಾರವು ಸಾರಿಗೆ ನೌಕರರೊಂದಿಗೆ ಸಮಾಲೋಚನೆ ನಡೆಸದೆ, ಏಕಪಕ್ಷೀಯವಾಗಿ 12.5% ವೇತನ ಹೆಚ್ಚಳವನ್ನು ಘೋಷಿಸಿರುವುದನ್ನು ಸಂಘಟನೆ ತೀವ್ರವಾಗಿ ಖಂಡಿಸಿದೆ ಎಂದು ಹೇಳಿದ್ದಾರೆ.
ಬೇಡಿಕೆಗಳು: ವೇತನ ಪರಿಷ್ಕರಣೆಯು 1.1.2024 ರಿಂದಲೇ ಜಾರಿಗೆ ಬರಬೇಕು ಎಂದು ನಮ್ಮ ಜಿಂಟಿ ಸಂಘಟನೆ ಒತ್ತಾಯಿಸಿದೆ. ಪ್ರಸ್ತುತ ಘೋಷಣೆಯಲ್ಲಿ 2024 ರಿಂದ 2025 ರವರೆಗಿನ ಅವಧಿಯ ಸೌಲಭ್ಯಗಳು ಸಿಗುತ್ತಿಲ್ಲ ಎಂಬ ಅಸಮಾಧಾನವಿದೆ ಎಂದು ಹೇಳಿದ್ದಾರೆ.
ಮುಷ್ಕರದ ನಿರ್ಧಾರ: ಈ ಸರ್ಕಾರದ ಕ್ರಮದ ವಿರುದ್ಧ ಈಗಾಗಲೇ ಹುಬ್ಬಳ್ಳಿ (9ನೇ ತಾರೀಖು) ಮತ್ತು ಗುಲ್ಬರ್ಗದಲ್ಲಿ (12ನೇ ತಾರೀಖು) ಸಮಾವೇಶಗಳನ್ನು ನಡೆಸಲಾಗಿದೆ. ಮುಂಬರುವ ದಿನಗಳಲ್ಲಿ ಮೈಸೂರು (14ನೇ ತಾರೀಖು ಅಂದರೆ ಇಂದು) ಮತ್ತು ಬೆಂಗಳೂರಿನಲ್ಲಿ (15ನೇ ತಾರೀಖು) ಸಮಾವೇಶಗಳು ನಡೆಯಲಿದ್ದು, ನಿಗದಿಯಾದಂತೆ 20ನೇ ತಾರೀಖಿನಂದು ಮುಷ್ಕರ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮುಂದಿನ ಕ್ರಮ: ಸರ್ಕಾರಕ್ಕೆ ಮುಖ್ಯಮಂತ್ರಿಗಳ ಮೂಲಕ ಅಧಿಕೃತ ಪತ್ರ ಸಲ್ಲಿಸಲಾಗುವುದು ಮತ್ತು ಸರ್ಕಾರವು ತನ್ನ ಆದೇಶವನ್ನು ತಿದ್ದುಪಡಿ ಮಾಡುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿರುವ ವಿಜಯಭಾಸ್ಕರ್ ಹೈಕೋರ್ಟ್ ಒಂದು ವೇಳೆ ಮುಷ್ಕರ ಕೈ ಬಿಡಿ ಎಂದು ಹೇಳಿದರೆ ನಾವು ಸಾಧ್ಯವಿಲ್ಲ ನಮ್ಮನ್ನು ಜೈಲಿಗೆ ಬೇಕಾದರೂ ಹಾಕಿ ಎಂದು ಹೇಳುವುದಾಗಿ ತಿಳಿಸಿದ್ದಾರೆ.
ಒಟ್ಟಾರೆ ಸಾರಿಗೆ ನೌಕರರಿಗೆ ಸರ್ಕಾರ ಮಾಡಿರುವ ಶೇ.12.5ರಷ್ಟು ವೇತನ ಹೆಚ್ಚಳದ ವಿರುದ್ಧ, ಹಾಗೂ ಸಂಸ್ಥೆಯ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೇ 20, 2026 ರಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ನಾಲ್ಕೂ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಕರೆ ನೀಡಿದೆ ಎಂದು ತಿಳಿಸಿದ್ದಾರೆ.
Related









