ಇಂದು ರಾತ್ರಿ 8.30ರಿಂದ 9.30ರವರೆಗೆ KSRTC ಎಂಡಿ ಅಕ್ರಮ್ ಪಾಷರ ಭೇಟಿ ಮಾಡಿ ಗೌಪ್ಯ ಸಭೆ ನಡೆಸಿದ ಜಂಟಿ ಮುಖಂಡರು!
ಭೇಟಿಯ ಉದ್ದೇಶವೇನು ಎಂಬುವುದೇ ಯಕ್ಷಪ್ರಶ್ನೆ ಏನು ಚರ್ಚೆಯಾಗಿದೆ ಅದರ ರಹಸ್ಯವೇನು? ಎಂಬುದರ ಬಗ್ಗೆ ಜಂಟಿ ಮುಖಂಡರು ನೌಕರರಿಗೆ ಹೇಳಬೇಕು

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಎಂಡಿ ಅಕ್ರಮ್ ಪಾಷ ಅವರನ್ನು ಇಂದು ರಾತ್ರಿ 8.30ರಿಂದ 9.30ರವರೆಗೂ ಶಾಂತಿನಗರದಲ್ಲಿರುವ ಕೇಂದ್ರ ಕಚೇರಿಯಲ್ಲಿ ಭೇಟಿ ಮಾಡಿ ಗೌಪ್ಯ ಸಭೆ ನಡೆಸಿದ ಜಂಟಿ ಕ್ರಿಯಾ ಸಮಿತಿ ಮುಖಂಡರು.

ಈಗ ಕೆಲವೇ ನಿಮಿಷಗಳಲ್ಲಿ ಕೇಂದ್ರ ಕಚೇರಿಯಿಂದ ಹೊರಬಂದಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿದ್ದು, ಈ ಜಂಟಿ ಕ್ರಿಯಾ ಸಮಿತಿಯವರು ಏಕ ರಾತ್ರಿ ಎಂಡಿ ಅವರನ್ನು ಭೇಟಿ ಮಾಡಿದ್ದಾರೆ. ಇದರ ಹಿಂದಿರುವ ರಹಸ್ಯವೇನು? ಎಂಬುವುದು ಈಗ ಯಕ್ಷ ಪ್ರಶ್ನೆಯಾಗಿದೆ.
ಇದೇ ಮೇ 20ರಂದು ಮುಷ್ಕರಕ್ಕೆ ಕರೆ ನೀಡಿರುವ ಇವರು ತರಾತುರಿಯಲ್ಲಿ ಎಂಡಿ ಅವರ ಭೇಟಿ ಮಾಡಿ ಚರ್ಚಿಸುವ ವಿಷಯವೇನಿತ್ತು. ಏನಾದರೂ ಈಗ ಘೋಷಣೆ ಮಾಡಿರುವ ಶೇ.12.5ರಷ್ಟು ವೇತನದ ಬದಲಿಗೆ ಶೇ.18ರಷ್ಟು ವೇತನ ಹೆಚ್ಚಳ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂb ಒತ್ತಡ ಹೇರಲು ಭೇಟಿ ಮಾಡಿದ್ದರ. ಇಲ್ಲ ಒಳೊಪ್ಪಂದದ ಮುಂದುವರಿದ ಭಾಗವಾಗಿ ಭೇಟಿ ಮಾಡಿದ್ದರ ಎಂಬುವುದರ ಬಗ್ಗೆ ಈ ಜಂಟಿ ಮುಖಂಡರೇ ಬಾಯಿಬಿಡಬೇಕಿದೆ.
ಒಟ್ಟಾರೆ, 1.07 ಲಕ್ಷ ನೌಕರರಿಗೆ ಒಳ್ಳೆಯದನ್ನು ಮಾಡುವ ನಿಟ್ಟಿನಲ್ಲಿ ಈ ಗೌಪ್ಯ ಸಭೆಯನ್ನು ಎಂಡಿ ಅವರ ಕಚೇರಿಯಲ್ಲೇ ನಡೆಸಿದ್ದರೆ ಅದು ಒಳ್ಳೆಯ ಬೆಳವಣಿಗೆ ಎಂದೇ ಹೇಳಬಹುದು. ಆದರೆ, ಇದರ ಹೊರತಾಗಿ ಬೇರೆ ಉದ್ದೇಶದಿಂದ ಮಾಡಿದ್ದರೆ ಅದು ನೌಕರರಿಗೆ ದ್ರೋಹ ಬಗೆದಂತಾಗುತ್ತದೆ. ಈ ಬಗ್ಗೆ ಜಂಟಿಯವರೆ ಉತ್ತರ ಕೊಡಬೇಕಿದೆ.
ಏಕೆಂದರೆ ಈ ಜಂಟಿ ಕ್ರಿಯಾ ಸಮಿತಿ ಹುಟ್ಟಿಕೊಂಡಿರುವುದು ನೌಕರರ ಸಮಸ್ಯೆ ಆಲಿಸಿ ಅವರ ಬೇಡಿಕೆ ಈಡೇರಿಸುವತ್ತ ಸರ್ಕಾರ ಮತ್ತು ಸಾರಿಗೆ ಸಂಸ್ಥೆಗಳ ಆಡಳಿತ ಮಂಡಳಿ ಗಮನ ಸೆಳೆಯುವುದಕ್ಕೆ. ಈ ನಿಟ್ಟಿನಲ್ಲಿ ಭೇಟಿ ಮಾಡಿದ್ದರೆ ನೌಕರರಿಗೆ ಅನುಕೂಲವಾಗುತ್ತದೆ. ಇಲ್ಲ ವಾಮ ಮಾರ್ಗದಲ್ಲಿ ಭೇಟಿ ಮಾಡಿದ್ದರೆ ನೌಕರರಿಗೆ ಇದರಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗುತ್ತದೆ ಎಂದು ನೌಕರರು ಆತಂಕ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಇನ್ನು ಬೆಳಗಾದರೆ ಮುಷ್ಕರ ಮಾಡುವುದಕ್ಕೆ ಕೇವಲ ಒಂದೇಒಂದು ಬಾಕಿ ಉಳಿಯುತ್ತದೆ. ಈ ನಡುವೆ ಈ ರಹಸ್ಯ ಸಭೆ ಮಾಡಿರುವುದು ಭಾರಿ ಚರ್ಚೆಗೆ ಗ್ರಾಸವಾಗುತ್ತಿದೆ.
Related









