NEWSನಮ್ಮಜಿಲ್ಲೆನಮ್ಮರಾಜ್ಯ

KSRTC ಮೈಸೂರು ಡಿಸಿಗೆ- RC, FC ಚಾಲಕ ನಿರ್ವಾಹಕರ ಜವಾಬ್ದಾರಿನಾ?: ಹೇ ತಲೆಕೆಟ್ಟ ಡಿಸಿ ನೀನು ನಿಜವಾಗಲು ಜವಾಬ್ದಾರಿಯಿಂದ ಡ್ಯೂಟಿ ಮಾಡುತ್ತಿದ್ದೀಯಾ ಹೇಳಲೇ?

ತಮ್ಮ ತಪ್ಪುಗಳನ್ನು ನಿರ್ವಾಹಕರ ಮೇಲೆ ಹಾಕಿ ನಿಯಮ 22ರಡಿ ಆರೋಪಣ ಪತ್ರ ಕೊಟ್ಟು ಅವರನ್ನು ಅಪರಾಧಿಗಳಾಗಿ ಮಾಡುವ ಡಿಸಿಗಳ ಮುಖಕ್ಕೆ ಕ್ಯಾಕರಿಸಿ ಉಗಿರಿ ತಪ್ಪೇನಿಲ್ಲ

ವಿಜಯಪಥ ಸಮಗ್ರ ಸುದ್ದಿ
  • 2 ವರ್ಷದ ಹಿಂದಿನ ಘಟನೆಯನ್ನು ಇಂದು ಎಳೆತಂದಿರುವ ಉದ್ದೇಶವೇನು ತಪ್ಪು ಮಾಡಿದವರಿಗೆ ಶಿಕ್ಷೆ ಕೊಡುವುದನ್ನು ಬಿಟ್ಟು ಅಮಾಯಕ ನೌಕರರ ಗುರಿಮಾಡುತ್ತಿರುವ ಹಿಂದಿನ ಕುತಂತ್ರವಾದರೂ ಏನಿದೆ ಡಿಸಿ ವೀರೆಶ್‌ ತ್ಯಾಪಿಗೆ!?

ಮೈಸೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮೈಸೂರು ನಗರ ವಿಭಾಗದ ವಿಭಾಗೀಯ ನಿಂತ್ರಣಾಧಿಕಾರಿಯ ಬೇಜವಾಬ್ದಾರಿಯ ನಡೆ ನೋಡಿ ಒಮ್ಮೆ ನಮಗೇ ಶಾಕ್‌ ಆಯಿತು. ಇವರು ಮಾಡಬೇಕಾದ ಕೆಲಸವನ್ನು ಮಾಡದೆ ಇದ್ದಿದ್ದಕ್ಕೆ ಸಂಬಂಧಪಟ್ಟ ಇಲಾಖೆ ದಂಡ ಹಾಕಿದರೆ ಅದನ್ನು ಎಷ್ಟು ದರ್ಪದಿಂದ ಮತ್ತೊಬ್ಬರ ಮೇಲೆ ಹೊರಿಸಿ ಗೂಬೆ ಕೂರಿಸುತ್ತಾರೆ ಎಂಬುದಕ್ಕೆ ಈ ತಿಳಿಗೇಡಿ ಡಿಸಿ ನಿರ್ವಾಹಕರ ಮೇಲೆ ಹೊರಿಸಿರುವ ಆರೋಪವೇ ತಾಜಾ ನಿದರ್ಶನವಾಗಿದೆ.

ಇದೇ ಮೇ 8ರಂದು ಮೈಸೂರು ನಗರ ವಿಭಾಗದ ಡಿಸಿ ವಿರೇಶ್‌ ತ್ಯಾಪಿ ಎಂಬ ಈ ಕೆಲಸಕ್ಕೆ ಬಾರದ ವಿಭಾಗೀಯ ನಿಯಂತ್ರಣಾಧಿಕಾರಿ ಒಬ್ಬ ನಿರ್ವಾಹಕನನ್ನು ಟಾರ್ಗೆಟ್‌ ಮಾಡಿದ ರೀತಿಯಲ್ಲಿ ಆರೋಪಣ ಪತ್ರ ಕೊಟ್ಟಿದ್ದಾನೆ. ಅದು ನಿರ್ವಾಹಕರ ಜವಾಬ್ದಾರಿ ಎಂದು ಬಿಂಬಿಸಲು ಹೊರಟಿದ್ದಾನೆ ಈ ವ್ಯಕ್ತಿ. ಇಂಥವರನ್ನು ಸಂಸ್ಥೆಯಲ್ಲಿ ಕೇಳುವವರು ಹೇಳುವವರು ಯಾರು ಇಲ್ಲ ಅಂಥ ಕಾಣಿಸುತ್ತಿದೆ ಅದಕ್ಕೆ ತಮಗೆ ಅನಿಸಿದಂತೆ ನೌಕರರ ಮೇಲೆ ಆರೋಪ ಮಾಡಿ ದರ್ಪ ಮೆರೆಯುತ್ತಾರೆ ಕಿಡಿಗೇಡಿಗಳು.

ಈ ಆರೋಪಣ ಪತ್ರ ನೀಡುವುದಕ್ಕೆ ಆರೋಪಣ ಪಟ್ಟಿ (ನಿಬಂಧನೆ 22ರನ್ವಯ) ಎಂಬ ಶೀರ್ಷಿಕೆಯನ್ನು ಹಾಕಿ ಕೊಡುತ್ತಾರೆ, ಇವರಿಗೆ ನಾಚಿಕೆ ಆಗುವುದಿಲ್ಲವೆ ಈರೀತಿಯ ಆರೋಪ ಮಾಡುವುದಕ್ಕೆ. ಒಬ್ಬ ನಿಷ್ಠಾವಂತ ನೌಕರ ಅವನ ಪಾಡಿಗೆ ಅವನು ಪ್ರಾಮಾಣಿಕವಾಗಿ ಡ್ಯೂಟಿ ಮಾಡಿಕೊಂಡು ಹೋಗುತ್ತಿದ್ದರೆ ಅದಕ್ಕೂ ಬಿಡುವುದಿಲ್ಲ ಮೇಲಧಿಕಾರಿಗಳೆನಿಸಿಕೊಂಡ ಈ ಕೀಚಕರು.

ಸಾರಿಗೆ ನಿಗಮದ (ಶಿಸ್ತು ಮತ್ತು ನಡತೆ) ನಿಯಮಗಳ1971 ನಿಯಮ, 19ರ ಉಪನಿಯಮ-2 ಹಾಗೂ ತದನಂತರ ತಿದ್ದುಪಡಿಗಳ ಪ್ರಕಾರ ದತ್ತವಾಗಿರುವ ಶಿಸ್ತುಪಾಲನಾ ಅಧಿಕಾರದನ್ವಯ ವಿಭಾಗೀಯ ನಿಯಂತ್ರಣಾಧಿಕಾರಿ ಹಾಗೂ ಶಿಸ್ತುಪಾಲನಾಧಿಕಾರಿ, ಮೈಸೂರು ನಗರ ವಿಭಾಗ, ಮೈಸೂರು ಆದ ನಾನು (ವಿರೇಶ್‌ ತ್ಯಾಪಿ) ರವಿಕುಮಾರ್‌, ನಿರ್ವಾಹಕ ಬಿ. ಸಂ.1920, ಮೈಸೂರು ವಿಜಯನಗರ ಘಟಕ. ಇವರ ಮೇಲೆ ಆರೋಪಗಳ ಸತ್ಯಾಸತ್ಯತೆಯನ್ನು ದೃಢೀಕರಿಸಲು ನಿಯಮವಳಿ-22ರ ಪ್ರಕಾರ ಈ ಕೆಳಗಿನಂತೆ ಆರೋಪಿಸಲಾಗಿದೆ.

ಆರೋಪಗಳು: ನೀವು ಮೈಸೂರು ನಗರ ವಿಭಾಗದ ವಿಜಯನಗರ ಘಟಕದಲ್ಲಿ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಈ ಹಿಂದೆ ಬೆಂಗಳೂರು ದಕ್ಷಿಣ ವಿಭಾಗದ ಕನಕಪುರ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ 28.08.2024ರಂದು ವಾಹನ ಸಂ: ಕೆಎ-42,ಎಫ್‌-1785ಕ್ಕೆ ನಿರ್ವಾಹಕರಾಗಿ ನಿಯೋಜಿಸಿದ್ದು, ವಾಹನ ತಾಂತ್ರಿಕವಾಗಿ ಸುಸ್ಥಿತಿಯಲ್ಲಿರುವ ಬಗ್ಗೆ ಆರ್.ಸಿ, ಎಫ್‌ಸಿ ನಿರ್ವಾಹಕರ ಪರವಾನಗಿ ಮತ್ತು ಇತರೆ ದಾಖಲಾತಿಗಳ ಅವಧಿ ಚಾಲ್ತಿಯಲ್ಲಿರುವ ಬಗ್ಗೆ ಖಚಿತಪಡಿಸಿಕೊಂಡು ಅನುಸೂಚಿ ಕಾರ್ಯಾಚರಣೆ ಮಾಡಬೇಕಾಗಿದ್ದು, ನೀವು ನಿಯೋಜನೆಗೊಂಡ ವಾಹನದ ದಾಖಲೆಗಳನ್ನು ಪರಿಶೀಲಿಸಿಕೊಳ್ಳದೆ ಇರುವುದರಿಂದ ಈ ವಾಹನಕ್ಕೆ ಜಯನಗರ ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳು 3,600 ರೂ. ದಂಡ ವಿಧಿಸಲು ಕಾರಣರಾಗಿ ಕರ್ತವ್ಯ ಲೋಪವೆಸಗಿರುತ್ತೀರಿ.

ಈ ರೀತಿಯಾಗಿ ನೀವು ಒಬ್ಬ ಜವಾಬ್ದಾರಿಯುತ ನಿರ್ವಾಹಕರಾಗಿದ್ದು, ವಾಹನವು ಸುಸ್ಥಿತಿಯಲ್ಲಿರುವ ಬಗ್ಗೆ, ಆರ್.ಸಿ. ಎಫ್‌.ಸಿ, ನಿರ್ವಾಹಕರ ಪರವಾನಗಿ ಹಾಗೂ ಇತರೆ ದಾಖಲೆಗಳನ್ನು ಪರಿಶೀಲಿಸಿ ಕಾರ್ಯಾಚರಣೆ ಮಾಡಲು ವಿಫಲರಾಗಿ ಸಂಸ್ಥೆಗೆ ಆರ್ಥಿಕ ನಷ್ಟವುಂಟಾಗಲು ಕಾರಣರಾಗಿ ನಿಯೋಜಿತ ಕರ್ತವ್ಯದಲ್ಲಿ ಲೋಪವೆಸಗಿರುತ್ತೀರಿ.

ಈ ಬಗ್ಗೆ ಬೆಂಗಳೂರು ದಕ್ಷಿಣ ವಿಭಾಗದ ವಿಭಾಗೀಯ ಸಂಚಾಲನಾಧಿಕಾರಿ, ವಿಭಾಗೀಯ ನಿಯಂತ್ರಣಾಧಿಕಾರಿ ಸಾಕ್ಷಿಗಳಾಗಿದ್ದಾರೆ.

ಆದ್ದರಿಂದ, ನೀವು ಈ ಮೇಲ್ಕಾಣಿಸಿದ ಆರೋಪಗಳನ್ನು ಒಪ್ಪುವಿರೋ? ಇಲ್ಲವೋ ಎಂಬುದರ ಬಗ್ಗೆ ನಿಮ್ಮ ನಿಖಿತ ಸಮಜಾಯಿಷಿಯನ್ನು ಈ ಆರೋಪಣ ಪತ್ರ ತಲುಪಿದೆ 10(ಹತ್ತು) ದಿನಗಳೊಳಗಾಗಿ ಸಲ್ಲಿಸತಕ್ಕದ್ದು, ನೀವು ಪ್ರತಿಯೊಂದು ಆರೋಪದ ಬಗ್ಗೆ ಒಪ್ಪಿಕೊಳ್ಳುವ ಹಾಗೂ ನಿರಾಕರಣೆ ಮಾಡುವ ಬಗ್ಗೆ ನಿರ್ಧಿಷ್ಟವಾಗಿ ವಿವರಣೆ ನೀಡತಕ್ಕದ್ದು.

ಒಂದು ವೇಳೆ ನಿಮಗೆ ಮೇಲೆ ಕಾಣಿಸಿದ ಯಾವುದಾದರೂ ದಾಖಲೆಗಳ ಪ್ರತಿಗಳು ಬೇಕೆನಿಸಿದಲ್ಲಿ, ಅವುಗಳನ್ನು ನೀವು ಸ್ವತಃ ನನ್ನ ಸಮ್ಮುಖದಲ್ಲಿ ಕಚೇರಿಯ ವೇಳೆಯಲ್ಲಿ ಈ ಆರೋಪಣ ಪಟ್ಟಿ ತಲುಪಿದ ಮೂರು ದಿನಗಳೊಳಗಾಗಿ ಅವುಗಳ ಪ್ರತಿಯನ್ನು ತೆಗೆದುಕೊಳ್ಳಬಹುದಾಗಿದೆ ಅಥವಾ ಪರಿವೀಕ್ಷಿಸಬಹುದಾಗಿದೆ. ನಿಮ್ಮಿಂದ ಗೊತ್ತುಪಡಿಸಿದ ಅವಧಿಯಲ್ಲಿ ವಿವರಣೆ ಬಾರದೇ ಹೋದಲ್ಲಿ, ನಿಮ್ಮಿಂದ ಯಾವ ವಿವರಣೆಯೂ ಇಲ್ಲವೆಂದು ಭಾವಿಸಿ, ಶಿಸ್ತು ಮತ್ತು ನಿಯಮಾವಳಿಯ ಪ್ರಕಾರ ಏಕಪಕ್ಷೀಯ ಕ್ರಮ ಕೈಗೊಳ್ಳಲಾಗುವುದು ಎಂದು ನಿರ್ವಾಹಕ ರವಿಕುಮಾರ್ ಎಂಬುವರಿಗೆ ಆರೋಪಣ ಪತ್ರ ಕೊಟ್ಟಿದ್ದಾರೆ.

ಈ ಶಿಸ್ತು ಪಾಲನಾಧಿಕಾರಿ ಮೈಸೂರು ನಗರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಆಗಿರುವ ವೀರೇಶ್‌ ತ್ಯಾಪಿ ಅವರಿಗೆ ಗೊತ್ತಿಲ್ಲವೇ ಆರ್‌ಸಿ ಹಾಗೂ ಎಫ್‌ಸಿ ಮಾಡಿಸಬೇಕಿರುವುದು ಯಾರು ಎಂದು? ಆರ್‌ಸಿ ಎಫ್‌ಸಿ ಮಾಡಿಸದ ವಾಹನವನ್ನು ಚಾಲಕನಿಗೆ ಕೊಟ್ಟು ಕಳುಹಿಸಿರುವುದು ಈ ಕೆಲಸಕ್ಕೆ ಬಾರದ ಬೇಜವಾಬ್ದಾರಿಯಿಂದ ದಿನನಿತ್ಯ ನಡೆದುಕೊಳ್ಳುವ ಇವರ ತಪ್ಪೇ ವಿನಾಃ ಚಾಲಕರದಾಗಲಿ ಅಥವಾ ನಿರ್ವಾಹಕರದಾಗಲಿ ಅಲ್ಲ ಹೀಗಿದ್ದರೂ ಒಬ್ಬ ನಿರ್ವಾಹಕನಿಗೆ ಈರೀತಿ ಆರೋಪಣ ಪತ್ರವನ್ನು ನಿಯಮ -22ರಡಿ ನೀಡಿ ಮಾನಸಿಕವಾಗಿ ಕಿರುಕುಳ ಕೊಡುವ ಇಂಥ ಅಧಿಕಾರಿಗಳನ್ನು ಏನುಮಾಡಬೇಕು?

ಈ ಬಗ್ಗೆ ಸಂಬಂಧಪಟ್ಟ ಕೆಎಸ್‌ಆರ್‌ಟಿಸಿ ಎಂಡಿ ಅಕ್ರಮ್‌ಪಾಷ ಅವರು ಕ್ರಮತೆಗೆದುಕೊಂಡು ಕೂಡಲೇ ಈ ಡಿಸಿ ಹಾಗೂ ಸಾಕ್ಷಿಗಳಾಗಿರುವ ಬೆಂಗಳೂರು ದಕ್ಷಿಣ ವಿಭಾಗದ ಡಿಟಿಒ ಹಾಗೂ ಡಿಸಿ ಅವರನ್ನು ಕೂಡಲೇ ಅಮಾನತು ಮಾಡಿ ಇವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಸಮಸ್ತ ನೌಕರರು ಒತ್ತಾಯಿಸಿದ್ದಾರೆ. ಅಲ್ಲದೆ ನಿರ್ವಾಹಕನಿಗೆ ಮಾನಸಿಕ ಕಿರುಕುಳ ನೀಡಿರುವುದಕ್ಕೆ ಸೂಕ್ತ ದಂಡವನ್ನು ಈ ಅಧಿಕಾರಿಗಳಿಗೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ.

Megha
the authorMegha

Leave a Reply

error: Content is protected !!
Latest news
KSRTC ಮೈಸೂರು ಡಿಸಿಗೆ- RC, FC ಚಾಲಕ ನಿರ್ವಾಹಕರ ಜವಾಬ್ದಾರಿನಾ?: ಹೇ ತಲೆಕೆಟ್ಟ ಡಿಸಿ ನೀನು ನಿಜವಾಗಲು ಜವಾಬ್ದಾರಿಯಿಂ... ಭಾರೀ ಮಳೆಗೆ ನೆಲಕಚ್ಚಿದ ಪರಂಗಿ ಅಡಿಕೆ ಗಿಡಗಳು -ಅಪಾರ ಪ್ರಮಾಣದ ಬೆಳೆ ಹಾನಿ ರೈತರ ಗೋಳಾಟ ಪ್ರೀತಿ ನಿರಾಕರಿಸಿದ್ದಕ್ಕೆ ಹೈಟೆನ್ಷನ್ ಕಂಬ ಹತ್ತಿ ಕುಳಿತಿರುವ ಪಾಗಲ್‌ ನಾಳೆಯಿಂದ ಹಮ್ಮಿಕೊಂಡಿದ್ದ ಅರ್ನಿದಿಷ್ಟವಾಧಿ ಸಾರಿಗೆ ನೌಕರರ ಮುಷ್ಕರ ವಾಪಸ್‌: ಜಂಟಿ ಕ್ರಿಯಾ ಸಮಿತಿ ಜಂಟಿ ಕ್ರಿಯಾ ಸಮಿತಿಗೆ ಶಾಕ್‌: KSRTC ನೌಕರರ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಹೈ ಕೋರ್ಟ್‌ ತಡೆ ಸಾರಿಗೆ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿ ಕರೆ ಕೊಟ್ಟಿದ್ದ ಮುಷ್ಕರದಿಂದ ಹಿಂದೆ ಸರಿದ ಮತ್ತೊಂದು KSRTC ನೌಕರರ ಸಂಘ ದುಬಾರೆ ಸಾಕಾನೆ ಶಿಬಿರದಲ್ಲಿ ನಡೆದ ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಸಾವು ಇಂದು ರಾತ್ರಿ 8.30ರಿಂದ 9.30ರವರೆಗೆ KSRTC ಎಂಡಿ ಅಕ್ರಮ್‌ ಪಾಷರ ಭೇಟಿ ಮಾಡಿ ಗೌಪ್ಯ ಸಭೆ ನಡೆಸಿದ ಜಂಟಿ ಮುಖಂಡರು! ಸಾರಿಗೆ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿ ಕರೆ ಕೊಟ್ಟಿದ್ದ ಮುಷ್ಕರದಿಂದ ಹಿಂದೆ ಸರಿದ KSRTC ಪ.ಜಾ.-ಪ.ಪಂ ನೌಕರರ ಸಂಘ ಗುಡುಗು ಸಿಡಿಲಿನ ಆರ್ಭಟ: ಮನೆ ಮುಂದೆ ನಿಂತಿದ್ದ ಶಿಕ್ಷಕ ಹೃದಯಾಘಾತಕ್ಕೆ ಬಲಿ