CrimeNEWSನಮ್ಮರಾಜ್ಯ

ಮಂಗಳೂರು ಕೆಎಸ್ಆರ್ಟಿಸಿ ಡಿಸಿ ಅರುಣ್ ಕುಮಾರ್‌ನಿಂದ ಇನ್ನೆಷ್ಟು ನೌಕರರ ಪ್ರಾಣ ಪಕ್ಷಿ ಹಾರಿಹೋಗುವುದೋ….!?

ವಿಜಯಪಥ ಸಮಗ್ರ ಸುದ್ದಿ

ಮಂಗಳೂರು: ಮಂಗಳೂರು ಕೆಎಸ್ಆರ್ಟಿಸಿ ವಿಭಾಗದ ನಿಯಂತ್ರಣದಿಕಾರಿ (DC)ಅರುಣ್ ಕುಮಾರ್‌ ಅವರ ವರ್ತನೆ ಮಿತಿಮೀರಿ ಹೋಗಿದೆ. ಅವರ ಕಿರುಕುಳದಿಂದ ಮನನೊಂದ ಕಾರ್ಮಿಕರು ಈಗಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದು, ಇನ್ನು ಕೆಲವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ ಮತ್ತು ಪಡೆಯುತ್ತಿದ್ದಾರೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಇಷ್ಟಾದರೂ ಅವರು ತಮ್ಮ ಹಳೇ ಚಾಳಿಯನ್ನು ಬಿಡದೆ ನೌಕರರಿಗೆ ಕಿರುಕುಳ ನೀಡುತ್ತಿದ್ದು, ಇಲ್ಲ ಸಲ್ಲದ ಆರೋಪಗಳನ್ನು ಹೊರಿಸಿ ನೌಕರರನ್ನು ಕಾಡುತ್ತಿದ್ದಾರೆ.

ಹೀಗಾಗಿ ಈ ಡಿಸಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಾರಿಗೆ ಸಚಿವ ಶ್ರೀರಾಮುಲು ಬೇರೆಡೆಗೆ ವರ್ಗಾವಣೆ ಮಾಡಬೇಕು ಎಂದು ಮಂಗಳೂರು – ದಕ್ಷಿಣ ಕನ್ನಡ ಜಿಲ್ಲೆಯ ಸಾವಿರಾರು ನೌಕರರು ಮನವಿ ಮಾಡಿದ್ದಾರೆ.

ಕಳೆದ ಸೆಪ್ಟೆಂಬರ್‌ನಲ್ಲಿ ಚಾಲಕ ಕಂ ನಿರ್ವಾಕರೊಬ್ಬರು ಇವರು ಕಿರುಕುಳದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದರು, ಇನ್ನು ಮಹಿಳಾ ಸಿಬ್ಬಂದಿಯೊಬ್ಬರು ಮಾನಸಿಕವಾಗಿ ಒತ್ತಡೆಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಇಷ್ಟಾದರೂ ಇವರನ್ನು ಬೇರೆಡೆಗೆ ವರ್ಗಾವಣೆ ಅಥವಾ ಅಮಾನತು ಮಾಡದೆ ನಿಗಮದ ಎಂಡಿಗಳು ಕಂಡು ಕಾಣದಂತೆ ವರ್ತಿಸುತ್ತಿರುವುದು ಏತಕ್ಕೆ ಎಂಬ ಅನುಮಾನ ನಮ್ಮನ್ನು ಕಾಡುತ್ತಿದೆ.

ದಯಮಾಡಿ ಇಂಥ ಡಿಸಿ ನಮಗೆ ಬೇಡ ಇವರನ್ನು ಯರವಲು ಸೇವೆ ಮೇಲೆ ಬೇರೆ ಇಲಾಖೆಗೆ ವರ್ಗಾವಣೆ ಮಾಡಿಬಿಡಿ, ಇದರಿಂದ ನಮ್ಮ ಇನ್ನಷ್ಟು ನೌಕರರ ಪ್ರಾಣವಾದರೂ ಉಳಿಯಬಹುದು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಅರುಣ್ ಕುಮಾರ್ ವಿರುದ್ಧ ಉರ್ವಾ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ಆದ್ರೂ ಸಹ. ಮಾಧ್ಯಮಗಳಲ್ಲಿ ಇವರ ನಡತೆ ಬಗ್ಗೆ ಆಡಿಯೋ ಸಹಿತ ಆರೋಪ ಬಂದರೂ  ಸಹ. ಅವರನ್ನು ಬೇರೆ ಕಡೆ ವರ್ಗಾವಣೆ ಮಾಡಲಿಕ್ಕೆ ಆಗದೆ. ಸಚಿವರು ಅತಾಸರಾಗಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

ಈ ರೀತಿ ಒಬ್ಬ ನಿಯಂತ್ರಣಾಧಿಕಾರಿ ಶೋಷಣೆ ಮಾಡುತ್ತ ಹೋದರೆ ಇನ್ನು ಎಷ್ಟು ನೌಕರರು ಆತ್ಮಹತ್ಯೆಗೆ ಗುರಿಯಾಗುತ್ತರೋ ಗೊತ್ತಿಲ್ಲ.

ಅರುಣ್ ಕುಮಾರ್ ಒಬ್ಬ ಲಂಚ ಲೂಟಿ ಕೋರ ದಬ್ಬಾಳಿಕೆ, ಅವಾಚ್ಯ ಪದಗಳಿಂದ ನೌಕರರನ್ನು ನಿಂದಿಸುವ ವ್ಯಕ್ತಿ. ಈ ವ್ಯಕ್ತಿಯನ್ನು ಸಾರಿಗೆ ಇಲಾಖೆಯಲ್ಲಿ ಮುಂದುವರಿಸಿದರೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಕೆಲಸಮಾಡಬೇಕಿರುವ ಚಾಲನಾ ಸಿಬ್ಬಂದಿಗಳು ಒತ್ತಡಕ್ಕೆ ಒಳಗಾಗಿ ಏನು ಅನಾಹುತವಾಗುತ್ತದೋ ಗೊತ್ತಿಲ್ಲ. ಆದ್ದರಿಂದ ಈತನ ವಿರುದ್ಧ ಸೂಕ್ತ ಕ್ರಮ ತೆಗೆದುಕೊಂಡು ನಮಗೇ ಈತನಿಂದ ಮುಕ್ತಿಸಿಗುವಂತೆ ಮಾಡಬೇಕು ಎಂದು ನೌಕರರು ಮನವಿ ಮಾಡಿದ್ದಾರೆ.

ಡಿಸಿ ವಿರುದ್ಧ ಬಹುತೇಕ ಎಲ್ಲ ಆರೋಪಗಳಲ್ಲೂ ಸಾಕ್ಷಿ ಇದ್ದರೂ ಸಹ  ಯಾವುದೇ ಕ್ರಮ ತೆಗೆದುಕೊಳ್ಳದೆ ದುಡಿಯುವ ಕಾರ್ಮಿಕರ ಜೀವನದಲ್ಲಿ ಆಟ ಆಡುವುದು ಎಷ್ಟರಮಟ್ಟಿಗೆ ಸರಿ. ಇಂತಹ ಲಜ್ಜೆಗೆಟ್ಟ ಅಧಿಕಾರಿ ಮಂಗಳೂರು ವಿಭಾಗದಲ್ಲಿ ಇರುವುದು ಸರಿಯಲ್ಲ. ಇಂಥವರಿಂದ ನಮ್ಮ ಸರ್ಕಾರಕ್ಕೂ ಕೆಟ್ಟ ಹೆಸರು.

ಆದ್ದರಿಂದ ಮುಖ್ಯಮಂತ್ರಿಗಳಾದ ಬೊಮ್ಮಾಯಿ ಅವರಿಗೆ ಸಾರ್ವಜನಿಕರ ಹಿತದೃಷ್ಟಿಯಿಂದಲೂ ನಾವು ಬೇಡಿ ಕೊಳ್ಳುವುದೆಂದರೆ ಆದಷ್ಟು ಬೇಗ ಯಾರ ಮಾತನ್ನು ಕೇಳದೆ, ಯಾರ ಒತ್ತಡಕ್ಕೂ ಮಣಿಯದೆ ಅರುಣ್ ಕುಮಾರ್ ಅವರನ್ನು ಆದಷ್ಟು ಬೇಗ ಬೇರೆ ಜಿಲ್ಲೆಗೆ ವರ್ಗಾವಣೆ ಮಾಡಬೇಕಾಗಿ ಬೇಡಿಕೊಳ್ಳುತ್ತಿದ್ದೇವೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್, ಕಾಪು ಶಾಸಕರಾದ ಲಾಲಾಜಿ ಮೆಂಡನ್, ಸುನಿಲ್ ಕುಮಾರ್ ಕಾರ್ಕಳ, ಶ್ರೀನಿವಾಸ್ ಪೂಜಾರಿ, ಕುಂದಾಪುರ ಶಾಸಕ ಶ್ರೀನಿವಾಸ ಶೆಟ್ಟರು, ಬೈಂದೂರು ಶಾಸಕ ಸುಕುಮಾರ್ ಶೆಟ್ರು ಇವರೆಲ್ಲರಲ್ಲಿ ನಮ್ಮ ಮನವಿ ಇಂತಿ ನಿಮ್ಮ ವಿಶ್ವಾಸಿಗಳು ಕೆಎಸ್‌ಆರ್ಟಿಸಿ ನೌಕರರು ಮಂಗಳೂರು – ದಕ್ಷಿಣ ಕನ್ನಡ ಜಿಲ್ಲೆ.

Leave a Reply

error: Content is protected !!
LATEST
ಕೆಎಸ್‌ಆರ್‌ಟಿಸಿ ರಾಮನಗರ: ಹೊಸ ETM ಮಷಿನ್ ಅವಾಂತರ- ಪಾಸ್ ನಮೂದಿಸಿದರೂ ಟಿಕೆಟ್ ಬರುತ್ತದೆ ! KSRTC: ಇದು ನಿನ್ನ ಮಗುವಲ್ಲ, ಪ್ಯಾಸೆಂಜರ್‌, ಫ್ಯಾಮಿಲಿ ಎದುರೆ ಸಹೋದ್ಯೋಗಿಯ ಅವಮಾನಿಸಿದ ಕಂಡಕ್ಟರ್‌!!? ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KKRTC ಇಂಡಿ ಘಟಕದ ಡಿಎಂ ಕರ್ಮಕಾಂಡ: 1-2ದಿನ ರಜೆಗೆ ಕೊಡಬೇಕು 2ಸಾವಿರ - ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ