NEWSನಮ್ಮಜಿಲ್ಲೆನಮ್ಮರಾಜ್ಯ

ಮಕ್ಕಳಿಗೆ ಟಿಕೆಟ್ ನೀಡುವ ವಿಚಾರ: ಪ್ರಯಾಣಿಕರು-ನಿರ್ವಾಹಕರ ನಡುವಿನ ಹಗ್ಗಜಗ್ಗಾಟಕ್ಕೆ ಇತಿಶ್ರೀ ಹೇಳಲು ಮುಂದಾದ ಸಾರಿಗೆ ಸಂಸ್ಥೆ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸಾರಿಗೆ ಬಸ್ ಗಳಲ್ಲಿ ಮಕ್ಕಳಿಗೆ ಟಿಕೆಟ್ ನೀಡುವ ವಿಚಾರದಲ್ಲಿ ಪ್ರಯಾಣಿಕರು ಮತ್ತು ನಿರ್ವಾಹಕರ ನಡುವೆ ನಡೆಯುವ ವಾದ ವಿವಾದಗಳಿಗೆ ಸಾರಿಗೆ ಸಂಸ್ಥೆ ಇತಿಶ್ರೀ ಹೇಳಲು ನಿರ್ಧರಿಸಿದೆ.

ಸಾರಿಗೆ ಬಸ್‌ಗಳಲ್ಲಿ ಮಕ್ಕಳು ಪ್ರಯಾಣ ಮಾಡುವ ಸಂದರ್ಭದಲ್ಲಿ ಪ್ರಯಾಣದರದ ವಿಚಾರವಾಗಿ ಹಿಂದಿನಿಂದಲೂ ರಂಪಾಟ ನಡೆಯುತ್ತಲೇ ಇರುತ್ತದೆ.

ಬಹುತೇಕ ಪ್ರಯಾಣಿಕರು ಟಿಕೆಟ್ ಪಡೆಯುವ ಸಂದರ್ಭದಲ್ಲಿ ಮಕ್ಕಳ ವಯಸ್ಸು ಮತ್ತು ಅವರು ಅಭ್ಯಾಸ ಮಾಡುತ್ತಿರುವ ತರಗತಿಯನ್ನು ಹೇಳಿ ಚೀಟಿ ಪಡೆಯುತ್ತಿದ್ದರು. ಆದರೆ ನಿರ್ವಾಹಕರಿಗೆ ವಯಸ್ಸಿನ ಅಂತರ ಕಂಡುಹಿಡಿಯಲು ಕಷ್ಟವಾಗುತ್ತಿತ್ತು.

ಇದೀಗ ಇದಕ್ಕಾಗಿ ಸಾರಿಗೆ ಸಂಸ್ಥೆ ಹೊಸ ಆದೇಶವನ್ನು ಹೊರಡಿಸಿದ್ದು, ನಿರ್ವಾಹಕರು ಮಕ್ಕಳಿಗೆ ಪ್ರಯಾಣದರ ವಿಧಿಸುವಾಗ ವಯಸ್ಸಿನ ಜೊತೆಗೆ ಎತ್ತರವನ್ನು ಅಳತೆಗೋಲಾಗಿ ಇಟ್ಟುಕೊಂಡು, ಕರಾರಸಾ ನಿಗಮದ ಸಾರಿಗೆಗಳಲ್ಲಿ ಮಕ್ಕಳಿಗೆ ಆರು ವರ್ಷಗಳವರೆಗೆ ಉಚಿತವಾಗಿ ಪ್ರಯಾಣಿಸಲು ಹಾಗೂ ಆರು ವರ್ಷದಿಂದ ಮೇಲ್ಪಟ್ಟು 12 ವರ್ಷಗಳವರೆಗೆ ಅರ್ಧ ಟಿಕೆಟು ಪಡೆದು ಪ್ರಯಾಣಿಸಲು ಅನುಮತಿ ನೀಡಲಾಗಿದೆ.

ಆದರೆ ಮಕ್ಕಳಿಗೆ ಟಿಕೇಟು ಪಡೆಯುವಾಗ ಮಕ್ಕಳ ಪಾಲಕ / ಪೋಷಕರಿಗೆ ಹಾಗೂ ನಿರ್ವಾಹಕರ ಮಧ್ಯೆ ವಾದ ವಿವಾದಗಳಿಗೆ ಎಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳಿಗೆ ಪ್ರಯಾಣದರ ವಿಧಿಸುವಾಗ ವಯಸ್ಸಿನ ಜೊತೆಗೆ ಎತ್ತರವನ್ನು ಅಳತೆಗೋಲಾಗಿ ಇಟ್ಟುಕೊಳ್ಳುವಂತೆ ಅ-16 ರಂದು ಹೊರಡಿಸಿರುವ ಸಾಮಾನ್ಯ ಸ್ಥಾಯೀ ಆದೇಶದಲ್ಲಿ ತಿಳಿಸಲಾಗಿದೆ.

ಅದರಂತೆ, ನಿಗಮದ ವಾಹನಗಳಲ್ಲಿ ಎತ್ತರವನ್ನು ಗುರುತಿಸಲಾಗಿರುತ್ತದೆ. ಆದರೆ, ಅಳತೆಗೋಲನ್ನು ಎಲ್ಲಾ ಮಕ್ಕಳಿಗೂ ಸರ್ವೆ ಸಾಮಾನ್ಯವಾಗಿ ಉಪಯೋಗಿಸುತ್ತಿರುವುದಾಗಿ ಹಲವಾರು ದೂರುಗಳು / ವರದಿಗಳು ಬರುತ್ತಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ಈ ಕೆಳಕಂಡ ಸ್ಪಷ್ಟನೆಯನ್ನು ನೀಡಲಾಗಿದೆ.

• ಮಕ್ಕಳ ವಯಸ್ಸಿನ ಬಗ್ಗೆ ಅಧಿಕೃತ ದಾಖಲಾತಿಗಳನ್ನು ತೋರಿಸಿದಾಗ ಅಳತೆಗೋಲನ್ನು ಉಪಯೋಗಿಸುವ ಅವಶ್ಯಕತೆ ಇರುವುದಿಲ್ಲ.

• ನಿರ್ವಾಹಕರಿಗೆ ಮಕ್ಕಳ ವಯಸ್ಸಿನ ಬಗ್ಗೆ ಖಚಿತವಾಗಿ ಖಾತ್ರಿಯಾದಲ್ಲಿ ಅಳತೆಗೋಲನ್ನು ಉಪಯೋಗಿಸುವ ಅವಶ್ಯಕತೆ ಇರುವುದಿಲ್ಲ.

• ಮಕ್ಕಳಿಗೆ ಟಿಕೇಟು ಪಡೆಯುವಾಗ ಮಕ್ಕಳ ಪಾಲಕ / ಪೋಷಕರಿಗೆ ಹಾಗೂ ನಿರ್ವಾಹಕರ ಮಧ್ಯೆ ಭಿನ್ನಾಭಿಪ್ರಾಯವಿದ್ದಲ್ಲಿ ಅಳತೆಗೋಲನ್ನು ಉಪಯೋಗಿಸುವುದು.

• ಸರ್ವೆ ಸಾಮಾನ್ಯವಾಗಿ ಎಲ್ಲಾ ಮಕ್ಕಳಿಗೆ ಅಳತೆಗೋಲನ್ನು ಉಪಯೋಗಿಸುವ ಅವಶ್ಯಕತೆ ಇರುವುದಿಲ್ಲ. ಎಂದು ಅ-16 ರಂದು ಹೊರಡಿಸಿರುವ ಆದೇಶದಲ್ಲಿ ಸೂಚಿಸಲಾಗಿದೆ.

ಅಳತೆಗೋಲು ಇಲ್ಲ : ಸಾರಿಗೆ ನಿಗಮದ ಬಸ್ ಗಳಲ್ಲಿ ಮಕ್ಕಳ ವಯಸ್ಸು ನಿರ್ಧರಿಸುವ ಅಳತೆಗೋಲು ಬಹುತೇಕ ವಾಹನಗಳಲ್ಲಿ ನಿಗಮ ಅಳವಡಿಸಿಲ್ಲ, ಮೊದಲು ಎಲ್ಲಾ ವಾಹನಗಳಿಗೆ ಅಳತೆಗೋಲು ಅಳವಡಿಸಿ ನಂತರ ಆದೇಶ ಹೊರಡಿಸಲಿ ಎಂಬುದು ಬಹುತೇಕ ನಿರ್ವಾಹಕರ ಆಗ್ರಹ ವಾಗಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗುವರೇ  ಎಂಬುದನ್ನು ಕಾದು ನೋಡಬೇಕಿದೆ.

Leave a Reply

error: Content is protected !!
LATEST
ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ