- ಪಾಪಾ ಸಂಬಳ ಸಾಲುತ್ತಿಲ್ಲವಂತೆ ಅದಕ್ಕೆ ಹೆಚ್ಚಿಗೆ ಸಂಬಳ ಪಡೆಯುತ್ತಿರುವ ಟಿಸಿಗಳ ಕಾಲು ಹಿಡಿದು ಭಿಕ್ಷೆ ಬೇಡುತ್ತಿದ್ದಾರೆ ಪಾಪಿಗಳು
- ನಾಚಿಕೆ ಬಿಟ್ಟು ಟಿಸಿಗಳ ಸುಲಿಗೆ ಮಾಡುವ ಇಂಥ ನಾಲಾಯಕ್ ಅಧಿಕಾರಿಗಳ ಬಣ್ಣ ಬಯಲು
- BMTC ಮಹಿಳಾ DTO ಒಬ್ಬಳು ಟಿಸಿಗಳಿಗೆ ತರಕಾರಿ ತರುವುದಕ್ಕೆ ಬ್ಯಾಗ್ ಕೊಟ್ಟು ಕಳಿಸುತ್ತಾಳೆ
- ಇವರಪ್ಪ ಕೊಟ್ಟಿದ್ದಾನಾ ಟಿಸಿಗಳಿಗೆ ಹಣ – ಈಕೆ ಟಿಸಿಗಳನ್ನು ಮನೆಯಾಳುಗಳಂತೆ ಕಾಣುತ್ತಾಳಂತೆ
ತುಮಕೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಾಲ್ಕೂ ನಿಗಮಗಳಲ್ಲಿ ಪ್ರತಿ ತಿಂಗಳು ನಿಲ್ದಾಣಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಹುತೇಕ ಎಲ್ಲ ಸಂಚಾರ ನಿಯಂತ್ರಕರಿಂದ ಅಧಿಕಾರಿಗಳು ತಲಾ 1000 ರೂಪಾಯಿ ವಸೂಲಿ ಮಾಡುತ್ತಿದ್ದಾರೆ.
ಇದು ಆರೋಪವಲ್ಲ ಪ್ರತಿ ತಿಂಗಳು ನಡೆಯುತ್ತಿರುವುದು ಸತ್ಯ ಎಂದು ನಿಷ್ಠಾವಂತ ಟಿಸಿಗಳು ಅಧಿಕಾರಿಗಳ ಭ್ರಷ್ಟಾಚಾರದ ಬಗ್ಗೆ ಕಣ್ಣೀರು ಹಾಕುವ ಮೂಲಕ ತಮಗಾಗುತ್ತಿರುವ ಕಿರುಕುಳವನ್ನು ವಿಜಯಪಥ ವರದಿಗಾರರ ಬಳಿ ತೋಡಿಕೊಂಡಿದ್ದಾರೆ.
ಇದಕ್ಕೆ ಸಂಬಂಧಪಟ್ಟಂತೆ ಆರ್ಟಿಐ ಕಾರ್ಯಕರ್ತ ಗೋಳೂರು ನಾಗರಾಜ್ ಅವರು ಕೂಡ ಈ ಸಂಬಂಧ KSRTC ವ್ಯವಸ್ಥಾಪಕ ನಿರ್ದೇಶಕಕರಿಗೆ ಪತ್ರ ಬರೆದಿದ್ದು ಬಹುತೇಕ ಎಲ್ಲ ಲಂಚಕೋರರಾದ ವಿಭಾಗೀಯ ನಿಯಂತ್ರಣಾಧಿಕಾರಿಗಳು (DC), ವಿಭಾಗೀಯ ಸಂಚಲನಾಧಿಕಾರಿಗಳ (DTO) ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ನಾಗರಾಜ್ ಅವರು ಮಾಹಿತಿ ಕಲೆಹಾಕಿದ್ದು ತುಮಕೂರು ವಿಭಾಗದ ತುಮಕೂರು ನಗರದ ಡಿ.ದೇವರಾಜ ಅರಸು ಬಸ್ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಲವು ಸಂಚಾರ ನಿಯಂತ್ರಕರು ಪ್ರತಿ ತಿಂಗಳು 1000 ರೂಪಾಯಿಯನ್ನು ವಿಭಾಗೀಯ ನಿಯಂತ್ರಣಾಧಿಕಾರಿ ಹಾಗೂ ವಿಭಾಗೀಯ ಸಂಚಲನಾಧಿಕಾರಿಯವರಿಗೆ ನೀಡಬೇಕೆಂದು ಬೇಸರ ವ್ಯಕ್ತಪಡಿಸಿರುವ ಬಗ್ಗೆ ಎಂಡಿ ಅವರ ಗಮನಕ್ಕೆ ತಂದಿದ್ದಾರೆ.
ಅಲ್ಲದೆ ನಾವು ಪ್ರತಿ ದಿನ ನಮ್ಮ ಕರ್ತವ್ಯ ಏನಿದಿಯೋ ಆ ಕೆಲಸವನ್ನು ಮಾಡಿಕೊಂಡು ಹೋಗುತ್ತೇವೆ ನಿರ್ವಾಹಕರಿಂದ ನಾವು ಐದು ಹತ್ತು ರೂಪಾಯಿಗಳಿಗೆ ಕೈ ಒಡ್ಡುವುದಿಲ್ಲ. ಈಗೀನ ಪರಿಸ್ಥಿತಿಯಲ್ಲಿ ನಿರ್ವಾಹಕರು ಯಾರು ಕೈ ನೀಡಿ ಐದು ಹತ್ತು ರೂಪಾಯಿಗಳನ್ನು ಕೊಡುವುದಿಲ್ಲ.
ಆದರೆ, ಕೆಲವು ಸಂಚಾರ ನಿಯಂತ್ರಕರು ರಾಜಾರೋಷವಾಗಿಯೇ ವಿಭಾಗೀಯ ನಿಯಂತ್ರಣಾಧಿಕಾರಿಯವರಿಗೆ ಒಬ್ಬೊಬ್ಬರಿಂದ 1000 ರೂಪಾಯಿ ಕೊಡಲೇಬೇಕು ಎಂದು ಧಮ್ಕಿ ಹಾಕುವ ಮುಖಾಂತರ ವಸೂಲಿ ಮಾಡುವ ಮನೋಭಾವನೆ ಹೊಂದಿದ್ದಾರೆ.
ಅದಕ್ಕೆ ತುಮಕೂರು ವಿಭಾಗವನ್ನು ಬ್ರಹ್ಮಾಂಡ ಭ್ರಷ್ಟಾಚಾರ ನಡೆಸುವುದು ಹೇಗೆ ಎಂದು ಹೇಳಿಕೊಡು ಟ್ರೈನಿಂಗ್ ಶಾಲೆ ಎಂದೇ ಕರೆಯಲಾಗುತ್ತಿದೆ ಹಾಗೂ ಇದು ಭ್ರಷ್ಟರ, ಲಂಚಕೋರರ ತವರು ಮನೆಯಾಗಿದೆ. ಇನ್ನು ಎಲ್ಲ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂಚಾರ ನಿಯಂತ್ರಕರು ಪ್ರತಿ ತಿಂಗಳು 1 ಸಾವಿರ ರೂಪಾಯಿ ಕೊಡದಿದ್ದರೆ ಅವರಿಗೆ ಬೆದರಿಕೆ ಹಾಕುತ್ತಾರೆ ಈ ಭ್ರಷ್ಟ ಅಧಿಕಾರಿಗಳ ಚೇಳಗಳು.
ಇನ್ನು ವಿಭಾಗೀಯ ನಿಯಂತ್ರಣಾಧಿಕಾರಿ ಹಣ ವಸೂಲಿ ಮಾಡಿ ಕೊಡುವ ಉದ್ದೇಶಕ್ಕಾಗಿ ATS ಮಾಸಪ್ಪ ಎಂಬುವರನ್ನು ನಿಯೋಜಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಇನ್ನು ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದರೆ ಯಾರು ನೋಡುವುದಿಲ್ಲ ಎಂಬ ಗಾದೆ ಮಾತಿನಂತೆ ವಿಭಾಗೀಯ ನಿಯಂತ್ರಣಧಿಕಾರಿ ಹಾಗೂ ವಿಭಾಗೀಯ ಸಂಚಲನಾಧಿಕಾರಿಗಳು ಈ ರೀತಿ ಭ್ರಷ್ಟಾಚಾರವೆಸಗುತ್ತಿರುವುದು ಸರಿಯೇ? ಈ ಅಧಿಕಾರಿಗಳ ನಡೆಯಿಂದ ತುಮಕೂರು ವಿಭಾಗದಲ್ಲಿ ಚಾಲಕರು, ನಿರ್ವಾಹಕರು, ಸಂಚಾರ ನಿಯಂತ್ರಕರು ಕರ್ತವ್ಯ ನಿರ್ವಹಿಸುವುದೇ ದೊಡ್ಡ ತಲೆನೋವಾಗುತ್ತಿದೆ.
ಹೀಗಾಗಿ ಮೊದಲು ಈ ಅಧಿಕಾರಿಗಳು ಕೆಳ ಹಂತದ ಅಧಿಕಾರಿಗಳು ಸಿಬ್ಬಂದಿಗಳಿಗೆ ನೀಡುತ್ತಿರುವ ಲಂಚದ ಹಿಂಸೆಯಿಂದ ತಪ್ಪಿಸಿ ನೌಕರರು ಅವರಷ್ಟಕ್ಕೆ ಅವರು ನಿಷ್ಠೆಯಿಂದ ಡ್ಯೂಟಿ ಮಾಡುವ ವಾತಾವರಣ ಸೃಷ್ಟಿಸಬೇಕು ಎಂದು ನಾಗರಾಜ್ ನಿಗಮದ ಎಂಡಿ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಇನ್ನು ಈ ರೀತಿ ಬರಿ ತುಮಕೂರು ಸಾರಿಗೆ ವಿಭಾಗದಲ್ಲಿ ಮಾತ್ರನೆ ನಡೆಯುತ್ತಿಲ್ಲ. ಇದು 4 ನಿಗಮಗಳಲ್ಲೂ ಇದೆ. ಬಿಎಂಟಿಸಿಯಲ್ಲಿರುವ ಬಹುತೇಕೆ ಡಿಸಿಗಳು ಹಾಗೂ ಡಿಟಿಒಗಳು ಕೂಡ ಇದೇರೀತಿ ವಸೂಲಿ ಮಾಡುತ್ತಿದ್ದು, ಅದರಲ್ಲಿ ಡಿಟಿಒ ಮಹಿಳಾ ಅಧಿಕಾರಿಯೊಬ್ಬಳು ಟಿಸಿಗಳಿಗೆ ಮನೆಗೆ ತರಕಾರಿ ತೆಗೆದುಕೊಂಡು ಬಾ ಎಂದು ಬ್ಯಾಗ್ ಕೊಟ್ಟು ಹಣಕೊಡದೆ ಕಳಿಸುತ್ತಿದ್ದಾಳೆ.
ಅಲ್ಲದೆ ಈಕೆ ಟಿಸಿಗಳನ್ನು ಇವಳ ಮನೆ ಕೆಲದ ಆಳುಗಳ ರೀತಿ ನಡೆಸಿಕೊಳ್ಳುತ್ತಿದ್ದಾಳೆ ಎಂದು ತಿಳಿದು ಬಂದಿದ್ದು ಈ ಬಗ್ಗೆ ವಿಜಯಪಥ ವರದಿಗಾರರ ತಂಡ ಸತ್ಯಶೋಧನೆ ಕಾರ್ಯದಲ್ಲಿ ತೊಡಗಿದೆ. ಈಕೆಯ ಲಂಚಾವತಾರ ಹಾಗೂ ಟಿಸಿಗಳಿಂದ ಮನೆಗೆ ತರಕಾರಿ ಇತರೆ ದಿನ ಬಳಕೆಯ ದವಸವನ್ನು ತರಿಸಿಕೊಳ್ಳುತ್ತಿರುವುದು ಸಿಕ್ಕರೆ ಅಂದೆ ಈ ಮಹಿಳಾ ಡಿಟಿಒ ಫೋಟೋ ಸಹಿತ ವರದಿ ಪ್ರಕಟಿಸಲಾಗುವುದು.
Related

You Might Also Like
ಪೂಜೆಗೆ ಹೋದ ಮಹಿಳೆಯ ಬೆತ್ತಲೆ ವಿಡಿಯೋ ಮಾಡಿ ಬ್ಲ್ಯಾಕ್ಮೇಲ್: ಅರ್ಚಕನ ಬಂಧನ
ಬೆಂಗಳೂರು: ಮಹಿಳೆಯ ನಗ್ನ ವಿಡಿಯೋವನ್ನು ವಾಟ್ಸಪ್ನಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿ ಬಳಿಕ ಬ್ಲ್ಯಾಕ್ ಮಾಡುತ್ತಿದ್ದ ಕೇರಳ ತ್ರಿಶೂರ್ನ ಪ್ರತಿಷ್ಠಿತ ದೇವಾಲಯದ ಅರ್ಚಕನನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ. ಪ್ರತಿಷ್ಠಿತ...
BMTC ಸಿಬ್ಬಂದಿಗೆ ಚಪ್ಪಲಿಯಿಂದ ಹೊಡೆದ ಪ್ರಕರಣ: ಕಠಿಣ ಕ್ರಮಕ್ಕೆ ಆಯುಕ್ತರು, ಗೃಹ ಸಚಿವರಿಗೆ ಸಾರಿಗೆ ಸಚಿವರ ಆಗ್ರಹ
ಬೆಂಗಳೂರು: ತಾನು ಕೇಳಿದ ಸ್ಥಳದಲ್ಲಿ ಬಸ್ ನಿಲ್ಲಿಸಿಲ್ಲ ಎಂದು ಮೂರು ದಿನದ ಹಿಂದೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ ಚಾಲಕನಿಗೆ ಮಹಿಳಾ ಟೆಕ್ಕಿ ಉದ್ಯೋಗಿಯೊಬ್ಬರು ಚಪ್ಪಲಿಯಿಂದ...
KSRTC: ನೌಕರರ ವೇತನ ಹೆಚ್ಚಳ ಸಂಬಂಧ ಸಿಎಂ-ಸಾರಿಗೆ ಸಚಿವರ ನಡುವೆ ಏನೋ ಸರಿ ಇಲ್ಲ..!
ಇಂದು ನಡೆಯಬೇಕಿದ್ದ ಸಭೆ ಮಾಹಿತಿಯೇ ಇಲ್ಲದೆ ರದ್ದು ಇದಕ್ಕೆ ಸಿಎಂ ಸಾರಿಗೆ ಸಚಿವರ ನಡುವೆ ಹೊಂದಾಣಿಕೆ ಕೊರತೆ ಕಾರಣವೆ? ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ...
BMTC: ಸಾಮಾನ್ಯ ಪಾಳಿಯ ಕರ್ತವ್ಯಕ್ಕೆ ಸೀನಿಯರ್ ಚಾಲನಾ ಸಿಬ್ಬಂದಿಗಳ ನಿಯೋಜನೆ ಮಾಡದಿರಲು ತೀರ್ಮಾನ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ಗಳ ಸಾಮಾನ್ಯ ಪಾಳಿಯಲ್ಲಿ ಕರ್ತವ್ಯಕ್ಕೆ ಸೀನಿಯರ್ ಚಾಲನಾ ಸಿಬ್ಬಂದಿಗಳನ್ನು ನಿಯೋಜನೆ ಮಾಡದಿರಲು ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರ (ಆ) ಅಧ್ಯಕ್ಷತೆಯಲ್ಲಿ...
BMTC: 79ರ ಬದಲು 34ಕಿಮೀ ಕಾರ್ಯಾಚರಣೆ ಮಾಡಿ ಆರ್ಥಿಕ ನಷ್ಟಮಾಡಿದ ಆರೋಪ- ಚಾಲನಾ ಸಿಬ್ಬಂದಿಗೆ ಡಿಎಂ ಮೆಮೋ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಸುಮಾರು 3500 ರೂ.ಗಳಷ್ಟು ಆರ್ಥಿಕ ನಷ್ಟವುಂಟಾಗಲು ಕಾರಣರಾಗಿರುತ್ತೀರಿ ಎಂದು ಆರೋಪಿಸಿ ಚಾಲನಾ ಸಿಬ್ಬಂದಿ ವಿರುದ್ಧ ಘಟಕ ವ್ಯವಸ್ಥಾಪಕರು ಆರೋಪಣ ಪತ್ರ...
ಹಾಳಾಗಿರುವ ಒಳಚರಂಡಿ ಸ್ಲ್ಯಾಬ್ ಬದಲಾಯಿಸಿ: ಅಧಿಕಾರಿಗಳಿಗೆ ಸ್ನೇಹಲ್ ತಾಕೀತು
ಬೆಂಗಳೂರು: ಪೂರ್ವ ವಲಯ ವ್ಯಾಪ್ತಿಯಲ್ಲಿ ಹಾಳಾಗಿರುವ ಒಳಚರಂಡಿ ಮೇಲ್ಭಾಗದ ಕವರ್ ಸ್ಲ್ಯಾಬ್ ಬದಲಾಯಿಸಲು ಪೂರ್ವ ವಲಯ ಆಯುಕ್ತರಾದ ಸ್ನೇಹಲ್ ಜಲಮಡಂಳಿ ಅಧಿಕಾರಿಗಳಿಗೆ ತಾಕೀತು ಮಾಡಿದರು. ಪೂರ್ವ ವಲಯ...
ಮತದಾನ ಪ್ರಮಾಣ ಹೆಚ್ಚಿಸಲು ಕ್ರಮ ವಹಿಸಿ: ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ವಸ್ತ್ರದ್ ಸಲಹೆ
ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ಸ್ವೀಪ್ ಕಾರ್ಯ ಚಟುವಟಿಕೆಗಳನ್ನು ನಿರಂತರವಾಗಿ ಕೈಗೊಳ್ಳುವ ಮೂಲಕ ಮತದಾರರಿಗೆ ಜಾಗೃತಿ ಮೂಡಿಸಿ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಕ್ರಮ ವಹಿಸಿ ಎಂದು ಅಧಿಕಾರಿಗಳಿಗೆ...
ಗ್ರಾಪಂ- ಮನೆ ಬಾಗಿಲಿಗೆ ಇ-ಸ್ವತ್ತು ಖಾತೆ ವಿತರಣೆ: ಜಿಪಂ ಸಿಇಒ ಡಾ.ಅನುರಾಧ
ಪಂಚಾಯತ್ ರಾಜ್ ಇಲಾಖೆಯಿಂದ ಮಹತ್ವಕಾಂಕ್ಷಿ ಕಾರ್ಯಕ್ರಮ ಗ್ರಾಮಠಾಣಾ ವ್ಯಾಪ್ತಿಯ ಮನೆ ಬಾಗಿಲಿಗೇ ಈ ಸ್ವತ್ತು ಖಾತೆ ನೀಡುವ ಯೋಜನೆ ಆರಂಭ ಬೆಂಗಳೂರು ಗ್ರಾಮಾಂತರ: ಪಂಚಾಯತ್ ರಾಜ್ ಮತ್ತು...
ರೈತರಿಗಾಗಿ ಜಿಲ್ಲಾ ಮಟ್ಟದ ಮಾವು- ಹಲಸು ಮೇಳ: ಸಚಿವ ಮುನಿಯಪ್ಪ
ಬೆಂಗಳೂರು ಗ್ರಾಮಾಂತರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ ಸಂಯುಕ್ತಾಶ್ರಯದಲ್ಲಿ ದೇವನಹಳ್ಳಿಯಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಮಾವು, ಹಲಸು ಮತ್ತು ಇತರೆ ಹಣ್ಣುಗಳ ಪ್ರದರ್ಶನ...