KKRTC: ಸಂಸ್ಥೆಯ ವಾಹನ ದುರ್ಬಳಕೆ ಮಾಡಿಕೊಂಡ ಅಧಿಕಾರಿಯ ಪತ್ನಿ- ವಜಾ ಮಾಡಿದ್ದು ಮಾತ್ರ ಸಾಮಾನ್ಯ ನೌಕರನ!!

ವಿಜಯಪುರ: ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದ ನಿಕಟಪೂರ್ವ ವಿಭಾಗೀಯ ಸಾರಿಗೆ ಅಧಿಕಾರಿ ಹಾಗೂ ಪದೇಪದೆ ನಿಗಮದ ಕಾನೂನುಗಳನ್ನು ಗಾಳಿಗೆ ತೂರಿ ಇಲಾಖಾ ವಾಹನಗಳನ್ನು ದುರ್ಬಳಕೆ ಮಾಡಿಕೊಳ್ಳುವ ದೇವಾನಂದ ಬಿರಾದಾರ ಅವರ ಪತ್ನಿ 2021 ರಲ್ಲಿ ಇಲಾಖಾ ವಾಹನ ಸಂಖ್ಯೆ KA 32 F 2238 ವನ್ನು ಗುಡಿ ಗುಂಡಾರಗಳನ್ನು ಸುತ್ತಲೂ ಬಳಸಿಕೊಂಡಿದ್ದರು.
ಅವರು ಇಲಾಖಾ ವಾಹನವನ್ನು ದುರ್ಬಳಕೆ ಮಾಡುತ್ತಿರುವ ವಿಡಿಯೋ ಇಲಾಖಾ ವಾಹನ ಅಧಿಕಾರಿಗಳಿಗಿಂತ ಅವರ ಫ್ಯಾಮಿಲಿಯವರು ಜಾಸ್ತಿ ಬಳಕೆ ಮಾಡುತ್ತಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿತ್ತು.
ಅದಕ್ಕೆ ಸಂಸ್ಥೆಯ ನೌಕರ ಎಂ.ಎನ್. ಇಳಕಲ್ (ಈಗ ಮಾಜಿ ಕಿರಿಯ ಸಹಾಯಕ ವಿಜಯಪುರ ವಿಭಾಗ) ಅವರ ಡೂಪ್ಲಿಕೇಟ್ ID ಸೃಷ್ಟಿಸಿ ಆ ಮುಖಾಂತರ ಮೇಡಂ ಇದು ವಿಜಯಪುರ ವಿಭಾಗದಲ್ಲಿ ಕಾಮನ್ ಇದಕ್ಕಿಂತ ಹೆಚ್ಚು ಭ್ರಷ್ಟಾಚಾರ ವಿಭಾಗದಲ್ಲಿ ನಡೆಯುತ್ತಿದೆ ಆನೆ ನಡೆದಿದ್ದೆ ದಾರಿ ಎಂದು ಕಾಮೆಂಟ್ ಹಾಕಿದ್ದರು ಎಂದು ಆರೋಪಿಸಿ ವಜಾ ಮಾಡಲಾಗಿದೆ.
ಇನ್ನು ಈ ಕಾಮೆಂಟ್ ಹಾಕಿದ್ದಕ್ಕೆ ವಿಜಯಪುರ ವಿಭಾಗದ ಭ್ರಷ್ಟ, ನೌಕರರ ವಿರೋಧಿ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರಬರ ಅವರು ಎಂ.ಎನ್. ಇಳಕಲ್ ಅವರನ್ನು ಅಧಿಕಾರಿಗಳ ಬಗ್ಗೆ ಹಾಗೂ ಸಂಸ್ಥೆಯ ಬಗ್ಗೆ ಇಲ್ಲ ಸಲ್ಲದ ಕಾಮೆಂಟ್ ಮಾಡಿರುತ್ತೀರಿ ಎಂದು ಅಮಾನತು ಮಾಡಿದ್ದರು.
ಅಲ್ಲದೆ ನಿಮ್ಮ ಫೇಸ್ಬುಕ್ ID ಹ್ಯಾಕ್ ಆಗಿದ್ದು ಗೊತ್ತಿದ್ದರೂ ಸಹ ನೀವು CEN ಪೊಲೀಸ್ ಸ್ಟೇಷನ್ ವಿಜಯಪುರದಲ್ಲಿ ದೂರು ದಾಖಲು ಮಾಡಲು ವಿಫಲರಾಗಿರುತ್ತೀರಿ ಎಂದು 2022ರಲ್ಲಿ ನಿಬಂಧನೆ 23ರಲ್ಲಿ ಆಪಾದನಾ ಪತ್ರ ನೀಡಿದ್ದರು. ನಿಬಂಧನೆ 23ರಲ್ಲಿ ಜಾರಿ ಮಾಡಿರುವ ಆಪಾದನಾ ಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖ ಮಾಡಿದ್ದರು. ನಿಮ್ಮ ಫೇಸ್ಬುಕ್ ID ಹ್ಯಾಕ್ ಆಗಿದ್ದು ಅಂತಾ. ಇವರ ಫೇಸ್ಬುಕ್ ID ಹ್ಯಾಕ್ ಆಗಿದ್ದರೆ ಇವರು ಕಾಮೆಂಟ್ ಮಾಡಲಿಕ್ಕೆ ಹೇಗೆ ಸಾಧ್ಯ? ಹಾಗಾದರೆ ಇವರನ್ನು ದುರುದ್ದೇಶ ಪೂರ್ವಕವಾಗಿ ಅಮಾನತು ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ ಹಾಗೂ ಅಮಾನತು ಮಾಡಿರುವುದು ಕಾನೂನು ಬಾಹಿರವಾಗಿದೆ ಅಲ್ಲವೇ?
ಇನ್ನು ಈ ಪ್ರಕರಣದಲ್ಲಿ ಇಲಾಖಾ ವಿಚಾರಣೆ ನಡೆದು ವಿಚಾರಣಾಧಿಕಾರಿಗಳು ಭಾಗಶಃ ಎಂದು ವಿಚಾರಣಾ ಫಲಿತಾಂಶ ವರದಿ ನೀಡಿದ್ದಾರೆ. ಆ ವರದಿಯ ಆಧಾರದ ಮೇಲೆ ನೀತಿ ಸಂಹಿತೆ ಉಲ್ಲಘನೆ ಪ್ರಕಾರಣದಲ್ಲಿ ನಿವೃತ್ತಿ ಆಗುವುದಕ್ಕಿಂತ ಮುಂಚೆ 13 ದಿನ ಮೊದಲು ಅಮಾನತಾದ ಜೆ.ಎಂ.ಫೈಜ್ (ಆಗಿನ ವಿಭಾಗೀಯ ನಿಯಂತ್ರಣಾಧಿಕಾರಿ) ಅವರು ಎಂ.ಎನ್. ಇಳಕಲ್ ಅವರನ್ನು ವ್ಯಯಕ್ತಿಯ ದ್ವೇಷದಿಂದ ವಜಾ ಮಾಡಿದ್ದಾರೆ ಎಂಬ ಆರೋಪ ಕೂಡ ಕೇಳಿ ಬಂದಿತ್ತು.
ಇಳಕಲ್ ಅವರು ಮಾಡದ ತಪ್ಪಿಗೆ ಕಾನೂನು ಬಾಹಿರವಾಗಿ ಅವರನ್ನು ವಜಾ ಮಾಡಿರುವುದು ತಪ್ಪಲ್ಲವೇ?. ಈ ವಿಷಯದಲ್ಲಿ ಎಂ.ಎನ್.ಇಳಕಲ್ ಅವರ ವಜಾ ಪ್ರಕರಣ ಸದ್ಯ ಕಾರ್ಮಿಕ ನ್ಯಾಯಾಲದಲ್ಲಿ ನಡೆಯುತ್ತಿದ್ದು ಇಲ್ಲಿ ನನಗೆ ನ್ಯಾಯ ಸಿಗುವ ಭರವಸೆ ಇದೆ ಎಂದು ಇಳಕಲ್ ಹೇಳುತ್ತಿದ್ದಾರೆ.
Related

You Might Also Like
ಹೆಂಡತಿ, ಮಕ್ಕಳಿದ್ದರೂ ಅಜ್ಜಿಯ ಮೊಮ್ಮಳ ಮೋಹಿಸಿ ಮನೆ ಬಿಟ್ಟು ಬಂದ- ಜೈಲು ಸೇರಿದ ಪ್ರೇಮಿಗಳು
ಚಿಕ್ಕಬಳ್ಳಾಪುರ: ಮದುವೆಯಾಗಿ ಮಕ್ಕಳಿದ್ದರೂ ಮತ್ತೊಬ್ಬ ಯುವತಿ ಜೊತೆ ರಹಸ್ಯವಾಗಿ ಲೈಂಗಿಕ ಕ್ರಿಯೆ ನಡೆಸಿ ಆಕೆಯ ಗರ್ಭಿಣಿ ಮಾಡಿದ ಗೃಹಸ್ಥನ ವಿಷಯ ಊರಿಗೆ ಜನರಿಗೆ ಗೊತ್ತಾದ ಮೇಲೆ ಆಕೆಯೊಂದಿಗೆ...
ಮಿಮ್ಸ್ ವೈದ್ಯರ ನಿರ್ಲಕ್ಷ್ಯದಿಂದ ಬಾಲಕಿ ಮೃತಪಟ್ಟ ಆರೋಪ- ಪಾಲಕರು ಸಂಘಟನೆಗಳಿಂದ ಪ್ರತಿಭಟನೆ
ಮಂಡ್ಯ: ಪೊಲೀಸರ ನಿರ್ಲಕ್ಷ್ಯದಿಂದ ಮೂರುವರೆ ವರ್ಷದ ಬಾಲಕಿ ಅಸುನೀಗಿದ ಪ್ರಕರಣ ಮಾಸುವ ಮುನ್ನವೇ ಮಂಡ್ಯದಲ್ಲಿ 7 ವರ್ಷದ ಬಾಲಕಿ ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟಿದ್ದಾಳೆ ಎಂಬ ಆರೋಪ ಕೇಳಿಬಂದಿದೆ....
ಪ್ರಯಾಣಿಕರಿಗೆ ವಿತರಿಸದ ಟಿಕೆಟ್ ಮೌಲ್ಯ ಶೂನ್ಯ: ಆದರೂ ನಿರ್ವಾಹಕರು ದಂಡಕಟ್ಟಬೇಕೆಂಬ ಅಸಂಬದ್ಧ ಸುತ್ತೋಲೆ!!
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಯ ನಾಲ್ಕೂ ನಿಗಮಗಳ ನಿರ್ವಾಹಕರ ಪಾಲಿಗೆ ಮುಳ್ಳಾಗುವ ಒಂದು ನಿರ್ಧಾರವನ್ನು 2024ರ ಮೇ 3ರಂದು ಅಂದಿನ ಮುಖ್ಯ ಸಂಚಾರಿ ವ್ಯವಸ್ಥಾಪಕರು...
KSRTC: ಪ್ರಯಾಣಿಕ ಟಿಕೆಟ್ ಕಳೆದು ಕೊಂಡರೆ ನಿರ್ವಾಹಕರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವಂತಿಲ್ಲ-ಎಂಡಿ ಆದೇಶ
2020 ಫೆಬ್ರವರಿ 20ರಂದು ಅಂದಿನ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಶಿವಯೋಗಿ ಸಿ. ಕಳಸದ ಸುತ್ತೋಲೆ ಹೊರಡಿಸಿದ್ದಾರೆ ಬೆಂಗಳೂರು: ಪ್ರಯಾಣಿಕರು ಟಿಕೆಟ್ ಕಳೆದುಕೊಂಡ ಪಕ್ಷದಲ್ಲಿ ತನಿಖಾದಿಕಾರಿಗಳು ವಾಹನವೂ ತಪಾಸಣಾ ಗೋಳಪಡಿಸಿದಾಗ...
ವಿಧಾನಸೌಧ ಈಗ ಪ್ರವಾಸಿ ತಾಣ: ಸಾರ್ವಜನಿಕ ವೀಕ್ಷಣೆಗೆ ಮುಕ್ತ- ಯಾರಿಗೆ ಟಿಕೆಟ್ ಮತ್ತ್ಯಾರಿಗೆ ಉಚಿತ!
ಬೆಂಗಳೂರು: ರಾಜ್ಯದ ಶಕ್ತಿಸೌಧ ವಿಧಾನಸೌಧವನ್ನು ಒಮ್ಮೆಯಾದರೂ ನೋಡಬೇಕು ಎಂದು ರಾಜ್ಯದ ಅದೆಷ್ಟು ಮಂದಿ ಆಸೆಪಡುತ್ತಿದ್ದರು. ಅಲ್ಲಿಗೆ ನಾವು ಹೋಗುವುದು ಹೇಗೆ ಎಂದು ಹಲವರು ಹಳ್ಳಿಗಳ್ಳಲಿ ಮಾತನಾಡಿಕೊಳ್ಳುತ್ತಿದ್ದರು. ಅದಕ್ಕೆ...
KSRTC: ಸಾರಿಗೆ ನೌಕರರಿಗೆ ಈ ಕೂಡಲೇ ವೇತನ ಹೆಚ್ಚಳ ಮಾಡಿ- ಸಿಎಂಗೆ ಮನವಿ ಸಲ್ಲಿಸಿದ ಕುಕನೂರು ಪಪಂ ಸದಸ್ಯೆ ಫಿರ್ದೋಶ್ ಬೇಗಂ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಿಬ್ಬಂದಿಗಳಿಗೆ ವೇತನ ಹೆಚ್ಚಳ ಹಾಗೂ 38 ತಿಂಗಳ ಹಿಂಬಾಕಿ ಬಗ್ಗೆ ಕೂಡಲೇ ಆದೇಶ ಹೊರಡಿಸಬೇಕು ಎಂದು ಕುಕನೂರು ಪಟ್ಟಣಪಂಚಾಯಿತಿ ಸದಸ್ಯರಾದ...
KKRTC ಬೀದರ್: ಕಿರಿಯ ಸಹಾಯಕ 10ಹುದ್ದೆ ಖಾಲಿ ಇದ್ದರು ಬೇರೆ ಹುದ್ದೆ ಆಯ್ಕೆಗೆ ಮೃತ ನೌಕರರ ಮಕ್ಕಳಿಗೆ ಅಧಿಕಾರಿಗಳಿಂದ ಒತ್ತಡ !
ಬೀದರ್: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆಯ ಬೀದರ್ವಿಭಾಗದಲ್ಲಿ ಅನುಕಂಪ ಆಧಾರದ ಮೇಲಿನ ಕಿರಿಯ ಸಹಾಯಕ ಹುದ್ದೆ ನೇಮಕಾತಿ ನಡೆಯದೆ ಹಲವಾರು ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಬಲಿಯಾಗುತ್ತಿವೆ. ಇನ್ನು...
ನಾಳೆ ಲಾಲ್ಬಾಗ್ ಆಭರಣದಲ್ಲಿ EPS ಪಿಂಚಣಿದಾರರ 89ನೇ ಮಾಸಿಕ ಸಭೆ
ಬೆಂಗಳೂರು: ಶತಮಾನಗಳ ಭವ್ಯ ಪರಂಪರೆಯನ್ನು ಹೊಂದಿರುವ, ನಡಿಗೆದಾರರ ಸ್ವರ್ಗ ಎಂದು ಕರೆಯುವ, ವಿಶ್ವ ವಿಖ್ಯಾತ ಲಾಲ್ಬಾಗ್ಗೂ ಇಪಿಎಸ್ ಪಿಂಚಣಿದಾರರಿಗೂ ಅವಿನವಬಾವ ಸಂಬಂಧ, ಈ ಸುಂದರ ಪರಿಸರ ತಾಣದಲ್ಲಿ...