NEWSನಮ್ಮಜಿಲ್ಲೆನಮ್ಮರಾಜ್ಯ

KKRTC: ಅಪಘಾತ- ಅಪರಾಧ ಮಾಡದ 34 ಚಾಲಕರಿಗೆ ಬೆಳ್ಳಿ ಪದಕ ನೀಡಿ ಸನ್ಮಾನ

ವಿಜಯಪಥ ಸಮಗ್ರ ಸುದ್ದಿ

ಕಾರಟಗಿ: ಸಂಕಷ್ಟದ ವೇಳೆ ವೈದ್ಯ ಜಾಗರೂಕತೆ ಮೆರೆದು ಒಬ್ಬನ ಪ್ರಾಣ ಉಳಿಸಬಹುದು, ಆದರೆ, ಬಸ್‌ ಚಾಲಕ ಜಾಗರೂಕನಾದರೆ ನೂರು ಜನರ ಪ್ರಾಣ ಉಳಿಸುತ್ತಾನೆ ಎಂಬುವುದಕ್ಕೆ ನೂರಾರು ಸಾವಿರಾರು ನಿದರ್ಶನಗಳನ್ನು ಕೊಡಬಹುದು. ಅಂಥ ಚಾಲಕರ ಕರ್ತವ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅವರಿಗೆ ಪ್ರಶಸ್ತಿ ನೀಡಿದರೆ ಅದು ಶ್ಲಾಘನೀಯ ಕಾರ್ಯವೇ ಸರಿ.

ಪೌರಾಡಳಿತ ಮತ್ತು ನಗರಾಭಿವೃದ್ಧಿ ಇಲಾಖೆ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕೊಪ್ಪಳ ವಿಭಾಗ ಆಯೋಜಿಸಿದ್ದ ಕಾರಟಗಿಯ ನೂತನ ಬಸ್‌ ನಿಲ್ದಾಣ ಉದ್ಘಾಟನಾ ಸಮಾರಂಭದಲ್ಲಿ ನಿಗಮದ ಅಪಘಾತ ರಹಿತವಾಗಿ 2017, 2018 ಮತ್ತು 2019ರಲ್ಲಿ ಚಾಲನೆ ಮಾಡಿದ ಚಾಲಕರಿಗೆ ಬೆಳ್ಳಿ ಪದಕ ವಿತರಣೆ ಮಾಡಲಾಯಿತು.

ವೈದ್ಯರು ಒಮ್ಮೆ ಆಪರೇಷನ್‌ ಮಾಡಿ ಓರ್ವನ ಪ್ರಾಣವನ್ನು ಕಾಪಾಡಬಹುದು. ಆದರೆ ಚಾಲನೆ ವೇಳೆ ಸಂಕಷ್ಟ ಎದುರಾದರೆ ಚಾಲಕ ಜಾಗರೂಕ ಜವಾಬ್ದಾರಿಯಿಂದ ನಡೆದುಕೊಂಡರೆ ಬಸ್‌ನಲ್ಲಿ ಪ್ರಯಾಣಿಸುವ ನೂರು ಜನರ ಪ್ರಾಣ ರಕ್ಷಿಸಬಹುದು. ಇಂದು ಅಪಘಾತ, ಅಪರಾಧ ರಹಿತ ಬಸ್‌ ಚಾಲನೆ ಮಾಡಿ ಬೆಳ್ಳಿ ಪದಕ ಪಡೆದಿರುವುದು ಶ್ಲಾಘನೀಯ. ಇವರ ಸಾಧನೆ ಇತರೆ ನೌಕರರಿಗೆ ಮಾದರಿ ಆಗಲಿ.

ಕೆಎಸ್‌ಆರ್‌ಟಿಸಿಗೆ ಬೆಳ್ಳಿಯ ಹೊಳಪಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಯೂನಿಫಾರ್ಮ್‌ ಕಾರಣಕ್ಕೆ ಪೊಲೀಸ್‌ ಇಲಾಖೆ, ಕೆಎಸ್‌ಆರ್‌ಟಿಸಿ ನಡುವೆ ಒಂದು ಮಾನಸಿಕ ಸಂಬಂಧವಿದೆ. ಚಾಲಕ ವೃತ್ತಿ ಎನ್ನುವುದು ಒಂದು ಜವಾಬ್ದಾರಿ ಕೆಲಸ. ಇದನ್ನು ಸಮರ್ಥವಾಗಿ ಮಾಡಿರುವುದರಿಂದ ಇಲ್ಲಿ 34 ಜನ ಚಾಲಕರಿಗೆ ಬೆಳ್ಳಿ ಪದಕ ನೀಡಿ ಗೌರವಿಸಲಾಗುತ್ತಿದೆ. ಈ ಗೌರವ ಪಡೆದವರ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ.

1.20 ಲಕ್ಷ ನೌಕರರು: ಕೆಎಸ್‌ಆರ್‌ಟಿಸಿಯ ನಾಲ್ಕೂ ನಿಗಮಗಳಿಂದ 1.07 ಲಕ್ಷ ನೌಕರರು ಕೆಲಸ ಮಾಡುತ್ತಿದ್ದಾರೆ. ಈ ಬಹುದೊಡ್ಡ ಸಂಸ್ಥೆಗಳು ಚಾಲಕ ಮತ್ತು ನಿರ್ವಾಹಕರ ಕೊರತೆಯನ್ನು ಇಂದು ಎದುರಿಸುತಿದ್ದು, ಮುಂದಿನ ದಿನಗಳಲ್ಲಿ ಎಲ್ಲವೂ ಸರಿಹೋಗಲಿದೆ ಎಂದು ಈಗಾಗಲೇ ಸಾರಿಗೆ ಸಚಿವರು ತಿಳಿಸಿದ್ದಾರೆ. ಇನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದು ಈಗಾಗಲೇ ನೂರಾರು ಬಾರಿ ರಾಷ್ಟ್ರಮಟ್ಟದಲ್ಲಿ ನಿಗಮಗಳು ಪ್ರಶಸ್ತಿ ಪಡೆದುಕೊಂಡಿವೆ.

ಇನ್ನು ಕೆಕೆಆರ್‌ಟಿಸಿ ನಿಗಮದಿಂದ ಉತ್ತಮವಾಗಿ ಕೆಲಸ ಮಾಡುವ ಚಾಲಕರನ್ನು ಗುರುತಿಸುವ ಕೆಲಸವನ್ನು  ಮಾಡಲಾಗಿದೆ. ಈ ಹಿಂದೆ ಕೇವಲ ಚಿನ್ನದ ಪದಕ ನೀಡಲಾಗುತ್ತಿತ್ತು. ಈಗ ಬೆಳ್ಳಿ ಪದಕ ಕೂಡ ನೀಡಲಾಗುತ್ತಿದೆ. ಇದು ನೌಕರರ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ.

ಪದಕ ಪಡೆದ ಚಾಲಕರು: ಯಾವುದೇ ಅಪಘಾತ ಮತ್ತು ಅಪರಾಧ ಮಾಡದ 34 ಚಾಲಕರಿಗೆ ಬೆಳ್ಳಿ ಪದಕ ನೀಡಲಾಯಿತು. ಕಪ್ಪಳ ಘಟಕದ ಶರಣಪ್ಪ, ಮಂಜುನಾಥ, ಲೋಕನಗೌಡ, ಇಸ್ಮಾಯಿಲ್‌ಸಾಬ್‌, ಶರಣಪ್ಪ, ಮಂಜುನಾಥಗೌಡರ್‌, ಎಂ.ಟಿ.ಚರ್ಚಿಹಾಳಮಠ, ಈಶಪ್ಪ, ಸಿದ್ದಲಿಂಗಪ್ಪ, ಜಿ.ಎಸ್‌. ಸಜ್ಜನ್‌, ರವೀಂದ್ರ, ನಾಗರಾಜ ಕಾರಿಕಾಯಿ, ಜಗದೀಶ್‌ ಜಂತ್ಲಿ, ಮಂಜುನಾಥ ಶಂಕಿನ್‌, ಕುಷ್ಟಗಿ ಘಟಕದ ಪ್ರಕಾಶ, ದುರುಗಪ್ಪ, ಮಲ್ಲಪ್ಪ, ಜಗದೀಶ, ಮುತ್ತಣ್ಣ, ಎಂ.ಡಿ.ಸಲೀಂ ಎನ್‌.ಕಾಯಿಗಡ್ಡಿ, ಮುರ್ತುಜಾಸಾಬ್‌, ಯಲಬುರ್ಗಾ ಘಟಕದ ರವಿಕುಮಾರ್‌ ಭಜಂತ್ರಿ, ಸುರೇಶ್‌ ಧನ್ನೂರ, ಮಲ್ಲಪ್ಪ ಸಂಗಳದ, ಸಂಗಪ್ಪ ವಡ್ಡರ್‌, ಗಂಗಾವತಿ ಘಟಕದ ನಾಗರಾಜ, ಹನುಮಂತ ಹಮನಿ, ಮಹಾಲಿಂಗಯ್ಯ, ಬಸವರಾಜ ಪೂಜಾರ್‌ ಹಾಗೂ ವೀರೇಶ್‌ ಒಂಟೇಲಿ ಪದಕ ಪಡೆದವರು.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ