CrimeNEWSನಮ್ಮಜಿಲ್ಲೆ

NWKRTC: ಕರ್ತವ್ಯ ನಿರತ ಚಾಲಕನ ಮೇಲೆ ಹಲ್ಲೆ- ಪ್ರಯಾಣಿಕರಿಬ್ಬರ ವಿರುದ್ಧ FIR ದಾಖಲು

ವಿಜಯಪಥ ಸಮಗ್ರ ಸುದ್ದಿ

ಅಮೀನಗಡ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕನ ಮೇಲೆ ಹಲ್ಲೆ ಮಾಡಿದ ಪ್ರಯಾಣಿಕರಿಬ್ಬರ ವಿರುದ್ದ  ಪೊಲೀಸ್‌ ಠಾಣೆಯಲ್ಲಿ  ಎಫ್‌ಐಆರ್‌ ದಾಖಲಾಗಿದೆ.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಾಗಲಕೋಟೆ ವಿಭಾಗ ಹುನಗುಂದ ಘಟಕದ ಚಾಲಕ ಕಂ ನಿರ್ವಾಹಕ ಯಲ್ಲಪ್ಪ ಲಕ್ಷ್ಮಣ ದಡ್ಡಿ ಹಲ್ಲೆಗೊಳಗಾದವರಾಗಿದ್ದು ಈ ಸಂಬಂಧ ರಾಹುಲ ಎಂಬಾತ ಸೇರಿದಂತೆ ಇಬ್ಬರು ಆರೋಪಿಗಳ ವಿರುದ್ದ ಅಮೀನಗಡ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಲಾಗಿದೆ.

ದೂರಿನಲ್ಲೇನಿದೆ? ಚಾಲಕ ಕಂ ನಿರ್ವಾಹಕ ಯಲ್ಲಪ್ಪ ಲಕ್ಷ್ಮಣ ದಡ್ಡಿ ಅವರು ಫೆ.9 ರಂದು ಹುನಗುಂದದಿಂದ ಬಾಗಲಕೋಟೆಗೆ ಹೋಗುವ ವೇಳೆ ರಾತ್ರಿ ಸುಮಾರು 7:15ಕ್ಕೆ ಬಸ್ ಹುನಗುಂದವನ್ನು ಬಿಟ್ಟು ಬಾಗಲಕೋಟೆ ಕಡೆಗೆ ಹೊರಟು ಅಮೀನಗಡ ಬಸ್ ನಿಲ್ದಾಣವನ್ನು 7:45ಕ್ಕೆ ತಲುಪಿ ಪ್ರಯಾಣಿಕರನ್ನು ಇಳಿಸಿ ಮತ್ತೆ ಹತ್ತಿದ ಪ್ರಯಾಣಿಕರಿಗೆ ಟಿಕೆಟ್ ವಿತರಿಸುತ್ತಿದ್ದೆ.

ಈ ವೇಳೆ ಬಸ್‌ ಹತ್ತಿದ ಪ್ರಯಾಣಿಕರಲ್ಲಿ ಇಬ್ಬರು ಯುವಕರು ಇದ್ದರು. ನಾನು ಅವರನ್ನು ಟಿಕೆಟ್ ಪಡೆದುಕೊಳ್ಳಲು ಕೇಳಿದಾಗ ಹಣ ಇಲ್ಲ ಪೋನ್ ಫೆ ಮಾಡುತ್ತೇವೆ ಅಂತ ಹೇಳಿದ್ದರಿಂದ ಫೋನ್‌ಫೇ ಯುಪಿ ಐಡಿಯನ್ನು ಅವರ ಮುಂದೆ ಹಿಡಿದಾಗ ಅವರು  ಮುಂದೆ ಹತ್ತಿರದಲ್ಲಿರುವ ಬಸವನ ದೇವರ ಗುಡಿ ಹತ್ತಿರ ಸೈಡಿಗೆ ಹಾಕು ಎಂದು ಬೆದರಿಸಿದರು.

ಅಲ್ಲದೆ ಈ ವೇಳೆ ಅಮೀನಗಡ ಬಿಟ್ಟು ಎಪಿಎಂಸಿಯ ವರೆಗೆ ಬಸ್ ಎಲ್ಲೂ ನಿಲ್ಲಿಸಬಾರದು ಅಂತ ಬೈಯುತ್ತಾ ಚಾಲಕ ಕಂ ನಿರ್ವಾಹಕನಾಗಿ ಡ್ಯೂಟಿ ಮಾಡುತ್ತಿದ್ದ  ನನಗೆ ಅಂದರೆ ಚಾಲಕನ ಆಸನದಲ್ಲಿ ಕುಳಿತಿದ್ದ ನನ್ನ ಮೇಲೆ ಕೈಯಿಂದ ಹಲ್ಲೇ ಮಾಡಿ ಎಳೆದಾಡಿ ನನ್ನ ಕೈಯಲ್ಲಿದ್ದ   ಬಸ್ ಟಿಕೆಟ್,  12,137 ರೂ.ಗಳನ್ನು ಇಬ್ಬರೂ ಸೇರಿ ಕಸೆದುಕೊಳ್ಳತೊಡಗಿದಾಗ ನಾನು ಬಿಗಿಯಾಗಿ ಹಿಡಿದರೂ ಕೂಡಾ ಇಬ್ಬರು ಸೇರಿ ಬಲವಂತವಾಗಿ ಕಸೆದುಕೊಂಡರು. ಈ ವೇಳೆ ನನ್ನ ಬಳಿ 1,300 ರೂ. ಮಾತ್ರ ಉಳಿಯಿತು.

ಅವರು ತಕ್ಷಣ ಆ ಹಣ ಕಸೆದುಕೊಂಡು ಓಡಿಹೋದರು. ಅವರಲ್ಲಿ ಒಬ್ಬನ ಹೆಸರು ರಾಹುಲ, ಇನ್ನೊಬ್ಬನ ಹೆಸರು ಗೊತ್ತಾಗಿಲ್ಲ ಎಂದು ಚಾಲಕ ಯಲ್ಲಪ್ಪ ಲಕ್ಷ್ಮಣ ದಡ್ಡಿ ಪೊಲೀಸ್‌ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಚಾಲಕ  ನೀಡಿದ ದೂರಿನ ಮೇರೆಗೆ ಎಫ್‌ಐಆರ್‌ ದಾಖಲಿಸಿರುವ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

Leave a Reply

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಭವಿಷ್ಯದಲ್ಲೂ ಬೆಂಗಳೂರು ಉತ್ತಮವಾಗಿರುವಂತೆ ಯೋಜನೆ ರೂಪಿಸಬೇಕು; ಇಲ್ಲದಿದ್ದರೇ ಬೆಂಗಳೂರಿಗೆ ನಾವು ಮೋಸ ಮಾಡಿದಂತೆ: ಡಿಸಿ... ಬಿಬಿಎಂಪಿ ಕಾಮಗಾರಿಗಳ ಗುಣಮಟ್ಟ ಪರೀಕ್ಷೆಗೆ “ಸಂಚಾರಿ ಪ್ರಯೋಗಾಲಯ”: ಡಿಸಿಎಂ ವೀಕ್ಷಣೆ "ನಮ್ಮ ರಸ್ತೆ 2025" ಕಾರ್ಯಕ್ರಮಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಲನೆ ಸ್ಪೈನಲ್ ಕಾರ್ಡ್ ಶಸ್ತ್ರ ಚಿಕಿತ್ಸೆ ಬಳಿಕ ಕುರುಬೂರು ಶಾಂತಕುಮಾರ್ ಆರೋಗ್ಯದಲ್ಲಿ ಚೇತರಿಕೆ ಸರ್ಕಾರ ನಿಮ್ಮಗಳ ದ್ವಂದ ನಿಲುವನ್ನು ಉಪಯೋಗಿಸಿಕೊಂಡು ಸಾರಿಗೆ ನೌಕರರ ಹೊಟ್ಟೆಗೆ ತಣ್ಣೀರುಬಟ್ಟೆ ಕಟ್ತಾ ಇದೆ ದೇಹಲಿ 4ನೇ ಮಹಿಳಾ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ರೇಖಾ ಗುಪ್ತಾ KSRTC ತುಮಕೂರು: ಡಿಸಿ ಚಂದ್ರಶೇಖರ್ ಅಮಾನತಿಗೆ ದೂರುಕೊಟ್ಟು ಎಂಡಿಗೆ ಒತ್ತಾಯ KSRTC ಅಧಿಕಾರಿಗಳ ಕಳ್ಳಾಟಕ್ಕೆ ಬ್ರೇಕ್‌: HRMS ತಂತ್ರಾಂಶದ ಮೂಲಕವೇ ರಜೆ ಅರ್ಜಿ ಸಲ್ಲಿಸಬೇಕು- ಮುಖ್ಯ ಸಿಬ್ಬಂದಿ ವ್ಯವಸ... KSRTC ಉತ್ತಮ ಸಾಧನೆ ತೋರಿದ ಡಿಸಿಗಳು, ಉಸ್ತುವಾರಿ ಅಧಿಕಾರಿಗಳು, ಘಟಕ ವ್ಯವಸ್ಥಾಪಕರಿಗೆ ನಗದು ಪುರಸ್ಕಾರ ಸಾರಿಗೆ ಬಸ್‌ನಲ್ಲಿ ಉಚಿತ ಪ್ರಯಾಣ- ನಿಲ್ದಾಣಕ್ಕೂ ಮೊದಲೆ ಇಳಿದ ಮಹಿಳೆ ಪರ ನಿಂತು ನಾನು ಪೊಲೀಸ್‌ ಎಂದಳು!!