NEWSನಮ್ಮಜಿಲ್ಲೆನಮ್ಮರಾಜ್ಯ

BMTC ದಕ್ಷಿಣ ವಿಭಾಗದ 7 ಘಟಕಗಳಲ್ಲೂ ಚಾಲನಾ ಸಿಬ್ಬಂದಿಯೇ ಕಸಗುಡಿಸಬೇಕು- ಕಂಡು ಕಾಣದಂತೆ ವರ್ತಿಸುವ ಡಿಸಿ ಆಶಾಲತಾ ಮೇಡಂ!

ವಿಜಯಪಥ ಸಮಗ್ರ ಸುದ್ದಿ
  • ಕಸ ಗುಡಿಸುವಂತೆ ಚಾಲನಾ ಸಿಬ್ಬಂದಿಗಳಿಗೆ ಬಲವಂತ ಮಾಡುವಲ್ಲಿ ಘಟಕ- 2ರ ಘಟಕ ವ್ಯವಸ್ಥಾಪಕ ಕಾಂತರಾಜು ಬಲೂ ಮುಂದು!
  • ವಿಭಾಗದಲ್ಲಿ ಸ್ವಚ್ಛತಾ ಗುತ್ತಿಗೆ ಪಡೆದವರು ಕಾರ್ಮಿಕ ರ ಕಳಿಸುತ್ತಿಲ್ಲ ಬೇಜವಾಬ್ದಾರಿ
  • ಸ್ವಚ್ಛತಾ ಕಾರ್ಮಿಕರು ಬರದಿರುವುದಕ್ಕೆ ಚಾಲನಾ ಸಿಬ್ಬಂದಿಗಳನ್ನೇ ಸ್ವಚ್ಛತಾ ಕಾರ್ಮಿಕರನ್ನಾಗಿ ಮಾಡಿಕೊಂಡ ಡಿಪೋ ಮಟ್ಟದ ಅಧಿಕಾರಿಗಳು ಅದಕ್ಕೆ ಮಣೆ ಹಾಕಿದ ಡಿಸಿ ಮೇಡಂ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ದಕ್ಷಿಣ ವಿಭಾಗದ 7 ಘಟಕಗಳಲ್ಲೂ ಚಾಲಕ ನಿರ್ವಾಹಕರೇ ಕಸ ಗುಡಿಸಬೇಕು, ಬಸ್‌ ತೊಳೆಯಬೇಕು. ಈ ಅಧಿಕಾರಿಗಳ ಬೇಜವಾವ್ದಾರಿಗೆ ಚಾಲನಾ ಸಿಬ್ಬಂದಿ ಎರಡೆರಡು ಕೆಲಸ ಮಾಡಬೇಕು. ಒಂದು ವೇಳೆ ನಾವು ಬಸ್‌ ಸ್ವಚ್ಛಗೊಳಿಸಲ್ಲ, ಕಸಗುಡಿಸಲ್ಲ ಎಂದರೆ ಅಂಥ ನೌಕರರನ್ನು ಟಾರ್ಗೆಟ್‌ ಕೂಡ ಮಾಡಲಾಗುತ್ತಿದೆ.

ಹೌದು! ಕಳೆದ 4-5 ತಿಂಗಳುಗಳಿಂದಲೂ ಇದೇ ಸಮಸ್ಯೆ ಎದುರಾಗಿದೆ. ಈವರೆಗೂ ಸಮರ್ಪಕವಾಗಿ ಸ್ವಚ್ಛತ ಕಾರ್ಮಿಕರು ಇಲ್ಲ. ಇದರಿಂದ ಬೆಳಗ್ಗೆ ಡ್ಯೂಟಿಗೆ ಬರುವ ಚಾಲಕರು ಮತ್ತು ನಿರ್ವಾಹಕರೆ ಬಸ್‌ ಸ್ವಚ್ಛಗೊಳಿಸಿಕೊಳ್ಳಬೇಕು. ಜತೆಗೆ ಬಸ್‌ ಒಳಗೆ ಕಸಗುಡಿಸುವ ಕೆಲಸ ಮಾಡಿಸಬೇಕಾಗಿದೆ.

ಇನ್ನು ನಾವು ಸ್ವಚ್ಛಗೊಳಿಸುವ ಕೆಲಸಕ್ಕೆ ಬಂದಿಲ್ಲ ನಾವೇಕೆ ಮಾಡಬೇಕು ನಮ್ಮ ಡ್ಯೂಟಿಯನ್ನು ನಾವು ಮಾಡುವುದಕ್ಕೆ ಬಿಡಿ ಎಂದು ಚಾಲನಾ ಸಿಬ್ಬಂದಿಗಳು ಘಟಕ ವ್ಯವಸ್ಥಾಪಕರಿಗೆ ಹೇಳಿದರೆ ಅಂತ ನೌಕರರನ್ನು ಈ ಘಟಕ ಮಟ್ಟದ ಅಧಿಕಾರಿಗಳು ಟಾರ್ಗೆಟ್‌ ಮಾಡಿ ಸರಿಯಾಗಿ ಡ್ಯೂಟಿ ಕೊಡದೆ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೂಡ ಕೇಳಿ ಬಂದಿದೆ.

ಅದಕ್ಕೆ ತಾಜಾ ನಿದರ್ಶನ ಎಂಬಂತೆ ಬಿಎಂಟಿಸಿ ಘಟಕ -2 ಡಿಎಂ ಇ.ಕಾಂತರಾಜು ಅವರನ್ನು ವಿಜಯಪಥ ವರದಿಗಾರರು ವಿಷಯ ತಿಳಿದುಕೊಳ್ಳವ ಸಂಬಂಧ ಫೋನ್‌ ಮೂಲಕ ಸಂಪರ್ಕಿಸಿದಾಗ ಮೊದಲಿಗೆ ಕರೆ ಸ್ವೀಕರಿಸಿ ತಾಳ್ಮೆಯಿಂದಲೇ ಮಾತನಾಡುತ್ತಿದ್ದ ಅವರು ಅಷ್ಟೇ ಸಿಟ್ಟಿನಿಂದ ಕರೆಯನ್ನು ಕಟ್ ಮಾಡಿದರು. ಮತ್ತೆ 2-3ಬಾರಿ ಫೋನ್‌ ಕರೆ ಮಾಡಿದರು ಕರೆ ಸ್ವೀಕರಿಸಲಿಲ್ಲ.

ಅಂದರೆ. ಈ ಡಿಎಂ ಕಾಂತರಾಜು ಮೇಲೆ ನೌಕರರು ಮಾಡಿದ ಆರೋಪ ಸತ್ಯ ಎಂಬಂತೆ ನಡೆದುಕೊಂಡಿದ್ದಾರೆ. ಇವರು ಚಾಲನಾ ಸಿಬ್ಬಂದಿಗಳನ್ನು ಬಸ್‌ ಸ್ವಚ್ಛಗೊಳಿಸುವುದಕ್ಕೆ ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದಾರೆ. ಇನ್ನು ಇವರ ಮಾತು ಕೇಳದ ನೌಕರರನ್ನು ಟಾರ್ಗೆಟ್‌ ಮಾಡುತ್ತಿದ್ದಾರೆ ಎಂಬುವುದು ಇವರ ನಡೆಯಿಂದ ಗೊತ್ತಾಗುತ್ತಿದೆ.

ಇನ್ನು ಬಿಎಂಟಿಸಿ ಘಟಕ 20ರ ಘಟಕ ವ್ಯವಸ್ಥಾಪಕರನ್ನು ಫೋನ್‌ ಮೂಲಕ ಸಂಪರ್ಕಿಸಿದಾಗ ಅವರು ಇರುವ ವಾಸ್ತವತೆಯನ್ನು ತಿಳಿಸಿದ್ದಾರೆ. ನಿಗಮದಿಂದ ಖಾಸಗಿಯಾಗಿ ಎಂಟರ್‌ ಪ್ರೈಸಸ್‌ ಒಂದಕ್ಕೆ ಸ್ವಚ್ಛತಾ ಟೆಂಟರ್‌ ಕೊಟ್ಟಿದ್ದು ಆ ಗುತ್ತಿಗೆ ಪಡೆದವರು ಸರಿಯಾಗಿ ಕಾರ್ಮಿಕರನ್ನು ಕಳುಹಿಸದೆ ಇರುವುದರಿಂದ ಅನಿವಾರ್ಯವಾಗಿ ನಾವು ಸೇರಿದಂತೆ ನಮ್ಮ ಸಿಬ್ಬಂದಿಗಳು ಈ ಸ್ವಚ್ಛತಾ ಕಾರ್ಯದಲ್ಲಿ ಅಭಿಯಾನದ ರೀತಿ ಸೇರಿಕೊಂಡು ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಇನ್ನು ಘಟಕ 34ರ ಘಟಕ ವ್ಯವಸ್ಥಾಪಕರು ಹೌದು ಗುತ್ತಿಗೆ ಪಡೆದುಕೊಂಡಿರುವ ಖಾಸಗಿ ಎಂಟರ್‌ ಪ್ರೈಸಸ್‌ನಿಂದ ಬರಬೇಕಿರುವಷ್ಟು ಕಾರ್ಮಿಕರು ಬರುತ್ತಿಲ್ಲ 7ಜನರು ಬರಬೇಕಿರುವ ಸ್ಥಳದಲ್ಲಿ ಕೇವಲ ಒಬ್ಬಿಬ್ಬರು ಮಾತ್ರ ಇರುತ್ತಾರೆ ಹೀಗಾಗಿ ಬಸ್‌ಗಳನ್ನು ನಮ್ಮ ಸಿಬ್ಬಂದಿಗಳೆ ಕೆಲವೊಮ್ಮೆ ಸ್ವಚ್ಛಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ಈ ಸಂಬಂಧ ನಿಗಮದ ದಕ್ಷಿಣ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಆಶಾಲತಾ ಅವರನ್ನು ಫೋನ್‌ ಮೂಲಕ ಸಂಪರ್ಕಿಸಲು ವಿಜಯಪಥ ವರದಿಗಾರರು ಕರೆ ಮಾಡಿದರು ಅವರು ಕರೆ ಸ್ವೀಕರಿಸಲಿಲ್ಲ. ಅಥವಾ ನಾವು ಬೇರೆ ಕೆಲಸದ ಒತ್ತಡದಲ್ಲಿದ್ದೇವೆ ಎಂಬ ಮೆಸೆಜ್‌ ಕೂಡ ಮಾಡಲಿಲ್ಲ. ಡಿಸಿ ಮೇಡಂ ಅವರು ಯಾವ ಒತ್ತಡಕ್ಕೆ ಸಿಲುಕಿದ್ದರೋ ಗೊತ್ತಾಗಲೇ ಇಲ್ಲ.

ಅದೇನೆ ಇರಲಿ ನಿಗಮದಲ್ಲಿ ಚಾಲನಾ ಸಿಬ್ಬಂದಿಗಳಿಗೆ ಅವರದಲ್ಲದ ಕೆಲಸಗಳನ್ನು ಮಾಡಿ ಎಂದು ಒತ್ತಡ ಹೇರುವುದು ಎಷ್ಟು ಸರಿ. ಇನ್ನಾದರೂ ವಿಭಾಗೀಯ ನಿಯಂತ್ರಣಾಧಿಕಾರಿ ಆಶಾಲತಾ ಅವರು ಈ ರೀತಿಯ ಪ್ರಮಾದಗಳು ಡಿಪೋ ಮಟ್ಟದಲ್ಲಿ ಆಗದಂತೆ ಎಚ್ಚರಿಕೆ ವಹಿಸುವ ಮೂಲಕ ತಮ್ಮ ಕರ್ತವ್ಯವನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕಿದೆ.

ಇನ್ನು ಆ ಖಾಸಗಿ ಎಂಟರ್‌ ಪ್ರೈಸಸ್‌ನವರಿಗೆ ಕೊಟ್ಟಿರುವ ಗುತ್ತಿಗೆಯನ್ನು ರದ್ದುಪಡಿಸಿ ಬೇರೆಯವರಿಗೆ ಕೊಟ್ಟರೆ ಅವರಾದರೂ ಸರಿಯಾಗಿ ಕಾರ್ಮಿಕರನ್ನು ನೇಮಿಸಿಕೊಂಡು ಕೆಲಸ ಮಾಡಲು ಅನುಕೂಲ ಆಗುತ್ತದೆ. ಆದರೆ ಆ ಕೆಲಸ ಮಾಡದವರ ಗುತ್ತಿಗೆ ಕರಾರು ಅವಧಿ 2025ರ ಜೂನ್‌ ಅವರೆಗೂ ಇದೆ ಎಂದು ಈ ರೀತಿ ಚಾಲನಾ ಸಿಬ್ಬಂದಿಗಳಿಂದ ಕೆಲಸ ಮಾಡಿಸುವುದು ಕಾನೂನು ಬಾಹಿರವಾಗುತ್ತದೆ. ಈ ಬಗ್ಗೆ ಡಿಸಿ ಮೇಡಂ ಎಚ್ಚೆತ್ತುಕೊಂಡು ಆಗುತ್ತಿರುವ ತಪ್ಪನ್ನು ತಿದ್ದಿಕೊಳ್ಳಬೇಕಿದೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು ನೀವು ಗಬಗಬನೆ ಊಟ ಮಾಡುವವರಿದ್ದೀರಾ? ಹಾಗಿದ್ದರೆ ನಿಮಗೆ ಈ ಸಮಸ್ಯೆ ಕಾಡದಿರದು! BMTC ನೌಕರರಿಗೆ ಆನ್-ಲೈನ್ ಮೂಲಕ ವೇತನ ಚೀಟಿ ಪಡೆಯುವ ವ್ಯವಸ್ಥೆ- ಜಾರಿ ಸ್ಕೂಟರ್‌ಗೆ ಕಾರು ಡಿಕ್ಕಿ- ಮೊಪೆಡ್‌ನಲ್ಲಿ ತೆರಳುತ್ತಿದ್ದ ಮಾವ-ಸೊಸೆ ದಾರುಣ ಸಾವು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಹಿಟ್‌ ಧಾರಾವಾಹಿಗಳ ನಿರ್ದೇಶಕ, ನಿರ್ಮಾಪಕ ರಾಮ್​ಜೀ