NEWSನಮ್ಮಜಿಲ್ಲೆನಮ್ಮರಾಜ್ಯ

KKRTC: ಆಂಧ್ರ ಪ್ರದೇಶದ ಮಹಿಳೆಗೆ 328 ರೂ. ಮೌಲ್ಯದ ಉಚಿತ ಟಿಕೆಟ್‌ ವಿತರಿಸಿದ ಕಂಡಕ್ಟರ್‌

ವಿಜಯಪಥ ಸಮಗ್ರ ಸುದ್ದಿ

ಕೊಪ್ಪಳ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕೊಪ್ಪಳ ವಿಭಾಗ ಕುಷ್ಟಗಿ ಘಟಕದ ಬಸ್‌ ನಿರ್ವಾಹಕರೊಬ್ಬರು ಕುಷ್ಟಗಿ-ಬೆಂಗಳೂರು ಮಾರ್ಗದ ಬಸ್‌ನಲ್ಲಿ ಅಂಧ್ರ ಪ್ರದೇಶದ ಮಹಿಳೆಗೆ ಉಚಿತ ಟಿಕೆಟ್‌ ನೀಡಿ ಪೇಚಿಗೆ ಸಿಲುಕಿದ್ದಾರೆ.

ಇದೇ ಆ.27ರಂದು ಅಂದರೆ ನಿನ್ನೆ 12.43ರ ಸಮಯದಲ್ಲಿ ಸಾರಿಗೆ ತನಿಖಾಧಿಕಾರಿಗಳು ಬಸ್‌ಹತ್ತಿ ಟಿಕೆಟ್‌ ಚೆಕ್‌ ಮಾಡುವಾಗ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ನಿವಾಸಿ ಹೇಮಾವತಿ ಎಂಬುವರು ತಮ್ಮ ಆಧಾರ್‌ ಕಾರ್ಡ್‌ ತೋರಿಸಿ ನಿರ್ವಾಹಕನ ಯಾಮಾರಿಸಿ ಉಚಿತ ಟಿಕೆಟ್‌ ಪಡೆದುಕೊಂಡಿರುವುದು ಬೆಳಕಿಗೆ ಬಂದಿದೆ.

ಟಿಕೆಟ್‌ ವಿತರಿಸುವ ವೇಳೆ ಹೇಮಾವತಿ ಯಾವ ರಾಜ್ಯದವರು ಎಂದು ಗಮನಿಸದ ಕುಷ್ಟಗಿ ಘಟಕದ ನಿರ್ವಾಹಕ ಬಸವರಾಜ ಎಂಬುವರು ಶಕ್ತಿ ಯೋಜನೆಯ ಉಚಿತ ಟಿಕೆಟ್‌ಅನ್ನು ಕರ್ನಾಟಕ ಮಹಿಳೆಯ ಟಿಕೆಟ್‌ ಜತೆಗೆ ವಿತರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಆಧಾರ್‌ ಗಮನಿಸಿಯೂ ಈ ರೀತಿ ಕಂಡಕ್ಟರ್‌ ಮಾಡಿದ್ದಾರೆ ಎಂಬ ಅನುಮಾನ ಮೂಡುವಂತಿದೆ ಈ ಘಟನೆ.

ಇನ್ನು ಟಿಕೆಟ್‌ ಪರಿಶೀಲಿಸಿಕೊಂಡು ಬರುತ್ತಿದ್ದ ತನಿಖಾಧಿಕಾರಿಗಳಿಗೆ ನಿರ್ವಾಹಕ ಬಸವರಾಜ ಆಂಧ್ರ ಪ್ರದೇಶದ ಮಹಿಳೆಗೆ ಕರ್ನಾಟಕ ರಾಜ್ಯದ ಮಹಿಳೆಯ ಜತೆಗೆ ಸೇರಿ 328 ರೂ.ಗಳ ಉಚಿತ ಟಿಕೆಟ್‌ ವಿತರಿಸಿರುವುದು ಗೊತ್ತಾಗಿದೆ. ಕರ್ನಾಟಕ ಮಹಿಳೆಯ ಜತೆಗೆ ಟಿಕೆಟ್‌ ವಿತರಿಸಿರುವುದೇ ಹಲವು ಅನುಮಾನಗಳನ್ನು ಹುಟ್ಟುಹಾಕುತ್ತಿದೆ.

ಈ ರೀತಿ ಟಿಕೆಟ್‌ ವಿತರಿಸುವುದಕ್ಕೂ ಮುನ್ನ ನಿರ್ವಾಹಕ ಬಸವರಾಜ ಮಹಿಳೆಯ ಆಧಾರ್‌ ಕಾರ್ಡ್‌ ಚೆಕ್‌ ಮಾಡಬೇಕಿತ್ತಲ್ಲವೇ ಒಂದು ವೇಳೆ ನೋಡಿಯೂ ಈತ ಕರ್ನಾಟಕ ಮಹಿಳೆಯ ಜತೆಗೆ ಟಿಕೆಟ್‌ ವಿತರಿಸಿದ್ದರೆ ಮುಲಾಜಿಲ್ಲದೆ ಕಾನೂನು ರೀತಿ ಕ್ರಮ ಜರುಗಿಸಬೇಕು. ಇನ್ನು ಮುಂದೆ ಈ ರೀತಿಯ ಕೃತ್ಯ ಎಸಗದಂತೆ ಪಾಠ ಕಲಿಸಬೇಕಿದೆ.

ಅಲ್ಲದೆ ಈ ರೀತಿಯ ಕೃತ್ಯ ಎಸಗುವುದು ಸಂಸ್ಥೆಗೆ ಮತ್ತು ರಾಜ್ಯಕ್ಕೆ ಅನ್ಯಾಯ ಮಾಡಿದಂತಾಗುತ್ತದೆ. ಹೀಗಾಗಿ ಇದು ಇತರೆ ನಿರ್ವಾಹಕರಿಗೂ ಪಾಠವಾಗಬೇಕಿದೆ ಎಂದು ಸಂಘಟನೆಯ ಮುಖಂಡರು ಹೇಳಿದ್ದಾರೆ.

ಒಟ್ಟಾರೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಶಕ್ತಿ ಯೋಜನೆ ಜಾರಿಯಾದ ಬಳಿಕ ಹೆಚ್ಚಾಗಿ ಸಾರಿಗೆ ನಿರ್ವಾಹಕರು ತೊಂದರೆ ಅನುಭವಿಸುತ್ತಿದ್ದಾರೆ. ಈ ನಡುವೆ ಇಂಥ ಕೃತ್ಯಗಳನ್ನು ಎಸಗುವುದು ಸರಿಯಲ್ಲ. ನಿರ್ವಾಹಕರು ಕೂಡ ನಿಷ್ಟೆಯಿಂದ ಕೆಲಸ ಮಾಡಬೇಕಿದೆ ಎಂದು ನೌಕರರೆ ಹೇಳುತ್ತಿದ್ದಾರೆ.

ಕೆಲವೊಮ್ಮೆ ತಪ್ಪು ಮಾಡದ ನಿರ್ವಾಹಕರಿಗೆ ಅಮಾನತಿನ ಶಿಕ್ಷೆಯಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ಕೂಲಂಕಷವಾಗಿ ಪರಿಶೀಲಿಸಿ ಇದು ನಿರ್ವಾಹಕ ಬೇಕಂತಲೇ ಮಾಡಿರುವ ಕೃತ್ಯವೋ ಇಲ್ಲ ಪ್ರಯಾಣಿಕರು ನಿರ್ವಾಹಕರನ್ನು ಯಾಮಾರಿಸಿದ್ದಾರೆಯೆ ಎಂಬುದನ್ನು ತಿಳಿದುಕೊಂಡು ನಿರ್ವಾಹಕರನ್ನು ಶಿಕ್ಷೆಗೆ ಗುರಿಪಡಿಸಬೇಕಿದೆ.

ಇಲ್ಲಿ ಕೆಲ ಪ್ರಯಾಣಿಕರು ಮಾಡುವ ತಪ್ಪಿಗೆ ನಿರ್ವಾಹಕರು ಶಿಕ್ಷೆ ಅನುಭವಿಸುತ್ತಿದ್ದಾರೆ. ಇದು ಬದಲಾಗಬೇಕು. ಪ್ರಯಾಣಿಕರು ತಪ್ಪು ಮಾಡಿದರೆ ಅವರಿಗೆ ಮಾತ್ರ ಶಿಕ್ಷೆಯಾಗಬೇಕು. ಇದರಲ್ಲಿ ನಿರ್ವಾಹಕ ಕೂಡ ಪ್ರಯಾಣಿಕರೊಂದಿಗೆ ಸೇರಿ ತಪ್ಪೆಸಗಿದರೆ ಇಬ್ಬರಿಗೂ ಶಿಕ್ಷೆಯಾಗಬೇಕು ಎಂದು ನೌಕರರು ಹೇಳುತ್ತಿದ್ದಾರೆ.

ಒಟ್ಟಾರೆ ಕೆಲ ನಿರ್ವಾಹಕರು ಕೂಡ ತಪ್ಪು ಮಾಡುತ್ತಿರುವುದು ಕಂಡು ಬರುತ್ತಿದೆ. ಈ ರೀತಿಯ ತಪ್ಪು ಮಾಡಿ 10 ರೂ. ಜೇಬಿಗಿಳಿಸಿಕೊಳ್ಳಲು ಹೋಗಿ ಅಮಾನತಿನ ಶಿಕ್ಷೆ, ಜತೆಗೆ ದಂಡ ಇನ್ನು ಮುಂದುವರಿದು ಸಾವಿರಾರು ರೂ. ಲಂಚಕೊಟ್ಟು ಮತ್ತೆ ಡ್ಯೂಟಿ ಪಡೆದುಕೊಳ್ಳುವ ಗೋಜಿಲಿಗೆ ಸಿಲುಕಿಕೊಳ್ಳುವ ಜತೆಗೆ ಮಾನಸಿಕ ಯಾತನೆ ಕೂಡ ಅನುಭವಿಸಬೇಕು. ಇದು ನಮಗೆ ಬೇಕಾ ಎಂಬುದನ್ನು ಅರಿತುಕೊಂಡು ನೌಕರರು ಕೂಡ ಸಂಸ್ಥೆಗೆ ನಿಷ್ಠೆಯನ್ನು ತೋರಿಬೇಕಿದೆ.

ತನಿಖಾಧಿಕಾರಿಗಳು ನಿರ್ವಾಹಕನಿಗೆ ಮೆಮೋ ಕೊಟ್ಟಿರುವುದು.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು