NEWSನಮ್ಮಜಿಲ್ಲೆನಮ್ಮರಾಜ್ಯ

KSRTC: 4ನಿಗಮಗಳ ಅಧೀಕ್ಷಕರ ವೇತನ ಶ್ರೇಣಿಯಲ್ಲಿ ಭಾರಿ ವ್ಯತ್ಯಾಸ – ಸರಿಪಡಿಸಲು ಆದೇಶಿಸಿ – ಸಾರಿಗೆ ಸಚಿವರಿಗೆ ಮನವಿ

ವಿಜಯಪಥ ಸಮಗ್ರ ಸುದ್ದಿ
  • ಎರಡೆರಡು ಕಡೆ ನಮಗೆ ವೇತನ ತಾರತಮ್ಯ
  • ಒಂದು ಸರ್ಕಾರಿ ನೌಕರರಿಗಿಂತ ಸಾರಿಗೆ ನೌಕರರಿಗೆ ಶೇ.40 ರಿಂದ 45 ರಷ್ಟು ಕಡಿಮೆ
  • ಮೇಲ್ವಿಚಾರಕ ಹಾಗೂ ಅಧೀಕ್ಷಕರಿಗೆ ಮೂಲ ವೇತನ ನಿಗದಿಪಡಿಸುವಲ್ಲಿನ ತಪ್ಪು
  • ಸಂಸ್ಥೆಯ ಆಂತರಿಕ ಆಡಳಿತ ವ್ಯವಸ್ಥೆಯಲ್ಲಿಯೂ ಸಹ ಹೊಡೆತ
  • ಶೇ.30 ರಿಂದ 35 ರಷ್ಟು ವೇತನ ಕಡಿಮೆ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಮೇಲ್ವಿಚಾರಕ/ ಅಧೀಕ್ಷಕರ ವೇತನ ಶ್ರೇಣಿಯಲ್ಲಿ ಭಾರಿ ವ್ಯತ್ಯಾವಿದ್ದು ಅದನ್ನು ಸರಿಪಡಿಸುವ ಮೂಲಕ ನಮಗೆ ನ್ಯಾಯಯುತ ಸೌಲಭ್ಯಗಳನ್ನು ಪಡೆಯುವುದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಮಾಡಿದ್ದಾರೆ.

ಈ ಸಂಬಂಧ ವಿಧಾನ ಸೌಧದ ಸಾರಿಗೆ ಸಚಿವಾಲಯಕ್ಕೆ ನಿಗಮಗಳ ಮೇಲ್ವಿಚಾರಕ/ ಅಧೀಕ್ಷಕರು ಲಿಖಿತ ಮನವಿ ಸಲ್ಲಿಸಿದ್ದು, ನಾವು ನಾಲ್ಕೂ ನಿಗಮದ ಲೆಕ್ಕಪತ್ರ, ಸಿಬ್ಬಂದಿ, ಸಂಚಾರ, ತಾಂತ್ರಿಕ, ಅಂಕಿಸಂಖ್ಯೆ, ಉಗ್ರಾಣ, ಭದ್ರತಾ. ಕಾಮಗಾರಿ, ಗಣಕಯಂತ್ರ ಹೀಗೆ ಸಂಸ್ಥೆಯ ಎಲ್ಲ ಶಾಖೆಗಳಲ್ಲಿ ಮೇಲ್ವಿಚಾರಕ/ ಅಧೀಕ್ಷಕ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ.

ಆದರೆ, ವೇತನದ ವಿಷಯದಲ್ಲಿ ನಮಗೆ ಎಲ್ಲರಿಗಿಂತ ಹೆಚ್ಚು ಅನ್ಯಾಯವಾಗುತ್ತ ಬಂದಿರುತ್ತಿದೆ. ಕಾರಣ ವಿಷಯವನ್ನು ಚರ್ಚೆಗೆ ಒಳಪಡಿಸಿ ನಮಗೆ ಸೂಕ್ತ ನ್ಯಾಯ ಒದಗಿಸಿಕೊಡಬೇಕೆಂದು ಕೇಳಿಕೊಳ್ಳುತ್ತೇವೆ.

ಸರಕಾರದ ವಿವಿಧ ಇಲಾಖೆ, ನಿಗಮ ಮಂಡಳಿಗಳಲ್ಲಿ ವೈಜ್ಞಾನಿಕ ತಳಹದಿ ಮೇಲೆ ವೇತನವನ್ನು ನಿರ್ಮಿಸಿಕೊಂಡು ಬರಲಾಗಿದೆ. ಒಂದು ಹುದ್ದೆಯಿಂದ ಮತ್ತೊಂದು ಹುದ್ದೆಗಿರುವ ಪ್ರಾರಂಭಿಕ ಮೂಲ ವೇತನದ ಅಂತರ, ಮುಂದಿನ ಎಲ್ಲ ಹುದ್ದೆಗಳಿಗೆ ನೆಲಗಟ್ಟಾಗಿ ನಿಂತಂತೆ ಭಾಸವಾಗುತ್ತದೆ. ಆಯಾ ಹುದ್ದೆಗಳ ವಿದ್ಯಾರ್ಹತೆ, ಜವಾಬ್ದಾರಿ, ಹೊಣೆಗಾರಿಕೆಗೆ ತಕ್ಕಂತೆ ಹೈರಾರಕಿ ಪ್ರಕಾರ ಹಂತಗಳನ್ನು ಪ್ರಮಾಣೀಕರಿಸುತ್ತ ಬರಲಾಗಿದೆ.

ಆದರೆ ಸಾರಿಗೆ ಸಂಸ್ಥೆಯಲ್ಲಿ ಆ ಯಾವ ನಿಯಮವನ್ನು ಪಾಲಿಸಲಾಗಿಲ್ಲ. ಯಾವ ದೃಷ್ಟಿಕೋನವನ್ನು ಪರಿಗಣಿಸಿಲ್ಲ. ಮನಸ್ಸಿಗೆ ಬಂದಂತೆ ಹಂತಗಳನ್ನು ನಿರ್ಮಿಸಿಕೊಂಡು ಬರಲಾಗಿದೆ. ಇದರಿಂದ ಮೇಲ್ವಿಚಾರಕ, ಅಧೀಕ್ಷಕ, ಅಧಿಕಾರಿ-2, ಹುದ್ದೆಗಳಿಗೆ ಕ್ರಮವಾಗಿ ರೂ. 26810/-, 28850/-, 42600/- ಮೂಲವೇತನ ನಿಗದಿಪಡಿಸಲಾಗಿದೆ.

ಮೇಲ್ವಿಚಾರಕ ಹುದ್ದೆಯಿಂದ ಅಧೀಕ್ಷಕ ಹುದ್ದೆಗೆ 11.75% ಅಂತರವಿದ್ದರೆ, ಅಧೀಕ್ಷಕ ಹುದ್ದೆಯಿಂದ ಅಧಿಕಾರಿ ದರ್ಜೆ-2 ಹುದ್ದೆಗೆ ಇರುವ ಅಂತರ 47.66%. ಆಗಿದೆ. ಹುದ್ದೆ ಹುದ್ದೆಯ ನಡುವೆ ಇಷ್ಟು ದೊಡ್ಡ ಮಟ್ಟದ ಅಂದರೆ 47.66% ರಷ್ಟು ಅಂತರ ಯಾವ ನಿಗಮ ಮಂಡಳಿಗಳಲ್ಲಿ, ಯಾವ ಇಲಾಖೆಗಳಲ್ಲಿ ಕಾಣಲು ಸಿಗುವುದಿಲ್ಲ.

ನಮ್ಮಲ್ಲಿ ಮೇಲ್ವಿಚಾರಕ ಹಾಗೂ ಅಧೀಕ್ಷಕರಿಗೆ ಮೂಲ ವೇತನ ನಿಗದಿಪಡಿಸುವಲ್ಲಿ ತಪ್ಪಾಗಿದೆ ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಈ.47.66% ರಲ್ಲಿ ಶೇ.35 ರಷ್ಟು ಮೇಲ್ವಿಚಾರಕ/ಅಧೀಕ್ಷಕರಿಗೆ ವೈಜ್ಞಾನಿಕವಾಗಿ ಹಂಚಿಕೆಯಾಗಬೇಕು ಎನ್ನುವುದು ನಮ್ಮ ಪ್ರಮುಖ ಬೇಡಿಕೆಯಾಗಿದೆ. ಈ ಸಂಗತಿಯನ್ನು ಪುಷ್ಠಿಕರಿಸುವ ವಿವಿಧ ಇಲಾಖೆ, ನಿಗಮ ಮಂಡಳಿಗಳ ವೇತನ ಶ್ರೇಣಿಗಳ ಪಟ್ಟಿಯನ್ನು ತಮ್ಮ ಅವಗಾಹನೆಗೆ ಅರ್ಪಿಸಲಾಗಿದೆ.

ಏಳನೇ ವೇತನ ಹೋಲಿಸಿಕೊಂಡಲ್ಲಿ ಸಾರಿಗೆ ನೌಕರರಿಗೆ ಶೇ.40 ರಿಂದ 45 ರಷ್ಟು ಕಡಿಮೆ ಇದೆ. ಇಷ್ಟು ಕಡಿಮೆ ವೇತನದಲ್ಲಿ ಜೀವನ ಸಾಗಿಸುವುದು ದುಸ್ಥರವಾಗಿರುವ ಸಂದರ್ಭದಲ್ಲಿ ಸಂಸ್ಥೆಯ ಆಂತರಿಕ ಆಡಳಿತ ವ್ಯವಸ್ಥೆಯಲ್ಲಿಯೂ ಸಹ ಹೊಡೆತ ನೀಡಲಾಗಿದೆ. ಶೇ.30 ರಿಂದ 35 ರಷ್ಟು ವೇತನ ಕಡಿಮೆ ನೀಡುವ ಮೂಲಕ ಮತ್ತಷ್ಟು ಕಷ್ಟದ ಕೂಪಕ್ಕೆ ತಳ್ಳಲಾಗಿದೆ.

ಕಾರಣ ತಾವು ಈ ತಾರತಮ್ಯ ನಿವಾರಿಸಲು ಕೂಡಲೇ ಸಂಬಂಧಪಟ್ಟವರಿಗೆ ಸೂಕ್ತ ಆದೇಶ ಹೊರಡಿಸಬೇಕು. ಮೇಲ್ವಿಚಾರಕ/ಅಧೀಕ್ಷಕ ವರ್ಗಕ್ಕೆ ಆಗಿರುವ ವೇತನ ತಾರತಮ್ಯ ನಿವಾರಿಸುವ ಮೂಲಕ ಸಾಮಾಜಿಕ ನ್ಯಾಯ ದೊರಕಿಸಿಕೊಡಬೇಕು ಎಂದು ಕೋರಿ, ಮನವಿ ಅರ್ಜಿ ಸಲ್ಲಿಸಿದ್ದೇವೆ ಎಂದು ತಿಳಿಸಿದ್ದಾರೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು ನೀವು ಗಬಗಬನೆ ಊಟ ಮಾಡುವವರಿದ್ದೀರಾ? ಹಾಗಿದ್ದರೆ ನಿಮಗೆ ಈ ಸಮಸ್ಯೆ ಕಾಡದಿರದು! BMTC ನೌಕರರಿಗೆ ಆನ್-ಲೈನ್ ಮೂಲಕ ವೇತನ ಚೀಟಿ ಪಡೆಯುವ ವ್ಯವಸ್ಥೆ- ಜಾರಿ ಸ್ಕೂಟರ್‌ಗೆ ಕಾರು ಡಿಕ್ಕಿ- ಮೊಪೆಡ್‌ನಲ್ಲಿ ತೆರಳುತ್ತಿದ್ದ ಮಾವ-ಸೊಸೆ ದಾರುಣ ಸಾವು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಹಿಟ್‌ ಧಾರಾವಾಹಿಗಳ ನಿರ್ದೇಶಕ, ನಿರ್ಮಾಪಕ ರಾಮ್​ಜೀ