ಗುಬ್ಬಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಮುಡಿ ಕಟ್ಟಾದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಗುಬ್ಬಿ ಬಳಿಯ ಮೂಕನಹಳ್ಳಿ ಪಟ್ಟಣ ಗೇಟ್ ಬಳಿ ನಡೆದಿದೆ.

ಇಂದು ಬಳಗ್ಗೆ ಸುಮಾರು 11.40ರಲ್ಲು ಅವಘಡ ಸಂಭವಿಸಿದ್ದು, ಈ ಅಪಘಾತದಿಂದ ಚಾಲಕ ಸುರೇಶ್ ಸೇರಿದಂತೆ ಹವಾರು ಮಂದಿ ಪ್ರಯಾಭಿಕರು ಗಾಯಗೊಂಡಿದ್ದಾರೆ. ಬಸ್ ಹೊಸದುರ್ಗದಿಂದ ಬೆಂಗಳೂರಿಗೆ ಬರುತ್ತಿತ್ತು.
ಈ ವೇಳೆ ಮೂಕನಹಳ್ಳಿ ಪಟ್ಟಣ ಗೇಟ್ ಬಳಿ ತುಮಕೂರು ವಿಭಾಗದ ತಿಪಟೂರು ಘಟಕದ ಈ ಬಸ್ ಬರುತ್ತಿದ್ದಂತೆ ಮುಂದಿನ ಭಾಗದ ಮುಡಿ ಕಟ್ಟಾಗಿದೆ ಪರಿಣಾಮ ಚಾಲಕನ ನಿಯಂತ್ರಕಳೆದುಕೊಂಡಿದ್ದು, ಪಲ್ಟಿಹೊಡೆದಿದೆ.
ಬಸ್ನಲ್ಲಿ ಸುಮಾರು 74 ಜನ ಪ್ರಯಾಣಿಕರಿದ್ದು, ಒಬ್ಬರು ತೀವ್ರಗಾಯಗೊಂಡಿದ್ದು ಉಳಿದವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆಯ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಗುಬ್ಬಿ ಪೊಲೀಸರು ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆ ದಾಖಲಿಸಿದ್ದಾರೆ.
ಇನ್ನು ಘಟನೆ ಸಂಬಂಧ ಗುಬ್ಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕಾನೂನು ಕ್ರಮ ತೆಗೆದುಕೊಂಡಿದ್ದಾರೆ.
ಇತ್ತೀಚೆಗೆ ಸಾರಿಗೆ ಸಂಸ್ಥೆಯ ಬಹುತೇಕ ಬಸ್ಗಳು ಗುಜರಿಗೆ ಸೇರಬೇಕಿದ್ದು ಅಂಥ ಬಸ್ಗಳನ್ನು ರೂಟ್ ಮೇಲೆ ಕಳಿಸುತ್ತಿರುವುದರಿಂದ ಈ ರೀತಿಯ ಅಪಘಾತಗಳು ಸಂಭವಿಸುತ್ತಿವೆ. ಅಲ್ಲದೆ ಬಸ್ಗಳ ಬಿಡಿ ಭಾಗಗಳನ್ನು ಸರಿಯಾಗಿ ಪೂರೈಸದೆ ಹಾಳಾಗಿರುವ ಬಸ್ಗಳನ್ನು ದುರಸ್ತಿ ಮಾಡದೆ ಇರುವುದು ಇಂಥ ಪ್ರಕರಣಕ್ಕೆ ಸಾಕ್ಷಿಯಾಗುತ್ತಿವೆ.
ಈ ರೀತಿ ಪ್ರಯಾಣಿಕರ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವ ಸಾರಿಗೆ ನಿಗಮದ ಅಧಿಕಾರಿಗಳ ವಿರುದ್ಧ ಸಂಬಂಧಪಟ್ಟ ಸಚಿವರು ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.
ಅಲ್ಲದೆ ಬಸ್ ಫೀಟ್ನೆಸ್ ನೋಡದೆ ರಸ್ತೆಗಿಳಿಸುವ ಘಟಕ ವ್ಯವಸ್ಥಾಪಕರ ವಿರುದ್ಧ ಮೊದಲು ಕಾನೂನು ಕ್ರಮ ತೆಗೆದುಕೊಳ್ಳಬೇಕು. ಈ ಅಧಿಕಾರಿಗಳು ತಮ್ಮ ತಪ್ಪನ್ನು ಮುಚ್ಚಿಹಾಕಲು ಚಾಲಕರ ವಿರುದ್ಧ ಮೇಲಧಿಕಾರಿಗಳಿಗೆ ವರದಿ ನೀಡುತ್ತಾರೆ. ಇದು ಮೊದಲು ತಪ್ಪಬೇಕು ಎಂದು ಸಾರಿಗೆ ಮುಖಂಡರು ಒತ್ತಾಯಿಸಿದ್ದಾರೆ.
Related










