ಅರಿಸಿನಕುಂಟೆ: ಸಾರಿಗೆ ನೌಕರರಿಗೆ ಸರಿ ಸಮಾನ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಸಂಘಟನೆಗಳ ಒಕ್ಕೂಟ ಇಂದಿನಿಂದ (ಏ.21) ಫ್ರೀಡಂ ಪಾರ್ಕ್ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಮತ್ತು ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದು, ನೂರಾರು ಸಂಖ್ಯೆಯಲ್ಲಿ ನೆಲಮಂಗಲದಿಂದ ಹೊರಟಿದ್ದ ಸಾರಿಗೆ ನೌಕರರನ್ನು ಪೊಲೀರು ಅರಿಸಿನಕುಂಟೆ ಬಳಿ ತಡೆದು ನಿಲ್ಲಿಸಿದ್ದಾರೆ.

ಈ ವೇಳೆ ನಮಗೆ ನಮ್ಮ ಬೇಡಿಕಗಳ ಈಡೇರಿಸಿಕೊಳ್ಳುವುದಕ್ಕಾಗಿ ನಾವು ಫ್ರೀಟಂ ಪಾರ್ಕ್ವರೆಗೆ ಪಾದಯಾತ್ರೆ ಮಾಡಿ ಅಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಆರಕ್ಷಕರಲ್ಲಿ ಸಾರಿಗೆ ನೌಕರರು ಮನವಿ ಮಾಡುತ್ತಿದ್ದಾರೆ. ಆದರೆ, ಕೋರ್ಟ್ ಪಾದಯಾತ್ರೆ ಮಾಡಿಕೊಂಡು ಬೆಂಗಳೂರು ನಗರ ಪ್ರವೇಶಿಸುವುದಕ್ಕೆ ತಡೆನೀಡಿರುವುದರಿಂದ ನೀವು ಸಹಕರಿಸಬೇಕು ಎಂದು ನೌಕರರ ಮುಖಂಡರಲ್ಲಿ ಪೊಲೀಸರು ಮನವಿ ಮಾಡಿದ್ದಾರೆ.
ಈ ನಡುವೆ ನಾವು ತಾಲೂಕು ಕಚೇರಿ ಮುಂದೆ ಕುಳಿದು ಉಪವಾಸ ಸತ್ಯಾಗ್ರಹ ಮಾಡುವುದಕ್ಕೆ ಅವಕಾಶ ಮಾಡಿಕೊಡಬೇಕು ಎಂಬ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಪೊಲೀಸ್ ಮೇಲಧಿಕಾರಿಗಳು ಬಂದು ಅನುಮತಿಸಿದರೆ ತಾಲೂಕು ಕಚೇರಿ ಬಳಿಯೇ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ನೌಕರರು ಹೇಳಿದ್ದಾರೆ.
ಅರಿಸಿನಕುಂಟೆ ಬಳಿ ಪೊಲೀಸರು ಪಾದಯಾತ್ರೆ ಮಾಡುತ್ತಿರುವ ಸಾರಿಗೆ ನೌಕರರನ್ನು ತಡೆದಿದ್ದು ಸಾರಿಗೆ ನೌಕರರು ಕೂಡ ಪೊಲೀಸರೊಂದಿಗೆ ಶಾಂತಿಯುವಾಗಿ ವರ್ತಿಸುವ ಮೂಲಕ ಸಹಕರಿಸುತ್ತಿದ್ದಾರೆ. ಮುಂದೆ ಏನಾಗುತ್ತದೆ ಎಂಬುದರ ಬಗ್ಗೆ ಅಪ್ಡೇಟ್ ನೀಡಲಾಗುವುದು.
Related










