NEWSನಮ್ಮರಾಜ್ಯರಾಜಕೀಯ

ಸರ್ಕಾರದ ನಿರ್ಲಕ್ಷ್ಯಕ್ಕೆ ಸಾರಿಗೆ ನೌಕರರು ಆತ್ಮಹತ್ಯೆ: ಸೆ.14ರಂದು ಎಎಪಿಯಿಂದ ವಿಧಾನಸೌಧ ಮುತ್ತಿಗೆ, ಬೃಹತ್‌ ಪ್ರತಿಭಟನೆ

ವಿಜಯಪಥ ವರದಿ - ಸಂಪಾದಕರು ಮತ್ತು ತಂಡಕ್ಕೆ ನೌಕರರ ಅಭಿನಂದನೆ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಹತ್ತು ದಿನಗಳಲ್ಲಿ ಆರು ಮಂದಿ ಸಾರಿಗೆ ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹಿಂದೆ 30ಕ್ಕೂ ಹೆಚ್ಚು ಸಾರಿಗೆ ನೌಕರರು ಸರ್ಕಾರದ ನಿರ್ಲಕ್ಷ್ಯಕ್ಕೆ ಬಲಿಯಾಗಿದ್ದರು.

ಈ ಹಿನ್ನೆಲೆಯಲ್ಲಿ ಸಾರಿಗೆ ಸಚಿವ ಶ್ರೀರಾಮುಲು ಅವರ ರಾಜೀನಾಮೆಗೆ ಆಗ್ರಹಿಸಿ ಸೆಪ್ಟೆಂಬರ್‌ 14ರ ಬುಧವಾರದಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಆಮ್‌ ಆದ್ಮಿ ಪಾರ್ಟಿ ನಿರ್ಧರಿಸಿದೆ ಎಂದು ಪಕ್ಷದ ಮಾಧ್ಯಮ ವಕ್ತಾರ ಮೋಹನ್ ತಿಳಿಸಿದರು.

ಸಾರಿಗೆ ನೌಕರರೇ ಈ  ನಿಗಮಗಳ ಅಧಿಕಾರಿಗಳು ಈ ಹಿಂದಿನಿದಲೂ ನಡೆಸುತ್ತಿರುವ ಸಭೆಗಳಿಂದ  ನೌಕರರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಉದಾಹರಣೆಗೆ ಮುಷ್ಕರ ಸಂದರ್ಭದಲ್ಲಿ ಆಗಿದ್ದ ವಜಾ, ನೌಕರರನ್ನು ವಾಪಸ್ ಪಡೆಯಲು ಇನ್ನು ಮುಂದೆ ಯಾವುದೇ ಹೋರಾಟ ಮಾಡುವುದಿಲ್ಲ ಎಂದು ಮನವಿ ನೀಡಬೇಕಂತೆ ಮತ್ತು ಸಮಾನ ವೇತನ ವಿಷಯ ಹಾಗೂ ಪೊಲೀಸ್ ಪ್ರಕರಣಗಳ ವಿಷಯವಾಗಿ ಸರ್ಕಾರದ ಮೇಲೆ  ಸಾರಿಗೆ ಸಚಿವರು ಸಚಿವರ ಮೇಲೆ ಸರ್ಕಾರ ಹೀಗೆ  ವರ್ಗಾಯಿಸಿಕೊಂಡು  ಕಾಲ ಕಳೆಯುತ್ತಿದ್ದಾರೆ ಎಂದು ನೌಕರರು ಕಿಡಿಕಾರುತ್ತಿದ್ದಾರೆ.

ನಂತರ ಭವಿಷ್ಯ ನಿಧಿ ಪ್ರಕಾರ ಪಿಂಚಣಿ ನೀಡುವ ವಿಚಾರವಾಗಿ ಮಾತ್ರ  ಜಾರಿಗೊಳಿಸುವುದು ಎಂದು ತಿಳಿಸಿಸಿದ್ದಾರೆಯೇ ಹೊರತು ಇನ್ನುಳಿದ ಮುಷ್ಕರ ಸಂದರ್ಭದಲ್ಲಿ ಆಗಿರುವ ಯಾವುದೇ ವಿಷಯಕ್ಕೆ ನೌಕರರಿಗೆ ಒಳ್ಳೆಯ ವಿಷಯ ಏನು ಕೊಟ್ಟಿಲ್ಲ.

ಹೀಗಾಗಿ ಸರ್ಕಾರ ಇಲ್ಲಿಯ ತನಕ ಹಲವಾರು ಸಭೆಗಳನ್ನು ಮಾಡಿದೆ. ತಿಂಗಳಿಗೆ ಎರಡು ಮೂರು ಸಭೆಗಳನ್ನು ನಡೆಯುತ್ತಲೇ ಇದೆ. ಆದರೆ ನೌಕರರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸಮಗ್ರ ವರದಿಯನ್ನು ಮಾಡುವ ಮೂಲಕ ಸತ್ಯವನ್ನು ಹೊರಗೆಳೆಯುತ್ತತಿರುವ  ವಿಜಯಪಥ  ನೌಕರರ ಪಾಲಿನ ದೀಪವಾಗಿದೆ. ಹೀಗಾಗಿ ವಿಜಯಪಥ ಸಂಪಾದಕರು ಮತ್ತು ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ ಎಂದಿರುವ ನೌಕರರು, ಎಎಪಿ ಕರೆ ನೀಡಿರುವ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದನ್ನು ಬೆಂಬಲಿಸೋಣ ಎಂದು ತಿಳಿಸಿದ್ದಾರೆ.

Leave a Reply

error: Content is protected !!
LATEST
ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ