ನಮ್ಮಜಿಲ್ಲೆನಮ್ಮರಾಜ್ಯ

KSRTC ಅಧಿಕಾರಿಗಳ ಮುಂದೆ ಮಂಡಿಯೂರಿ ಕುಳಿತುಕೊಳ್ಳುವ ಸ್ಥಿತಿಗೆ ನಮ್ಮನ್ನು ತರಬೇಡಿ- ಸಂಘಟನೆಗಳ ಮುಖಂಡರಿಗೆ ಚಾಲನಾ ಸಿಬ್ಬಂದಿಗಳ ಎಚ್ಚರಿಕೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲಿ ವೇತನ ಪರಿಷ್ಕರಣೆ ಸಂಬಂಧ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಮುಷ್ಕರಕ್ಕೆ ಚಾಲಕ ಮತ್ತು ನಿರ್ವಾಹಕರು ಇನ್ನು ಅಲ್ಪಸಲ್ಪ ಮೆಕ್ಯಾನಿಕ್ ಇವರಷ್ಟೇ ಏಕೆ ಸಾಥ್‌ ಕೊಡಬೇಕು ಸಂಘಟನೆಗಳ ಮುಖಂಡರೆ.

ಕಾರ್ಮಿಕ ಕಾಯ್ದೆಯಡಿ ಚಾಲನಾ ಸಿಬ್ಬಂದಿಗಳನ್ನು ಯಾರನ್ನು ಹೇಳದೆ ಕೇಳದೆ ನಿಮ್ಮಿಷ್ಟಕ್ಕೆ ನೀವೆ ಸೇರಿಸಿಕೊಂಡು ಈಗ ಅಧಿಕಾರಿಗಳು ಮುಷ್ಕರಕ್ಕೆ ಬರುವಂತಿಲ್ಲ ನೀವು ಮಾತ್ರ ಮಾಡಬೇಕು ಎಂದು ನೌಕರರ ನಂಬಿಸಿಕೊಂಡು ಹತ್ತಾರು ವರ್ಷಗಳಿಂದ ಚಾಲನಾ ಸಿಬ್ಬಂದಿಗಳ ಬೀದಿಗೆ ತಂದು ನಿಲ್ಲಿಸಿ ಮತ್ತೆ ಅವರು ಡ್ಯೂಟಿಗೆ ಹೋಗದಂತೆ ಮಾಡುತ್ತಿರುವ ಎಲ್ಲ ಸಂಘಟನೆಗಳ ಮುಖಂಡರಾದ ನಿಮಗೆ ನಾಚಿಕೆ ಆಗುವುದಿಲ್ಲವೆ ಎಂದು ಪ್ರಜ್ಞಾವಂತ ಚಾಲನಾ ಸಿಬ್ಬಂದಿ ಪ್ರಶ್ನಿಸಿದ್ದಾರೆ.

ಇನ್ನು ನೀವು ಇವರನ್ನು ಕರೆದು ಮುಷ್ಕರಕ್ಕೆ ಕರೆ ನೀಡುತ್ತೀರಿ ನಿಮ್ಮನ್ನು ನಂಬಿಕೊಂಡು ಹೋರಾಟಕ್ಕೆ ಇಳಿಯುವ ಇವರಿಗಷ್ಟೇ ಸಂಬಳ ಜಾಸ್ತಿಯಾಗುತ್ತದೆಯೇ? ಅಧಿಕಾರಿಗಳಿಗಳಿಗೆ ಆಗುವುದಿಲ್ಲವೇ ಎಂದು ಆಕ್ರೋಶದಿಂದಲೇ ಪ್ರಶ್ನಿಸಿದ್ದಾರೆ.

ನೋಡಿ ಸಂಬಳ ಜಾಸ್ತಿಯಾಗುವುದು ವಿಭಾಗೀಯ ನಿಯಂತ್ರಣಾಧಿಕಾರಿಗಳು, ಘಟಕ ವ್ಯವಸ್ಥಾಪಕರು, ಸಂಚಾರಿ ಅಧೀಕ್ಷಕರು, ಸಂಚಾರಿ ನಿರೀಕ್ಷಕರು, AWS, ADM ಆಡಳಿತ ಶಾಖೆಯವರು, ಟಿಕೆಟ್ ಆಡಳಿತ ಶಾಖೆಯವರು ಇವರಿಗೆಲ್ಲ. ಆದರೆ ಇವರೆಲ್ಲರೂ ಮುಷ್ಕರ ದಿನ ಕರ್ತವ್ಯ ಮಾಡುತ್ತಾರೆ ಘಟಕದಲ್ಲಿ ಇವರಿಗೆ ನಾವುಗಳು ಚಾಲಕ, ನಿರ್ವಾಹಕರು ಬೀದಿಗಿಳಿದು ಹೋರಾಟ ಮಾಡಿ ಸಂಬಳ ಜಾಸ್ತಿ ಮಾಡಿಸಿ ಕೊಡಬೇಕಾ? ನಾಚಿಕೆ ಆಗಬೇಕು, ಮೊದಲು ಚಾಲಕ ನಿರ್ವಾಹಕರಿಗೆ… ಎಂದು ತಮ್ಮನ್ನು ತಾವೇ ಶಪಿಸಿಕೊಂಡಿದ್ದಾರೆ.

ಇನ್ನು ಇವರೆಲ್ಲರಿಗೂ ಸಂಬಳ ಜಾಸ್ತಿ ಆಗುತ್ತೆ? ಇವರು ಸಹ ಮುಷ್ಕರ ದಿನ ಘಟಕಕ್ಕೆ ಯಾರು ಹೋಗಬಾರದು ವಿಶೇಷವಾಗಿ ಮುಷ್ಕರದಂದು ಘಟಕದ ಗೇಟ್‌ಗಳನ್ನು ಓಪನ್ ಮಾಡಬಾರದು ಅದು ಬಂದ್, ಅದು ಮುಷ್ಕರ ಅದನ್ನು ಬಿಟ್ಟು ಚಾಲಕ, ನಿರ್ವಾಹಕ, ಮೆಕ್ಯಾನಿಕ್ ಮಾತ್ರ ಮುಷ್ಕರಕ್ಕೆ ಭಾಗಿಯಾಗಿದ್ದಾರೆಂದು ಅವರನ್ನು ಅವರಿಗೆ ಗುರಿಯಾದವರನ್ನು ಅಮಾನತು ಇಂಕ್ರಿಮೆಂಟ್ ಕಡಿತಮಾಡಿ, ವಜಾ, ವರ್ಗಾವಣೆ ಜತೆಗೆ ಪೊಲೀಸ್‌ ಕೇಸ್‌ ಹಾಕಿ ಹಿಂಸೆಕೊಡುವುದು.

ಈ ರೀತಿ ಹಲವಾರು ಶಿಕ್ಷೆಗಳನ್ನು ಕೊಡುತ್ತಾರೆ ಇದು ನಮಗೆ ಬೇಕಾ??? ಆದಕಾರಣ ಯಾವುದೇ ಕಾರಣಕ್ಕೂ ಯಾರೇ ಆಗಲಿ ಚಾಲಕ, ನಿರ್ವಾಹಕರು ನಾವು ಮುಸ್ಕರಕ್ಕೆ ಭಾಗವಹಿಸುವುದಿಲ್ಲ ಎಂದು ಖಂಡಿತವಾಗಿ ಧೈರ್ಯದಿಂದ ಹೇಳಿ.

ಚಾಲಕ, ನಿರ್ವಾಹಕರು ಇನ್ನು ಮುಂದೆ ಮುಷ್ಕರಕ್ಕೆ ಭಾಗವಹಿಸಬೇಕೆಂದರೆ ಮೊದಲು ಆಡಳಿತ ಮಂಡಳಿಯವರು ಬೀದಿಗಿಳಿಬೇಕು. ಅಧಿಕಾರಿಗಳು ಬೀದಿಗಳಿಗೆ ಬೇಕು ಸರ್ಕಾರದ ವಿರುದ್ಧ. ಅವಾಗ ಚಾಲಕ ಮತ್ತು ನಿರ್ವಾಹಕ, ಮೆಕ್ಯಾನಿಕ್ ಸಹ ಸಾಥ್ ಕೊಡ್ತಾರೆ, ಇಲ್ಲದಿದ್ದರೆ ಈ ನಿಮ್ಮ ನವರಂಗಿ ಆಟಕ್ಕೆ ಏಳು ಜನ್ಮ ಬಂದರು ಸಾಥ್‌ ಕೊಡುವುದಿಲ್ಲ.

ಹೀಗೆ ಚಾಲಕ ನಿರ್ವಾಹಕರು ಇನ್ನು ಮುಂದೆ ಬಹಿರಂಗವಾಗಿ ಹೇಳುತ್ತಾರೆ. ನಾವು ಮುಷ್ಕರ ದಿನ ಡ್ಯೂಟಿ ಮಾಡ್ತೀವಿ ಎಂದು ಏಕೆಂದರೆ ನಮಗೂ ಕುಟುಂಬವಿದೆ. ನಾವು ಸಮಾಜದಲ್ಲಿ ಘನತೆ ಗೌರವವನ್ನು ಕಾಪಾಡಿಕೊಳ್ಳಬೇಕಿದೆ. ಹೀಗಾಗಿ ಎಲ್ಲರಿಗಾಗಿ ನಾವು ನಮಗಾಗಿ ಎಲ್ಲರೂ ಎಂಬ ಧ್ಯೇಯವಾಕ್ಯದೊಂದಿಗೆ ಅಧಿಕಾರಿಗಳು ಸಾಥ್‌ ನೀಡಿದರೆ ನಾವು ಸಾಥ್‌ ನೀಡುತ್ತೇವೆ ಇಲ್ಲದಿದ್ದೆ ನಿಮಗೆ ಆದಾಗಲೇ ನಮಗೂ ವೇತನ ಪರಿಷ್ಕರಣೆ ಆಗಲಿ ಎಂದು ಹೇಳುತ್ತಿದ್ದಾರೆ.

ಹೀಗಾಗಿ ಸಾರಿಗೆ ಕಾರ್ಮಿಕರ ನೌಕರರ ಸಂಘಟನೆಗಳ ಮುಖಂಡರು ಈ ಬಗ್ಗೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ ನಿಮಗೆ ಇಷ್ಟ ಬಂದಂತೆ ಮುಷ್ಕರಕ್ಕೆ ಕರೆ ನೀಡಿ ನಮ್ಮನ್ನು ಬೀದಿಪಾಲು ಮಾಡಿ ನಾವು ಅಧಿಕಾರಿಗಳ ಮುಂದೆ ಮಂಡಿಯೂರಿ ಕುಳಿತುಕೊಳ್ಳುವ ಸ್ಥಿತಿಗೆ ನಮ್ಮನ್ನು ತರಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.

Deva
the authorDeva

Leave a Reply

error: Content is protected !!
Latest news
ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತರಿಗೆ 6 ಕೋಟಿ ರೂ. ಭಾರಿ ನಗದು ಬಹುಮಾನ: ಕ್ರೀಡಾಪಟುಗಳ ಬದುಕಿಗೆ ಭರವಸೆ ನೀಡಿದ ಸಿಎಂ BMTC: ಮಹಿಳಾ ಕಂಡಕ್ಟರ್‌ಗಳಿಗೆ ಶೇ.33ರಷ್ಟು ಮುಂಬಡ್ತಿ ಮೀಸಲಾತಿ ಅಸಾಧ್ಯ- ಸಂಸ್ಥೆ ನಿಯಮದಲ್ಲೂ ಇಲ್ಲ ಅವಕಾಶ ಎಂದ ಸಿಪಿಎ... ಶಕ್ತಿಯೋಜನೆಗಾಗಿ ರಾಜಸ್ಥಾನದ ಆಧಾರ್‌ ಕಾರ್ಡ್‌ಗೆ ಬೆಂಗಳೂರು ನಿವಾಸಿ ಎಂಬ ನಕಲಿ ಕಾರ್ಡ್‌ ಸೃಷ್ಟಿಸಿಕೊಂಡು ಮಹಿಳೆ ಓಡಾಟ! BMTC ಘಟಕ 29: ಡಿಪೋ ಆವರಣದಲ್ಲಿ ಎಲೆಕ್ಟ್ರಿಕ್ ಬಸ್ ಡಿಕ್ಕಿ- ಚಾಲಕನಿಗೆ ತೀವ್ರ ಗಾಯ ತಿ.ನರಸೀಪುರ: ಯುವಕನ ಕಿರುಕುಳದಿಂದ ಮದುವೆ ನಿಶ್ಚಯವಾಗಿದ್ದ ಯುವತಿ ಜತೆಗೆ ಅಪ್ಪಅಮ್ಮ ಆತ್ಮಹತ್ಯೆ ತಿ.ನರಸೀಪುರ: ವಿದ್ಯುತ್‌ ಖಾಸಗೀಕರಣ ವಿರೋಧಿಸಿ ರೈತರ ಪ್ರತಿಭಟನೆ ತಹಸೀಲ್ದಾರ್‌ಗೆ ಮನವಿ ಚಾಲನೆಯಲ್ಲಿದ್ದ ಬಸ್‌ನ ಸ್ಟೇರಿಂಗ್‌ ಹಿಡಿದ ಕುಡುಕ- ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಬಸ್‌ ಡಿಕ್ಕಿ, 11 ಮಂದಿಗೆ ಗಂಭೀರ... KSRTC: ಶೇ.44 ರಷ್ಟು ಬಸ್‌ ಪ್ರಯಾಣ ದರ ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಗೃಹಜ್ಯೋತಿಯಿಂದ ಸರ್ಕಾರಿ ನೌಕರರ ಹೊರಗಿಡಲು ಸರ್ಕಾರದ ಚಿಂತನೆ ಸರ್ಕಾರಿ ನೌಕರಿ ಮಹಿಳೆಯರಿಗೆ ಇನ್ನು ಮುಂದೆ ಸಿಗಲ್ವ ಶಕ್ತಿ ಯೋಜನೆಯ ಉಚಿತ ಪ್ರಯಾಣ?