NEWSಸಂಸ್ಕೃತಿಸಿನಿಪಥ

ಮರಂಕಿ ಸಾಲುಂಡಿ ಎಂಬ ಪುಟ್ಟ ಹಳ್ಳಿಗೆ ಆಧುನಿಕತೆ ಸ್ಪರ್ಶ ನೀಡಿದ ಮಾಯಾ ಜಿಂಕೆ

ಪರಸಂಗದ ಗೆಂಡೆತಿಮ್ಮ: ಕೃತಿ ಬಿಡುಗಡೆ, ಪ್ರದರ್ಶನ

ವಿಜಯಪಥ ಸಮಗ್ರ ಸುದ್ದಿ

ನ್ನಡದ ಸೃಜನಶೀಲ ಲೇಖಕ ಕೃಷ್ಣ ಆಲನಹಳ್ಳಿ ಅವರ ಅನನ್ಯ ಕಾದಂಬರಿ ಪರಸಂಗದ ಗೆಂಡೆತಿಮ್ಮ ಕಥಾವಸ್ತು 60 ರ ದಶಕದ್ದು. ಜೀವನೋಪಾಯಕ್ಕೆ ಮೈಸೂರಿನ ಸುತ್ತಮುತ್ತಲ ಹಳ್ಳಿಗಳಲ್ಲಿ ದಿನಬಳಕೆಯ ವಸ್ತುಗಳನ್ನು ಬುಟ್ಟಿಯಲ್ಲಿ ಹೊತ್ತು ವ್ಯಾಪಾರ ಮಾಡುತ್ತಿದ್ದ ಗೆಂಡೆತಿಮ್ಮ. ಈತನ ಸಂಗಾತಿಯಾಗಿ ಬಂದ ಮರಂಕಿ ಪ್ಯಾಟೆ ಹೆಣ್ಣು. ಮರಂಕಿ ಸಾಲುಂಡಿ ಎಂಬ ಪುಟ್ಟ ಹಳ್ಳಿಗೆ ಆಧುನಿಕತೆಯ ಸ್ಪರ್ಶ ನೀಡಿದ ಮಾಯಾ ಜಿಂಕೆ.

ಸಾಲುಂಡಿ, ಪ್ಯಾಟೆ ಸೋಕಿಗೆ ಮನಸೋತ ಗೌವಳ್ಳಿ ಹೆಣ್ಣುಮಕ್ಕಳ ಕಂಡ ವ್ಯಾದಿಗ್ರಸ್ತ ಮನಸುಗಳು ಉಂಟುಮಾಡಿದ ತಲ್ಲಣ, ಅಸಹನೆ, ವಿಪ್ಲವ ಇಡೀ ಹಳ್ಳಿಯ ನೆಮ್ಮದಿಗೆ ಭಂಗ ಉಂಟು ಮಾಡಿ ಮರಂಕಿ – ಗೆಂಡೆತಿಮ್ಮನ ಬದುಕಿಗೆ ಕೊಳ್ಳಿ ಇಟ್ಟವು. ಮರಂಕಿಯ ಮೂಲಕ ಗ್ರಾಮೀಣ ಪ್ರದೇಶಕ್ಕೆ ಕಾಲಿಟ್ಟ ಆಧುನಿಕತೆ ಇಂದು ವಿಶ್ವದಾದ್ಯಂತ ವ್ಯಾಪಿಸಿ ನೆಲಮೂಲ ಸಂಸ್ಕೃತಿಯನ್ನೇ ಅಲುಗಾಡಿಸುತ್ತಿರುವುದು ವಿಪರ್ಯಾಸ.

ಪರಸಂಗದ ಗೆಂಡೆತಿಮ್ಮ ಕಥಾವಸ್ತುವಿನ ಕಾಲಘಟ್ಟ, ಜೀವನಕ್ರಮ ಇಂದಿನ ಪೀಳಿಗೆಗೆ ತಿಳಿಸುವುದೇ ಈ ರಂಗಕೃತಿ ಮತ್ತು ರಂಗಪ್ರಯೋಗದ ಉದ್ದೇಶ. ಈ ರಂಗರೂಪವನ್ನು ಸಿದ್ಧಗೊಳಿಸಿರುವ ಡಾ. ಎಂ.ಬೈರೇಗೌಡ ಗ್ರಾಮೀಣ ಹಿನ್ನೆಲೆಯಿಂದ ಬಂದ ದೇಸಿ ಪ್ರತಿಭೆ. ಜಾನಪದ ತಜ್ಞ, ಅಧ್ಯಾಪಕ, ನಾಟಕಕಾರ, ಕವಿ, ನಟ, ನಿರ್ದೇಶಕ, ಪ್ರಕಾಶಕ ಹೀಗೆ ಬಹುಮುಖ ಪ್ರತಿಭೆಯ ಡಾ ಎಂ.ಬೈರೇಗೌಡರು ಕಾದಂಬರಿಯನ್ನು ಯಶಸ್ವಿಯಾಗಿ ರಂಗಕ್ಕೆ ಅಳವಡಿಸಿದ್ದಾರೆ.

ಈಗಾಗಲೇ ಮೂರು ಯಶಸ್ವೀ ಪ್ರದರ್ಶನಗಳನ್ನು ಕಂಡ ಪರಸಂಗದ ಗೆಂಡೆತಿಮ್ಮ ನಾಟಕದ ನಾಲ್ಕನೇ ಪ್ರದರ್ಶನ ಇದೇ ಜುಲೈ ತಿಂಗಳ 4ನೇ ತಾರೀಖು ಸಂಜೆ 6 ಗಂಟೆಗೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಮರುಪ್ರದರ್ಶನ ಆಗುತ್ತಿದೆ. ಜೊತೆಗೆ ಬೆಂಗಳೂರಿನ ಪ್ರಗತಿ ಗ್ರಾಫಿಕ್ಸ್ ಪ್ರಕಟಿತ ಡಾ. ಎಂ. ಬೈರೇಗೌಡರ ರಂಗರೂಪದ ಪರಸಂಗದ ಗೆಂಡೆತಿಮ್ಮ ಕೃತಿ ಬಿಡುಗಡೆ ಕಾರ್ಯಕ್ರಮ ಕೂಡ ನೆರವೇರಲಿದೆ.

ಹಿರಿಯ ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ, ಕೃಷ್ಣ ಆಲನಹಳ್ಳಿ ಅವರ ಮಗ ಪ್ರಧ್ಯುಮ್ನ, ನಾಟಕಕಾರ ಡಾ. ಎಂ. ಬೈರೇಗೌಡ, ಕತೆಗಾರ-ಚಲನಚಿತ್ರ ನಿರ್ದೇಶಕ ಕೃಷ್ಣ ಮಾಸಡಿ, ರೂಪಾಂತರದ ವಿ. ಗಂಗಾಧರ್, ಕೆ. ಕನಕರಾಜ್ ಉಪಸ್ಥಿತರಿರುವರು ಎಂದು ರಂಗನಿರ್ದೇಶಕ ಹಾಗೂ ರೂಪಾಂತರದ ಕೆ.ಎಸ್.ಡಿ.ಎಲ್. ಚಂದ್ರು ತಿಳಿಸಿದ್ದಾರೆ.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ