NEWSನಮ್ಮರಾಜ್ಯಸಂಸ್ಕೃತಿ

ಇದು ವಿಚಿತ್ರವಾದರೂ ಸತ್ಯ: ನಾಲ್ಕು ತಲೆ ಮಾರಿನ ನಂತರ ಮತ್ತೆ ಹುಟ್ಟಿದಳು ಈಕೆ !

ಹಿಂದಿನ ಜನ್ಮದಲ್ಲಿ ಮೇಗೂರಿನಲ್ಲಿ, ಈ ಜನ್ಮದಲ್ಲಿ ಬೆಂಗಳೂರಿನಲ್ಲಿ ಜನನ

ವಿಜಯಪಥ ಸಮಗ್ರ ಸುದ್ದಿ

ಕೊಪ್ಪ: ಈ ಜನ್ಮದಲ್ಲಿ ಬೆಂಗಳೂರಿನಲ್ಲಿ ಹುಟ್ಟಿರುವ ಯುವತಿಯೊಬ್ಬಳು ಕಳೆದ ನಾಲ್ಕು ತರೆಮಾರಿನಲ್ಲಿ ಚಿಕ್ಕಮಗಳೂರಿನ ಕೊಪ್ಪ ತಾಲೂಕು ಮೇಗೂರಿನಲ್ಲಿ ಹುಟ್ಟಿದಾಗಿ ಹೇಳಿದ್ದಾಳೆ.

ಅದಷ್ಟೇ ಅಲ್ಲ ಆ ಊರಿನ ಪರಿಚಯವೇ ಈ ಜನ್ಮದಲ್ಲಿ ಇರದ ಈಕೆ ತನ್ನ ತಂದೆ ತಾಯಿಯರನ್ನು ಮೇಗೂರಿ ನನ್ನನ್ನು ಕರೆದುಕೊಂಡು ಹೋಗಿ ಎಂದು ವಿಚಿತ್ರವಾಗಿ ಬೇಡಿಕೆ ಇಟ್ಟಿದ್ದಾಳೆ. ಅದನ್ನು ಕೇಳಿದ ಪಾಲಕರಿಗೆ ಆಶ್ಚರ್ಯದ ಜತೆಗೆ ಆತಂಕವು ಉಂಟಾಯಿತು. ಆದರೂ ಆ ಊರಿಗೆ ಹೋಗುವುದು ಬೇಡ ಎಂದು ಪಾಲಕರು ಹೇಳಿದರು. ಅದಕ್ಕೆ ಒಪ್ಪದ ಆಕೆ ಮೇಗೂರಿ ಹೋಗಲೇ ಬೇಕು ಎಂದು ಹಠಹಿಡಿದಳು.

ಆಕೆಯ ಹಠಕ್ಕೆ ಮಣಿದ ಪಾಲಕರು ಭಾನುವಾರ (ಆಗಸ್ಟ್‌ 30) ಆಕೆಯನ್ನು ಈ ಗ್ರಾಮಕ್ಕೆ ಕರೆತಂದಿದ್ದರು. ವಿಶೇಷವೆಂದರೆ ಈ ಯುವತಿ ಮೇಗೂರಿಗೆ ಹೊರಗಿನವಳಾಗಿದ್ದರೂ ಅಲ್ಲಿನ ಎಲ್ಲಾ ಬೀದಿ, ದೇವಾಲಯಗಳ ಪರಿಚಯವಿದೆ.  ಮೇಗೂರು ತನ್ನ ಹಿಂದಿನ ಜನ್ಮದಲ್ಲಿನ ಊರು ಎಂದೂ ಹೇಳುತ್ತಿದ್ದಾಳೆ.

ಜಾವಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಗೂರಿಗೆ ಭಾನುವಾರ ಬೆಂಗಳೂರಿನ ಹೆಬ್ಬಾಳ ಸಮೀಪದ  ನಾಗವಾರದಿಂದ ಬಂದ  ಈಕೆ ಕಳೆದ ಕೆಲವು ತಿಂಗಳುಗಳಿಂದ, ವಿಚಿತ್ರವಾಗಿ ವರ್ತಿಸುತ್ತಿದ್ದಳು. ಅಲ್ಲದೆ ಊಟ ತಿಂಡಿಯನ್ನೂ ಸರಿಯಾಗಿ ಮಾಡುತ್ತಿರಲಿಲ್ಲ ಎಂದು ಹೆತ್ತರವರು ಹೇಳಿದರು.

ಆಕೆ  ನಾಲ್ಕು ತಲೆಮಾರುಗಳ ಹಿಂದೆ ಮೇಗೂರಿನಲ್ಲಿದ್ದ ಅರ್ಚಕರ ಮಗಳಾಗಿ ಜನಿಸಿದ್ದೆ, ಆ ಸ್ಥಳವನ್ನೊಮ್ಮೆ ನೋಡಬೇಕು ಎಂದು ಬಯಸುವುದಾಗಿ ಹೇಳಿದ್ದಾಳೆ.

ಹೆತ್ತವರು ಒತ್ತಡಕ್ಕೆ ಮಣಿದು ಮೇಗೂರು ಅಮೃತೇಶ್ವರ ದೇವಾಲಯಕ್ಕೆ ಮಗಳನ್ನು ಕರೆತಂದಿದ್ದಾರೆ. ಆ ಸ್ಥಳ ತಲುಪುತ್ತಿದ್ದ ಹಾಗೆಯೇ ಆಕೆಯಲ್ಲಿ ಬದಲಾವಣೆ ಕಾಣಿಸಿತು. ಅಲ್ಲದೆ ಯುವತಿ ಸಹಜ ಸ್ಥಿತಿಗೆ ಮರಳಿದ್ದಾಳೆ.

ಆದರೆ ಯುವತಿ ಹೇಳಿದಂತೆ ದೇವಾಲಯದ ಅರ್ಚಕರಾರೂ ನಮ್ಮಲ್ಲಿದ್ದದ್ದು ನಮಗೆ ಅರಿವಿಲ್ಲ ಎಂದು ಗ್ರಾಮದ ಹಿರಿಯ ಚನ್ನಕೇಶವ ಗೌಡ ಎನ್ನುವವರು ಹೇಳಿದ್ದಾರೆ. ಆದರೆ ಈಕೆಗೆ ಈ ಗ್ರಾಮದ ಪ್ರತಿ ಬೀದಿಯ ಪರಿಚಯ ಇರಲು ಹೇಗೆ ಸಾಧ್ಯ ಇದನ್ನು ನೋಡಿದರೆ ಈಕೆ ಮರು ಜನ್ಮ ಪಡೆದಿರುವುದು ನಿಜ ಎಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದರು.

Leave a Reply

error: Content is protected !!
LATEST
KSRTC ನಿರ್ದೇಶಕರ ಆದೇಶಕ್ಕೂ ಕಿಮ್ಮತ್ತಿಲ್ಲ: ಅಮಾನತು ತೆರವು ಮಾಡದೆ ಚಾಲಕನಿಗೆ ಮಾನಸಿಕ ಹಿಂಸೆ ಕೊಡುತ್ತಿರುವ ತುಮಕೂರು ... ಪ್ರಜ್ವಲ್ ರೇವಣ್ಣ ಪ್ರಕರಣ: ಅಶ್ಲೀಲ ವಿಡಿಯೋಗಳ ಹಂಚಿಕೆ ಅತ್ಯಂತ ಪಾಪ ಕೃತ್ಯ, ಸಂತ್ರಸ್ತೆಯರಿಗೆ ಅವಮಾನ- ಹೈಕೋರ್ಟ್ ವಿಶ್ವವಿಖ್ಯಾತ ಮೈಸೂರು ದಸರಾ ಗಂಡಾನೆಗಳ ನಡುವೆ ಕಿತ್ತಾಟ: ದಿಕ್ಕಾಪಾಲಾಗಿ ಓಡಿದ ಜನರು ಬನ್ನೂರು: ಬಸವನಹಳ್ಳಿ ಬಳಿ ಬೈಕ್‌ಗೆ ಡಿಕ್ಕಿ ಹೊಡೆದ ಹೆಣ್ಣು ಚಿರತೆ ಸಾವು ಅ.3ರಿಂದ ಶಾಲೆಗಳಿಗೆ ದಸರಾ ರಜೆ: ಶಾಲಾ ಶಿಕ್ಷಣ ಇಲಾಖೆ ಆದೇಶ BMTC ನೌಕರರ ₹400 ಕೋಟಿ ಗ್ರಾಚ್ಯುಟಿ, ಗಳಿಕೆ ರಜೆ ನಗದೀಕರಣ ಬಿಡುಗಡೆಗೆ ಮೀನಮೇಷ..!! KSRTC ಬಸ್‌ ರಿಪೇರಿ ಮಾಡಿದ ಖರ್ಚಿನ ಬಿಲ್‌ನಲ್ಲಿ ಸ್ಕ್ರಾಪ್‌ನ ಹಣ ತೋರಿಸದೆ ಗುಳುಂ: ಕ್ರಮಕ್ಕಾಗಿ ಎಂಡಿಗೆ ದೂರು 160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್