ಬೆಂಗಳೂರು: ಸಾರಿಗೆ ಸಚಿವ ಶ್ರೀರಾಮುಲು ಅವರ ಮನೆಯಲ್ಲಿ ನ.10ರಂದು ಕೊಳ್ಳೇಗಾಲ ಶಾಸಕ ಮಹೇಶ್ ಮತ್ತು ಸಚಿವ ಶ್ರೀರಾಮುಲು ಅವರು ಚರ್ಚಿಸಿಸ ಬಳಿಕ ವಜಾ, ಅಮಾನತು, ವರ್ಗಾವಣೆ ಆದ ಸಾರಿಗೆ ನೌಕರರನ್ನು ಪುನರ್ ನೇಮಕ ಮಾಡುವ ಬಗ್ಗೆ ನಮ್ಮೊಂದಿಗೆ ಮಾತನಾಡಿದ್ದಾರೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಅಧ್ಯಕ್ಷ ಚಂದ್ರು ತಿಳಿಸಿದ್ದಾರೆ.
ಶ್ರೀರಾಮುಲು ಅವರು ಸಾರಿಗೆ ನೌಕರರ ಸಮಸ್ಯೆಗಳನ್ನು ಬಗೆಹರಿಸೇಕೆಂಬ ಜವಾಬ್ದಾರಿಯನ್ನು ಕೊಳ್ಳೇಗಾಲ ಶಾಸಕ ಮಹೇಶ್ ಅವರಿಗೆ ನೀಡಿದ್ದಾರೆ. ಅದರಂತೆ ಮಹೇಶ್ ಅವರು ನಾನು ಮತ್ತು ಕೂಟದ ಪದಾಧಿಕಾರಿಗಳ ಜತೆ ಚರ್ಚೆ ಮಾಡಿ ವಜಾ, ಅಮಾನತು, ವರ್ಗಾವಣೆ ನೌಕರರ ಬಗ್ಗೆ ಮಾತನಾಡಲು ನಿನ್ನೆ (ನ.11) ಮಧ್ಯಾಹ್ನ 2 ಗಂಟೆಗೆ ಸಾರಿಗೆ ಅಧಿಕಾರಿಗಳೊಂದಿಗೆ ಸಭೆ ನಿಗದಿಪಡಿಸಿದ್ದರು.
ಮಹೇಶ್ ಅವರ ನೇತೃತ್ವದಲ್ಲಿ ಸಾರಿಗೆ ಅಧಿಕಾರಿಗಳು ಮತ್ತು ನಮ್ಮೊಂದಿಗೆ ನಿಗದಿಪಡಿಸಿದ ಸಮಯದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ವಜಾ ಆದ ಎಲ್ಲಾ ನೌಕರರು ಹತ್ತು ದಿನದ ಒಳಗೆ ಲೇಬರ್ ಕೋರ್ಟ್ನಲ್ಲಿ ಕೇಸ್ ಹಾಕಬೇಕು. ನಂತರ ಲೋಕ ಅದಾಲತ್ ಗೆ ಒಂದು ದಿನಾಂಕವನ್ನು ನಿಗದಿಪಡಿಸಿ ಅಂದು ಎಲ್ಲಾ ನೌಕರರನ್ನು ಪುನರ್ ನೇಮಕ ಮಾಡುತ್ತೇವೆ ಎಂದು ಲೇಬರ್ ಅಧಿಕಾರಿಗಳು ಹೇಳಿದ್ದಾರೆ.
ಹೀಗಾಗಿ ವಜಾ ಆದ ನೌಕರರು ಇದೇ ನವೆಂಬರ್ 20 ರೊಳಗೆ ಲೇಬರ್ ಕೋರ್ಟ್ನಲ್ಲಿ ಅರ್ಜಿ ಹಾಕಬೇಕು. ಬಿಎಂಟಿಸಿ ನೌಕರರು ಬೆಂಗಳೂರು ಲೇಬರ್ ಕೋರ್ಟ್ನಲ್ಲಿ ಹಾಕಬೇಕು. ಉಳಿದ ksrtc,kkrtc,nwkrtc ವಜಾ ಆದ ನೌಕರರು ತಮ್ಮ ತಮ್ಮ ಜಿಲ್ಲೆಗಳ ಲೇಬರ್ ಕೋರ್ಟ್ನಲ್ಲಿ ಅರ್ಜಿ ಹಾಕಬೇಕು.
ಇನ್ನು ವರ್ಗಾವಣೆ ಆದ ನೌಕರರ ಬಗ್ಗೆ ಒಂದು ವಾರದಲ್ಲಿ ಎಂಡಿಗಳ ಜೊತೆಯಲ್ಲಿ ಸಭೆ ಏರ್ಪಡಿಸಿ ಅದನ್ನು ಬಗೆಹರಿಸುವುದಾಗಿ ಮಹೇಶ್ ಭರವಸೆ ನೀಡಿದ್ದಾರೆ.
ವಜಾ ಆದ ಎಲ್ಲಾ ನೌಕರರು ಲೇಬರ್ ಕೋರ್ಟ್ನಲ್ಲಿ ನ.20ರ ಒಳಗೆ ಅರ್ಜಿ ಹಾಕಬೇಕು. ಪ್ರಕರಣ ದಾಖಲಿಸದ ನೌಕರರಿಗೆ ಪುನರ್ ನೇಮಕಕ್ಕೆ ಅವಕಾಶ ಇರುವುದಿಲ್ಲ. ಆದ್ದರಿಂದ ವಜಾ ಆದ ನೌಕರರು ಲೇಬರ್ ಕೋರ್ಟ್ನಲ್ಲಿ ಕೇಸು ದಾಖಲಿಸಿ ಎಂದು ಕೂಟದ ಅಧ್ಯಕ್ಷ ಚಂದ್ರ ಮನವಿ ಮಾಡಿದ್ದಾರೆ.