NEWSನಮ್ಮರಾಜ್ಯಸಂಸ್ಕೃತಿ

ಇಂದಿನಿಂದ ಮಾದಪ್ಪನ ದರ್ಶನ ಪುನರಾರಂಭ

ವಿಜಯಪಥ ಸಮಗ್ರ ಸುದ್ದಿ

ಮಲೈ ಮಹದೇಶ್ವರ ಬೆಟ್ಟ: ಇಂದಿನಿಂದ ವಾರದ ಎಲ್ಲ ದಿನಗಳೂ ಶ್ರೀ ಮಲೈ ಮಹದೇಶ್ವರ ಸ್ವಾಮಿ ದೇವಾಲಯವು ಭಕ್ತಾದಿಗಳಿಗೆ‌ ತೆರೆದಿರುತ್ತದೆ ಎಂದು ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವ ಸ್ವಾಮಿ ತಿಳಿಸಿದ್ದಾರೆ.

ಭಾನುವಾರ ಸಂಜೆ 7ರವರೆಗೆ ತೆರೆಯಲಿದ್ದು, ಸೋಮವಾರದಿಂದ ಬೆಳಗ್ಗೆ 4 ರಿಂದ ರಾತ್ರಿ‌‌ 10ರವರೆಗೆ ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಪತ್ರಿಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಂದು ಸಂಜೆ‌ 5ರಿಂದ ಪ್ರಾಯೋಗಿಕವಾಗಿ  ನಾಗಮಲೈ ಭವನದಲ್ಲಿ ಮಾತ್ರ ಮೊದಲು ಬಂದವರಿಗೆ ಮೊದಲ ಆದ್ಯತೆ ಮೇರೆಗೆ ಭಕ್ತಾದಿಗಳಿಗೆ ರಾತ್ರಿ‌ ತಂಗಲು ಕೊಠಡಿಗಳನ್ನು ನೀಡಲಾಗುವುದು.

ದರ: ಎ.ಸಿ. ಕೊಠಡಿ – 950 ರೂ. ನಾನ್‌‌ ಎ.ಸಿ. – 500 ರೂ.

ದಾಸೋಹದಲ್ಲಿ ಬೆಳಗ್ಗೆ 7 ರಿಂದ ರಾತ್ರಿ 9ರವರೆಗೆ‌ ಉಪಾಹಾರ ಪ್ರಸಾದ ವಿತರಣೆ ವ್ಯವಸ್ಥೆ ಇದೆ. ನಿಧಾನವಾಗಿ ಬಸ್‌ಗಳೂ ಚಲಿಸಲಾರಂಭಿಸಬಹುದು.‌ ಸದ್ಯ‌ ಸ್ವಂತ ವಾಹನಗಳಲ್ಲಿ ಭಕ್ತರು  ಬರಬಹುದು ಎಂದು ತಿಳಿಸಿದ್ದಾರೆ.

ಏನೇನು ಇರಲಿದೆ ಇರಲ್ಲ

  • ಉತ್ಸವಗಳು ಇರುವುದಿಲ್ಲ.
  • ಮಾಸ್ಕ್ ಧರಿಸಿಯೇ ಬರಬೇಕು.
  • ಪ್ಲಾಸ್ಟಿಕ್ ಬಾಟಲ್ ತರಬಾರದು.
  • ಸಾಮಾಜಿಕ ಅಂತರ ಕಾಪಾಡಿಕೊಂಡು ದರ್ಶನ‌ ಪಡೆಯಬಹುದು.
  • ಪೂಜೆ ಮಾಡಿಸಬಹುದು.
  • ಸೋಮವಾರದಿಂದ ಬೆಳಿಗ್ಗೆ 4 ಕ್ಕೆ,‌ ಬೆಳಿಗ್ಗೆ‌ 10.30ಕ್ಕೆ, ಸಂಜೆ 6ಕ್ಕೆ ಅಭಿಷೇಕ ನಡೆಯಲಿದ್ದು ಅಭಿಷೇಕ ಮಾಡಿಸುವವರು ಮಾಡಿಸಬಹುದು ಆದರೆ ದೇವಾಲಯದ‌ ಒಳಗಡೆ ಕುಳಿತುಕೊಳ್ಳಲು ಅವಕಾಶವಿರುವುದಿಲ್ಲ.
  • ಲಾಡು ಪ್ರಸಾದ ಮತ್ತು ಮಿಶ್ರ ಪ್ರಸಾದ ಮಾರಾಟ ವ್ಯವಸ್ಥೆ ಇದೆ.
  • ಎಲ್ಲೆಡೆ ಶುದ್ಧಕುಡಿಯುವ ನೀರಿನ‌ ಘಟಕಗಳು ಕಾರ್ಯ ನಿರ್ವಹಿಸಲಿವೆ.‌ ಅದರ ಸದುಪಯೋಗ ಪಡೆದು ಪ್ರಾಧಿಕಾರದ ಆವರಣವನ್ನು ಸ್ವಚ್ಛವಾಗಿ ಇಡಲು ಭಕ್ತಾದಿಗಳು ಸಹಕರಿಸಲು ಕೋರಿದೆ.

ಯಾವುದೇ ಸಂದೇಹಗಳಿದ್ದಲ್ಲಿ ದೇವಾಲಯದ ಪಾರುಪತ್ತೇಗಾರ  ಮಹದೇವ ಸ್ವಾಮಿ ಅವರನ್ನು ( +919449490095 )  ಸಂಪರ್ಕಿಸಬಹುದು.

Leave a Reply

error: Content is protected !!
LATEST
ಬಿಬಿಎಂಪಿ ಮೈದಾನದ ಗೇಟ್ ಬಿದ್ದು 11 ವರ್ಷದ ಬಾಲಕ ಮೃತ KSRTC ಚಾ.ನಗರ ವಿ.ಕಾರ್ಯಾಗಾರದಿಂದ ಅಕ್ರಮವಾಗಿ ಖಾಸಗಿಯವರಿಗೆ ರವಾನೆಯಾದ ಇಂಜಿನ್‌ ಟ್ರಾಲಿ, ಸ್ಟ್ಯಾಂಡ್‌ ಫ್ರಿಡ್ಜ್‌ನಲ್ಲಿದ್ದ ಮಹಾಲಕ್ಷ್ಮೀ ದೇಹದ 32 ಪೀಸ್‌ಗಳು ಹೇಳುತ್ತಿವೆ ಭಯಾನಕ ಸತ್ಯ ಬಡವರು-ಮಧ್ಯಮ ವರ್ಗದವರಿಗೆ ಕೈಗೆಟುಕುವ ದರದಲ್ಲಿ ನಿವೇಶನ ವಿತರಣೆ: ಡಾ.ಬಸ್ತಿ ರಂಗಪ್ಪ KSRTC ನಿರ್ದೇಶಕರ ಆದೇಶಕ್ಕೂ ಕಿಮ್ಮತ್ತಿಲ್ಲ: ಅಮಾನತು ತೆರವು ಮಾಡದೆ ಚಾಲಕನಿಗೆ ಮಾನಸಿಕ ಹಿಂಸೆ ಕೊಡುತ್ತಿರುವ ತುಮಕೂರು ... ಪ್ರಜ್ವಲ್ ರೇವಣ್ಣ ಪ್ರಕರಣ: ಅಶ್ಲೀಲ ವಿಡಿಯೋಗಳ ಹಂಚಿಕೆ ಅತ್ಯಂತ ಪಾಪ ಕೃತ್ಯ, ಸಂತ್ರಸ್ತೆಯರಿಗೆ ಅವಮಾನ- ಹೈಕೋರ್ಟ್ ವಿಶ್ವವಿಖ್ಯಾತ ಮೈಸೂರು ದಸರಾ ಗಂಡಾನೆಗಳ ನಡುವೆ ಕಿತ್ತಾಟ: ದಿಕ್ಕಾಪಾಲಾಗಿ ಓಡಿದ ಜನರು ಬನ್ನೂರು: ಬಸವನಹಳ್ಳಿ ಬಳಿ ಬೈಕ್‌ಗೆ ಡಿಕ್ಕಿ ಹೊಡೆದ ಹೆಣ್ಣು ಚಿರತೆ ಸಾವು ಅ.3ರಿಂದ ಶಾಲೆಗಳಿಗೆ ದಸರಾ ರಜೆ: ಶಾಲಾ ಶಿಕ್ಷಣ ಇಲಾಖೆ ಆದೇಶ BMTC ನೌಕರರ ₹400 ಕೋಟಿ ಗ್ರಾಚ್ಯುಟಿ, ಗಳಿಕೆ ರಜೆ ನಗದೀಕರಣ ಬಿಡುಗಡೆಗೆ ಮೀನಮೇಷ..!!