NEWSನಮ್ಮಜಿಲ್ಲೆನಮ್ಮರಾಜ್ಯ

NWKRTC: ಮಾತು ತಪ್ಪಿದ ಅಧಿಕಾರಿಗಳು, ನೌಕರರ ನೋವುಗಳಿಗೆ ಸ್ಪಂದಿಸದ ಸಿಟಿಎಂ ವರ್ಗಾವಣೆಗೆ ಸಿಬ್ಬಂದಿ ವರ್ಗ ಪಟ್ಟು

ವಿಜಯಪಥ ಸಮಗ್ರ ಸುದ್ದಿ

ಹುಬ್ಬಳ್ಳಿ: ಕಳೆದ 2021ರ ಏಪ್ರಿಲ್‌ನಲ್ಲಿ ನಡೆದ ಮುಷ್ಕರದ ಹಿನ್ನೆಲೆಯಲ್ಲಿ ಅನೇಕರು ವಜಾ, ಅಮಾನತು, ವರ್ಗಾವಣೆ ಆದವರು ತಮ್ಮ ವಾಯುವ್ಯ ಸಾರಿಗೆಯಲ್ಲಿ ಇನ್ನೂ ಮೂಲ ಘಟಕಕ್ಕೆ ಮರಳುವ ಆದೇಶಗಳು ಸಂಪೂರ್ಣವಾಗಿ ಆಗಿಲ್ಲ ಎಂಬ ಆರೋಪವನ್ನು ನೌಕರರು ಮಾಡುತ್ತಿದ್ದಾರೆ.

ಅದರಲ್ಲೂ ಅಮಾನತಾಗಿ ಬೇರೆ ಘಟಕಕ್ಕೆ ಹೋಗಿದ್ದವರನ್ನು ಮೂಲ ಘಟಕಕ್ಕೆ ವರ್ಗಾವಣೆ ಮಾಡಲು ಇನ್ನೂ ಕೂಡ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆಎ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ವಜಾ, ಅಮಾನತು, ವರ್ಗಾವಣೆ ಆದವರಲ್ಲಿ ಕೆಲವರು ವಿಧಿ ಇಲ್ಲದೆ ಹಣ ಕೊಟ್ಟು ಮೂಲ ಘಟಕಕ್ಕೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎಂಬ ದೂರುಗಳು ನೌಕರರ ಮೊಗಶಾಲೆಯಲ್ಲಿ ಹರಿದಾಡುತ್ತಿದೆ.

ಇನ್ನು ನಾವು ಯಾವುದೇ ಹಣ ಕೊಡುವುದಿಲ್ಲ ನಮ್ಮನ್ನು ಮೂಲ ಘಟಕ್ಕೆ ವರ್ಗಾವಣೆ ಮಾಡಿ ಎಂದು ಕೇಳುತ್ತಿರುವ ನೌಕರರು ಅನೇಕ ರೀತಿಯ ಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಲಾಗುತ್ತಿದೆ. ಅಧಿಕಾರಿಗಳು ನೌಕರ ವಿರೋಧಿ ನೀತಿ ಅನುಸರಿಸುತ್ತಿದ್ದು ಈಗಾಗಲೇ ಎಲ್ಲ ಅಧಿಕಾರಿಗಳು ವರ್ಗಾವಣೆಗೆ ಆದೇಶ ಮಾಡಿದ್ದಾರೆ ಆದರೆ ಸಿಟಿಎಂ ಅವರು ಮಾತ್ರ ವರ್ಗಾವಣೆಗೆ ಸಹಿ ಮಾಡದೆ ತಮ್ಮ ರಾಗ ಬದಲಾಯಿಸಿದ್ದಾರೆ ಎಂದು ನೌಕರರು ದೂರುತ್ತಿದ್ದಾರೆ.

ಈವರೆಗೂ ನೌಕರರ ಸಮಸ್ಯೆಗಳನ್ನು ಬಗೆ ಹರಿಸಿ ಕೊಡುತ್ತೇನೆ ಎಂದು ಹೇಳುತ್ತಾ ಹೇಳುತ್ತಲೇ ನೌಕರರ ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಾ ಬಂದಿದ್ದು,ಕೆಲ ಸಂಘಟನೆಗಳ ಮುಖಂಡರ ಮಾತು ಕೇಳಿಕೊಂಡು ಸಿಟಿಎಂ ಅವರು ನೌಕರರ ಪಾಲಿಗೆ ಮುಳ್ಳಾಗಿದ್ದಾರೆ ಎಂದು ನೊಂದ ನೌಕರರ ಅಳಲು ತೋಡಿಕೊಂಡಿದ್ದಾರೆ.

ಈ ಹಿಂದೆ ಕೂಟದದ ಪದಾಧಿಕಾರಿಗಳನ್ನು ಕರೆದು ಒಂದು ವಾರದೊಳಗೆ KKRTC ಮತ್ತು KSRTC ಆದೇಶಗಳ ಪಾಲನೆ ಮಾಡಲಾಗುವುದು ಎಂದು ಭರವಸೆ ಕೊಟ್ಟಿದ್ದರು. ಆದರೆ, ಮಾತು ಕೊಟ್ಟ ಅಧಿಕಾರಿಗಳು ಒಂದು ವಾರ ಕಳೆದ ಬಳಿಕ ನಮಗೇನು ಗೊತ್ತೇ ಇಲ್ಲ, ಅದಕ್ಕೂ ನಮಗೂ ಸಂಬಂಧವೇ ಇಲ್ಲ ಎನ್ನುವ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇನ್ನು ವಿಭಾಗ ಮಟ್ಟದ ಅಧಿಕಾರಿಗಳು ಈಗಾಗಲೇ ಕೆಲವರ ಕನಿಷ್ಠ ಬೇಸಿಕ್ ಮಾಡಿದಲ್ಲದೆ, ಇನ್ನೊಂದು ವಿಭಾಗದಲ್ಲಿ 1-2 ಇನ್ಕ್ರಿಮೆಂಟ್ ಶಾಶ್ವತವಾಗಿ ತೆಗೆದು ಹಾಕಿ ಆದೇಶ ಮಾಡಿದ್ದಾರೆ ಹಾಗೂ ಕೆಲವು ಘಟಕದ ವ್ಯವಸ್ಥಾಪಕರ ವಿರುದ್ಧ ಏರು ಧ್ವನಿಯಲ್ಲಿ ಮಾತನಾಡಿದ್ದಾರೆ ಎಂದು ಡಿಎಂ ವರದಿಕೊಟ್ಟು ಕೆಲವರನ್ನು ಅಮಾನತು ಮಾಡಲಾಗಿದೆ. ಹೀಗೆ ಅಧಿಕಾರಿಗಳ ದರ್ಪ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದಕ್ಕೆಲ್ಲ ಸಿಟಿಎಂ ಅವರೇ ಕಾರಣ ಎಂದು ನೌಕರರು ಆರೋಪಿಸಿದ್ದಾರೆ.

ಇಷ್ಟೆಲ್ಲ ಆದ ಮೇಲೆ ನಮ್ಮನ್ನು ಸರಿಯಾಗಿ ನಡೆಸಿಕೊಳ್ಳದ ಸಿಟಿಎಂ ಅವರನ್ನು ವರ್ಗಾವಣೆ ಮಾಡಿ ನೌಕರರನ್ನು ಉಳಿಸಿ ಎಂದು ಒತ್ತಾಯಿಸಿದ್ದಾರೆ. ಇನ್ನು ವಾಯುವ್ಯ ಸಾರಿಗೆ ನೌಕರರು ಸಿಟಿಎಂ ವಿರುದ್ದ ಸಿಡಿದೇಳುವ ಮುನ್ನ ಸರ್ಕಾರ ಮತ್ತು ಆಡಳಿತ ಮಂಡಳಿ ಎಚ್ಚೆತ್ತುಕೊಳ್ಳಬೇಕು ಎಂ ಎಚ್ಚರಿಕೆಯನ್ನು ನೀಡಿದ್ದಾರೆ.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ