NEWSನಮ್ಮಜಿಲ್ಲೆಸಂಸ್ಕೃತಿ

ಎಲ್ಲರ ಮನಸ್ಸನ್ನು ಮುದಗೊಳಿಸುವ  ಮಧ್ಯವಯಸ್ಕರ ಸಮ್ಮಿಲನ 

ವಿಜಯಪಥ ಸಮಗ್ರ ಸುದ್ದಿ

ರಾಮನಗರ: ನಗರ ವಾತಾವರಣದಲ್ಲಿ ಚದುರಿದಂತೆ ತಮ್ಮ ತಮ್ಮದೇ ಕೆಲಸಗಳಲ್ಲಿ ನಿರತರಾಗಿರುವ ಹಿರಿಯ ನಾಗರೀಕರು ಮತ್ತು ಮಧ್ಯವಯಸ್ಕರ ಸಮ್ಮಿಲನ ತಿಂಮಸೇನೆಯ ತಿಂಗಳ ಕಾರ್ಯಕ್ರಮ. ಇಲ್ಲಿ ಸಾಹಿತ್ಯ ಚರ್ಚೆ, ಕವಿತಾ ವಾಚನ, ಪುಸ್ತಕ ವಿಮರ್ಶೆ ಹಾಗೂ ತಿಂಮಿಯರಿಗಾಗಿ ಆಶುಭಾಷಣ ಸ್ಪರ್ಧೆ ಇತ್ಯಾದಿಗಳು ವಿಶೇಷ. ಇಂತಹ ಕಾರ್ಯಕ್ರಮಗಳು ಎಲ್ಲರ ಮನಸ್ಸನ್ನು ಮುದಗೊಳಿಸುತ್ತವೆ ಎಂದು ಜಾನಪದ ವಿದ್ವಾಂಸ ಡಾ. ಎಂ.ಬೈರೇಗೌಡ ನುಡಿದರು.

ಜಗತ್ತಿನ ನಾಣ್ಯ, ನೋಟುಗಳು, ಸ್ಟಾಂಪುಗಳು ಹಾಗೂ ಸಾವಿರಕ್ಕೂ ಮೀರಿ ಖ್ಯಾತನಾಮರ ಹಸ್ತಾಕ್ಷರ ಸಂಗ್ರಾಹಕ ಕೆ.ವಿಶ್ವನಾಥ್ ಅವರ ಮನೆಯಂಗಳದಲ್ಲಿ ಆಯೋಜನೆಗೊಂಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಂಗಭೂಮಿ, ಜಾನಪದ, ಶಿಷ್ಟಕಾವ್ಯಗಳ ಒಟ್ಟು ಮಿಸಳಬಾಜಿಯಿಂದ ಈ ಕಾರ್ಯಕ್ರಮಕ್ಕೆ ಒಂದು ವಿಶಿಷ್ಟ ಮೆರುಗು ಬಂದಿದೆ ಎಂದು ಅವರು ಹೇಳಿದರು.

ಗಾಯಕ ವೆಂಕಟರಾವ್ ಭಾರತಿ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಆತಿಥ್ಯ ನೀಡಿದ ವಿಶ್ವನಾಥ್ ದಂಪತಿಗಳು ಸ್ವಾಗತಿಸಿದರು. ಹನಿಕವಿತೆಗಳ ಕವಿ ಡುಂಡಿರಾಜ್ ತಮ್ಮ ಮಾಮೂಲಿ ಹಾಸ್ಯಶೈಲಿಯಲ್ಲಿ ಸಾಕುನಾಯಿ-ಬೀದಿನಾಯಿ, ಗೆಲುವು ಕವಿತೆಗಳನ್ನು ವಾಚಿಸಿದರು. ರಂಗಕರ್ಮಿ ಶಂಕರ್ ಬಿಲ್ಲೇಮನೆ ತಮ್ಮ ಕಾರ್ಯಕ್ಷೇತ್ರದ ಅನುಭವಗಳನ್ನು ಹೇಳುವ ಮೂಲಕ ಸಭಿಕರಲ್ಲಿ ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಿಸಿದರು.

ಹಾಸ್ಯ ಬರಹಗಾರರಾದ ವೈ.ಎನ್.ಗುಂಡೂರಾವ್ ರಂಗಭೂಮಿಯ ರಸಗಳಿಗೆಗಳನ್ನು ನೆನಪಿಸಿಕೊಂಡರು. ಕವಿ ಡಾ.ಬಾನು ಸ್ವರಚಿತ ಕವನ ವಾಚಿಸಿದರು. ದೀಪಕ್ ಬೈರಪ್ಪನವರ ಯಾನ ಕಾದಂಬರಿಯ ಒಳ-ಹೊರಗನ್ನು ತೆರೆದಿಟ್ಟರು. ತಿಂಮಿಯರಾದ ಪರಿಮಳ ಗುಂಡುರಾವ್, ಸುಲೋಚನಾ, ನಂದಿನಿ, ಶೋಭಾ, ನಮಿತಾ, ಸುಜಾತ, ನೀಲು, ಆಶುಭಾಷಣದಲ್ಲಿ ಅನೇಕ ರಸಪೂರ್ಣ ವಿಚಾರಗಳನ್ನು ತಿಳಿಸಿದರು. ಮಂಜುಳಾ ಸ್ವರಚಿತ ಕವನ ವಾಚಿಸಿದರು.

ದಾಮೋದರಶೆಟ್ಟಿ, ರಂಗನಾಥ್ ಕಟ್ಟಾಯ, ರಾಜೇಂದ್ರ ಬಿ.ಶೆಟ್ಟಿ, ಶ್ರೀಪತಿ ಮಂಜನಬೈಲು, ರಮೇಶ್ ಅನಂತ್ ತಮ್ಮ ಅನುಭವಗಳನ್ನು ಹಂಚಿಕೊಂಡರು. ಅಣಕು ಬರಹಗಾರರಾದ ರಾಮನಾಥ್ ಕಾರ್ಯಕ್ರಮ ಸಮನ್ವಯದ ಜವಾಬ್ದಾರಿ ವಹಿಸಿದ್ದರು.
ಇದೇ ಸಂದರ್ಭದಲ್ಲಿ ರಾಘವೇಂದ್ರ ರಾಮಮೂರ್ತಿಯವರ “ಮಾರ್ನಿಂಗ್ ಥಾಟ್ಸ್” ಕೃತಿಯನ್ನು ಕೆ.ವಿಶ್ವನಾಥ್, ರಾಮನಾಥ್, ಡಾ. ಎಂ.ಬೈರೇಗೌಡ ಬಿಡುಗಡೆ ಮಾಡಿದರು.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು ನೀವು ಗಬಗಬನೆ ಊಟ ಮಾಡುವವರಿದ್ದೀರಾ? ಹಾಗಿದ್ದರೆ ನಿಮಗೆ ಈ ಸಮಸ್ಯೆ ಕಾಡದಿರದು! BMTC ನೌಕರರಿಗೆ ಆನ್-ಲೈನ್ ಮೂಲಕ ವೇತನ ಚೀಟಿ ಪಡೆಯುವ ವ್ಯವಸ್ಥೆ- ಜಾರಿ ಸ್ಕೂಟರ್‌ಗೆ ಕಾರು ಡಿಕ್ಕಿ- ಮೊಪೆಡ್‌ನಲ್ಲಿ ತೆರಳುತ್ತಿದ್ದ ಮಾವ-ಸೊಸೆ ದಾರುಣ ಸಾವು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಹಿಟ್‌ ಧಾರಾವಾಹಿಗಳ ನಿರ್ದೇಶಕ, ನಿರ್ಮಾಪಕ ರಾಮ್​ಜೀ