NEWS

ಏಕದಿನ ವಿಶ್ವಕಪ್​ನಲ್ಲಿ ಅಗ್ರಜರ ಕಾದಾಟ: ಇವತ್ತಿನ ಪಂದ್ಯದತ್ತಲೇ ಕ್ರಿಕೆಟ್ ಫ್ಯಾನ್ಸ್ ಚಿತ್ತ

ವಿಜಯಪಥ ಸಮಗ್ರ ಸುದ್ದಿ

ನಿಜಕ್ಕೂ ಕ್ರಿಕೆಟ್ ಕಾಶಿಯಲ್ಲಿ ನಡೆಯೋದು ಬ್ಯಾಟ್​ ಆ್ಯಂಡ್​ ಬಾಲ್ ನಡುವಿನ ಫೈಟ್. ಹೌದು! ಏಕದಿನ ವಿಶ್ವಕಪ್​ನಲ್ಲಿ ಇಂದು ನಡೆಯೋದು ಅಗ್ರಜರ ಕಾದಾಟ. ಹೀಗಾಗಿ ಇವತ್ತಿನ ಪಂದ್ಯದತ್ತಲೇ ಕ್ರಿಕೆಟ್ ಫ್ಯಾನ್ಸ್ ಚಿತ್ತ ನೆಟ್ಟಿದೆ. ಹಾಗಾದ್ರೆ, ಇಂದಿನ ಮೆಗಾ ದಂಗಲ್​ನಲ್ಲಿ ಟೀಮ್ ಇಂಡಿಯಾಗೆ ಆಫ್ರಿಕಾ ಬ್ರೇಕ್ ಹಾಕುತ್ತಾ? ಡೇಂಜರಸ್ ಆಫ್ರಿಕನ್ಸ್​ ವ್ಯೂಹಕ್ಕೆ ಟೀಮ್ ಇಂಡಿಯಾ ಗೇಮ್​ಪ್ಲಾನ್ ಏನು?

ವಿಶ್ವಕಪ್​ನ ಮೆಗಾ ಫೈಟ್​​ಗೆ ಭಾರತದ ಕ್ರಿಕೆಟ್ ಕಾಶಿ ಸಾಕ್ಷಿಯಾಗುತ್ತಿದೆ. ವಿಶ್ವಕಪ್​ನ ಟೇಬಲ್ ಟಾಪರ್​​ಗಳ ದಂಗಲ್​ ನಡೀತಿದ್ದು, ಯಾರಿಗೆ ಯಾರು ಟಕ್ಕರ್ ನೀಡುತ್ತಾರೆ ಎಂಬ ಭಾರಿ ಕುತೂಹಲ ಅಭಿಮಾನಿಗಳಲ್ಲಿ ಹುಟ್ಟಿಕೊಂಡಿದೆ.

ಸೆಂಚುರಿ ಸಿಡಿಸಿದ ಕ್ವಿಂಟನ್ ಡಿಕಾಕ್: ವಿಶ್ವಕಪ್​ನಲ್ಲಿ ಇಂದು ಅನ್​​ಸ್ಟಾಪಬಲ್​ ಟೀಮ್ ಇಂಡಿಯಾಗೆ, ಡೇಂಜರಸ್ ಸೌತ್ ಆಫ್ರಿಕಾ ಸವಾಲ್​ ಎಸೆಯಲಿದೆ. ಟೀಮ್ ಇಂಡಿಯಾ ಗೆಲುವಿನ ನಾಗಲೋಟಕ್ಕೆ ಬ್ರೇಕ್ ಹಾಕೋ ಲೆಕ್ಕಚಾರದಲ್ಲಿದೆ. ಇತ್ತ ಹರಿಣಗಳ ಬೇಟೆಗೆ ಇಂಡಿಯನ್ ಟೈಗರ್ಸ್ ಟಾರ್ಗೆಟ್​ ಸೆಟ್​ ಮಾಡಿದ್ದಾರೆ. ಇನ್​ಫ್ಯಾಕ್ಟ್​_ ಸೌತ್​ ಆಫ್ರಿಕಾದ ಈ ಆಟಗಾರರನ್ನು ಮಟ್ಟ ಹಾಕಿದ್ರೇನೆ, ಟೀಮ್ ಇಂಡಿಯಾ ಗೆಲುವಿಗೆ ರಹದಾರಿ ಕೂಡ. ಹಾಗಾದ್ರೆ ರೋಹಿತ್ ಯಾರ‍್ಯಾರಿಗೆ ಟಾರ್ಗೆಟ್ ಫಿಕ್ಸ್​ ಮಾಡಿದ್ದಾರೆ?

ಡಿಕಾಕ್​ಗೆ ಆರಂಭದಲ್ಲೇ ನೀಡಬೇಕು ಡಿಚ್ಚಿ..!: ಟೀಮ್ ಇಂಡಿಯಾಗೆ ಮೇನ್ ಥ್ರೆಟ್​​​​​​​​​​​​​​​​​​ ಓಪನರ್ ಕ್ವಿಂಟನ್ ಡಿಕಾಕ್.. ಇಂಡಿಯನ್ ಕಂಡೀಷನ್ಸ್​ನಲ್ಲಿ ಅಕ್ಷರಶಃ ಬೊಬ್ಬೆರೆಯುತ್ತಿರುವ ಡಿಕಾಕ್, ಟೀಮ್ ಇಂಡಿಯಾ ಎದುರು ಸಹ ಸಾಲಿಡ್ ಓಪನಿಂಗ್ ನೀಡೋ ಲೆಕ್ಕಚಾರದಲ್ಲಿದ್ದಾರೆ. ಹೀಗಾಗಿ ಹಿಟ್​ಮ್ಯಾನ್ ಪರ್ಫೆಕ್ಟ್​ ವ್ಯೂಹದೊಂದಿಗೆ ಡಿಚ್ಚಿ ನೀಡಬೇಕು. ಇಲ್ಲ ಎಲ್ಲವೂ ತಲೆಕೆಳಗಾಗೋದ್ರಲ್ಲಿ ಡೌಟೇ ಇಲ್ಲ.!

ಸೈಲೆಂಟ್ ಕಿಲ್ಲರ್ಸ್​ಗೆ ​ ಬೀಸಬೇಕು ಬಲೆ..!: ಹೆನ್ರಿಚ್ ಕ್ಲಾಸೆನ್.. ಸೌತ್​ ಆಫ್ರಿಕಾದ ಪವರ್ ಹಿಟ್ಟರ್​ ಆ್ಯಂಡ್​ ಸೈಲೆಂಟ್ ಕಿಲ್ಲರ್​. ಸ್ಲೋ ಆ್ಯಂಡ್ ಸ್ಟಡಿ ಇನ್ನಿಂಗ್ಸ್​ ಕಟ್ಟೋ ಈತ, ಕ್ರೀಸ್​ನಲ್ಲಿ ನೆಲೆಯೂರಿದಷ್ಟು ಅಪಾಯಕಾರಿ. ಹೀಗಾಗಿ ಈತನ ಬೇಟೆಗೆ ಸ್ಪಿನ್​ ಅಸ್ತ್ರವನ್ನೇ ರೋಹಿತ್ ಪ್ರಯೋಗಿಸಬೇಕಿದೆ. ಕ್ಲಾಸೆನ್ ಮಾತ್ರವೇ ಅಲ್ಲ, ಡೇವಿಡ್ ಮಿಲ್ಲರ್ ಕೂಡ ಡೆತ್​ ಓವರ್​ಗಳಲ್ಲಿ ಮೋಸ್ಟ್ ಡೇಂಜರಸ್ ಅನ್ನೋದನ್ನ ಹೇಳಬೇಕಿಲ್ಲ. ಹೀಗಾಗಿ ಆರಂಭದಲ್ಲೇ ವಿಕೆಟ್ ಬೇಟೆಯಾಡುವ ಮೂಲಕ ಒತ್ತಡ ಹೇರಬೇಕಿದೆ.

ಆಫ್ರಿಕನ್​ ಟ್ರಂಪ್​ ಕಾರ್ಡ್ ಯಾನ್ಸನ್​ ಮೇನ್ ಟಾರ್ಗೆಟ್ !: ಸೌತ್ ಆಫ್ರಿಕಾ ಸಕ್ಸಸ್​​ ಹಿಂದಿನ ಸೂತ್ರದಾರ ಮಾರ್ಕೋ ಯಾನ್ಸನ್. ಡೆತ್ ಓವರ್​ಗಳಲ್ಲಿ ಸ್ಫೋಟಕ ಇನ್ನಿಂಗ್ಸ್​ ಕಟ್ಟುವ ಈತ, ಬೌಲಿಂಗ್​ನಲ್ಲೂ ಪರಿಣಾಮಕಾರಿಯಾಗಿದ್ದಾನೆ. ಸದ್ಯ ವಿಶ್ವಕಪ್​ನಲ್ಲಿ 16 ವಿಕೆಟ್ ಉರುಳಿಸಿರುವ ಈತ, ಇಂಡಿಯನ್ ಕಂಡೀಷನ್ಸ್​ನಲ್ಲಿ, ಕಮಾಲ್ ಮಾಡ್ತಿದ್ದಾರೆ. ಹೀಗಾಗಿ ಮಾರ್ಕೋ ಮ್ಯಾಜಿಕ್ ನಡೆಯದಂತೆ ನೋಡಿಕೊಳ್ಳಬೇಕಿದೆ.

ಜಸ್​ಪ್ರೀತ್ ಬೂಮ್ರಾ: ಬೌಲಿಂಗ್​ನಲ್ಲಿ ಕಗಿಸೋ ರಬಡಾ ಜೊತೆ ಯಂಗ್ ಸೆನ್ಸೇಷನ್ ಜೆರಾಲ್ಡ್ ಕೊಟ್ಜಿಯನ್ನ ಸರಿಯಾಗಿ ಡೀಲ್ ಮಾಡಿದ್ರೆ, ಟೀಮ್ ಇಂಡಿಯಾ ನಾಗಲೋಟ ಮುಂದುವರಿಯೋದು ಕನ್ಫರ್ಮ್..

ಟೀಮ್ ಇಂಡಿಯಾನ ಸದೆಬಡೆಯೋದು ಸುಲಭವಲ್ಲ!: ಸೌತ್ ಆಫ್ರಿಕಾ ಎಷ್ಟೇ ಡೇಂಜರಸ್ ಆಗಿ ಕಾಣ್ತಿದ್ರೂ, ಟೀಮ್ ಇಂಡಿಯಾನ ಸದೆಬಡೆಯೋದು ಸುಲಭವಾಗಿಲ್ಲ. ಯಾಕಂದ್ರೆ, ಟೀಮ್ ಇಂಡಿಯಾ ಪರ ರೋಹಿತ್, ವಿರಾಟ್​ ಕೊಹ್ಲಿ ಅಗ್ರೇಸ್ಸಿವ್ ಅಪ್ರೋಚ್ ತೋರುತ್ತಿದ್ದಾರೆ. ಮತ್ತೊಂದೆಡೆ ವೇಗಿಗಳಾದ ಮೊಹಮ್ಮದ್ ಶಮಿ, ಜಸ್​ಪ್ರೀತ್ ಬೂಮ್ರಾ, ಸಿರಾಜ್​ ಎದುರಾಳಿಗಳ ಸದ್ದು ಅಡಗಿಸುತ್ತಿದ್ದಾರೆ. ಸ್ಪಿನ್ನರ್​ಗಳು ಕ್ರೂಶಿಯಲ್ ಟೈಮ್​ನಲ್ಲಿ ವಿಕೆಟ್ ಬೇಟೆಯಾಡ್ತಿದ್ದಾರೆ. ಹೀಗಾಗಿ ಟೀಮ್ ಇಂಡಿಯಾ ಸುಲಭಕ್ಕೆ ಬಗ್ಗೋ ಮಾತೇ ಇಲ್ಲ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು ನೀವು ಗಬಗಬನೆ ಊಟ ಮಾಡುವವರಿದ್ದೀರಾ? ಹಾಗಿದ್ದರೆ ನಿಮಗೆ ಈ ಸಮಸ್ಯೆ ಕಾಡದಿರದು! BMTC ನೌಕರರಿಗೆ ಆನ್-ಲೈನ್ ಮೂಲಕ ವೇತನ ಚೀಟಿ ಪಡೆಯುವ ವ್ಯವಸ್ಥೆ- ಜಾರಿ ಸ್ಕೂಟರ್‌ಗೆ ಕಾರು ಡಿಕ್ಕಿ- ಮೊಪೆಡ್‌ನಲ್ಲಿ ತೆರಳುತ್ತಿದ್ದ ಮಾವ-ಸೊಸೆ ದಾರುಣ ಸಾವು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಹಿಟ್‌ ಧಾರಾವಾಹಿಗಳ ನಿರ್ದೇಶಕ, ನಿರ್ಮಾಪಕ ರಾಮ್​ಜೀ