NEWSಉದ್ಯೋಗನಮ್ಮರಾಜ್ಯಶಿಕ್ಷಣ-

ಡಾ.ಅಶ್ವಿನಿ ಅವರ ಪಾಠಕೇಳಿ 101ನೇರ‍್ಯಾಂಕ್‌ ಪಡೆದ ಕನ್ನಡತಿ ಸೌಭಾಗ್ಯ ಬೀಳಗಿಮಠ

ವಿಜಯಪಥ ಸಮಗ್ರ ಸುದ್ದಿ

ಧಾರವಾಡ: ಯುಪಿಎಸ್‌ಸಿ ನಾಗರಿಕ ಸೇವೆಗಳ ಪರೀಕ್ಷೆಯ ಫಲಿತಾಂಶ (UPSC Results 2023) ಇಂದು ಪ್ರಕಟವಾಗಿdfdu, ದಾವಣಗೆರೆ ನಿವಾಸಿ ಸೌಭಾಗ್ಯ ಬೀಳಗಿಮಠ ಅವರು ತಮ್ಮ ಎರಡನೇ ಪ್ರಯತ್ನದಲ್ಲೇ 101ನೇ ರ‍್ಯಾಂಕ್‌ ಪಡೆದುಕೊಂಡಿದ್ದಾರೆ.

ದಾವಣಗೆರೆ ಮೂಲದ ಸೌಭಾಗ್ಯ ಬೀಳಗಿಮಠ ಅವರು ಬಿಎಸ್ಸಿ ಅಗ್ರಿಕಲ್ಚರ್ ಎರಡನೇ ವರ್ಷದಲ್ಲಿದ್ದಾಗಲೇ ಕೋಚಿಂಗ್ ಆರಂಭಿಸಿದ್ದರಂತೆ. ಕೃಷಿ ವಿವಿಯ ಡಾ.ಅಶ್ವಿನಿ ಸಹಾಯಕ ಪ್ರಾಧ್ಯಾಪಕಿಯವರ ಜತೆ ಕೋಚಿಂಗ್ ಆರಂಭಿಸಿದ್ದರು. ಯುಪಿಎಸ್‌ಸಿ ಕುರಿತು ಡಾ.ಅಶ್ವಿನಿ ಅವರು ಸೌಭಾಗ್ಯಗೆ ತರಬೇತಿ ನೀಡುತ್ತಿದ್ದರಂತೆ.

2015 ರಲ್ಲಿ ಡಾ.ಅಶ್ವಿನಿ ಯುಪಿಎಸ್‌ಸಿ ಪಾಸ್ ಮಾಡಿಕೊಂಡಿದ್ದರು. ಡಾ.ಅಶ್ವಿನಿ ಎಂ. ಧಾರವಾಡದ ನಾರಾಯಣಪುರದ ನಿವಾಸಿ. 3 ವರ್ಷದಿಂದ ಸೌಭಾಗ್ಯ ಡಾ.ಅಶ್ವಿನಿ ಅವರ ಮನೆಯಲ್ಲೇ ಉಳಿದುಕೊಂಡು ತರಬೇತಿ ಪಡೆದುಕೊಳ್ಳುತ್ತಿದ್ದರಂತೆ. ಸೌಭಾಗ್ಯ ಅವರು ಯುಪಿಎಸ್‌ಸಿ ಪರೀಕ್ಷೆಗಾಗಿ ಬೇರೆ ಎಲ್ಲೂ ತರಬೇತಿ ಪಡೆಯದೇ ಕೇವಲ ಉಪನ್ಯಾಸಕಿ ನೀಡಿದ ಕೋಚಿಂಗ್ ಮೇಲೆಯೇ ರ‍್ಯಾಂಕ್‌​ ಪಡೆದುಕೊಂಡಿದ್ದಾರೆ.

ಇನ್ನು ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತಾಡಿದ ಸೌಭಾಗ್ಯ ಬೀಳಗಿಮಠ, ಈ ಬಾರಿಯ UPSC ಪರೀಕ್ಷೆಯಲ್ಲಿ 101ನೇ ರ‍್ಯಾಂಕಿಂಗ್​ ಪಡೆದುಕೊಂಡಿದ್ದೇನೆ. ನನ್ನ ಕುಟುಂಬಸ್ಥರು, ಶಿಕ್ಷಕರು ಹಾಗೂ ಸ್ನೇಹಿತರು ಫುಲ್​ ಖುಷ್​ ಆಗಿದ್ದಾರೆ.

ಇನ್ನು ನಾನು ಯಾವುದೇ ಕೋಚಿಂಗ್​ಗೆ ಹೋಗಿಲ್ಲ. ನಮ್ಮ ಮೇಡಂ ಮನೆಯಲ್ಲೇ ಇದ್ದುಕೊಂಡು ನಾನು UPSC ಪಾಸ್ ಮಾಡಿಕೊಂಡಿದ್ದೇನೆ. ನಾನು ಪಾಸ್​ ಆದ ವಿಚಾರ ಕೇಳಿ ನಮ್ಮ ಮೇಡಂ ಖುಷಿಯಾಗಿದ್ದಾರೆ. ಡಾ.ಅಶ್ವಿನಿ ಅವರು ನನಗೆ ತರಬೇತಿ ನೀಡಿದ್ದರಿಂದ ಎರಡನೇ ಪ್ರಯತ್ನದಲ್ಲೇ ರ‍್ಯಾಂಕ್​ ಪಡೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು