ವಿದೇಶ

ವಿಮಾ ಭರವಸೆಯ ಮೊತ್ತಕ್ಕೆ ಬೋನಸ್‌:  ಸಿಎಂ ಬಿಎಸ್‌ವೈ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ಸರ್ಕಾರಿ ನೌಕರರ ನಿಯಮಗಳು, 1958ರ 22ನೇ ನಿಯಮದನ್ವಯ ಪ್ರತಿ ಎರಡು ವರ್ಷಕ್ಕೊಮ್ಮೆ ಕಡ್ಡಾಯ ಜೀವಾ ವಿಮಾ ಶಾಖೆಯ ವಿಮಾ ನಿಧಿ ಆಸ್ತಿ ಮತ್ತು ಹೊಣೆಗಾರಿಕೆಗಳನ್ನು ಆಧರಿಸಿ ವಿಮಾ ಗಣಕರಿಂದ ಮೌಲ್ಯಮಾಪನ ನಡೆಸಿ ಸಲ್ಲಿಸುವ ವರದಿಯನ್ನಾಧರಿಸಿ ಸರ್ಕಾರವು ಪ್ರತಿ ವರ್ಷಕ್ಕೆ ಪ್ರತಿ ಸಾವಿರ ರೂಪಾಯಿಗಳ ವಿಮಾ ಭರವಸೆಯ ಮೊತ್ತಕ್ಕೆ ಬೋನಸ್ಸು ನೀಡಲು ದರ ನಿಗದಿಪಡಿಸಿ ಆದೇಶ ಹೊರಡಿಸುತ್ತದೆ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ   ತಿಳಿಸಿದ್ದಾರೆ.

ಕರ್ನಾಟಕ ಸರ್ಕಾರ ವಿಮಾ ಇಲಾಖೆಯಿಂದ ವಿಮಾದಾರರಿಗೆ ಬೋನಸ್ ಪಾವತಿಸಲು ಇರುವ ನಿಯಮಗಳೇನು, ಯಾವ ಆರ್ಥಿಕ ವರ್ಷದಿಂದ ಬೋನಸ್ ಪಾವತಿಯನ್ನು ಬಾಕಿ ಉಳಿಸಿಕೊಳ್ಳಲಾಗಿದೆ, ಬಾಕಿ ಉಳಿಸಿಕೊಳ್ಳಲು ಕಾರಣಗಳೇನು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಮುಖ್ಯಮಂತ್ರಿಗಳು ಹೇಳಿದ್ದಾರೆ.

2014-16 ರಿಂದ ಬೋನಸ್ ಪಾವತಿ ಬಾಕಿ ಇದ್ದು, 2014-15 ಹಾಗೂ 2015-16ರ ಅವಧಿಗೆ ಬೋನಸ್ ನಿಗಧಿ ಪಡಿಸುವ ಪ್ರಸ್ತಾವನೆ ಸ್ವೀಕೃತವಾಗಿದ್ದು, ಸರ್ಕಾರದ ಪರಿಶೀಲನೆಯಲ್ಲಿರುತ್ತದೆ ಎಂದು ಸಿಎಂ ತಿಳಿಸಿದ್ದಾರೆ.

2014-15, 2015-16 ಮತ್ತು 2016-17ನೇ ಸಾಲಿನ ಆರ್ಥಿಕ ವರ್ಷಗಳಿಗೆ ಬೋನಸ್ ಪಾವತಿಸಲಾಗಿದೆಯೇ ಹಾಗಿದ್ದಲ್ಲಿ ಯಾವ ದರದಲ್ಲಿ ಪಾವತಿಸಲಾಗಿದೆ, ಹಾಗಿದ್ದಲ್ಲಿ ಬೋನಸ್ ಮೊತ್ತವನ್ನು ಪಾವತಿಸದಿರಲು ಕಾರಣಗಳೇನು ಬಾಕಿ ಇರುವ ಬೋನಸ್ ಪಾವತಿಗೆ ಸರ್ಕಾರ ಕಾಲ ಮಿತಿ ಏನಾದರೂ ವಿಧಿಸಿದೆಯೇ ಹಾಗಿದ್ದಲ್ಲಿ ಯಾವ ಕಾಲ ಮಿತಿಯೊಳಗಾಗಿ ಪಾವತಿಸಲಾಗುವುದು ಎಂದು ಶಾಸಕರಾದ ಸಿ.ಎನ್. ಬಾಲಕೃಷ್ಣ  ಅವರ ಪ್ರಶ್ನೆಗೆ 2014-2016 ರವರೆಗಿನ ಬೋನಸ್ ದರವನ್ನು ನಿಗದಿಪಡಿಸುವ ಪ್ರಸ್ತಾವನೆ ಪರಿಶೀಲನೆಯಲ್ಲಿರುತ್ತದೆ  ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

Leave a Reply

error: Content is protected !!
LATEST
ಚಾಮುಂಡಿ ಹುಟ್ಟುಹಬ್ಬ: ಬೆಳ್ಳಿ ಪಲ್ಲಕ್ಕಿ ಉತ್ಸವಕ್ಕೆ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಚಾಲನೆ ನಾಡ ಅಧಿದೇವತೆ ಚಾಮುಂಡಿ ತಾಯಿಯ ವರ್ಧಂತಿ ಸಂಭ್ರಮ: ಬೆಟ್ಟಕ್ಕೆ ಹರಿದು ಬರುತ್ತಿದೆ ಭಕ್ತ ಸಾಗರ KRSನಿಂದ ಕಾವೇರಿ ನದಿಗೆ 1.30 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಪತ್ನಿ ಜೊತೆ 40 ವರ್ಷಗಳ ಹಿಂದೆ ಕೋಪ ಮಾಡಿಕೊಂಡಿದ್ದ ಪತಿ- ಸಾಯುವ ವೇಳೆಯೂ ಮಾತಾಡಲಿಲ್ಲ ! ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಯಲ್ಲಿ 2 ತಿಂಗಳಲ್ಲೇ₹ 1.96 ಕೋಟಿ ಕಾಣಿಕೆ ಸಂಗ್ರಹ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಕೆ.ಆರ್‌.ಪೇಟೆ: ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಆಷಾಢ ಶುಕ್ರವಾರ ಸಂಭ್ರಮ ಸಂಸತ್‌ನಲ್ಲಿ ಕನ್ನಡಿಗರ ಪರ ಧ್ವನಿ ಎತ್ತಿ: ರಾಜ್ಯದ ಎನ್‌ಡಿಎ ಸಂಸದರಿಗೆ ಎಎಪಿಯ ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹ “ಶಕ್ತಿ" ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯ ಹೆಚ್ಚಾಗಿದೆ- ಆದರೆ ನೌಕರರಿಗೆ ವೇತನಕೊಡಲು ಹಣವಿಲ್ಲ- ಎಂಥಾ ಹೇಳಿಕೆ ಇದು ಸಾ... KRS ಭರ್ತಿ: ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಬಿಡುಗಡೆ- ಕಾವೇರಿ ಕೊಳ್ಳದ ಜನರಿಗೆ ಎಚ್ಚರಿ...