NEWSದೇಶ-ವಿದೇಶವಿದೇಶ

ಶ್ರೀಲಂಕಾಗೆ ಗಿಫ್ಟ್​ ನೀಡಿದ್ದ ಆನೆಯನ್ನು ವಾಪಸ್‌ ಪಡೆದ ಥೈಲ್ಯಾಂಡ್ ರಾಜಮನೆತನ

ವಿಜಯಪಥ ಸಮಗ್ರ ಸುದ್ದಿ

ಥೈಲ್ಯಾಂಡ್: ಕಳೆದ 20 ವರ್ಷದ ಹಿಂದೆ ಶ್ರೀಲಂಕಾಗೆ ಆನೆಯೊಂದನ್ನು ಗಿಫ್ಟ್​ ಆಗಿ ನೀಡಿದ್ದ ಥೈಲ್ಯಾಂಡ್ ರಾಜಮನೆತನ ಆ ಆನೆಯನ್ನು ವಾಪಸ್‌ ತನ್ನ ದೇಶಕ್ಕೆ ಪಡೆದುಕೊಂಡಿದೆ.

ಎರಡು ದೇಶಗಳ ರಾಜತಾತಂತ್ರಿಕ ವ್ಯವಸ್ಥೆ ಚೆನ್ನಾಗಿರಲೆಂದು ಥಾಯ್‌ಸಾಕ್​ ಸುರಿನ್​ ಹೆಸರಿನ ಆನೆಯನ್ನು ಕೊಲಂಬೊಗೆ ಉಡುಗೊರೆಯಾಗಿ ಥೈಲ್ಯಾಂಡ್ ರಾಜಮನೆತನ ನೀಡಿತ್ತು. ಆದರೀಗ 20 ವರ್ಷಗಳ ಬಳಿ ಸಾಕ್‌ ಸುರಿನ್​ ಆನೆಯನ್ನು ವಾಪಸ್‌ ತನ್ನ ದೇಶಕ್ಕೆ ಪಡೆದುಕೊಂಡಿದೆ.

ಆನೆಯನ್ನು ಏರ್​ಲಿಫ್ಟ್​ ಮಾಡುವ ಮೂಲಕ ಬ್ಯಾಂಕಾಕ್​ಗೆ ವಾಪಸ್‌ ತೆಗೆದುಕೊಂಡು ಹೋಗಿಲಾಗಿದೆ. ಸಾಕ್​ ಸುರಿನ್​ ಆನೆಗೆ 29 ವರ್ಷ ವಯಸ್ಸಾಗಿದ್ದು ಶ್ರೀಲಂಕಾದಲ್ಲಿ ಇದಕ್ಕೆ ಮುತ್ತುರಾಜ್​ ಎಂದು ಹೆಸರಿಟ್ಟಿದ್ದರು.

ಅಂದು ಶ್ರೀಲಂಕಾದ ದಕ್ಷಿಣದಲ್ಲಿರುವ ಬೌದ್ಧ ದೇವಸ್ಥಾನಕ್ಕೆ ಆನೆಯನ್ನು ಉಡುಗೊರೆಯಾಗಿ ನೀಡಲಾಗಿತ್ತು. ಆದರೆ ಕಳೆದ ವರ್ಷ ಮುತ್ತುರಾಜ್​ನನ್ನು ಸರಿಯಾಗಿ ನೋಡುಕೊಳ್ಳುತ್ತಿಲ್ಲ ಎಂಬ ವರದಿ ಕೇಳಿಬಂದ ನಂತರ ಥಾಯ್​ ಅಧಿಕಾರಿಗಳು ಆನೆಯನ್ನು ಹಿಂತಿರುಗಿಸುವಂತೆ ಕೇಳಿಕೊಂಡಿದ್ದರು.

ಅದರಂತೆ ವಾಪಸ್‌ ಕಳಿಸಿಕೊಡಲಾಗಿದೆ. ಇನ್ನು ಮುತ್ತುರಾಜ್​ 4 ಸಾವಿರ ಕೆಜಿಯಿದ್ದು, ಥೈಲ್ಯಾಂಡ್ ವಾಣಿಜ್ಯ ವಿಮಾನ ಇಲ್ಯುಶಿನ್​ ಐಎಲ್​-76ರ ಮೂಲಕ ದುಬಾರಿ ಖರ್ಚು ಮಾಡಿ ತನ್ನ ದೇಶಕ್ಕೆ ಕರೆದೊಯ್ದಿದೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು ನೀವು ಗಬಗಬನೆ ಊಟ ಮಾಡುವವರಿದ್ದೀರಾ? ಹಾಗಿದ್ದರೆ ನಿಮಗೆ ಈ ಸಮಸ್ಯೆ ಕಾಡದಿರದು! BMTC ನೌಕರರಿಗೆ ಆನ್-ಲೈನ್ ಮೂಲಕ ವೇತನ ಚೀಟಿ ಪಡೆಯುವ ವ್ಯವಸ್ಥೆ- ಜಾರಿ ಸ್ಕೂಟರ್‌ಗೆ ಕಾರು ಡಿಕ್ಕಿ- ಮೊಪೆಡ್‌ನಲ್ಲಿ ತೆರಳುತ್ತಿದ್ದ ಮಾವ-ಸೊಸೆ ದಾರುಣ ಸಾವು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಹಿಟ್‌ ಧಾರಾವಾಹಿಗಳ ನಿರ್ದೇಶಕ, ನಿರ್ಮಾಪಕ ರಾಮ್​ಜೀ