NEWSನಮ್ಮಜಿಲ್ಲೆನಮ್ಮರಾಜ್ಯ

ಗ್ಯಾಸ್ ಸಿಲಿಂಡ‌ರ್ ಡೆಲಿವರಿ ಬಾಯ್‌ಗೆ ಸಿಗುವ ಕಮಿಷನ್ ಎಷ್ಟು ಗೊತ್ತ?

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ದೇಶಾದ್ಯಂತ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯ ಜತೆಗೆ ತೀವ್ರ ಅಭಾವವೂ ಸೃಷ್ಟಿಯಾಗಿದೆ. ಗ್ಯಾಸ್ ಬುಕ್ ಮಾಡಿದರೂ ಹಲವು ದಿನಗಳವರೆಗೆ ಜನರಿಗೆ ಸಿಲಿಂಡರ್ ಸಿಗುತ್ತಿಲ್ಲ. ಇನ್ನು ಕೆಲವು ಕಡೆಗಳಲ್ಲಿ ಗ್ಯಾಸ್ ಸಿಲಿಂಡರ್‌ಗಳನ್ನು ಕಾಳ ಸಂತೆಯಲ್ಲಿ ಭಾರಿ ಬೆಲೆಗೆ ಮಾರಾಟ ಮಾಡುತ್ತಿರುವ ಪ್ರಕರಣಗಳೂ ಬೆಳಕಿಗೆ ಬಂದಿವೆ.

ಈ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯ ಜತೆಗೆ ತೀವ್ರ ಅಭಾವವೂ ಸೃಷ್ಟಿಯಾಗಿರುವುದೆ. ಈ ಮಧ್ಯೆ ನಿಮ್ಮ ಮನೆಬಾಗಿಲಿಗೆ ಗ್ಯಾಸ್ ಹೊತ್ತು ತರುವ ಡೆಲಿವರಿ ಬಾಯ್‌ಗೆ ಒಂದು ಸಿಲಿಂಡ‌ರ್ ಮೇಲೆ ಎಷ್ಟು ರೂಪಾಯಿ ಸಿಗುತ್ತದೆ ಎಂಬ ಈ ಪ್ರಶ್ನೆಯೂ ನಿಮ್ಮ ತಲೆಹೊಕ್ಕಿರಬಹುದು. ಅದಕ್ಕೆ ಉತ್ತರ ಇಲ್ಲಿದೆ.

ಗ್ಯಾಸ್ ಡಿಸ್ಟ್ರಿಬ್ಯೂಟರ್ ಕಂಪನಿಗೆ ಸಿಗುವ ಕಮಿಷನ್ ಎಷ್ಟು?: ಮೊದಲಿಗೆ ಗ್ಯಾಸ್ ವಿತರಿಸುವ ಡಿಸ್ಟ್ರಿಬ್ಯೂಟರ್ ಕಂಪನಿಗೆ/ ವಿತರಕರಿಗೆ ಒಂದು ಸಿಲಿಂಡರ್ ಮೇಲೆ ಎಷ್ಟು ಲಾಭ ಸಿಗುತ್ತದೆ ಎಂದು ನೋಡುವುದಾದರೆ, ಮನೆಬಳಕೆಯ 14.2 ಕೆಜಿ ಸಿಲಿಂಡರ್ ಅನ್ನು ಹೋಮ್ ಡೆಲಿವರಿ ನೀಡಿದಾಗ ಡಿಸ್ಟ್ರಿಬ್ಯೂಟರ್ ಕಂಪನಿಗೆ 80 ರಿಂದ 88 ರೂಪಾಯಿ ಸಿಗುತ್ತದೆ. ಗೋದಾಮಿನ ನಿರ್ವಹಣೆ ಮತ್ತು ವಿತರಣಾ ವೆಚ್ಚವಾಗಿ ಈ ಮೊತ್ತವನ್ನು ಕಂಪನಿಗೆ ನೀಡಲಾಗುತ್ತದೆ. ಇನ್ನು ಹೋಟೆಲ್‌ಗಳಲ್ಲಿ ಬಳಸುವ ವಾಣಿಜ್ಯ (Commercial) ಸಿಲಿಂಡರ್ ವಿತರಣೆ ಮಾಡಿದರೆ ಡಿಸ್ಟ್ರಿಬ್ಯೂಟರ್‌ಗೆ 100 ರೂಪಾಯಿ ಕಮಿಷನ್ ಸಿಗುತ್ತದೆ.

ಗ್ಯಾಸ್ ಡೆಲಿವರಿ ಬಾಯ್‌ಗೆ ಸಿಗುವ ಕಮಿಷನ್ ಎಷ್ಟು?: ಗ್ಯಾಸ್ ಸಿಲಿಂಡ‌ರ್ ತಲುಪಿಸುವ ವ್ಯಕ್ತಿಗೆ ಪ್ರತಿ ಸಿಲಿಂಡರ್ ಮೇಲೆ 20 ರಿಂದ 25 ರೂಪಾಯಿ ಕಮಿಷನ್ ಸಿಗುತ್ತದೆ. ಒಬ್ಬ ವ್ಯಕ್ತಿ ದಿನವೊಂದಕ್ಕೆ ಸರಾಸರಿ 30 ಸಿಲಿಂಡ‌ರ್ ವಿತರಿಸಿದರೆ, ಆತನಿಗೆ ದಿನಕ್ಕೆ ಸುಮಾರು 600 ರಿಂದ 750 ರೂಪಾಯಿ ಆದಾಯ ಬರುತ್ತದೆ. ಹಬ್ಬ ಹರಿದಿನಗಳ ಸಮಯದಲ್ಲಿ ಬೇಡಿಕೆ ಹೆಚ್ಚಿರುತ್ತದೆ. ಆಗ ದಿನವೊಂದಕ್ಕೆ 50 ಸಿಲಿಂಡರ್ ತಲುಪಿಸಿದರೆ, ದಿನದ ಸಂಪಾದನೆ 1,000 ದಿಂದ 1,250 ರೂಪಾಯಿ ತಲುವುತ್ತದೆ. ಅಂದರೆ ಒಬ್ಬ ಡೆಲಿವರಿ ಬಾಯ್ ತಿಂಗಳಿಗೆ ಸರಾಸರಿ 15,600 ರಿಂದ 19,500 ರೂಪಾಯಿ ಹಣವನ್ನು ಮನೆಮನೆಗೆ ಸಿಲಿಂಡರ್ ನೀಡಿಯೇ ಗಳಿಸಬಹುದು.

32 ಸಾವಿರದಿಂದ 65 ಸಾವಿರ ರೂ. ಕೂಡ ಗಳಿಸುವ ಸಾಧ್ಯತೆ ಇದೆ: ಕೆಲವೊಮ್ಮೆ ಗ್ಯಾಸ್ ಸಿಲಿಂಡರ್ ವಿತರಣೆ ಹೆಚ್ಚಾದಂತೆ ಅವರ ಆದಾಯ 32,000 ರೂಪಾಯಿ ವರೆಗೂ ಏರುತ್ತದೆ. ಇನ್ನು ಬೇಡಿಕೆ ವಿಪರೀತವಾಗಿದ್ದಾಗ ಕೆಲವು ಡೆಲಿವರಿ ಬಾಯ್‌ಗಳು ದಿನಕ್ಕೆ 100 ಸಿಲಿಂಡರ್‌ಗಳನ್ನು ಕೂಡ ತಲುಪಿಸುತ್ತಾರೆ. ಅಂತಹ ಸಂದರ್ಭದಲ್ಲಿ ಅವರ ದೈನಂದಿನ ಆದಾಯ 2500 ರೂಪಾಯಿ ಆಗುತ್ತದೆ. ಈ ಲೆಕ್ಕಾಚಾರದ ಪ್ರಕಾರ ಅವರು ತಿಂಗಳಿಗೆ ಗರಿಷ್ಠ 65,000 ರೂಪಾಯಿ ವರೆಗೂ ಸಂಪಾದನೆ ಮಾಡುವ ಸಾಧ್ಯತೆ ಇದೆ.

Megha
the authorMegha

Leave a Reply

error: Content is protected !!
Latest news
ಗ್ಯಾಸ್ ಸಿಲಿಂಡ‌ರ್ ಡೆಲಿವರಿ ಬಾಯ್‌ಗೆ ಸಿಗುವ ಕಮಿಷನ್ ಎಷ್ಟು ಗೊತ್ತ? KSRTC: ಕರ್ತವ್ಯ ಮುಗಿಸಿ ಪ್ರಯಾಣಿಸುವ ಸಂಸ್ಥೆ ಸಿಬ್ಬಂದಿ ಕಡ್ಡಾಯವಾಗಿ ID Card ಪ್ರದರ್ಶಿಸಿ- ಇಂಥ ಚೋರರ ಪತ್ತೆಗೆ ಸಹಕ... ಗುಡ್‌ ನ್ಯೂಸ್‌: ಪೆಟ್ರೋಲ್ -ಡೀಸೆಲ್ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕ ಕಡಿತ KSRTC: ಮೆಜೆಸ್ಟಿಕ್‌ನಿಂದ ಶಿವಮೊಗ್ಗಕ್ಕೆ ಹೊರಟಿದ್ದ ಬಸ್‌ ಭಸ್ಮ- ಅದೃಷ್ವಶಾತ್‌ ಕೂದಲೆಳೆ ಅಂತರದಲ್ಲೇ ಪ್ರಯಾಣಿಕರು ಪಾರ... ಬೆಳ್ಳಂಬೆಳಗ್ಗೆ ಬಸ್- ಟಿಪ್ಪರ್ ನಡುವೆ ಭೀಕರ ಅಪಾಘತ: 10ಮಂದಿ ಸಜೀವದಹನ, 18 ಜನರಿಗೆ ಗಂಭೀರಗಾಯ ಏ.6ರಂದು KSRTC ಎಂಡಿ ಜತೆ ಸಾರಿಗೆ ನೌಕರರ ಸಂಘಟನೆಗಳ ಸಭೆ- 2024 ರಿಂದ ವೇತನ ಹೆಚ್ಚಳ ಮಾಡದಿದ್ದರೆ ಹೋರಾಟ ಅನಿವಾರ್ಯ BMTC-KSRTC: ನಾಳೆ EPS ಪಿಂಚಣಿದಾರರ ಕನಿಷ್ಠ ಪಿಂಚಣಿ ₹7,500 ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ... KSRTC ಹಾವೇರಿ: ಮಾ.29ರಂದು ನೌಕರರ ಸಮಸ್ಯೆ, ಬೇಡಿಕೆ ಈಡೇರಿಕೆ ಕುರಿತು ಹೋರಾಟ ರೂಪಿಸಿಲು ಕೂಟದ ಪದಾಧಿಕಾರಿಗಳ ಸಭೆ KSRTC ಬಸ್-ಟಿಪ್ಪರ್ ನಡುವೆ ಮುಖಾಮುಖಿ ಡಿಕ್ಕಿ- ಬಳಿಕ ಗಲಾಟೆ ಚಾಲಕ, ಕಂಡಕ್ಟರ್‌ ಮೇಲೆ ಹಲ್ಲೆ ಮಾಡಿದ ಲಾರಿ ಚಾಲಕ ಸ್ವಪಕ್ಷೀಯ ಸಚಿವರೇ ಸರ್ಕಾರಿ ಜಮೀನು ನುಂಗಿದ್ದಾರೆ: ಶಾಸಕ ರಮೇಶ್ ಬಂಡಿಸಿದ್ದೇಗೌಡ