NEWSಸಿನಿಪಥ

ನಾಳೆ ‘ಪೊಗರು’ ತೆಲುಗು ಟೀಸರ್​ ರಿಲೀಸ್‌ಗೆ ಸಜ್ಜಾದ ಚಿತ್ರತಂಡ

ವಿಜಯಪಥ ಸಮಗ್ರ ಸುದ್ದಿ
  • ವಿಜಯಪಥ ಸಿನಿಸುದ್ದಿ
    ಬೆಂಗಳೂರು: ನಿರ್ದೇಶಕ ನಂದ ಕಿಶೋರ್ ಆ್ಯಕ್ಷನ್​ ಕಟ್ ಹೇಳಿರುವ ಹಾಗೂ ಧ್ರುವ ಸರ್ಜಾ ನಟಿಸಿರುವ ಪೊಗರು ಸಿನಿಮಾ ರಿಲೀಸ್​ಗೆ ಸಜ್ಜಾಗಿದೆ. ಈ ನಡುವೆ ತೆಲುಗಿನಲ್ಲಿ ಈಗಾಗಲೇ ಖರಾಬು ಹಾಡು ರಿಲೀಸ್ ಮಾಡಿರುವ ಚಿತ್ರತಂಡ ಈಗ, ಟೀಸರ್​ ರಿಲೀಸ್​ಗೆ ಸಜ್ಜಾಗಿದೆ. ಹೊಸ ವರ್ಷದ ಪ್ರಯುಕ್ತ ಪೊಗರು ಚಿತ್ರತಂಡ ತೆಲುಗು ಟೀಸರ್​ ರಿಲೀಸ್​ ಮಾಡಲಿದೆ.

ಈ ಬಗ್ಗೆ ಧ್ರುವ ಸರ್ಜಾ ಟ್ವೀಟ್​ ಮಾಡಿದ್ದಾರೆ. ಅಂತ್ಯಯೇ ಧ್ರುವ ಅವರನ್ನು ಬೆಳ್ಳಿ ತೆರೆಯ ಮೇಲೆ ನೋಡಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದಾರೆ. ಸಿನಿಮಾದ ಚಿತ್ರೀಕರಣ ಆರಂಭವಾದಾಗಿನಿಂದ ಸುದ್ದಿಯಲ್ಲಿರುವ ಸಿನಿಮಾ ಪೊಗರು.

ಪೊಗರು ಸಿನಿಮಾದ ಹಾಡು, ಡೈಲಾಗ್​ ಟೀಸರ್​​ ಹೀಗೆ ಎಲ್ಲವೂ ಸಿನಿಮಾ ಬಗ್ಗೆ ಇದ್ದ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿವೆ. ಅಲ್ಲದೆ ಈ ಸಿನಿಮಾ ಕನ್ನಡದ ಜತೆಗೆ ತೆಲುಗು ಹಾಗೂ ತಮಿಳಿನಲ್ಲೂ ರಿಲೀಸ್​ ಆಗಲಿದೆ. ಇತ್ತೀಚೆಗಷ್ಟೆ ತಮಿಳಿನ ಟೈಟಲ್​ ಪೋಸ್ಟರ್​ ಅನ್ನು ನಿರ್ದೇಶಕ ನಂದ ಕಿಶೋರ್​ ಹಂಚಿಕೊಂಡಿದ್ದಾರೆ.

ಸೆಮ್ಮಾ ತಿಮಿರ್​ ಹೆಸರಿನಲ್ಲಿ ಕಾಲಿವುಡ್​ನಲ್ಲಿ ಕನ್ನಡದ ಪೊಗರು ತೆರೆ ಕಾಣಲಿದೆ. ಇನ್ನು ತೆಲುಗಿನಲ್ಲಿ ಪೊಗರು ಸಿನಿಮಾಗೆ ಮತ್ತೊಂದು ಪ್ಲಸ್​ ಪಾಯಿಂಟ್ ಎಂದರೆ ರಶ್ಮಿಕಾ. ಈಗಾಗಲೇ ಟಾಲಿವುಡ್​ನಲ್ಲಿ ಹೆಸರು ಮಾಡಿರುವ ರಶ್ಮಿಕಾಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಇದರಿಂದಾಗಿ ಪೊಗರು ಸಿನಿಮಾ ಟಾಲಿವುಡ್​ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಲಿದೆ ಎಂದು ಅಂದಾಜಿಸಲಾಗುತ್ತಿದೆ.

ನಾಳೆ ಅಂದರೆ ಹೊಸ ವರ್ಷದಂದು ಮಧ್ಯಾಹ್ನ 12.12ಕ್ಕೆ ತೆಲುಗು ಟೀಸರ್ ಆದಿತ್ಯ ಮ್ಯೂಸಿಕ್​ನಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ರಿಲೀಸ್​ ಆಗಿರುವ ಖರಾಬು ವಿಡಿಯೋ ಹಾಡು ಸಹ ಇನ್ನೂ ಸದ್ದು ಮಾಡುತ್ತಿದೆ. 5 ಕೋಟಿ ವೀಕ್ಷಣೆ ಪಡೆದುಕೊಂಡಿದೆ.

ಊಹಿಸಿದಂತೆ ಕ್ರಿಸ್ಮಸ್​ಗೆ ಈ ಸಿನಿಮಾ ರಿಲೀಸ್​ ಆಗಲಿಲ್ಲ. ಇನ್ನು ಜ.14ರಂದು ಅಂದರೆ ಸಂಕ್ರಾಂತಿಗೆ ಪೊಗರು ರಿಲೀಸ್​ ಆಗಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಚಿತ್ರತಂಡ ಇನ್ನೂ ಯಾವ ಅಪ್ಡೇಟ್​ ಸಹ ನೀಡಿಲ್ಲ.

ಧ್ರುವ ಸರ್ಜಾ ಹಾಗೂ ನಂದ ಕಿಶೋರ್​ ಅವರ ಕಾಂಬಿನೇಷನ್​ನಲ್ಲಿ ಮತ್ತೊಂದು ಸಿನಿಮಾ ಬರುತ್ತಿದ್ದು, ಚಿರು ಹುಟ್ಟಿದ ಹಬ್ಬದಂದೇ ಈ ಸಿನಿಮಾದ ಸ್ಕ್ರಿಪ್ಟ್​ ಪೂಜೆ ನಡೆದಿತ್ತು. ಇನ್ನು ಇತ್ತೀಚೆಗಷ್ಟೆ ಈ ಸಿನಿಮಾ ಟೈಟಲ್​ ಪೋಸ್ಟರ್​ ಸಹ ರಿಲೀಸ್​ ಮಾಡಲಾಯಿತು. ಆ ಸಿನಿಮಾಗೆ ದುಬಾರಿ ಎಂದು ಹೆಸರಿಡಲಾಗಿದೆ.

Leave a Reply

error: Content is protected !!
LATEST
KSRTC ನಿರ್ದೇಶಕರ ಆದೇಶಕ್ಕೂ ಕಿಮ್ಮತ್ತಿಲ್ಲ: ಅಮಾನತು ತೆರವು ಮಾಡದೆ ಚಾಲಕನಿಗೆ ಮಾನಸಿಕ ಹಿಂಸೆ ಕೊಡುತ್ತಿರುವ ತುಮಕೂರು ... ಪ್ರಜ್ವಲ್ ರೇವಣ್ಣ ಪ್ರಕರಣ: ಅಶ್ಲೀಲ ವಿಡಿಯೋಗಳ ಹಂಚಿಕೆ ಅತ್ಯಂತ ಪಾಪ ಕೃತ್ಯ, ಸಂತ್ರಸ್ತೆಯರಿಗೆ ಅವಮಾನ- ಹೈಕೋರ್ಟ್ ವಿಶ್ವವಿಖ್ಯಾತ ಮೈಸೂರು ದಸರಾ ಗಂಡಾನೆಗಳ ನಡುವೆ ಕಿತ್ತಾಟ: ದಿಕ್ಕಾಪಾಲಾಗಿ ಓಡಿದ ಜನರು ಬನ್ನೂರು: ಬಸವನಹಳ್ಳಿ ಬಳಿ ಬೈಕ್‌ಗೆ ಡಿಕ್ಕಿ ಹೊಡೆದ ಹೆಣ್ಣು ಚಿರತೆ ಸಾವು ಅ.3ರಿಂದ ಶಾಲೆಗಳಿಗೆ ದಸರಾ ರಜೆ: ಶಾಲಾ ಶಿಕ್ಷಣ ಇಲಾಖೆ ಆದೇಶ BMTC ನೌಕರರ ₹400 ಕೋಟಿ ಗ್ರಾಚ್ಯುಟಿ, ಗಳಿಕೆ ರಜೆ ನಗದೀಕರಣ ಬಿಡುಗಡೆಗೆ ಮೀನಮೇಷ..!! KSRTC ಬಸ್‌ ರಿಪೇರಿ ಮಾಡಿದ ಖರ್ಚಿನ ಬಿಲ್‌ನಲ್ಲಿ ಸ್ಕ್ರಾಪ್‌ನ ಹಣ ತೋರಿಸದೆ ಗುಳುಂ: ಕ್ರಮಕ್ಕಾಗಿ ಎಂಡಿಗೆ ದೂರು 160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್