NEWSನಮ್ಮಜಿಲ್ಲೆನಮ್ಮರಾಜ್ಯರಾಜಕೀಯ

ಅಪ್ಪ ಮಕ್ಕಳ ಸಿಡಿ ಅವರ ಬಳಿ ಇವೆ: ಅವುಗಳು ಹೊರ ಬರುತ್ತವೆ: ಶಾಸಕ ಯತ್ನಾಳ್ ಬಾಂಬ್‌

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ರಾಜ್ಯದಲ್ಲಿ ಈಗ ಏನಿದ್ದರೂ ಸಿಡಿದ್ದೆ ಸದ್ದು, ಒಂದಲ್ಲ-ಎರಡಲ್ಲ ಇನ್ನು 23 ಸಿಡಿ ಗಳಿವೆ ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮತ್ತೊಂದು ಸಿಡಿ ಬಾಂಬ್‌ ಸಿಡಿಸಿದ್ದಾರೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ವಿಧಾನಸೌಧದ ಮೊಗಸಾಲೆಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್ ಸದ್ಯಕ್ಕೆ ಈಗ ಸಿಡಿ ರಾಜಕಾರಣ ಹೊರಬಂದಿರುವ ಸಿಡಿಯ ಬಗ್ಗೆ ನಾನು ಹೇಳಿಲ್ಲ. ಅದಕ್ಕೂ ನಾನು ಹೇಳುತ್ತಿರುವುದಕ್ಕೂ ಯಾವುದೇ ಸಂಬಂಧವಿಲ್ಲ, ಎರಡು ಬೇರೆಬೇರೆಯಾಗಿವೆ ಎಂದು ಹೇಳಿದರು.

ಅಂದರೆ, ನಾನು ಸಿಡಿ ಇವೆ ಎಂದು ಹೇಳಿದ್ದೆ. ಆದರೆ ನಾನು ಹೇಳಿದ್ದು ಬೇರೆ ಸಿಡಿಗಳ ಬಗ್ಗೆ. ಆದರೆ ಈಗ ಬಿಡುಗಡೆಯಾಗಿರುವುದು ಬೇರೆ ಸಿಡಿ. ನೋಡ್ತಾ ಇರಿ ಉಳಿದ ಆ ‘ಸಿಡಿ’ಗಳು ಹೊರ ಬರುತ್ತವೆ ಎಂದು ಮತ್ತೊಂದು ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆ ಬೆಕ್ಕಿಗೆ ಆಟ, ಇಲಿಗೆ ಪ್ರಾಣ ಸಂಕಟ ಎಂಬಂತಾಗಿದೆ. ಜತೆಗೆ ಯಾಕೆ ಸಿಡಿಗಳು ಬಿಡುಗಡೆ ಆಗುತ್ತವೆ ಎಂಬುದನ್ನೂ ಅವರು ವಿವರಿಸಿದ್ದಾರೆ.

ರಮೇಶ್ ಜಾರಕಿಹೊಳಿ ಅವರ ‘ಸಿಡಿ’ಯನ್ನು ಇವರು ಬಿಟ್ಟಿದ್ದಾರೆ. ರಮೇಶ್ ಜಾರಕಿಹೊಳಿ ಸುಮ್ಮನಿರ್ತಾರಾ? ಅವರ ಬಳಿಯೂ ಕೆಲವು ‘ಸಿಡಿ’ಗಳು ಇರುತ್ತವೆ. ಅಪ್ಪ ಮಕ್ಕಳ ಸಿಡಿ ಅವರ ಬಳಿ ಇವೆ. ಅವರೂ ಆ ‘ಸಿಡಿ’ಗಳನ್ನು ಇಷ್ಟರಲ್ಲೇ ಬಿಡ್ತಾರೆ ನೋಡಿ. ‘ಸಿಡಿ’ ಇಟ್ಕೊಂಡೇ ಬ್ಲ್ಯಾಕ್‌ಮೇಲ್ ಮಾಡೋ ಎರಡು ಪಕ್ಷಗಳಿವೆ. ಜೊತೆಗೆ ಕೆಲ ರಾಜಕೀಯ ನಾಯಕರು ರಾಜ್ಯದಲ್ಲಿದ್ದಾರೆ ಎಂದು ‘ಸಿಡಿ’ ರಾಜಕೀಯಕ್ಕೆ ಮತ್ತೊಂದು ಸ್ಪೋಟಕ ತಿರುವು ಕೊಟ್ಟಿದ್ದಾರೆ.

ಇನ್ನು ನನಗಿರುವ ಮಾಹಿತಿ ಪ್ರಕಾರ ಇನ್ನೂ 23 ಸಿಡಿಗಳು ಇವೆಯಂತೆ. ನೋಡ್ತಾ ಇರಿ ಅವು ಒಂದೊಂದಾಗಿ ಬಿಡುಗಡೆ ಆಗುತ್ತವೆ. ಯಾವುದೂ ಉಳಿಯೋದಿಲ್ಲ, ಎಲ್ಲವೂ ಬಿಡುಗಡೆಯಾಗುತ್ತವೆ.

ನಾನು ‘ಸತ್ಯದರ್ಶನ ಬಿಡುಗಡೆ’ ಎಂದಿದ್ದೆ. ಅದರಂತೆ ಎಲ್ಲವೂ ಬಿಡುಗಡೆ ಆಗುತ್ತವೆ. ನನ್ನ ಬಳಿ ಯಾವ ‘ಸಿಡಿ’ಗಳೂ ಇಲ್ಲ. ಸತ್ಯ ಯಾವತ್ತಿದ್ದರೂ ಹೊರಗೆ ಬರಬೇಕಲ್ವೇನ್ರೀ? ನೋಡ್ತಾ ಇರಿ ಇನ್ನು ಏನೇನು ಬಿಡುಗಡೆಯಾಗುತ್ತವೆಯೋ? ಎಂದು ಮತ್ತಷ್ಟು ಗಂಭೀರ ವಿಚಾರಗಳನ್ನು ತಮ್ಮ ಹೇಳಿಕೆಯಲ್ಲಿ ಯತ್ನಾಳ್ ತಿಳಿಸಿದ್ದಾರೆ.

Leave a Reply

error: Content is protected !!
LATEST
APSRTC ನೌಕರರು ಸಂತೋಷವಾಗಿದ್ದಾರೆ, ಕರ್ನಾಟಕದ ಸಾರಿಗೆ ನೌಕರರು ತೊಂದರೆಗೆ ಒಳಗಾಗಿದ್ದಾರೆ ಇದಕ್ಕೆ ಕಾರಣರಾರು? APSRTC ನೌಕರರಿಗೆ ಸರ್ಕಾರದಿಂದಲೇ ವೇತನ ಪಾವತಿ, 5 ತಿಂಗಳ ಫ್ಯಾಮಿಲಿ ಪಾಸ್‌, ಇನ್ನಷ್ಟು ಸೌಲಭ್ಯಗಳು ಸೇರ್ಪಡೆ BBMP: ನಗರದಲ್ಲಿ ವಿಪತ್ತು ನಿರ್ವಹಣೆಯ ನಿವಾರಣೆಗೆ ತುರ್ತು ಕ್ರಮ: ತುಷಾರ್ ಗಿರಿನಾಥ್ ಕೆಎಸ್‌ಆರ್‌ಟಿಸಿ ರಾಮನಗರ: ಹೊಸ ETM ಮಷಿನ್ ಅವಾಂತರ- ಪಾಸ್ ನಮೂದಿಸಿದರೂ ಟಿಕೆಟ್ ಬರುತ್ತದೆ ! KSRTC: ಇದು ನಿನ್ನ ಮಗುವಲ್ಲ, ಪ್ಯಾಸೆಂಜರ್‌, ಫ್ಯಾಮಿಲಿ ಎದುರೆ ಸಹೋದ್ಯೋಗಿಯ ಅವಮಾನಿಸಿದ ಕಂಡಕ್ಟರ್‌!!? ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KKRTC ಇಂಡಿ ಘಟಕದ ಡಿಎಂ ಕರ್ಮಕಾಂಡ: 1-2ದಿನ ರಜೆಗೆ ಕೊಡಬೇಕು 2ಸಾವಿರ - ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ