NEWSನಮ್ಮರಾಜ್ಯರಾಜಕೀಯ

ಸ್ಥಾನಮಾನದ ಭರವಸೆ ಸಿಕ್ಕರೆ ಲಖನ್ MLC ಚುನಾವಣೆ ಕಣದಿಂದ ಹಿಂದೆ ಸರಿಯಲೂಬಹುದು: ಸತೀಶ ಜಾರಕಿಹೊಳಿ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಳಗಾವಿ: ಒಂದೇ ಪಕ್ಷದಲ್ಲಿ ಇಬ್ಬರು ಸ್ಪರ್ಧೆಮಾಡುತ್ತಿದ್ದಾರೆ. ಹೀಗಾಗಿ ಸವಾಲಿರುವುದು ಬಿಜೆಪಿಗೇ ಹೊರತು, ನಮಗಲ್ಲ. ನಮ್ಮಲ್ಲಿ ಗೊಂದಲವಿಲ್ಲ. ಒಬ್ಬರೇ ಅಭ್ಯ ರ್ಥಿ ಇದ್ದಾರೆ. ಹೀಗಾಗಿ ಗೊಂದಲವಿರುವುದು ಬಿಜೆಪಿಯಲ್ಲಷ್ಟೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದ್ದಾರೆ.

ಮಂಗಳವಾರ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ನಾಮಪತ್ರ ಸಲ್ಲಿಕೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಪಿಯ ವರಿಷ್ಠರಿಂದ ಸ್ಥಾನಮಾನದ ಭರವಸೆ ಸಿಕ್ಕರೆ ಲಖನ್ ಜಾರಕಿಹೊಳಿ ವಿಧಾನಪರಿಷತ್ ಕ್ಷೇತ್ರದ ಚುನಾವಣಾ ಕಣದಿಂದ ಹಿಂದೆ ಸರಿಯಲೂಬಹುದು ಎಂದು ಸಹೋದರರೂ ಆಗಿರುವ ಅಭಿಪ್ರಾಯಪಟ್ಟರು.

ಇನ್ನು ಕಾಂಗ್ರೆಸ್‌  ಪಕ್ಷದಿಂದ ಒಬ್ಬರೇ ಅಭ್ಯರ್ಥಿ ಕಣಕ್ಕಿಳಿಸಿರುವುದರಿಂದ ನಾವು ಒಂದು ಮತವಷ್ಟೆ ಕೇಳುತ್ತೇವೆ. ಈಗಾಗಲೇ ಹಲವು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪ್ರಚಾರಮಾಡಿದ್ದೇವೆ ಎಂದರು.

ಲಖನ್ ಸ್ಪರ್ಧೆ ಅವರ ವೈಯಕ್ತಿಕ ವಿಚಾರ. ಆದರೆ, ನಾವು ಪಕ್ಷದ ಆಧಾರದ ಮೇಲೆ ಚುನಾವಣೆ ನಡೆಸುತ್ತೇ ವೆ. ನಮ್ಮ ಅಭ್ಯರ್ಥಿ ಪರ ಕೆಲಸ ಮಾಡುತ್ತೇವೆ. ಅದನ್ನೇ ಪ್ರಚಾರದಲ್ಲೂ ಹೇಳುತ್ತಿದ್ದೇನೆ. ಕಾಂಗ್ರೆಸ್‌ ಗೆಲ್ಲಲೇಬೇಕು ಎಂದು ಹೇಳಿದರು.

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ, ಬಿಜೆಪಿಯ ರಮೇಶ ಜಾರಕಿಹೊಳಿ ಮತ್ತು ಲಖನ್ ಮತದಾರರಿಗೆ ಹಣ ನೀಡಿ ನನ್ನನ್ನು ಸೋಲಿಸಿದರು. ಆನೋವು ನನಗೂ ಇದೆ. ಕಾರ್ಯಕರ್ತರಲ್ಲೂ ಇದೆ ಎಂದರು.

ಈಗ ಬಿಜೆಪಿಯಲ್ಲಿರುವ ಲಖನ್ ನಾಮಪತ್ರ ಸಲ್ಲಿಸಬಹುದು. ಆದರೆ, ಕಣದಲ್ಲಿ ಉಳಿಯುತ್ತಾರೆಯೇ ಎನ್ನುವುದು ಅನುಮಾನ. ಕಣದಿಂದ ಹಿಂದೆ ಸರಿಯಲೂಬಹುದಲ್ಲವೇ? ನಾಮಪತ್ರ ವಾಪಸ್‌ಗೆ ಅವಕಾಶವಿದೆ.

ಅವರ ಪಕ್ಷದವರು ಸ್ಥಾನಮಾನದ ಭರವಸೆ ಕೊಟ್ಟರೆ ಹಿಂದೆ ಸರಿಯಬಹುದು. ಅವರು ಬೇರೆ ಪಕ್ಷದಲ್ಲಿರುವುದರಿಂದ ಸ್ಪರ್ಧಿಸಿ ಅಥವಾ ಸ್ಪರ್ಧಿಸಬೇಡಿ ಎಂದು ನಾನು ಹೇಳಲಾಗುವುದಿಲ್ಲ. ಕುಟುಂಬದ ಆಧಾರದ ಮೇಲೆ ಚುನಾವಣೆ ನಡೆಯುವುದಿಲ್ಲ. ಮೊದಲು ಪಕ್ಷ, ನಂತರ ಕಾರ್ಯತಂತ್ರ ಎಂದರು.

ಲಕ್ಷ್ಮಿ ಹೆಬ್ಬಾಳಕರ–ಜಾರಕಿಹೊಳಿ ಸಹೋದರರ ಸವಾಲಿದು ಎನ್ನುವುದೇನೂ ಇಲ್ಲ. ಎಲ್ಲ ಸಹೋದರರು ಒಂದೇ ಕಡೆ ಏನಿಲ್ಲವಲ್ಲ? ನಾನು ಈ ಕಡೆ (ಕಾಂಗ್ರೆಸ್) ಇದ್ದೇ ನಲ್ಲವೇ?. ರಾಜಕೀಯದಲ್ಲಿ ಇರುವವರೆಗೂ ಸವಾಲುಗಳನ್ನು ಎದುರಿಸಲೇಬೇಕು. ಸಹೋದರರ ಸವಾಲು, ರಾಜಕೀಯ ಸವಾಲು ಮೊದಲಾದವು ಇದ್ದದ್ದೆ ಎಂದು ಹೇಳಿದರು.

ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹಾಗೂ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಇದ್ದರು.

Leave a Reply

error: Content is protected !!
LATEST
ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ