ಬೆಂಗಳೂರು: ಕೂಲಿ ಕೆಲಸ ಅರಸಿ ರಾಜಧಾನಿಗೆ ಬಂದಿದ್ದ ಲಕ್ಷಾಂತರ ಮಂದಿಯಲ್ಲಿ ಈಗಾಗಲೇ ಸಾವಿರಾರು ಜನ ತಮ್ಮ ನೆಲಯನ್ನು ಸೇರಿಕೊಂಡಿದ್ದಾರೆ. ಆದರೂ ಇನ್ನೂ ಸಾವಿರಾರು ಮಂದಿ ನಗರದಲ್ಲೇ ಇದ್ದು, ಅವರು ಇಂದು ತಮ್ಮ ಊರಿಗೆ ತೆರಳಲು ಮುಂದಾಗಿದ್ದಾರೆ.
ಹೀಗಾಗಿ ಇಟ್ಟುದಿನ ಕಾದು ಕುಳಿತಿದ್ದ ಉತ್ತರ ಕರ್ನಾಟಕದ ಸಾವಿರಾರು ಮಂದಿ ನಿನ್ನೆ ರಾತ್ರಿಯಿಂದಲೂ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ನಿದ್ರೆ ಇಲ್ಲದೆ. ಜತೆಗೆ ಹೊದ್ದಿಕೊಳ್ಳುಲು ರಗ್ಗು ಇಲ್ಲದೇ ಚಳಿಯಲ್ಲೇ ನಡುಗಿಕೊಂಡು ಕಾಲಕಳೆದಿದ್ದಾರೆ. ತಮ್ಮ ಚಿಕ್ಕಮಕ್ಕಳೊಂದಿಗೆ ಕುಳಿತಿದ್ದರು ಯಾರು ಅವರಿಗೆ ಒಂದುಲೋಟ ನೀರನ್ನು ಕೊಟ್ಟಿಲ್ಲ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಹೊರಜಿಲ್ಲೆಗಳು ಮತ್ತು ರಾಜ್ಯಗಳಿಗೆ ಹೋಗುವವರನ್ನು ಉಪಚರಿಸುವ ನಾಟಕವಾಡುವ ಜನಪ್ರತಿನಿಧಿಗಳು ಮಾಧ್ಯಮಗಳ ಕ್ಯಾಮರಾ ಎದುರು ನಟಿಸುವ ನಾಟಕ ಇದರಿಂದ ಬಯಲಾಗಿದೆ. ಮಾಧ್ಯಮ ಪ್ರತಿನಿಧಿಯನ್ನು ಕಂಡ ಕೂಡಲೇ ಬಡವರ ಸೇವೆ ಮಾಡಲು ನಾವು ಮುಂದಾಗಿದ್ದೇವೆ ಎಂದು ಪೋಸ್ಕೊಡುವ ಇಂಥ ಮಂದಿ ಈಗ ಎಲ್ಲಿಹೋದರೂ, ರಸ್ತೆಯಲ್ಲೇ ಇಲ್ಲಿವರೆಗೆ ಕಾಲದೂಡಿ ಈಗ ಇದ್ದರು ನಮ್ಮ ಹಳ್ಳಿಯಲ್ಲೇ ಇರೋಣ ಸತ್ತರೂ ನಮ್ಮ ಹಳ್ಳಿಯಲ್ಲೇ ಸಾಯೋಣ ಎಂದು ನಿರ್ಧಿಸಿ ಬೆಂಗಳೂರಿನಿಂದ ತಮ್ಮ ಊರುಗಳತ್ತ ಹೊರಟವರ ನೆರವಿಗೆ ಬಾರದು ಇಂಥ ಜನಪ್ರತಿನಿಧೀಗಳಿಂದ ನಾವು ಬಯಸುವುದಾದರೂ ಏನು?
ಈ ನಡುವೆ ಬೆಂಗಳೂರಿನಿಂದ ಉತ್ತರ ಕರ್ನಾಟಕ ಭಾಗಕ್ಕೆ ತೆರಳಲು ಕಾಯುತ್ತಿರುವ ಜನರಿಗೆ ಬಸ್ ವ್ಯವಸ್ಥೆ ಮಾಡುವಲ್ಲಿ ಸಾರಿಗೆ ಅಧಿಕಾರಿಗಳು ಗೊಂದಲಕ್ಕೆ ಒಳಗಾದರು. ಆದರೂ ಕೆಲ ಬಸ್ಗಳನ್ನು ಬಿಟ್ಟಿದ್ದಾರೆ. ಆದರೆ ತಮ್ಮ ಊರುಗಳನ್ನು ಸೇರಿಕೊಳ್ಳುವ ತವಕದಲ್ಲಿರುವ ಮಂದಿಯನ್ನು ಉಚಿತವಾಗಿ ಕರೆದುಕೊಂಡು ಹೋಗುವ ವ್ವಸ್ಥೆಯನ್ನು ಸರ್ಕಾರ ಮಾಡಬೇಕಿದೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಸರ್ಕಾರಿ ಜಾಹಿರಾತಿನಲ್ಲಿ ನರೇಗಾ ಯೋಜನೆಯಡಿ ನಿಮ್ಮ ಗ್ರಾಮದಲ್ಲೇ ಕೆಲಸ ಮಾಡಿ ಹಣ ಗಳಿಸಿ ಎಂದು ಹೇಳುವ ಸರ್ಕಾರ ಅವರಿಗೆ ಮೂಲ ಸೌಲಭ್ಯ ನೀಡುವಲ್ಲಿ ವಿಫಲವಾಗುತ್ತಿದೆ. ತಮ್ಮ ಖಜಾನೆ ತುಂಬಿಸಿಕೊಳ್ಳುವ ನಿಟ್ಟಿನಲ್ಲಿ ಯೋಚಿಸಿರುವ ಸರ್ಕಾರ ಬಡವರು ಕೈಯಲ್ಲಿ ಬಿಡಿಗಾಸು ಇಲ್ಲದವರನ್ನು ಅವರ ಸ್ವಂತ ನೆಲಕ್ಕೆ ತಲುಪಿಸಲು ಏಕೆ ಮುಂದಾಗಿಲ್ಲ. ಈ ಬಗ್ಗೆ ಹೆಚ್ಚು ಗಮನ ಕೊಡಬೇಕಿದೆ.
ನಾವು ಗಾರೆ ಕೆಲಸ ಮಾಡಿ ಜೀವನ ನಡೆಸುತ್ತಿದ್ದೇವು. ಲಾಕ್ಡೌನ್ ಆದ ಬಳಿಕ ಕೆಲಸವು ಇಲ್ಲ ಜತೆಗೆ ಕೆಲಸ ಮಾಡುವ ಸ್ಥಳದಲ್ಲೇ ಉಳಿದು ಕೋಳ್ಳುತ್ತಿದ್ದರಿಂದ ಬೇರೆ ಮನೆ ಮಾಡಿಲ್ಲ. ಈಗ ನಾವು ರಸ್ತೆಯಲ್ಲೇ ಮಕ್ಕಳೊಂದಿಗೆ ಕಾಲ ಕಳೆಯುತ್ತಿದ್ದೇವೆ. ಕೈಯಲ್ಲಿ ನಯಪೈಸೆಯೂ ಇಲ್ಲ. ನಮ್ಮನ್ನು ಊರು ಸೇರಿಸಿಬಿಡಿ ಅಲ್ಲಿ ಕೂಲಿನಾಲಿ ಮಾಡಿ ಹೊಟೆಹೊರೆದುಕೊಳ್ಳುತ್ತೇವೆ ಎಂದು ಮಾಧ್ಯಮಗಳ ಮುಂದೆ ಜನಪ್ರತಿನಿಧಿಗಳಲ್ಲಿ ಮನವಿ ಮಾಡಿಕೊಳ್ಳುತ್ತಿರುವ ದೃಶ್ಯ ಕಂಡು ಬರುತ್ತಿದೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
Hasidavanige anna koduvagalu photo click mado mandige edara novu gothagalla bidi