ಚಿಕ್ಕಮಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಿಕ್ಕಮಗಳೂರು ವಿಭಾಗದ ಕಡೂರು ಘಟಕದ ಎಟಿಎಸ್ ಕಿರುಕುಳದಿಂದ ಮನನೊಂದ ಚಾಲನಾ ಸಿಬ್ಬಂದಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿ ಸಾವು ಬದುಕಿನ ನಡುವೆ ಸೆಣಸಾಡುತ್ತಿರುವ ಘಟನೆ ಇಂದು ಘಟಕದಲ್ಲಿ ನಡೆದಿದೆ.
ಕಡೂರು ಘಟಕದ ಚಾಲಕ ಮಧು ಎಂಬುವರೆ ಈ ಅಧಿಕಾರಿಯ ಕಿರುಕುಳದಿಂದ ಮನನೊಂದು (ಏ.18) ಇಂದು ಡಿಪೋದಲ್ಲೇ ಆತ್ಮಹತ್ಯೆಗೆ ಯತ್ನಿಸಿದವರು. ಸದ್ಯ ಕಡೂರು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕರೆದುಕೊಂಡು ಹೋಗಲಾಗುತ್ತಿದೆ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.
ಇನ್ನು ಘಟಕದಲ್ಲಿ ಎಟಿಸ್ ಪುಟ್ಟಸ್ವಾಮಿ ಎಂಬಾತ ತಮಗಿಷ್ಟ ಬಂದಂತೆ ರಜೆ ಕೊಡುವುದು ಹಾಗೂ ನೌಕರರು ಡ್ಯೂಟಿ ಮಾಡಿದರೂ ಗೈರು ಹಾಜರಿ ಮಾಡುವ ಮೂಲಕ ಇನ್ನಿಲ್ಲದ ಕಿರುಕುಳ ನೀಡುತ್ತಿದ್ದಾನೆ. ಅಲ್ಲದೆ ಮಧು ವಾರದ ರಜೆಯಲ್ಲಿ ಡ್ಯೂಟಿ ಮಾಡಿದ್ದಾರೆ. ಈ ನಡುವೆ ತಮ್ಮ 7 ವರ್ಷದ ಪುತ್ರನಿಗೆ ಅನಾರೋಗ್ಯವಾಗಿದ್ದ ಕಾರಣ ಆ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಿತ್ತು.
ಆದರೆ, ಇಂಥ ಕಠಿಣ ಪರಿಸ್ಥಿತಿಯ ನಡುವೆಯೂ ವಾರದ ರಜೆ ದಿನದಲ್ಲೂ ಡ್ಯೂಟಿ ಮಾಡಿ ಬಳಿಕ ಮಗುವಿನ ಆರೋಗ್ಯ ಸಮಸ್ಯೆ ಹೆಚ್ಚಾದ್ದರಿಂದ ವಾರದ ರಜೆಯಲ್ಲಿ ಮಾಡಿರುವುದಕ್ಕೆ ಒಂದು C-Off ಕೊಡಿ ಎಂದು ಕೇಳಿದ್ದಾರೆ. ಆದರೆ ಸಿ ಆಫ್ ಕೊಡದೆ ಗೈರು ಹಾಜರಿ ತೋರಿಸುವ ಮೂಲಕ ಕಿರುಕುಳ ನೀಡಿದ್ದಾನೆ ಈ ಎಟಿಎಸ್ ಪುಟ್ಟಸ್ವಾಮಿ ಎಂಬ ಆರೋಪ ಕೇಳಿ ಬಂದಿದೆ.
ಅಲ್ಲದೆ ಇದೇ ರೀತಿ ಇತರ ನೌಕರರಿಗೂ ಕಿರುಕುಳ ನೀಡುತ್ತಿದ್ದಾನೆ ಈ ಎಟಿಎಸ್. ತಿಂಗಳಲ್ಲಿ 22ದಿನ ಡ್ಯೂಟಿ ಮಾಡಿದರೆ ಎಲ್ಲ ರಜೆ ಪಡೆಯುವುದಕ್ಕೂ ನೌಕರರು ಅರ್ಹರಿರುತ್ತಾರೆ ಎಂದು ಸಂಸ್ಥೆಯಲ್ಲಿಯೇ ಒಂದು ಅವೈಜ್ಞಾನಿಕ ನಿಯಮವನ್ನು ಮಾಡಿಕೊಂಡಿದ್ದಾರೆ. ಅದರಂತೆ 22 ದಿನಗಳ ಡ್ಯೂಟಿ ಮಾಡಿದರೂ ನೌಕರರಿಗೆ ರಜೆ ಸೌಲಭ್ಯ ಕೊಡದೆ ಭಾರಿ ಕಿರುಕುಳ ನೀಡುತ್ತಿದ್ದಾರೆ.
ಇನ್ನು ಡ್ಯೂಟಿ ಮಾಡಿದರೂ ನಾವು ವಾರದ ರಜೆಯನ್ನು ಪಡೆಯದ ಸ್ಥಿತಿ ಘಟಕದಲ್ಲಿ ನಿರ್ಮಾಣವಾಗಿದೆ. ಈ ಎಟಿಎಸ್ ಪುಟ್ಟಸ್ವಾಮಿ ಕಳೆದ 8-9 ವರ್ಷಗಳಿಂದಲೂ ಇದೇ ಡಿಪೋದಲ್ಲಿ ಇದ್ದು ಲಂಚಕೊಟ್ಟವರಿಗೆ ಮಾತ್ರ ರಜೆ ಮಂಜೂರು ಮಾಡುತ್ತಾರೆ, ಲಂಚ ಕೊಡದಿದ್ದರೆ ಗೈರು ಹಾಜರಿ ತೋರಿಸುತ್ತಾರೆ ಎಂದು ಘಟಕದ ನೌಕರರು ಕಿಡಿಕಾರಿದ್ದಾರೆ.
ಇಂಥ ಭ್ರಷ್ಟರು ಘಟಕದಲ್ಲಿ ಇರುವುದರಿಂದ ಇಲ್ಲಿ ಇರುವ ಇತರ ಅಧಿಕಾರಿಗಳಿಗೂ ಕೆಟ್ಟ ಹೆಸರು ಬರುತ್ತಿದೆ. ಇಲ್ಲಿ ಒಳ್ಳೆ ಅಧಿಕಾರಿಗಳು ಇದ್ದರೂ ಅವರ ಮಾತಿಗೆ ಬೆಲೆ ಇಲ್ಲದಂತಾಗಿದೆ. ಇನ್ನು ಘಟಕ ವ್ಯವಸ್ಥಾಪಕರು ಹೊಸದಾಗಿ ಬಂದಿದ್ದು ಅವರಿಗೆ ಈತನ ಬಗ್ಗೆ ಇನ್ನೂ ಏನು ಗೊತ್ತಿಲ್ಲ ಎಂದು ನೌಕರರು ತಿಳಿಸಿದ್ದಾರೆ.
ಇನ್ನಾದರೂ ಇಂಥ ಲಂಚಕೋರ ಎಟಿಎಸ್ಅನ್ನು ಕೂಡಲೇ ವರ್ಗಾವಣೆ ಮಾಡಿ ಜತೆಗೆ ಈತ ಪಡೆದಿರುವ ಲಂಚದ ಬಗ್ಗೆ ಸಂಸ್ಥೆಯ ಕಾನೂನು ವಿಭಾಗದ ಅಧಿಕಾರಿಗಳು ಸ್ವಯಂ ದೂರು ದಾಖಲಿಸಿಕೊಂಡು ತನಿಖೆ ನಡೆಸಿ ಈತನ ಅಮಾನತು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
Related

You Might Also Like
NWKRTC: ಸಾರಿಗೆ ನೌಕರರ ವೇತನ ಹೆಚ್ಚಳ ಯಾವಾಗ? ನಾಟಕದ ಮೂಲಕ ಸರ್ಕಾರದ ಗಮನ ಸೆಳೆದ ನಗರ ಸಾರಿಗೆ ಸಿಬ್ಬಂದಿ
ಹುಬ್ಬಳ್ಳಿ: ರಾಜ್ಯದಲ್ಲಿರುವ ನಮ್ಮ ಸಾರಿಗೆ ನಿಗಮಗಳ ಅಧಿಕಾರಿಗಳು - ನೌಕರರಲ್ಲಿ ಹಾಗೂ ನೌಕರರು - ನೌಕರರಲ್ಲೇ ಒಗ್ಗಟ್ಟಿಲ್ಲ. ಪರಿಣಾಮ ನಾಲ್ಕೂ ನಿಗಮಗಳಲ್ಲಿ ಸಮಸ್ಯೆಗಳ ಸರಮಾಲೆಯೇ ಇದೆ. ಹೀಗಾಗಿ...
ಮೈಸೂರು ಅರಮನೆ ಸೇರಿದಂತೆ ಸೂಕ್ಷ್ಮ ವಲಯಗಳಲ್ಲಿ ಡ್ರೋನ್ ಹಾರಾಟ ನಿಷೇಧ
ಮೈಸೂರು: ಭಯೋತ್ಪಾದಕರು/ ದೇಶ ವಿರೋಧಿಗಳು ಡ್ರೋನ್ಗಳು, ರಿಮೋಟ್ ಕಂಟ್ರೋಲ್ಡ್ ಮೈಕ್ರೋ-ಲೈಟ್ ಏರ್ಕ್ರಾಫ್ಟ್ ಗಳು, ಪ್ಯಾರಿ-ಗ್ಲೈಡರ್ ಗಳನ್ನು ಬಳಸಿಕೊಂಡು ದಾಳಿಯ ಮೂಲಕ ಸಾರ್ವಜನಿಕ ಆಸ್ತಿ-ಪಾಸ್ತಿ ನಾಶಪಡಿಸಿ ಕಾನೂನು ಸುವ್ಯವಸ್ಥೆಗೆ...
ಸೂಕ್ಷ್ಮ ವಲಯಗಳಲ್ಲಿ ಖಾಸಗಿ ಡ್ರೋನ್ ಚಟುವಟಿಕೆ ನಿಷೇಧ: ಡಿಸಿ ಬಸವರಾಜು
ಬೆಂಗಳೂರು ಗ್ರಾಮಾಂತರ: ಭಯೋತ್ಪಾದಕರು/ ದೇಶ ವಿರೋಧಿಗಳು ಡ್ರೋನ್ಗಳು, ರಿಮೋಟ್ ಕಂಟ್ರೋಲ್ಡ್ ಮೈಕ್ರೋ-ಲೈಟ್ ಏರ್ಕ್ರಾಫ್ಟ್ ಗಳು, ಪ್ಯಾರಿ-ಗ್ಲೈಡರ್ ಗಳನ್ನು ಬಳಸಿಕೊಂಡು ದಾಳಿಯ ಮೂಲಕ ಸಾರ್ವಜನಿಕ ಆಸ್ತಿ-ಪಾಸ್ತಿ ನಾಶಪಡಿಸಿ ಕಾನೂನು...
ವೈದ್ಯರು, ದಾದಿಯರಿಗೆ ಶೇ. 55 ರಷ್ಟು ವೇತನ ಪರಿಷ್ಕರಣೆ: ಸಚಿವ ದಿನೇಶ್ ಗುಂಡೂರಾವ್
ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳ ವೈದ್ಯರು ಮತ್ತು ದಾದಿಯರಿಗೆ ಶೇ. 55 ರಷ್ಟು ವೇತನ ಪರಿಷ್ಕರಣೆಗೆ ರಾಷ್ಟ್ರೀಯ ಆರೋಗ್ಯ ಮಿಷನ್ (NHM) ಅಡಿಯಲ್ಲಿ ರಾಜ್ಯ ಸರ್ಕಾರ ಅನುಮೋದನೆ...
ರಾಜ್ಯಾದ್ಯಂತ 7 ಅಧಿಕಾರಿಗಳ ಮನೆ, ಕಚೇರಿ ಸೇರಿದಂತೆ 40 ಕಡೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ: ದಾಖಲೆಗಳು ವಶ
ಬೆಂಗಳೂರು: ರಾಜ್ಯಾದ್ಯಂತ 40 ಕಡೆಗಳಲ್ಲಿ ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ ನಡೆದಿದ್ದು, ಭ್ರಷ್ಟರ ಭೇಟಿಯಾಡುತ್ತಾ ಹಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆಯಲಾಗುತ್ತಿದೆ. ಭಷ್ಟ್ರ ಅಧಿಕಾರಿಗಳ ವಿರುದ್ಧ ಅಕ್ರಮ...
BMTC: ಸಾರಿಗೆ ನೌಕರರಿಗೆ ಹಿಂಬಾಕಿ, ವೇತನ ಹೆಚ್ಚಳ ಮಾಡದಿದ್ದರೂ ಪ್ರಯಾಣಿಕರಿಗೆ ಹೊಸ ಹೊಸ ಯೋಜನೆ ಮಾತ್ರ ನಿಂತಿಲ್ಲ
ಬೆಂಗಳೂರು: ರಾಜ್ಯ ಸರ್ಕಾರಿ ಸಾರಿಗೆ ನೌಕರರಿಗೆ 2024ರ ಜನವರಿಯಿಂದ ಆಗಬೇಕಿರುವ ವೇತನ ಹೆಚ್ಚಳ ಹಾಗೂ ಕಳೆದ 2020ರ ಜನವರಿಯಿಂದ ಆಗಿರುವ ತೇತನ ಹೆಚ್ಚಳದ 38 ತಿಂಗಳ ಹಿಂಬಾಕಿ...
44ನೇ ವಯಸ್ಸಿಗೇ ಸಿಎಂ ಆಗಿ ಸಾಧನೆಗೈದ ಆರ್. ಗುಂಡೂರಾವ್: ಸಿದ್ದರಾಮಯ್ಯ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಆರ್.ಗುಂಡೂರಾವ್ ಅವರು ಸಿಎಂ ಆಗಿದ್ದಾಗ ನಾನು ಜನತಾ ಪಕ್ಷದಲ್ಲಿ ಇದ್ದೇ, ಲೋಕಸಭಾ ಸದಸ್ಯರಾಗಿದ್ದ ಸಂದರ್ಭದಲ್ಲಿ ಅವರನ್ನು ನೋಡಲು ಹೋಗಿದ್ದೇ ಎಂದು ಸಿಎಂ ಸಿದ್ದರಾಮಯ್ಯ...
ಸಾಮಾಜಿಕ ನ್ಯಾಯದ ಬದ್ಧತೆ ಇರಬೇಕು ತೋರಿಕೆಯಲ್ಲ: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಸಾಮಾಜಿಕ ನ್ಯಾಯದ ಬಗ್ಗೆ ಬದ್ಧತೆ ಇರಬೇಕು. ತೋರಿಕೆ ಇರಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಇಂದು ಸಿಎಂ ನಿವಾಸ ಕಾವೇರಿಯಲ್ಲಿ ಹಿರಿಯ ಪತ್ರಕರ್ತ ಡಾ.ಎಂ.ಎಸ್.ಮಣಿ ಅವರ...
ಕೆಂಪೇಗೌಡ ಬಸ್ ನಿಲ್ದಾಣದ ನಿರ್ಮಾತೃ ರಾಜ್ಯದ ಧೀಮಂತ ಸಿಎಂ ಎನಿಸಿಕೊಂಡಿದ್ದ ಆರ್. ಗುಂಡೂರಾವ್ ಪ್ರತಿಮೆ ಅನಾವರಣ
ಬೆಂಗಳೂರು: ದಕ್ಷಿಣ ಏಷ್ಯಾದಲ್ಲೇ ಪ್ರಪ್ರಥಮ ಹಾಗೂ ಅತ್ಯಪೂರ್ವ ಎಂಬ ಖ್ಯಾತಿಯ ಕೆಂಪೇಗೌಡ ಸಾರಿಗೆ ನಿಲ್ದಾಣದ ನಿರ್ಮಾತೃ ರಾಜ್ಯದ ಧೀಮಂತ ಮುಖ್ಯ ಮಂತ್ರಿ ಎನಿಸಿಕೊಂಡಿದ್ದ ಪ್ರಾತ:ಸ್ಮರಣಿಯ ಆರ್. ಗುಂಡೂರಾವ್...