NEWSನಮ್ಮಜಿಲ್ಲೆ

KKRTC: ಪಾದರಕ್ಷೆ ಮಾಡುವ ಲೆದರ್‌ ಸಾಗಣೆ ಮಾಡಿದ ಪ್ರಯಾಣಿಕ : ನಿರ್ವಾಹಕನಿಗೆ ಅಮಾನತು ಶಿಕ್ಷೆ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ವಿಜಯಪುರ: ಸಾರಿಗೆ ಸಂಸ್ಥೆಯ ವಾಹನದಲ್ಲಿ 2ಕೆಜಿಗೂ ಕಡಿಮೆ ಇರುವ ಪಾದರಕ್ಷೆ ಮಾಡಲು ಹದಮಾಡಿದ ಲೆಸರ್‌ಅನ್ನು ಬ್ಯಾಗ್‌ನಲ್ಲಿ ಇಟ್ಟು ಸಾಗಿಸುತ್ತಿದ್ದನ್ನು ಏಕೆ ಚೆಕ್‌ ಮಾಡಿಲ್ಲ ಎಂದು ನಿರ್ವಾಹಕನನ್ನು ಅಮಾನತು ಮಾಡಿರುವ ವಿಷಯ ತಡವಾಗಿ ಬೆಳಕಿಗೆ ಬಂದಿದೆ.

ಸಾರಿಗೆ ನಿಗಮಗಳಲ್ಲಿ ಅಧಿಕಾರಿಗಳ ದರ್ಪ ಇನ್ನು ನಿಂತಿಲ್ಲ. ಕ್ಷುಲ್ಲಕ ಕಾರಣಕ್ಕೆ ಚಾಲನಾ ಸಿಬ್ಬಂದಿಗೆ ಕಿರುಕುಳ ನೀಡುತ್ತಿರುವುದು ಇನ್ನು ಹೆಚ್ಚಾಗುತ್ತಲೇ ಇದೆ. ಕಳೆದ 2021ರ ಡಿಸೆಂಬರ್‌ 25ರಂದು ಸೊಲ್ಲಾಪುರದಿಂದ – ವಿಜಯಪುರ ಮಾರ್ಗವಾಗಿ ಚಲಿಸುತ್ತಿದ್ದ ಬಸ್‌ನಲ್ಲಿ ಚಮ್ಮಾರರೊಬ್ಬರು ಪಾದರಕ್ಷೆ ಮಾಡುವ ಉದ್ದೇಶದಿಂದ ಹದ ಮಾಡಿದ ಚರ್ಮವನ್ನು ಸಾಗಿಸುತ್ತಿದ್ದರು. ಇದೇ ವೇಳೆ ಬಸ್‌ ತಪಾಸಣೆ ಮಾಡಲು ಬಂದ ತಪಾಸಣಾ ಅಧಿಕಾರಿಗಳು ಲೆದರ್‌ ಇರುವ ಬ್ಯಾಗ್‌ ನೋಡಿ ನಿರ್ವಾಹಕನಿಗೆ ಮೆಮೊ ಕೊಟ್ಟಿದ್ದಾರೆ.

ನಿರ್ವಾಹಕ ಈರಣ್ಣ ಎಂಬುವರಿಗೆ ಡಿಸೆಂಬರ್‌ 25ರಂದು ಮೆಮೊ ಕೊಟ್ಟಿದ್ದರು, ಬಳಿಕ ಜನವರಿಯಲ್ಲಿ ಅಮಾನತು ಮಾಡಿದ್ದಾರೆ. ಅಮಾನತು ಮಾಡಿದ 4 ತಿಂಗಳ ಬಳಿಕ ಮುದ್ದೆಬಿಹಾಳ ಘಟಕದಿಂದ ವಿಜಯಪುರ ಘಟಕ 1ಕ್ಕೆ ವರ್ಗಾವಣೆ ಮಾಡಿ ಡ್ಯೂಟಿ ಕೊಟ್ಟಿದ್ದಾರೆ.

ನಿಗಮದಲ್ಲಿ ಪ್ರಯಾಣಿಕರ ಬ್ಯಾಗ್‌ ಚೆಕ್‌ ಮಾಡುವ ಅಧಿಕಾರವನ್ನು ನಿರ್ವಾಹಕರಿಗೆ ಕೊಟ್ಟರೆ ಅವರು ಪ್ರತಿ ಪ್ರಯಾಣಿಕರನ್ನು ಚೆಕ್‌ ಮಾಡುತ್ತಾರೆ. ಆದರೆ ಅಧಿಕಾರವಿಲ್ಲದಕ್ಕೆ ಅಮಾನತಿನ ಶಿಕ್ಷೆ ನೀಡುವುದು ಯಾವ ನ್ಯಾಯ. ಇದರಿಂದ ನಿರ್ವಾಹಕರು ಮಾನಸಿಕವಾಗಿ ಕಿರುಕುಳ ಅನುಭವಿಸುವ ಜತೆಗೆ ಇವರು ಫಿಕ್ಸ್‌ ಮಾಡುವ ಎಲ್ಲ ವಿಚಾರಣೆಗಳನ್ನು ಎದುರಿಸಬೇಕು.

ನಿರ್ವಾಹಕರು ಮಾಡದ ತಪ್ಪಿಗೆ ಈ ರೀತಿ ಶಿಕ್ಷೆ ಕೊಡೋದು, ಅಮಾನತು ಮಾಡುವುದರಿಂದ ಸಂಸ್ಥೆಗೆ ನಷ್ಟವಾಗುವುದಿಲ್ಲವೇ. ಅಲ್ಲದೆ ಅಧಿಕಾರಿಗಳು ತಮಗೆ ಇಷ್ಟ ಬಂದ ರೀತಿ ನಡೆದುಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ.

ಈ ನಿರ್ವಾಹಕ ಈರಣ್ಣ ಮಾಡದ ತಪ್ಪಿಗೆ ಈಗ ವರ್ಗಾವಣೆಗೊಂಡಿರುವ ಘಟಕಕ್ಕೆ ನಿತ್ಯ 200 ಕಿಮೀ ಬಂದು ಹೋಗಬೇಕಾಗಿದೆ. ಇದರಿಂದ ಮಾನಸಿಕವಾಗಿ ಖಿನ್ನತೆಗೆ ಜಾರುತ್ತಿದ್ದಾರೆ. ಹೀಗಾಗಿ ಈರಣ್ಣ ಅವರಿಗೆ ಮೊದಲೇ ಇದ್ದ ಘಟಕಕ್ಕೆ ವರ್ಗಾವಣೆ ಮಾಡಬೇಕು ಎಂದು ಕುಟುಂಬವರು ಮನವಿ ಮಾಡಿದ್ದಾರೆ.

ಇನ್ನು ವಿಜಯಪುರ ಘಟಕ 1ರಲ್ಲಿ ರಜೆ ತೆಗೆದುಕೊಳ್ಳಬೇಕು ಎಂದರೂ ಲಂಚಕೋಡಬೇಕು ಎಂಬ ಆರೋಪ ಕೇಳಿ ಬಂದಿದೆ. ಡಿಪೋ ವ್ಯವಸ್ಥಾಪಕರು ಈ ಬಗ್ಗೆ ಏನನ್ನು ಮಾತನಾಡುವುದಿಲ್ಲ. ಆದರೆ ಎಟಿಎಸ್‌ ರೇವಣ ಸಿದ್ದಪ್ಪ, ಟಿಐ ಮಂಜುನಾಥ, ಲೋನಿ ಸೇರಿದಂತೆ ಒಟ್ಟು 6 ಮಂದಿ ಡ್ಯೂಟಿ ಕೊಡುತ್ತಾರೆ ನಾವು ಎಷ್ಟು ಮಂದಿಗೆ ಈ ರೀತಿ ಲಂಚಕೊಡಬೇಕು ಎಂದು ನೌಕರರು ಆರೋಪಿಸುತ್ತಿದ್ದಾರೆ.

ಇನ್ನಾದರೂ ಅಧಿಕಾರಿಗಳ ವಿರುದ್ಧ ಕೇಳಿ ಬರುತ್ತಿರುವ ಆರೋಪಗಳು ಬಗ್ಗೆ ವಿಚಾರಣೆ ನಡೆಸಿ ಘಟಕಗಳಲ್ಲಿ ನೌಕರರು ಸರಿಯಾಘಿ ಡ್ಯೂಟಿ ಮಾಡಿಕೊಂಡು ಹೋಗುವಂತಹ ವಾತಾವರಣ ನಿರ್ಮಾಣ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

Leave a Reply

error: Content is protected !!
LATEST
KKRTC ಇಂಡಿ ಘಟಕದ ಡಿಎಂ ಕರ್ಮಕಾಂಡ: 1-2ದಿನ ರಜೆಗೆ ಕೊಡಬೇಕು 2ಸಾವಿರ - ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ...