NEWSನಮ್ಮಜಿಲ್ಲೆನಮ್ಮರಾಜ್ಯ

KSRTC ಬೂದಿ ಬಾಬಾಗಳು ಕಮ್ಯೂನಿಸ್ಟ್‌ ಸಿದ್ಧಾಂತ ಅಂದರೆ ತುಂಬಾ ಭೀತಿಗೆ ಒಳಗಾಗುತ್ತಿದ್ದಾರೆ….!

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೂದಿ ಬಾಬಾಗಳು ಕಮ್ಯೂನಿಸ್ಟ್‌ ಸಿದ್ಧಾಂತ ಅಂದರೆ ತುಂಬಾ ಭೀತಿಗೆ ಒಳಗಾಗುತ್ತಿದ್ದಾರೆ. ಇವರ ಸಿದ್ಧಾಂತ ಒಂದೇ ಬೂದಿ ಬಾಬಾಗಳ ರೀತಿಯ ಗುಂಪು ಕಟ್ಟಿಕೊಂಡು ಕಾರ್ಮಿಕರಲ್ಲಿ ಗೊಂದಲ ಮೂಡಿಸಿ ಆಳುವ ಸರ್ಕಾರಕ್ಕೆ ಅನುಕೂಲ ಮಾಡುವ ಹುನ್ನಾರ ಹೊಂದಿರುತ್ತಾರೆ.

ಅದರಿಂದ ಸರ್ಕಾರ ಕಾರ್ಮಿಕರಿಗೆ ವೇತನವನ್ನು ಹೆಚ್ಚಳ ಮಾಡದೇ ಕಾರ್ಮಿಕರನ್ನು ತೀವ್ರ ಆರ್ಥಿಕ ಸಂಕಷ್ಟಗಳಿಗೆ ಗುರಿಪಡಿಸುತ್ತಾರೆ. ನಂತರ ಖಾಸಗೀಕರಣ- ಗುತ್ತಿಗೆ ಆಧಾರಿತ ಕೆಲಸಕ್ಕೆ ನೇಮಕಾತಿ- ಕಿರುಕುಳ ಮತ್ತು ದಬ್ಬಾಳಿಕೆ ಮೂಲಕ ಆಡಳಿತ ನಡೆಸುತ್ತಾರೆ.

ಇದಕ್ಕೆ ಉದಾ: 2020 ಡಿಸೆಂಬರ್, ಏಪ್ರಿಲ್- 2021 ರ ಮುಷ್ಕರ. ಈ ವೇಳೆಯಲ್ಲಿ ಒಂದು ಬಿಡಿಗಾಸು ಕಾರ್ಮಿಕರಿಗೆ ಅನುಕೂಲ ಇಲ್ಲ. ಖಾಸಹಿ ವಾಹಿನಿಯ ಸ್ಟಿಂಗ್ ಆಪರೇಶನ್ ಕೂಡ ಒಂದು. ಸಾವಿರಾರು ಕಾರ್ಮಿಕರನ್ನು ಸೇವೆಯಿಂದ ವಜಾಗೊಳಿಸಿ ಕಾರ್ಮಿಕರಲ್ಲಿ ಭೀತಿಯ ವಾತಾವರಣವನ್ನು ಸೃಷ್ಟಿಸೋದು- ಸಂಘಟನೆಗಳನ್ನು ದೂಷಿಸೋದು ಅವರ ಕಾಯಕವಾಗುತ್ತೆ.

ಅದಕ್ಕೆ ಬೂದಿ ಬಾಬಾಗಳು ಸಹಕಾರಿಯಾಗಿ ಇರುತ್ತಾರೆ. ಕಾರ್ಮಿಕರು, ಕಾರ್ಮಿಕ ವರ್ಗಕ್ಕೆ ಒಂದು ಚಾರಿತ್ರಿಕ ಇತಿಹಾಸವಿದೆ. ದೇಶದಲ್ಲಿ ಸ್ವಾತಂತ್ರ್ಯ ಪೂರ್ವ ಮತ್ತು ನಂತರ ಲಕ್ಷಾಂತರ ಕಾರ್ಮಿಕ ಮುಖಂಡರ ತ್ಯಾಗ ಬಲಿದಾನಗಳಿಂದ ಹತ್ತಾರು ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ.

ನಮಗೆ ತೃಪ್ತಿಯಾಗುವಷ್ಟು ಸೌಲಭ್ಯಗಳು ದೊರಕಿಲ್ಲ. ಅದಕ್ಕೆ ಕಾರಣ ನಮ್ಮನ್ನು ಆಳುತ್ತಿರುವ ಬಂಡವಾಳಶಾಹಿ ಸರ್ಕಾರದ ನೀತಿಗಳು. ದೇಶದ ಕಾರ್ಮಿಕ ವರ್ಗ ಹಾಗೂ ರಾಜ್ಯದ ಕಾರ್ಮಿಕ ವರ್ಗ ನ್ಯಾಯಯುತ ವೇತನಕ್ಕಾಗಿ ನಿರಂತರ ಹೋರಾಟಗಳನ್ನು ನಡೆಸುತ್ತಲೇ ಇದೆ. ಅದರ ಭಾಗವಾಗಿ ಸಾರಿಗೆ ನೌಕರರು ಸಹ ಕಾಲ- ಕಾಲಕ್ಕೆ ಚಳವಳಿಗಳ ಮೂಲಕ ಸೌಲಭ್ಯಗಳನ್ನು ಪಡೆಯುತ್ತಾ ಬಂದಿದ್ದಾರೆ.

ಆದರೆ ಇತ್ತ ಬೂದಿಬಾಬಾಗಳಿಗೆ ಕಾರ್ಮಿಕ ವರ್ಗದ ಇತಿಹಾಸವೇ ಗೊತ್ತಿಲ್ಲ. ಅದು ಅವರಿಗೆ ಬೇಕಾಗಿಯೂ ಇಲ್ಲ. ಆದ್ದರಿಂದ ಸಾರಿಗೆ ನಿಗಮಗಳ ಕಾರ್ಮಿಕರು ಕೂಟವೇ ಒಂದು ಅಕ್ರಮವಾಗಿ ಹುಟ್ಟಿದ್ದು, ಸುಳ್ಳನ್ನೆ ಸತ್ಯ ಅಂತ ನಂಬಿಸಿಲು ಹೊರಿಟಿರುವುದು ಎಂದು ಈಗಾಗಲೆ ಕೂಟದ ಹೋರಾಟದಲ್ಲಿ ಇದ್ದ ನೂರಾರು ಮುಖಂಡರು ಕೂಟದಿಂದ ಹೊರ ಹೋಗಿದ್ದಾರೆ.

ಅದಕ್ಕೆ ಕಾರಣ ನಾನು ಹೇಳಬೇಕಿಲ್ಲ. ಏಕೆಂದು ಈಗಾಗಲೆ ಅದು ಜಗಜ್ಜಾಹೀರಾಗಿದೆ. ಕಮ್ಯೂನಿಸ್ಟ್‌ ಚಳವಳಿಗಳ ಬಗ್ಗೆ ಗಂಧ ಗಾಳಿ ಇಲ್ಲದವರು- ಕಾರ್ಮಿಕ ವರ್ಗ ಚಳವಳಿಯ ಇತಿಹಾಸ ಗೊತ್ತಿಲ್ಲದವರು ಸಾರಿಗೆ ಕಾರ್ಮಿಕರಿಗೆ ಶಾಶ್ವತ ಪರಿಹಾರ ಕೊಡಿಸಲು ಹೊರಟಿದ್ದಾರೆ.

ಈ ಜಗತ್ತಿನಲ್ಲಿ ಇಲ್ಲಿಯವರೆಗೂ ಶಾಶ್ವತ ಪರಿಹಾರ ಸಿಕ್ಕಿರುವ ದಾಖಲೆಗಳು ಎಲ್ಲಿಯೂ ಇಲ್ಲ. ಭ್ರಮೆಗಳ ಮೂಲಕ ಕಾರ್ಮಿಕ ವರ್ಗಕ್ಕೆ ನ್ಯಾಯ ಸಿಗೋದಿಲ್ಲ. ಆಳುವ ವರ್ಗದ ವಿರುದ್ಧ ಸಮರಶೀಲ ಹೋರಾಟಗಳಿಂದ ಮಾತ್ರ ಉತ್ತಮ ವ್ಯವಸ್ಥೆಯತ್ತ ಹೋಗಲು ಸಾಧ್ಯ. ಈ ಬಗ್ಗೆ ಸಾರಿಗೆ ಕಾರ್ಮಿಕರು ಚಿಂತಿಸಬೇಕು.

l ಮಂಜುನಾಥ್ H.S. ಪ್ರಧಾನ ಕಾರ್ಯದರ್ಶಿ, ಕರಾರಸಾನಿಗಮಗಳ ಫೆಡರೇಷನ್ ( CITU)

Leave a Reply

error: Content is protected !!
LATEST
KKRTC ಇಂಡಿ ಘಟಕದ ಡಿಎಂ ಕರ್ಮಕಾಂಡ: 1-2ದಿನ ರಜೆಗೆ ಕೊಡಬೇಕು 2ಸಾವಿರ - ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ...