KSRTC ನೌಕರರ ಕೂಟ- ಜಂಟಿ ಸಮಿತಿ ಸಭೆ ಸೇರುವ ಬಗ್ಗೆ ಎರಡು ದಿನದಲ್ಲಿ ನಿರ್ಣಯ: ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ್
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಾಲ್ಕು ನಿಗಮಗಳ ಸಂಘಟನೆಗಳ ಒಕ್ಕೂಟ ಮತ್ತು KSRTC ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯು ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಪ್ರತ್ಯೇಕವಾಗಿ ಹಲವು ಹೋರಾಟಗಳನ್ನು ಮಾಡುತ್ತಾ ಬರುತ್ತಿದ್ದು, ಈ ಪ್ರತ್ಯೇಕ ಹೋರಾಟಗಳಿಂದ ಸಾರಿಗೆ ನೌಕರರಿಗೆ ಹೇಳಿಕೊಳ್ಳುವಷ್ಟು ಪ್ರತಿಫಲಗಳು ಸಿಕಿಲ್ಲ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ನೌಕರರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಒಗ್ಗೂಡಿ ಒಮ್ಮತದ ಬೇಡಿಕೆಗಳ ಅಡಿಯಲ್ಲಿ ಹೋರಾಟಗಳನ್ನು ಹಮ್ಮಿಕೊಳ್ಳಲು ಸಭೆ ಆಯೋಜಿಸುವ ಬಗ್ಗೆ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳಲ್ಲಿ ಕೂಟದ ರಾಜ್ಯಾಧ್ಯಕ್ಷ ಆರ್.ಚಂದ್ರಶೇಖರ್ ಮನವಿ ಮಾಡಿದ್ದಾರೆ.

ಈ ಸಂಬಂಧ ಗುರುವಾರ ಎಐಟಿಯುಸಿ ಕಚೇರಿಗೆ ಒಕ್ಕೂಟದ ಪದಾಧಿಕಾರಿಗಳು ಭೇಟಿ ನೀಡಿ ಸಭೆ ಆಯೋಜಿಸುವ ಬಗ್ಗೆ ಮನವಿ ಪತ್ರ ಸಲ್ಲಿಸಿ ಬಂದಿದ್ದಾರೆ ಎಂದು ವಿಜಯಪಥಕ್ಕೆ ಚಂದ್ರಶೇಖರ್ ತಿಳಿಸಿದ್ದಾರೆ.
ಇನ್ನು ಈ ವಿಷಯಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಾಲ್ಕು ನಿಗಮಗಳ ಸಂಘಟನೆಗಳ ಒಕ್ಕೂಟ ಮತ್ತು KSRTC ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯು ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಪ್ರತ್ಯೇಕವಾಗಿ ಹಲವು ಹೋರಾಟಗಳನ್ನು ಮಾಡುತ್ತಾ ಬರುತ್ತಿದ್ದು, ಈ ಪ್ರತ್ಯೇಕ ಹೋರಾಟಗಳಿಂದ ಸಾರಿಗೆ ನೌಕರರಿಗೆ ಹೇಳಿಕೊಳ್ಳುವಷ್ಟು ಪ್ರತಿಫಲಗಳು ಸಿಕಿಲ್ಲ. ಕಾರಣ ನಮ್ಮ ಬೇಡಿಕೆಗಳಲ್ಲಿ ನಮಗಿರುವ ಭಿನ್ನಾಭಿಪ್ರಾಯಗಳು ಎಂದು ತಿಳಿಸಿದ್ದಾರೆ.
ಈ ನಮ್ಮ ಸಂಘಟನೆಗಳ ಭಿನ್ನಾಭಿಪ್ರಾಯಗಳ ಅವಕಾಶಗಳನ್ನು ಸರ್ಕಾರ ಮತ್ತು ಸಾರಿಗೆಯ ನಾಲ್ಕೂ ಆಡಳಿತ ಮಂಡಳಿಗಳು ಬಳಸಿಕೊಂಡು, ಒಡೆದು ಆಳುವ ನೀತಿಯನ್ನು ಅನುಸರಿಸುತ್ತಾ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸದೆ ವಿಳಂಬ ನೀತಿಯನ್ನು ಅನುಸರಿಸುತ್ತಿವೆ.
ಹೀಗಾಗಿ ಸಾರಿಗೆ ನೌಕರರ ಹಿತದೃಷ್ಷಿಯಿಂದ ಸಾರಿಗೆ ಸಂಸ್ಥೆಯಲ್ಲಿ ಚಾಲ್ತಿಯಲ್ಲಿ ಇರುವ ಎಲ್ಲ ಸಂಘಟನೆಗಳು ಒಗ್ಗೂಡಿ ಒಮ್ಮತದ ಬೇಡಿಕೆಗಳ ಅಡಿಯಲ್ಲಿ ಹೋರಾಟ ಮಾಡುವುದರಿಂದ ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸಿಕೊಳ್ಳಬಹುದು ಎಂಬ ಆಶಯದೊಂದಿಗೆ ಈ ಹಿಂದೆ ಒಕ್ಕೂಟ ಮತ್ತು ಕೂಟದ ವತಿಯಿಂದ ಹಲವು ಪತ್ರಗಳನ್ನು ತಮ್ಮ ಕಚೇರಿಗೆ ಕಳುಹಿಸಿದರು ತಮ್ಮಿಂದ ಯಾವುದೇ ಉತ್ತರ ಬಂದಿಲ್ಲ.
ಇನ್ನು ಹುಬ್ಬಳ್ಳಿಯಲ್ಲಿ ನಾವು ಡಾ.ಶರ್ಮಾಜಿ ಅವರನ್ನು ಭೇಟಿ ಮಾಡಿ ಅವರು ಸಹ ಒಗ್ಗೂಡಿ ಹೋಗುವ ಬಗ್ಗೆ ಜಂಟಿ ಕ್ರಿಯಾ ಸಮಿತಿಯೊಂದಿಗೆ ಮಾತನಾಡುತ್ತೇನೆ ಎಂದು ತಿಳಿಸಿದ, ತದನಂತರವು ತಮ್ಮಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಮಾಧ್ಯಮಗಳ ಮುಖಾಂತರ ಒಗ್ಗೂಡಿ ಹೋರಾಟ ಮಾಡುವ ಬಗ್ಗೆ ತಮ್ಮಲ್ಲಿ ವಿನಂತಿಸಿದರು ಇದುವರೆಗೂ ನಿಮ್ಮ ಅಭಿಪ್ರಾಯ ತಿಳಿಸಿಲ್ಲ.
ಆದ್ದರಿಂದ 04/05/2026 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಕೂಟ ಮತ್ತು ಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ ಒಂದು ದಿನದ ಧರಣಿ ಸತ್ಯಾಗ್ರಹದಲ್ಲಿ ಎಲ್ಲ ನೌಕರರ ಸಮ್ಮುಖದಲ್ಲಿ ಈ ನಿರ್ಣಾಯವನ್ನು ತೆಗೆದುಕೊಂಡಿದ್ದೇವೆ.
ಹೀಗಾಗಿ ಸಾರಿಗೆ ನೌಕರರ ಹಿತದೃಷ್ಟಿಯಿಂದ ಎಲ್ಲ ಸಂಘಟನೆಗಳು ಸಭೆ ಸೇರಿ ಒಮ್ಮತದ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ಹೋರಾಟಗಳನ್ನು ಹಮ್ಮಿಕೊಳ್ಳಲು ತಾವು ಸಭೆ ಆಯೋಜನೆ ಮಾಡಿದರು ಸರಿ, ಅಥವಾ ನಮಗೇ ಆಯೋಜನೆ ಮಾಡುವಂತೆ ತಿಳಿಸಿದರು ಸರಿಯೇ ನಾವು ಸಭೆ ಆಯೋಜನೆ ಮಾಡುತ್ತೇವೆ. ಇದಕ್ಕಾಗಿ ಈ ಪತ್ರ ತಲುಪಿದ ಎರಡು ದಿನಗಳಲ್ಲಿ ತಮ್ಮ ಉತ್ತರವನ್ನು ನಾವು ನಿರೀಕ್ಷಿಸುತ್ತಿದ್ದೇವೆ ಎಂದು ಕೂಟದ ರಾಜ್ಯಾಧ್ಯಕ್ಷ ಆರ್.ಚಂದ್ರಶೇಖರ್ ತಿಳಿಸಿದ್ದಾರೆ.
Related









