NEWSನಮ್ಮಜಿಲ್ಲೆನಮ್ಮರಾಜ್ಯ

ಮೇ 20ರ ಪೂರ್ವ ನಿರ್ಧಾರಿತ ಮುಷ್ಕರ ಮಾಡಿ ಪೌರುಷ ತೋರಿಸಿ: ಜಂಟಿ ಸಮಿತಿಗೆ ಒಕ್ಕೂಟದ ಜಯರಾಮ್‌ ರಾಥೋಡ್‌ ಸವಾಲ್‌

ಒಳ ಒಪ್ಪಂದದ ಪಿತಾಮಹರು ಹೋರಾಟದ ಮುಖವಾಡ ಧರಿಸಿ ನೌಕರರ ಸಮಾಧಿ ಮೇಲೆ ಸವಾರಿ ಮಾಡುವ ಜಂಟಿ ಅಯೋಗ್ಯರು.

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಜಂಟಿ ಅ*ಗ್ಯರು ನಿಮಗೆ ನಿಜಕ್ಕೂ ದಮ್ಮು ತಾಕತ್ತು ಅನ್ನೋದಿದ್ರೆ ಇದೇ ಮೇ 20 ರಂದು ಪೂರ್ವ ನಿರ್ಧಾರಿತ ಸಾರಿಗೆ ನೌಕರರ ಮುಷ್ಕರ ಮಾಡಿಯೇ ನಿಮ್ಮ ಪೌರುಷ ತೋರಿಸಬೇಕು ಎಂದು ಕೂಟ ಹಾಗೂ ಒಕ್ಕೂಟದ ಪದಾಧಿಕಾರಿ ಜಯರಾಮ್‌ ರಾಥೋಡ್‌ ಸವಾಲ್‌ ಹಾಕಿದ್ದಾರೆ.

ಈ ಸಂಬಂಧ ಹೇಳಿಕೆ ನೀಡಿರುವ ಅವರು,  ಸಾರಿಗೆ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿಯ ನೀವು ಈ ಹೋರಾಟದಿಂದ ಹಿಂದೆ ಸರಿಯುತ್ತೀರೆಂಬ ನಿಮ್ಮ ಸಂಘಟನೆಯ ಮುಖಂಡರುಗಳ ಆಂತರಿಕ ವರದಿ ನನ್ನ ಬಳಿ ಇದೆ… ಎಚ್ಚರ ಎಂದು  ಹೇಳಿದ್ದಾರೆ.

ಸಾರಿಗೆ ನೌಕರರಿಗೆ ಒಳಿತಾಗೋ ಹಾಗಿದ್ದರೆ ಕೂಟ ಮತ್ತು ಒಕ್ಕೂಟ ಯಾವ ತ್ಯಾಗಕ್ಕೂ ಸಿದ್ಧ ಎಂದು ವಾಗ್ದಾನ ಮಾಡಿದ್ವಿ ನುಡಿದಂತೆ ನಡೆಯುತ್ತಿದ್ದೇವೆ. ಆದರೆ ಜಂಟಿ ಕ್ರಿಯಾ ಸಮಿತಿ ನೌಕರರಿಗೆ ಒಳ್ಳೆಯದನ್ನ ಮಾಡುವ ಇಚ್ಛಾಶಕ್ತಿ ಇದ್ದರೆ ನಿನ್ನೆ ದಿನ ಒಬ್ಬ ಹಿಂಬಾಲಕನನ್ನು ಬಿಟ್ಟು ಆಡಿಯೋ ಮಾಡಿ ನೌಕರರಲ್ಲಿ ಗೊಂದಲ ಸೃಷ್ಟಿ ಮಾಡುತ್ತಿರಲಿಲ್ಲ.

ಇನ್ನು ಜಂಟಿ ಗಂಡು ಮಕ್ಕಳು ಇದ್ದರೆ ನೌಕರರನ್ನು ವಿರೋಧ ಕಟ್ಟಿಕೊಂಡು ಹೋರಾಟ ಮಾಡಿಯೇ ತೀರಬೇಕು, ಇಲ್ಲದಿದ್ದರೆ ಬಳೆ ತೊಟ್ಟುಕೊಂಡು ಮನೆಯಲ್ಲಿ ಕುಳಿತುಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಸಾರಿಗೆ ನೌಕರರ ಏಳಿಗೆಗಾಗಿ ಮತ್ತು ಭವಿಷ್ಯದ ಬೆಳವಣಿಗೆಗಾಗಿ ಒಂದು ಹೆಜ್ಜೆ ಹಿಂದೆ ಇಟ್ಟು ಕೂಟ ಮತ್ತು ಒಕ್ಕೂಟ ಒಕ್ಕೋರಲಿನ ಹೋರಾಟಕ್ಕೆ ಮುಂದಾಗಿದೆ. ನಿಮಗೆ ನೌಕರರ ಹಿತಾಶಕ್ತಿ ಬೇಕಾಗಿದ್ದರೆ ಒಂದೇ ವೇದಿಕೆಯಿಂದ ಹೋರಾಟಕ್ಕೆ ಮುಂದಾಗಿ, ಇಲ್ಲವಾದರೆ ನೈತಿಕ ಹೊಣೆ ಹೊತ್ತು ಸಂಘಟನೆಯನ್ನು ವಿಸರ್ಜನೆ ಮಾಡಿ ಬಳೆ ತೊಟ್ಟು ಮನೆಗೆ ಹೋಗಿ ಎಂದು ಹೇಳಿದ್ದಾರೆ.

ಅಲ್ಲದೆ ಒಳ ಒಪ್ಪಂದದ ಪಿತಾಮಹರು ಹೋರಾಟದ ಮುಖವಾಡ ಧರಿಸಿ ನೌಕರರ ಸಮಾಧಿ ಮೇಲೆ ಸವಾರಿ ಮಾಡುವ ಜಂಟಿ ಅಯೋಗ್ಯರು. ನಿಮಗೆ ನಿಜಕ್ಕೂ ದಮ್ಮು ತಾಕತ್ತು ಅನ್ನೋದಿದ್ರೆ ಇದೇ ಮೇ 20 ರಂದು ಪೂರ್ವ ನಿರ್ಧಾರಿತ ಸಾರಿಗೆ ನೌಕರರ ಮುಷ್ಕರ ಮಾಡಿಯೇ ನಿಮ್ಮ ಪೌರುಷ ತೋರಿಸಬೇಕು ಎಂದು ಸವಾಲು ಹಾಕಿದ್ದಾರೆ.

Megha
the authorMegha

Leave a Reply

error: Content is protected !!
Latest news
ಮೇ 20ರ ಪೂರ್ವ ನಿರ್ಧಾರಿತ ಮುಷ್ಕರ ಮಾಡಿ ಪೌರುಷ ತೋರಿಸಿ: ಜಂಟಿ ಸಮಿತಿಗೆ ಒಕ್ಕೂಟದ ಜಯರಾಮ್‌ ರಾಥೋಡ್‌ ಸವಾಲ್‌ KSRTC ನೌಕರರ ಕೂಟ- ಜಂಟಿ ಸಮಿತಿ ಸಭೆ ಸೇರುವ ಬಗ್ಗೆ ಎರಡು ದಿನದಲ್ಲಿ ನಿರ್ಣಯ: ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ್‌ ಟಿವಿಕೆ ಸರ್ಕಾರ ರಚನೆಗೆ ಸಂಖ್ಯಾಬಲದ ಅಡ್ಡಿ: ರಾಜ್ಯಪಾಲರ ಪವರ್ ಏನು, ಸುಪ್ರೀಂಕೋರ್ಟ್ ವಕೀಲರಾದ ಶಿವರಾಜು ಏನು ಹೇಳುತ್ತಾ... ರಾಜೀನಾಮೆ ನೀಡದೇ ಹೈಡ್ರಾಮಾ ಮಾಡಿದ್ದ ಮಮತಾ ಬ್ಯಾನರ್ಜಿ- ಸರ್ಕಾರ ವಜಾಗೊಳಿಸಿದ ರಾಜ್ಯಪಾಲ KSRTC: ನಿವೃತ್ತರಾದ 25ದಿನದೊಳಗೆ ಭವಿಷ್ಯ ನಿಧಿ ಪಾವತಿಸದಿದ್ದರೆ ಸಂಬಂಧಿಸಿದ ಅಧಿಕಾರಿಗಳೇ ವಿಳಂಬದ ಬಡ್ಡಿ ಬರಿಸಬೇಕು- ಪ... ಅನ್ನದಾತರಿಗೆ ಸಾಲ ಕೊಡಲು ಸಿಬಿಲ್ ಸ್ಕೋರ್ ತಾಳೆ ಹಾಕುವ ಪದ್ಧತಿ ಕೈಬಿಡಬೇಕು: ಆರ್‌ಬಿಐ ಅಧಿಕಾರಿಗಳಿಗೆ ಕುರುಬೂರು ಶಾಂತಕ... ಬಸ್–ತೈಲ ಟ್ಯಾಂಕರ್ ನಡುವೆ ಡಿಕ್ಕಿ: 16 ಮಂದಿ ಸಜೀವ ದಹನ, ಕ್ಷಣಾರ್ಧದಲ್ಲಿ ಹೊತ್ತಿ ಉರಿದ ವಾಹನಗಳು KSRTC ಸಂಸ್ಥೆಯ ನೌಕರರ ಬಾಳು ಹಸನು ಮಾಡಲು ಸಂಘಟನೆಗಳ ನಾಯಕರು ಒಗ್ಗಟ್ಟಾಗಿ: ಜೀವನ್ ಮಾರ್ಟಿಸ್ ಮನವಿ ಟನ್‌ ಕಬ್ಬಿಗೆ 4500 ರೂ. ನಿಗದಿಗೊಳಿಸಿ: ಕೇಂದ್ರ ಸರ್ಕಾರಕ್ಕೆ ಅತ್ತಹಳ್ಳಿ ದೇವರಾಜ್ ಆಗ್ರಹ ಟನ್‌ ಕಬ್ಬಿಗೆ 3650 ರೂ. ಎಫ್ಆರ್‌ಪಿ ದರ ಘೋಷಣೆ ಮಾಡಿರುವ ಕೇಂದ್ರ ಸರ್ಕಾರದ ನಡೆ ಸಲ್ಲ- 4500 ರೂ. ನಿಗದಿಗೊಳಿಸಬೇಕು: ಕ...