CRIMENEWSVideosನಮ್ಮರಾಜ್ಯ

KSRTC: ಡೀಸೆಲ್‌ ಕಳ್ಳತನ ಪತ್ತಹಚ್ಚಿ ಸಂಸ್ಥೆಗೆ ವರ್ಷಕ್ಕೆ ₹15.30ಕೋಟಿ ಉಳಿಸಿದ ಪಾಂಡವಪುರ ಘಟಕದ ಸಿಬ್ಬಂದಿ ಫಾರೂಕ್‌ ಖಾನ್‌..!

ವಿಜಯಪಥ ಸಮಗ್ರ ಸುದ್ದಿ

ಇದು ವಿಜಯಪಥದಲ್ಲಿ ಮಾತ್ರ 

ಮಂಡ್ಯ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಪ್ರತಿದಿನ ಕಳವಾಗುತ್ತಿದ್ದ 5 ಸಾವಿರ ಲೀಟರ್‌ ಡೀಸೆಲ್‌ ಪತ್ತೆಹಚ್ಚುವ ಮೂಲಕ ಸಂಸ್ಥೆಗೆ ಪ್ರತಿದಿನ ಲಾಸ್‌ ಆಗುತ್ತಿದ್ದ ಅಂದಾಜು ₹4,25,000 ಉಳಿಸುವಲ್ಲಿ ಸಂಸ್ಥೆಯ ಮಂಡ್ಯ ವಿಭಾಗದ ಪಾಂಡವಪುರ ಘಟಕದ ಸಿಬ್ಬಂದಿ ಮಹತ್ವದ ಕಾರ್ಯ ಮಾಡಿದ್ದಾರೆ.

KSRTC ಮಂಡ್ಯ ವಿಭಾಗದ ಪಾಂಡವಪುರ ಘಟಕದಲ್ಲಿ ಕಿರಿಯ ಸಹಾಯಕರಾಗಿರುವ ಫಾರೂಕ್ ಖಾನ್‌ ಅವರು ಕಳ್ಳತನವನ್ನು ಪತ್ತೆಹಚ್ಚಿ ಸಂಸ್ಥೆಯಿಂದ ಪ್ರತಿದಿನ ಸೋರಿಕೆಯಾಗುತ್ತಿದ್ದ 4.25 ಲಕ್ಷ ರೂಪಾಯಿಯನ್ನು ಉಳಿಸಿದ ನಿಷ್ಠಾವಂತ ಸಿಬ್ಬಂದಿಯಾಗಿದ್ದಾರೆ.

ಡೀಸೆಲ್‌ ಕಳವು ಪತ್ತೆಹಚ್ಚಿದ್ದು ಹೇಗೆ?: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 86 ಘಟಗಳಿಗೆ ಹಾಗೂ ಇತರರೆ ಸಹೋದರ ಸಂಸ್ಥೆಗಳಿಗೆ ಇಂಧನವನ್ನು ಪುರೈಸಲು HPCL ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಹೀಗೆ ಒಂದು ದಿನಕ್ಕೆ ಸರಿಸುಮಾರು ಸಂಸ್ಥೆಗೆ 6ಲಕ್ಷ ಲೀಟರ್ ಡೀಸಲ್ ಬೇಕಾಗುತ್ತದೆ. ಅದಕ್ಕೆ ಈ ಕಂಪನಿಯಿಂದ ಹಾಸನ/ ಬೆಂಗಳೂರು/ ಮಂಗಳೂರು/ ಹುಬ್ಬಳ್ಳಿ ಟರ್ಮಿನಲ್ ನಿಂದ ದಿನಕ್ಕೆ ಅಂದಾಜು 150 ಟ್ರಕ್ ಲೋಡ್ ಮಾಡಲಾಗುತ್ತದೆ.

ಹೀಗಿರುವಾಗ ಇದೇ ಮೇ 13-2025ರಂದು ಹಾಸನ ಟರ್ಮಿನಲ್‌ನಿಂದ ಮಂಡ್ಯ ವಿಭಾಗದ ಪಾಂಡವಪುರ ಘಟಕಕ್ಕೆ 20,000 ಲೀಟರ್ ಡೀಸೆಲ್‌ ಪುರೈಸಲು TN02 BH3039 ವಾಹನ ಬಂದಿದೆ. ಡೀಸೆಲ್ ಅನ್ನು ಅನ್‌ಲೋಡ್ ಮಾಡುವ ಸಂದರ್ಭದಲ್ಲಿ ಸುಮಾರು 130 ಲೀಟರ್ ಡೀಸಲ್ ಕಡಿಮೆ ಇಂಧನ ಟ್ಯಾಂಕ್‌ನಲ್ಲಿ ತಂದಿರುವುದನ್ನು ಆದೇ ಘಟಕದಲ್ಲಿ (ಪಾಂಡವಪುರ) ಕಿರಿಯ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿರುವ ಫಾರೂಕ್ ಖಾನ್ ಅವರು ಪರಿಶೀಲಿಸಿದರು.

ನಂತರ ಅವರು ಟ್ಯಾಂಕರ್ ಚಾಲಕನನ್ನು ಗಧರಿಸಿ ಸೂಕ್ಷ್ಮವಾಗಿ ಪರಿಶೀಲಿಸಲು ವಾಹನವನ್ನು ರಾಂಪಿಗೆ ಹಾಕಿ ಅಲ್ಲಿ ಪರಿಶೀಲಿಸಿದಾಗ 4ನೇ ಕಂಪಾಟ್ಮೆಂಟ್ ಡೆಲಿವರಿ ಪೈಪ್‌ಗೆ ಒಂದು flexible pipe ಅಳವಡಿಸಿ, ಡೀಸಲ್ ಟ್ಯಾಂಕಿನ ಒಳಭಾಗದಿಂದ ಅದೆ ಟ್ಯಾಂಕರ್ ವಾಹನದ ಡೀಸೆಲ್ ಟ್ಯಾಂಕಿಗೆ ಅಕ್ರಮವಾಗಿ ಡೀಸಲ್ ತುಂಬಿಸಿಕೊಳ್ಳುವ ಸಂಪರ್ಕ ಕಲ್ಪಿಸಿಕೊಂಡಿರುವುದನ್ನು ಪತ್ತಹಚ್ಚಿದರು.

ಹೀಗೆ ಅಕ್ರಮವಾಗಿ ಡೀಸಲ್ ತುಂಬಿಸಿಕೊಳ್ಳುವುದಕ್ಕೆ ಮತ್ತೊಂದು ಸಂಪರ್ಕ ಕಲ್ಪಿಸಿಕೊಂಡಿರುವ ಬಗ್ಗೆ ಇನ್ನಷ್ಟು ಆಳವಾಗಿ ಪರಿಶೀಲಿಸಲು ತೂಕ ಮತ್ತು ಮೌಲ್ಯಮಾಪನ ಇಲಾಖೆಗೆ ದೂರು ಸಲ್ಲಿಸಿದರು. ಇದಾದ ನಂತರ ಮೌಲ್ಯಮಾಪನ ಇಲಾಖೆ ಅಧಿಕಾರಿಗಳ ತಂಡ ಘಟಕಕ್ಕೆ ಭೇಟಿ ನೀಡಿ ವಾಹನವನ್ನು ವಶಪಡಿಸಿಕೊಂಡು ಈ ಅಕ್ರಮ ಕಳ್ಳತನವನ್ನು ಆ ಟ್ಯಾಂಕರ್ ಅವರು ಮಾಡುತಿದ್ದ ಬಗ್ಗೆ ಖಾತ್ರಿಪಡಿಸಿದರು.

ಅಂದರೆ ಹೀಗೆ ಒಂದು ದಿನಕ್ಕೆ ಸುಮಾರು 45-50 ಲೋಡ್ ಟ್ಯಾಂಕರ್ ಹಾಸನ ಟರ್ಮಿನಲ್‌ ನಿಂದ ಸಂಸ್ಥೆಗೆ ಇಂಧನ ಪೂರೈಸಲಾಗುತ್ತಿದೆ. ಒಂದು ವಾಹನಕ್ಕೆ ಕನಿಷ್ಠ ಆ ಚಾಲಕರು100 ಲೀಟರ್ ಕಳ್ಳತನ ಮಾಡಿದರೂ 50×100= 5000 ಲೀಟರ್ ಕಳವು ಮಾಡುತ್ತಾರೆ. ಈ 5000 ಲೀಟರ್‌ಗೆ ₹85 ರಂತೆ ಲೆಕ್ಕಮಾಡಿದರೂ ಕೂಡ ₹4,25,000 ಸಂಸ್ಥೆಗೆ ಒಂದು ದಿನಕ್ಕೆ ನಷ್ಟ ಆಗುತ್ತಿತ್ತು.

ಕಿರಿಯ ಸಹಾಯಕ ಫಾರೂಕ್ ಖಾನ್ ಈ ಅಕ್ರಮ ಜಾಲವನ್ನು ಕಂಡುಹಿಡಿದರು. ಇದಾದ ಬಳಿಕ ಸಂಸ್ಥೆಯ ಎಲ್ಲ ಘಟಗಳು ಈ ಬಗ್ಗೆ ಪರಿಶೀಲನೆ ಮಾಡುತ್ತಿದ್ದಾರೆ. ಈನ್ನು ಈ ಟ್ಯಾಂಕರನ್ನು ಘಟಕದಲ್ಲಿಯೇ ಜಪ್ತಿ ಮಾಡಿ ಪ್ರಕರಣ ದಾಖಲಿಸಲಾಗಿದೆ.

ಮಾಹಿತಿ ಪ್ರಕಾರ ಈ ಟ್ಯಾಂಕರ್ ಚಾಲಕ ಈ ಪ್ರಕರಣವನ್ನು ಮುಚ್ಚಿಹಾಕಲು ಮೈ*ಲ್‌ ಅಧ್ಯಕ್ಷರು, ಇತರ ರಾಜಕಾರಣಿಗಳಿಂದ ದೂರವಾಣಿ ಮೂಲಕ ಒತ್ತಡ ತಂದಿದ್ದು ಅಲ್ಲದೆ ₹5ಲಕ್ಷ ಆಮೀಷ ಒಡ್ಡಿ  ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನ ಮಾಡಿದ್ದನು. ಆದರೆ ಫಾರೂಕ್ ಖಾನ್ ಯಾವ ಒತ್ತಡ ಅಥವಾ ಆಮೀಷಕ್ಕೆ ಮಣಿಯದೆ ಅದನ್ನು ತಳ್ಳಿಹಾಕಿ ಪ್ರಕರಣವನ್ನು ಶತಾಯಗತಾಯ ಬಿಗಿ ಮಾಡಿ ದೂರು ದಾಖಲಿಸಿದ್ದಾರೆ.

ಇಂತಹ ಅಭೂತಪೂರ್ವ ನಿಸ್ವಾರ್ಥ ಸೇವೆ ಸಲ್ಲಿಸುವ ಮೂಲಕ ಸಂಸ್ಥೆಗೆ ದಿನಕ್ಕೆ 4.25 ಲಕ್ಷ ರೂ.ಗಳು ಎಂದರೂ ತಿಂಗಳಿಗೆ 1,27,50,000 ರೂಪಾಯಿ ಅಂದರೆ ವರ್ಷಕ್ಕೆ 15,30,00000 ರೂಪಾಯಿಯನ್ನು ಉಳಿಸಿರುವ ಇಂಥವರನ್ನು ಗುರಿತಸಬೇಕಾಗಿದೆ. ಜತೆಗೆ ಇಂಥವರನ್ನು ಪ್ರೋತ್ಸಾಹಿಸಿ ಸಂಸ್ಥೆಯನ್ನು ಉಳಿಸೋಣಾ ಬೆಳೆಸೋಣ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಇತರ ನೌಕರರಿಗೂ ಕರೆ ನೀಡಬೇಕು ಎಂಬುವುದು ವಿಜಯಪಥದ ಕಳಕಳಿಯ ಮನವಿ.

ಭಾರಿ ನೋವಿನ ಸಂಗತಿ- ಎಂದರೆ ಮೇ 13ರಂದು ಪ್ರಕರಣ ನಡೆದಿದ್ದು ಕೋಟಿ ಕೋಟಿ ರೂ.ಗಳನ್ನು ಸಂಸ್ಥೆಗೆ ಉಳಿಸಿದ್ದಾರೆ ಎಂದು  ಈವರೆಗೂ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳಾಗಲಿ ಅಥವಾ ಸಂಬಂಧಪಟ್ಟ ಇತರೆ ಯಾವುದೇ ಅಧಿಕಾರಿಗಳಾಗಲಿ ಫಾರೂಕ್‌ ಅವರಿಗೆ ಒಂದು ಅಭಿನಂದನೆ ತಿಳಿಸದಿರುವುದು ಭಾರಿ ನೋವಿನ ಸಂಗತಿ.

Deva
the authorDeva

Leave a Reply

error: Content is protected !!