NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗುತ್ತಿದ್ದ ಮಹಿಳೆ ಬಸ್‌ನಲ್ಲಿ ಕಳೆದುಕೊಂಡಿದ್ದ ₹1ಲಕ್ಷ ವಾಪಸ್‌ಕೊಟ್ಟು ಪ್ರಾಮಾಣಿಕತೆ ಮೆರೆದ ನೌಕರರು

ವಿಜಯಪಥ ಸಮಗ್ರ ಸುದ್ದಿ

ಭದ್ರಾವತಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರು ಪ್ರಾಮಾಣಿಕತೆ ಮತ್ತು ಮಾನವೀಯತೆ ಮೆರೆಯುವುದರಲ್ಲಿ ಯಾವಾಗಲು ಒಂದು ಹೆಜ್ಜೆ ಮುಂದಿದ್ದಾರೆ ಎಂಬುವುದು ಮತ್ತೆ ಮತ್ತೆ ಅವರು ಮಾಡುವ ಕಾರ್ಯಗಳಿಂದಲೇ ಸಾಬೀತಾಗುತ್ತಿದೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಅದಕ್ಕೆ ಮತ್ತೊಂದು ತಾಜಾ ನಿದರ್ಶನ ಎಂದರೆ ಇತ್ತೀಚೆಗೆ ಭದ್ರಾವತಿ ಘಟಕದ ವಾಹನ ಸಂಖ್ಯೆ KA 17 F 1837 ಅನುಸೂಚಿ ಸಂಖ್ಯೆ 15/27 ಕೈಮರ ಮಾರ್ಗವಾಗಿ ಚಲಿಸುತ್ತಿದ್ದ ಬಸ್‌ನಲ್ಲಿ ಪ್ರಯಾಣಿಕರೊಬ್ಬರು ಮರೆತು ಬಿಟ್ಟುಹೋಗಿದ್ದ ಒಂದು ಲಕ್ಷ ರೂಪಾಯಿ ನಗದು ಇದ್ದ ಪರ್ಸ್‌ಅನ್ನು ವಾಪಸ್‌ ಅವರ ಕೈ ಸೇರಿಸುವ ಮೂಲಕ ನಾವು ಪ್ರಾಮಾಣಿಕರು ಎಂದು ಸಾಬೀತುಪಡಿಸಿದ್ದಾರೆ ಚಾಲನಾ ಸಿಬ್ಬಂದಿ.

ಹೌದು! ಸಂಸ್ಥೆಯ ಬಸ್‌ನಲ್ಲಿ ಪ್ರಯಾಣಿಸಿದ ಮಹಿಳೆಯೊಬ್ಬರು ಇಳಿಯುವಾಗ ತಮ್ಮ ಪರ್ಸ್‌ ಬಿಟ್ಟಿದ್ದು ಆ ಪರ್ಸ್‌ನಲ್ಲಿ ಒಂದು ಲಕ್ಷ ನಗದು ಹಣ ಇತ್ತು. ಆ ಮಹಿಳೆ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗುತ್ತಿದ್ದರು. ಬಸ್‌ ನಿಲ್ದಾಣಕ್ಕೆ ಬಸ್‌ ಬರುತ್ತಿದ್ದಂತೆ ಆ ಮಹಿಳೆ ತಾನು ತಂದಿದ್ದ ಹಣವಿದ್ದ ಪರ್ಸ್‌ ಮರೆತು ಇಳಿದು ಹೋಗಿದ್ದರು. ಬಳಿಕ ನಿರ್ವಾಹಕರಾದ ಸೋಮಪ್ಪ ಭಜಂತ್ರಿ ಸೀಟ್‌ನಲ್ಲೇ ಇದ್ದ ಪರ್ಸ್‌ವೊಂದನ್ನು ಗಮನಿಸಿ ಚಾಲಕ ವಿಜಯ ಕುಮಾರ್‌ ಅವರಿಗೆ ತಿಳಿಸಿದ್ದಾರೆ.

ಇತ್ತ ಬಸ್‌ ಇಳಿದು ಸ್ವಲ್ಪದೂರ ಹೋಗಿದ್ದ ಆ ಮಹಿಳೆ ಪರ್ಸ್‌ ಕಳೆದುಕೊಂಡಿರುವುದು ಅರಿವಾಗಿ ವಾಪಸ್‌ ಬಸ್‌ ಬಳಿ ಬಂದು ಹುಡುಕಾಡುತ್ತಿದ್ದರು. ಆ ವೇಳೆ ಸಂಸ್ಥೆಯ ಚಾಲಕರಾದ ವಿಜಯ ಕುಮಾರ D.K. ಬಿ. ಸಂಖ್ಯೆ-6066 ಹಾಗೂ ನಿರ್ವಾಹಕ ಸೋಮಪ್ಪ ಭಜಂತ್ರಿ ಚಾ/ನಿ-2046 ಅವರು ಕರೆದು ವಿಚಾರಿಸಿದಾಗ ಆಕೆ ಹಣ ಕಳೆದುಕೊಂಡಿರುವುದು ಖಚಿತವಾಯಿತು. ಸರಿ ನೀವು ಭಯಪಡುವ ಅಗತ್ಯವಿಲ್ಲ ಎಂದು ಹೇಳಿ ಹಣ ಕಳೆದುಕೊಂಡ ಆ ಮಹಿಳೆಗೆ ಧೈರ್ಯತುಂಬಿ 1ಲಕ್ಷ ರೂ ಇದ್ದ ಪರ್ಸ್‌ಅನ್ನು ತೆಗೆದು ಆಕೆಯ ಕೈಗಿತ್ತರು.

ಹಣದ ಪರ್ಸ್‌ ಸಿಕ್ಕ ಖುಷಿಯಲ್ಲಿ ಆ ಮಹಿಳೆ ಚಾಲಕ ಮತ್ತು ನಿರ್ವಾಹಕರಿಗೆ ಅಭಿನಂದನೆ ತಿಳಿಸುತ್ತಿದ್ದಂತೆ ಕಣ್ಣಾಲಿಗಳು ತೇವವಾದವು. ಈ ಹಣ ನನಗೆ ಸಿಗದಿದ್ದಿದ್ದರೆ ಶಸ್ತ್ರಚಿಕಿತ್ಸೆ ಆಗುತ್ತಿರಲಿಲ್ಲ ಎಂದು ಹೇಳುವ ಮೂಲಕ ಸಿಬ್ಬಂದಿಯ ಪ್ರಾಮಾಣಿಕತೆಗೆ ತಲೆ ಬಾಗಿದರು.

ಇತ್ತ ಒಂದುವೇಳೆ ಚಾಲಕ ಮತ್ತು ನಿರ್ವಾಹಕರು ಪರ್ಸ್‌ ನೋಡೆ ಇಲ್ಲ ಎಂದು ಹೇಳಿದ್ದರೆ ಅದನ್ನು ನಾವು ನೀವು ಎಲ್ಲ ನಂಬಲೇ ಬೇಕಿತ್ತು. ಕಾರಣ ಆ ಮಹಿಳೆ ಎಲ್ಲಿ ಪರ್ಸ್‌ ಕಳೆದುಕೊಂಡರು ಎಂಬುವುದು ಯಾರಿಗೂ ಗೊತ್ತಿಲ್ಲ. ಜತೆಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಸಹಪ್ರಯಾಣಿಕರಲ್ಲಿ ಯಾರಿಗಾರದರೂ ಆ ಪರ್ಸ್‌ ಸಿಕ್ಕಿರಬಹುದು ಎಂದು ಸುಮ್ಮನಾಗುತ್ತಿದ್ದೆವು.

ಆದರೆ ಚಾಲಕ ಮತ್ತು ನಿರ್ವಾಹಕರು ಆ ರೀತಿ ಮಾಡದೆ ತಮಗೆ ಸಿಕ್ಕ ಒಂದು ಲಕ್ಷ ರೂ.ಗಳಿದ್ದ ಪರ್ಸ್‌ಅನ್ನು ಸಂಬಂಧಪಟ್ಟವರಿಗೆ ತಲುಪಿಸುವ ಮೂಲಕ ಪ್ರಾಮಾಣಿಕತೆ ಜತೆಗೆ ಮಾನವೀಯತೆ ಮೆರೆದು ಇತರರಿಗೂ ಮಾದರಿಯಾಗಿದ್ದಾರೆ. ಒಟ್ಟಾರೆ ಬಸ್‌ನಲ್ಲಿ ಈ ರೀತಿ ಹಣ ಆಭರಣಗಳನ್ನು ಕೆಳದುಕೊಂಡ ಹಲವಾರು ಪ್ರಯಾಣಿಕರಿಗೆ ಅವರ ವಸ್ತುಗಳನ್ನು ಅವರಿಗೇ ಮರಳಿಸುವ ಮೂಲಕ ಸಾರಿಗೆ ಸಂಸ್ಥೆಯಲ್ಲಿ ಹಲವಾರು ನೌಕರರು ಪ್ರಾಮಾಣಿಕತೆ ಮೆರೆಯುತ್ತಿದ್ದಾರೆ. ಇದು ಹೆಮ್ಮೆಯ ವಿಷಯ.

ಇನ್ನು ಈ ರೀತಿ ಪ್ರಾಮಾಣಿಕತೆ ಮೆರೆಯುತ್ತಿರುವ ನೌಕರರನ್ನು ಗುರುತಿಸಿ ಅವರನ್ನು ಇನ್ನಷ್ಟು ಉತ್ತೇಜಿಸುವ ಸಲುವಾಗಿ ಸಂಸ್ಥೆಯ ಉನ್ನತ ಅಧಿಕಾರಿಗಳು ಮತ್ತು ಸಾರಿಗೆ ಸಚಿವರು ಗೌರವಿಸುವ ಕೆಲಸವನ್ನು ಮಾಡಬೇಕು. ಜತೆಗೆ ಅವರಿಗೆ ಸಿಗಬೇಕಿರುವ ಸೌಲಭ್ಯಗಳನ್ನು ದೊರಕಿಸಿಕೊಡಲು ಮುಂದಾಗಬೇಕು ಎಂಬ ಅಭಿಪ್ರಾಯವನ್ನು ಪ್ರಜ್ಞಾವಂತ ಮಂದಿ ವ್ಯಕ್ತಪಡಿಸಿದ್ದಾರೆ.

Leave a Reply

error: Content is protected !!
LATEST
APSRTC ನೌಕರರು ಸಂತೋಷವಾಗಿದ್ದಾರೆ, ಕರ್ನಾಟಕದ ಸಾರಿಗೆ ನೌಕರರು ತೊಂದರೆಗೆ ಒಳಗಾಗಿದ್ದಾರೆ ಇದಕ್ಕೆ ಕಾರಣರಾರು? APSRTC ನೌಕರರಿಗೆ ಸರ್ಕಾರದಿಂದಲೇ ವೇತನ ಪಾವತಿ, 5 ತಿಂಗಳ ಫ್ಯಾಮಿಲಿ ಪಾಸ್‌, ಇನ್ನಷ್ಟು ಸೌಲಭ್ಯಗಳು ಸೇರ್ಪಡೆ BBMP: ನಗರದಲ್ಲಿ ವಿಪತ್ತು ನಿರ್ವಹಣೆಯ ನಿವಾರಣೆಗೆ ತುರ್ತು ಕ್ರಮ: ತುಷಾರ್ ಗಿರಿನಾಥ್ ಕೆಎಸ್‌ಆರ್‌ಟಿಸಿ ರಾಮನಗರ: ಹೊಸ ETM ಮಷಿನ್ ಅವಾಂತರ- ಪಾಸ್ ನಮೂದಿಸಿದರೂ ಟಿಕೆಟ್ ಬರುತ್ತದೆ ! KSRTC: ಇದು ನಿನ್ನ ಮಗುವಲ್ಲ, ಪ್ಯಾಸೆಂಜರ್‌, ಫ್ಯಾಮಿಲಿ ಎದುರೆ ಸಹೋದ್ಯೋಗಿಯ ಅವಮಾನಿಸಿದ ಕಂಡಕ್ಟರ್‌!!? ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KKRTC ಇಂಡಿ ಘಟಕದ ಡಿಎಂ ಕರ್ಮಕಾಂಡ: 1-2ದಿನ ರಜೆಗೆ ಕೊಡಬೇಕು 2ಸಾವಿರ - ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ