NEWSದೇಶ-ವಿದೇಶರಾಜಕೀಯ

ನರೇಂದ್ರ ಮೋದಿ -ಕಮಲಾ ಹ್ಯಾರಿಸ್ ಮಾತುಕತೆ:  ಭಾರತಕ್ಕೆ ಅಮೆರಿಕದಿಂದ ಇನ್ನಷ್ಟು ಕೊವಿಡ್ ಲಸಿಕೆ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ವಾಷಿಂಗ್​ಟನ್: ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಮಾತುಕತೆ ನಡೆಸಿದ್ದು, ಈ ವೇಳೆ ಅಮೆರಿಕವು ವಿಶ್ವದ ವಿವಿಧ ದೇಶಗಳಿಗೆ 2.5 ಕೋಟಿ ಡೋಸ್ ಕೊವಿಡ್-19 ಲಸಿಕೆ ನೀಡಲು ಉದ್ದೇಶಿಸಿರುವ ವಿಚಾರವನ್ನು ತಿಳಿಸಿದರು.

ಮೋದಿ ಅವರ ಜೊತೆಗೆ ಮೆಕ್ಸಿಕೊ ಅಧ್ಯಕ್ಷ ಆ್ಯಂಡ್ರ್ಯೂಸ್ ಮೆನ್ಯೂವಲ್, ಗ್ವಾಟೆಮಾಲಾ ಅಧ್ಯಕ್ಷ ಅಲೆಜಾಂಡ್ರೊ ಗಿಯಾಮ್ಮಟೈ, ಟ್ರಿನಿಡಾಡ್​ ಹಾಗೂ ಟೊಬೆಗೊ ಪ್ರಧಾನಿ ಕೀತ್ ರೌಲೆ ಅವರೊಂದಿಗೂ ಕಮಲಾ ಮಾತನಾಡಿದರು.

ವಿಶ್ವಸಂಸ್ಥೆಯ ಕೊವ್ಯಾಕ್ಸ್​ ಯೋಜನೆಯ ಮೂಲಕ ಅಥವಾ ನೇರವಾಗಿ ಈ ನಾಲ್ಕೂ ದೇಶಗಳು ಅಮೆರಿಕದಿಂದ ಲಸಿಕೆ ಸ್ವೀಕರಿಸಬಹುದಾಗಿದೆ ಎಂದು ಬೈಡನ್ ಆಡಳಿತ ಸ್ಪಷ್ಟಪಡಿಸಿದೆ. ಮೊದಲ ಹಂತದಲ್ಲಿ ಬಿಡುಗಡೆ ಮಾಡಲು ಉದ್ದೇಶಿಸಿರುವ 2.5 ಕೋಟಿ ಡೋಸ್ ಲಸಿಕೆ ಪೈಕಿ 1.9 ಕೋಟಿ ಡೋಸ್​ ಕೊವ್ಯಾಕ್ಸ್​ ಮೂಲಕ ವಿವಿಧ ದೇಶಗಳಿಗೆ ತಲುಪಲಿದೆ. ಉಳಿದ 60 ಲಕ್ಷ ಡೋಸ್ ಲಸಿಕೆಯು ಕೆನಡಾ, ಮೆಕ್ಸಿಕೊ, ಭಾರತ ಮತ್ತು ಕೊರಿಯಾ ದೇಶಗಳಿಗೆ ಪೂರೈಕೆಯಾಗಲಿವೆ ಎಂದು ತಿಳಿಸಿದರು.

‘ಜೋ ಬೈಡನ್ ನೇತೃತ್ವದ ಅಮೆರಿಕ ಸರ್ಕಾರವು ಮೊದಲ 2.5 ಕೋಟಿ ಡೋಸ್ ಲಸಿಕೆಯನ್ನು ನಾಲ್ಕು ದೇಶಗಳೊಂದಿಗೆ ಹಂಚಿಕೊಳ್ಳಲು ಉದ್ದೇಶಿಸಿದೆ. ಜೂನ್ ಅಂತ್ಯದ ಒಳಗೆ 8 ಕೋಟಿ ಡೋಸ್ ಲಸಿಕೆಯನ್ನು ವಿಶ್ವದ ವಿವಿಧ ದೇಶಗಳಿಗೆ ಅಮೆರಿಕ ಸರಬರಾಜು ಮಾಡಲಿದೆ’ ಎಂದು ಕಮಲಾ ಹ್ಯಾರಿಸ್​ ಮೋದಿ ಅವರಿಗೆ ತಿಳಿಸಿದರು.

‘ಅಮೆರಿಕ ಸರ್ಕಾರದೊಂದಿಗೆ ಭಾರತವು ಅತ್ಯಂತ ನಿಕಟವಾಗಿ ಕೆಲಸ ಮಾಡುತ್ತಿದೆ. ವಾಣಿಜ್ಯ ಮತ್ತು ಅನಿವಾಸಿ ಭಾರತೀಯರ ಬಗ್ಗೆ ನಾವು ಮಾತನಾಡಿದೆವು. ಭಾರತ-ಅಮೆರಿಕ ನಡುವಣ ಲಸಿಕೆ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ಹಾಗೂ ಕೊವಿಡ್ ನಂತರದ ಜಾಗತಿಕ ಆರೋಗ್ಯ ಹಾಗೂ ಆರ್ಥಿಕ ಪುನಶ್ಚೇತನದ ಬಗ್ಗೆ ಚರ್ಚಿಸಿದೆವು’ ಎಂದು ಮೋದಿ ಹೇಳಿದ್ದು, ಮಾತುಕತೆ ನಂತರ ಮೋದಿ ಟ್ವೀಟ್ ಮಾಡಿ ಕಮಲಾ ಹ್ಯಾರಿಸ್ ಅವರನ್ನು ಅಭಿನಂದಿಸಿದರು.

Leave a Reply

error: Content is protected !!
LATEST
KSRTC ಬಸ್‌ ರಿಪೇರಿ ಮಾಡಿದ ಖರ್ಚಿನ ಬಿಲ್‌ನಲ್ಲಿ ಸ್ಕ್ರಾಪ್‌ನ ಹಣ ತೋರಿಸದೆ ಗುಳುಂ: ಕ್ರಮಕ್ಕಾಗಿ ಎಂಡಿಗೆ ದೂರು 160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್ KSRTC ಅಧಿಕಾರಿಗಳು-ನೌಕರರಲ್ಲಿ, ನೌಕರರು-ನೌಕರರಲ್ಲೇ ಒಗ್ಗಟ್ಟಿಲ್ಲಕ್ಕೆ ಈ ಸ್ಥಿತಿ: NWKRTC ನಿಗಮದ ಅಧ್ಯಕ್ಷ ಭರಮಗೌಡ KSRTC ನೌಕರರ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಬೇಗ ಕೊಟ್ಟರೆ ನನಗೂ ಸಮಾಧಾನ: ಸಚಿವ ರಾಮಲಿಂಗಾ ರೆಡ್ಡಿ KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ