NEWSನಮ್ಮಜಿಲ್ಲೆರಾಜಕೀಯ

ಸಿದ್ದರಾಮಯ್ಯ ಅಳುವ ಗಿರಾಕಿನಾ : ಮಾಜಿ ಸಚಿವ ಮಹದೇವಪ್ಪ ಪ್ರಶ್ನೆ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಮೈಸೂರು: ಈಗ ಸಿದ್ದರಾಮಯ್ಯ ಅಳುತ್ತಿದ್ದರು ಅಂತ ಮಾಜಿ ಪ್ರಧಾನಿ ದೇವೇಗೌಡರು ಹೇಳ್ತಾರೆ. ಹಾಗಾದರೆ ಸಿದ್ದರಾಮಯ್ಯ ಅಳುವ ಗಿರಾಕಿನಾ ಎಂದು ಮಾಜಿ ಸಚಿವ ಎಚ್‌.ಸಿ.ಮಹದೇವಪ್ಪ ಪ್ರಶ್ನಿಸಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಿಗೆ ಆಯ್ಕೆಯಾದ ಕಾಂಗ್ರೆಸ್ ಬೆಂಬಲಿತ ಸದಸ್ಯರ ಸನ್ಮಾನಿಸಲು ಮೈಸೂರಿನ ಶ್ರೀರಾಂಪುರದ ಅಶ್ವಿನಿ ಕಲ್ಯಾಣ ಮಂಟಪದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗ್ರಾಮ ಜನಾಧಿಕಾರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಿದ್ದರಾಮಯ್ಯ ವ್ಯಕ್ತಿ ಅಲ್ಲ, ಶಕ್ತಿ ಅಂತ ಮಾಜಿ ಪ್ರಧಾನಿ ಈ ಹಿಂದೆ ಹೇಳಿದ್ದರು ಎಂದ ಅವರು, ಹೆಚ್ಚು ಕಡಿಮೆಯಾದ್ರೆ ಸಿದ್ದರಾಮಯ್ಯ ಹಲ್ಲು ಉದುರಿಸಿಬಿಡುತ್ತಾರೆಯೇ ವಿನಾ ಅವರು ಅಳುವ ವ್ಯಕ್ತಿಯಲ್ಲ. ಸಿದ್ದರಾಮಯ್ಯ ಅಳುವ ಗಿರಾಕಿನಾ? ಅಳುತ್ತಿದ್ರು ಅಂದ್ರೆ ನಂಬಲು ಸಾಧ್ಯನಾ ಎಂದು ಕೇಳಿದರು.

ಪ್ರಜಾಪ್ರಭುತ್ವಕ್ಕೆ ಒಡ್ಡಿರುವ ಅಪಾಯವನ್ನು ಸಿದ್ದರಾಮಯ್ಯ ನಂತಹ ನಾಯಕರು ಮತ್ತು ನಮ್ಮಂತಹವರು ಪ್ರಶ್ನಿಸಿದರೆ ವಿಲನ್ ತರ ನೋಡ್ತಾರೆ. ಆಹಾರ ಪದ್ದತಿ ವಿಷಯಕ್ಕೆ ಬಂದಾಗ ಕೆಲವರು ಸಸ್ಯಾಹಾರಿಗಳು ಇನ್ನು ಕೆಲವರು ಮಾಂಸಾಹಾರಿಗಳು. ನನಗೆ ಬೇಕು ಅಂದಾಗ ಮಾಂಸ ತಿನ್ನುತ್ತೇನೆ ಎಂದರೆ ಅಧಿಕಾರದಲ್ಲಿ ಇರುವ ಜನರು ಪ್ರಜ್ಞೆ ಇಲ್ಲದವರು ತಿಂದು ಸಾಯಲಿ ಬಿಡು ಎನ್ನುತ್ತಾರೆ. ಇದನೆಲ್ಲ ಕೇಳುವ ಅಧಿಕಾರ ಯಾರ್ ಕೊಟ್ಟಿದ್ದಾರೆ ಇವರಿಗೆ ಎಂದು ಪ್ರಶ್ನಿಸಿದರು.

ಇನ್ನು ಸಂವಿಧಾನದ ಆಶಯಗಳನ್ನು ಪಾಲಿಸದವರು, ನಿರ್ವಹಣೆ ಮಾಡದವರು ಅಧಿಕಾರ ಹಿಡಿದಿರುವುದು ನಮ್ಮ ದೇಶದ ದುರದೃಷ್ಟ. ಮೈಸೂರು-ಬೆಂಗಳೂರು 10 ಪಥದ ರಸ್ತೆ ಕಾಮಗಾರಿ ಆಗುತ್ತಿದೆ ಇದಕ್ಕೆ ಕಾರಣ ಸಿದ್ದರಾಮಯ್ಯ ಮತ್ತು ನಾನು. ಅದನ್ನು ಮಾಡಿದವರು ನಾವು ಸುಮ್ಮನೆ ಇದ್ದೇವೆ. ಆದರೆ, ಈಗ ಪರಿವೀಕ್ಷಣೆಗೆ ಹೋಗುವವರು ಕೈ ತೋರಿಸುತ್ತಾ ಪೋಸ್ ನೀಡ್ತಾರೆ ಎಂದರು.

ಸ್ಥಳೀಯ ಸಂಸ್ಥೆಗಳಿಂದ ಗುಣಾತ್ಮಕ ನಾಯಕತ್ವ ಬೆಳೆಯಬೇಕು. ಈ ನಾಯಕತ್ವ ಗ್ರಾಮೀಣ ಜನರ ಬದುಕಿನಲ್ಲಿ ಭರವಸೆ, ನಂಬಿಕೆಯನ್ನು ಬೆಳಸಬೇಕು, ಹಳ್ಳಿಯ ಅಭಿವೃದ್ಧಿಗೆ ಕೆಲಸ ಮಾಡುತ್ತಲೇ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಕೆಲಸವಾಗಬೇಕು ಎಂದರು.

Leave a Reply

error: Content is protected !!
LATEST
KSRTC ನಿರ್ದೇಶಕರ ಆದೇಶಕ್ಕೂ ಕಿಮ್ಮತ್ತಿಲ್ಲ: ಅಮಾನತು ತೆರವು ಮಾಡದೆ ಚಾಲಕನಿಗೆ ಮಾನಸಿಕ ಹಿಂಸೆ ಕೊಡುತ್ತಿರುವ ತುಮಕೂರು ... ಪ್ರಜ್ವಲ್ ರೇವಣ್ಣ ಪ್ರಕರಣ: ಅಶ್ಲೀಲ ವಿಡಿಯೋಗಳ ಹಂಚಿಕೆ ಅತ್ಯಂತ ಪಾಪ ಕೃತ್ಯ, ಸಂತ್ರಸ್ತೆಯರಿಗೆ ಅವಮಾನ- ಹೈಕೋರ್ಟ್ ವಿಶ್ವವಿಖ್ಯಾತ ಮೈಸೂರು ದಸರಾ ಗಂಡಾನೆಗಳ ನಡುವೆ ಕಿತ್ತಾಟ: ದಿಕ್ಕಾಪಾಲಾಗಿ ಓಡಿದ ಜನರು ಬನ್ನೂರು: ಬಸವನಹಳ್ಳಿ ಬಳಿ ಬೈಕ್‌ಗೆ ಡಿಕ್ಕಿ ಹೊಡೆದ ಹೆಣ್ಣು ಚಿರತೆ ಸಾವು ಅ.3ರಿಂದ ಶಾಲೆಗಳಿಗೆ ದಸರಾ ರಜೆ: ಶಾಲಾ ಶಿಕ್ಷಣ ಇಲಾಖೆ ಆದೇಶ BMTC ನೌಕರರ ₹400 ಕೋಟಿ ಗ್ರಾಚ್ಯುಟಿ, ಗಳಿಕೆ ರಜೆ ನಗದೀಕರಣ ಬಿಡುಗಡೆಗೆ ಮೀನಮೇಷ..!! KSRTC ಬಸ್‌ ರಿಪೇರಿ ಮಾಡಿದ ಖರ್ಚಿನ ಬಿಲ್‌ನಲ್ಲಿ ಸ್ಕ್ರಾಪ್‌ನ ಹಣ ತೋರಿಸದೆ ಗುಳುಂ: ಕ್ರಮಕ್ಕಾಗಿ ಎಂಡಿಗೆ ದೂರು 160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್